Author: roovari

ಬೆಂಗಳೂರು : ಭಾರತದ ಪ್ರತಿಷ್ಠಿತ ನಾಟಕೋತ್ಸವಗಳಲ್ಲಿ ಒಂದಾದ ಮಹೀಂದ್ರ ಎಕ್ಸ್ಲೆನ್ಸ್ ಇನ್ ಥಿಯೇಟರ್ ಅವಾರ್ಡ್ 2025 (META)’ಗೆ 367 ನಾಟಕಗಳ ಪೈಕಿ ಆಯ್ಕೆಯಾದ 10 ನಾಟಕಗಳಲ್ಲಿ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕವು ಒಂದು. ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕದ ಬಗ್ಗೆ : ತನ್ನ ಜನಾಂಗದ ಮೇಲೆ ನಿರಂತರ ನಡೆಯುತ್ತಿದ್ದ ಶೋಷಣೆಯನ್ನ ವಿರೋಧಿಸಿ, ತನ್ನ ಹಾಡಿನ ಮೂಲಕ ಜಗತ್ತಿಗೆ ಪರಿಚಯ ಇರುವ ಜಮೈಕಾದ ಹಾಡುಗಾರ, ಹೋರಾಟಗಾರ ‘ಬಾಬ್ ಮಾರ್ಲಿ’ಯ ರೂಪಕದಂತಿದೆ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ. ಹಲವು ಕನಸುಗಳನ್ನು ಹೊತ್ತು, ಸ್ವಚ್ಛಂದ ಬದುಕು ಕಟ್ಟಿಕೊಳ್ಳಲು ಹಳ್ಳಿಯಿಂದ ಪಟ್ಟಣಕ್ಕೆ ಬಂದ ಮೂವರು ತಮ್ಮ ಆಹಾರದಿಂದಾಗಿ ಅನುಭವಿಸುವ ಮಾನಸಿಕ ವೇದನೆ, ಒಬ್ಬಂಟಿತನ ಮತ್ತು ಅವರ ನಡುವೆ ನಡೆವ ಸಂಭಾಷಣೆ ನೋಡುಗರನ್ನು ಪ್ರಶ್ನಿಸುತ್ತಾ, ಅಣಕಿಸುತ್ತಾ ಸಾಗುತ್ತದೆ. ಕಥೆಯಲ್ಲಿ ಉಪಕಥೆಗಳು, ಹಾಡುಗಳು, ತಾವು ಅನುಭವಿಸಿದ ಅನೇಕ ನೈಜ ಘಟನೆಗಳಿದ್ದು ಕೇಳಲು ಕಷ್ಟವಾದರೂ ಅವು ಸತ್ಯವೇ ಆಗಿವೆ. ನಾಟಕ ನೋಡುತ್ತಿದ್ದ ಹಾಗೇ ನಮ್ಮ ಸುತ್ತ ಈಗ…

Read More

ಮೈಸೂರು : ಮೈಸೂರಿನ ಗ್ರಾಮಾಂತರ ಬುದ್ದಿಜೀವಿಗಳ ಬಳಗದ ವತಿಯಿಂದ ನೀಡಲಾಗುವ ‘ವಿಶ್ವಮಾನ್ಯ ಕನ್ನಡಿಗ ರಾಜ್ಯ ಪ್ರಶಸ್ತಿ’ಗೆ ಬಹಗಾರ್ತಿ, ಚಿತ್ರ ನಿರ್ಮಾಪಕಿ, ನಟಿ ಹಾಗೂ ಸಹನಿರ್ದೇಶಕಿ ಈರಮಂಡ ಹರಿಣಿ ವಿಜಯ್ ಆಯ್ಕೆಯಾಗಿದ್ದಾರೆ. ಗ್ರಾಮಾಂತರ ಬುದ್ಧಿಜೀವಿಗಳ ಬಳಗದ 40ನೇ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನ ಇನ್ಸಿ ಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ.23 ಫೆಬ್ರವರಿ 2025 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ರಾಷ್ಟ್ರ ಕವಿ ಕುವೆಂಪು ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಈರಮಂಡ ಹರೀಣಿ ವಿಜಯ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಡಾ. ಭೇರ್ಯ ರಾಮಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಾಹಿತ್ಯೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಶಿ ಉದ್ಘಾಟಿಸಲಿದ್ದಾರೆ. ಈರಮಂಡ ಹರೀಣಿ ವಿಜಯ್ ಅವರು ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲೂ ಸಕ್ರೀಯಾರಾಗಿರುವ ಇವರು ಕೊಡಗಿನ ಪ್ರತಿಷ್ಠಿತ ‘ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ’…

Read More

ಬೆಂಗಳೂರು : ಜಾಗೃತಿ ಟ್ರಸ್ಟ್ (ರಿ.) ಬೆಂಗಳೂರು ಇದರ ವತಿಯಿಂದ ರೋಟರಿ ಕ್ಲಬ್ ಮತ್ತು ರಿಚ್ ಮಂಡ್ ಟೌನ್ ಬೆಂಗಳೂರು ಇವುಗಳ ಸಹಯೋಗದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದಲ್ಲಿ ಭಾವಜೀವಿ ಡಾ. ಬಿ.ಎಸ್. ಮಂಜುನಾಥ್ ಇವರ ‘ಯೋಗಪಥ’ ಕಾದಂಬರಿ ಲೋಕಾರ್ಪಣೆ ಮತ್ತು ಡಾ. ರಾಜಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 25 ಫೆಬ್ರವರಿ 2025ರಂದು ಬೆಳಿಗೆ 9-30 ಗಂಟೆಗೆ ಬೆಂಗಳೂರಿನ ಕೆ.ಆರ್. ವೃತ್ತ, ಕಬ್ಬನ್ ಪಾರ್ಕ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡ, ಮೇರಿ ದೇವಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಡಪ್ರಭು ಶ್ರೀ ಕೆಂಪೇಗೌಡ ಸಾರ್ವಜನಿಕ ಸೇವಾವೇದಿಕೆ ಇದರ ಅಧ್ಯಕ್ಷರಾದ ಪಿ. ಶಿವಕುಮಾರ್ ಇವರ ಅಧ್ಯಕ್ಷತೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕರಾದ ಶ್ರೀಮತಿ ಲಕ್ಷ್ಮೀದೇವಿ ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದಾರೆ. ಶ್ರೀಮತಿ ಆರ್. ಅಂಬುಜಾಕ್ಷಿ ಬೀರೇಶ್ ತಂಡದವರಿಂದ ಜಾನಪದ ಗೀತಗಾಯನ, ಸರಿಗಮಪ ಸ್ಪರ್ಧಿ ನಾಗರಾಜ ತುಂಬ್ರಿರವರಿಂದ ಗಾಯನ, ಇಂಡಿಯನ್ ಪ್ರೈಮರಿ ಅಂಡ್ ಹೈಸ್ಕೂಲ್ ಮಕ್ಕಳಿಂದ…

Read More

ಬೆಂಗಳೂರು : ಸಂಸ್ಕೃತಿ ಸೌರಭ ಟ್ರಸ್ಟ್ (ರಿ.) ಇದರ ವತಿಯಿಂದ ವಾದ್ಯಗೋಷ್ಠಿ ವೈಭವದ ಆ ದಿನಗಳು ‘ಚಿರನೂತನ ಗೀತ ಗಾಯನ’ವನ್ನು ದಿನಾಂಕ 23 ಫೆಬ್ರವರಿ 2025ರಂದು ಸಂಜೆ 4-00 ಗಂಟೆಗೆ ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಾದ್ಯಗೋಷ್ಠಿ ರಂಗದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರು ಹಾಗೂ ಕಲಾಪೋಷಕರಿಗೆ ಅಭಿನಂದನಾ ಸಮಾರಂಭ ಇದಾಗಿದೆ. ಬೆಂಗಳೂರು ನಗರ ಕ.ರ.ವೇ. ಅಧ್ಯಕ್ಷರಾದ ಶಿವಾನಂದ ಶೆಟ್ಟಿಯವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಚಲನಚಿತ್ರ ಸಂಗೀತ ನಿರ್ದೇಶಕರು, ನಿರ್ಮಾಪಕರು ಹಾಗೂ ಗಾಯಕರಾದ ಟಾಪ್ ಸ್ಟಾರ್ ರೇಣುಕುಮಾರ್ ಇವರು ಉದ್ಘಾಟಿಸಲಿದ್ದಾರೆ. ಬಿ.ಜೆ.ಪಿ. ಮಹಾಲಕ್ಷ್ಮೀ ಲೇಔಟ್ ಮಂಡಲದ ಅಧ್ಯಕ್ಷರಾದ ಹೆಚ್.ಎಸ್. ರಾಘವೇಂದ್ರ ಶೆಟ್ಟಿಯವರು ಕಲಾವಿದರು ಹಾಗೂ ಕಲಾಪೋಷಕರನ್ನು ಅಭಿನಂದಿಸಲಿದ್ದು, ಸಂಸ್ಕೃತಿ ಸೌರಭ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ರಾ.ಬಿ. ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

Read More

ಮಡಿಕೇರಿ : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ’ಯು ದಿನಾಂಕ 20 ಫೆಬ್ರವರಿ 2025ರಂದು ಕೊಡಗು ಜಿಲ್ಲೆ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಕ್ತಿ ಪತ್ರಿಕೆಯ ಸಂಪಾದಕ ಚಿದ್ವಿಲಾಸ್ “ಮಡಿಕೇರಿಯ ಅಂದಿನ ಸೆಂಟ್ರಲ್ ಹೈಸ್ಕೂಲಿನಲ್ಲಿ ಪಂಜೆ ಮಂಗೇಶರಾಯರು ಮುಖ್ಯೋಪಾಧ್ಯಾಯರಾಗಿದ್ದರು ಎಂಬುದೇ ಕೊಡಗಿಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಹೀಗಿರುವಾಗ ಪಂಜೆ ಮಂಗೇಶರಾಯರ ಸಾಹಿತ್ಯ ಲೋಕದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತಷ್ಟು ರೀತಿಯಲ್ಲಿ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅವರು ಪಾಠ ಮಾಡುತ್ತಿದ್ದ ತರಗತಿಯನ್ನು ಪಂಜೆಯವರ ಹೆಸರಿನಲ್ಲಿ ಗುರುತಿಸಿ, ಉತ್ತಮ ಕೃತಿಗಳ ಗ್ರಂಥಾಲಯವನ್ನು ಸ್ಥಾಪಿಸಬೇಕು. ಆ ಮೂಲಕ ಸಾಹಿತ್ಯ ಪ್ರೇಮಿಗಳ ಮನದಲ್ಲಿ ಪಂಜೆಯವರ ನೆನಪನ್ನು ಚಿರಸ್ಥಾಯಿಯಾಗಿಸಬೇಕು. ಅಂತೆಯೇ, ಜೂನಿಯರ್ ಕಾಲೇಜಿನ ಆವರಣದಲ್ಲಿ ಪಂಜೆ ಮಂಗೇಶರಾಯರ ಪುತ್ತಳಿಯನ್ನು ಸ್ಥಾಪಿಸುವ ಮೂಲಕ ಅವರನ್ನು ಸದಾ ಸ್ಮರಿಸುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು. ಸಾಂಸ್ಕೃತಿಕ…

Read More

ಉಡುಪಿ : ಸುಮನಸಾ ಕೊಡವೂರು ಆಯೋಜಿಸುವ ‘ರಂಗಹಬ್ಬ- 13’ ಇದರ ಅಂಗವಾಗಿ ಬೆಂಗಳೂರಿನ ಪಯಣ ತಂಡ ಅಭಿನಯಿಸುವ ತಲ್ಕಿ ನಾಟಕದ ಪ್ರದರ್ಶನವು ದಿನಾಂಕ 23 ಫೆಬ್ರವರಿ 2025ರಂದು ಉಡುಪಿಯ ಅಜ್ಜರಕಾಡು ಭುಜಂಗಪಾರ್ಕ್ ಬಯಲುರಂಗ ಮಂದಿರದಲ್ಲಿ ನಡೆಯಲಿದೆ. ಈ ನಾಟಕದ ಎಲ್ಲಾ ಪಾತ್ರಧಾರಿಗಳು ತೃತೀಯ ಲಿಂಗಿಗಳೇ ಆಗಿದ್ದು, ಅದೂ 55 ವರ್ಷ ದಾಟಿದವರು. ಇದು ಯಾವುದೇ ಕಥೆಯನ್ನು ಆಧರಿಸಿದ ನಾಟಕವಾಗಿರದೆ ಅವರ ಬದುಕಿನ ಕಥೆಯನ್ನೇ, ಅವರು ಬಾಲ್ಯದಲ್ಲಿ ಕಂಡ ಕನಸುಗಳನ್ನೇ ನಾಟಕವಾಗಿಸಿದ ಈ ನಾಟಕ. ಅವರ ವಿಶಿಷ್ಟ ಖಾದ್ಯವಾದ ‘ತಲ್ಕಿ’ ಎಂಬ ಹೆಸರಿನಿಂದ ರೂಪುಗೊಂಡ ಈ ನಾಟಕ, ಅವರ ಬದುಕಿನ ತೊಳಲಾಟಗಳು, ಅವರೊಳಗೆ ಒಬ್ಬರು ಇನ್ನೊಬ್ಬರನ್ನು ಹೇಗೆ ಸಂಬೋಧಿಸುತ್ತಾರೆ, ಅವರ ಬದುಕಿನಲ್ಲಿರುವ ಆಚಾರ ವಿಚಾರಗಳು, ಅವರ ಪ್ರೀತಿ, ಪ್ರೇಮ, ನೋವು, ನಲಿವು, ಬದುಕಬೇಕೆಂಬ ಆಸೆ ಮತ್ತು ಅವರ ಕುಟುಂಬ ಅವರನ್ನು ನಡೆಸಿಕೊಂಡ ರೀತಿ ಇದೆಲ್ಲವನ್ನೂ ಒಂದು ಕಥೆಯಾಗಿ ಹೇಳಿಕೊಳ್ಳುತ್ತಾ ಸಾಗುತ್ತದೆ. 55 ವರ್ಷ ದಾಟಿದ ಈ ಹಿರಿಯ ಜೀವಗಳು ತಮ್ಮ ಕಥೆ ಹೇಳುತ್ತಿದ್ದರೆ…

Read More

ಬೆಂಗಳೂರು : ‘ಯಥಾ ಗುರು ತಥಾ ಶಿಷ್ಯ’ ಎಂಬ ನಾಣ್ಣುಡಿಗೆ ಅನ್ವರ್ಥಕವಾಗಿ ಉತ್ತಮ ಕಲಾವಿದೆ- ಬದ್ಧತೆಯ ನಾಟ್ಯ ಗುರುವಾಗಿ ಖ್ಯಾತರಾಗಿರುವ ಬೆಂಗಳೂರಿನ ‘ನೃತ್ಯೋದಯ ಅಕಾಡೆಮಿ’ ನಾಟ್ಯ ಸಂಸ್ಥೆಯ ವಿದುಷಿ ದಿವ್ಯಶ್ರೀ ಎಸ್. ವಟಿಯವರ ನುರಿತ ಗರಡಿಯಲ್ಲಿ ರೂಪುಗೊಂಡ ಕಲಾಶಿಲ್ಪ ಕು. ಪ್ರೇರಣಾ ಬಾಲಾಜಿ ಪ್ರತಿಭಾವಂತ ನೃತ್ಯಪ್ರತಿಭೆ. ಐದರ ಎಳವೆಯಿಂದಲೇ ನೃತ್ಯಪ್ರೀತಿ ಬೆಳೆಸಿಕೊಂಡ ಪ್ರೇರಣಾ ಕಳೆದ ಒಂದು ದಶಕದಿಂದ ಅತ್ಯಾಸಕ್ತಿಯಿಂದ ನೃತ್ಯಾಭ್ಯಾಸವನ್ನು ಮಾಡುತ್ತಾ ಜ್ಯೂನಿಯರ್, ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆದು, ವಿದ್ವತ್ತಿಗೆ ತಯಾರಾಗುತ್ತಿರುವುದು ಅವಳ ವಿಶೇಷ. ನಾಡಿನಾದ್ಯಂತ ಅನೇಕ ದೇವಾಲಯಗಳಲ್ಲಿ, ಪ್ರತಿಷ್ಠಿತ ವೇದಿಕೆಗಳಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದರೂ ಇದೀಗ ಏಕವ್ಯಕ್ತಿ ಪ್ರದರ್ಶನ ನೀಡುತ್ತಿರುವ ಸುಯೋಗ ಅವಳದಾಗಿದೆ. ಶ್ರೀ ಎಸ್. ಬಾಲಾಜಿ ಮತ್ತು ದಿವ್ಯ ಬಾಲಾಜಿಯವರ ಸುಪುತ್ರಿಯಾದ ಇವಳು ‘ಲಾ’ ಪರೀಕ್ಷೆಗೆ ಓದುತ್ತಿದ್ದು, ಉತ್ತಮ ಕ್ರೀಡಾಪಟು ಕೂಡ. ಪ್ರೇರಣಾ ದಿನಾಂಕ 23 ಫೆಬ್ರವರಿ 2025ರ ಭಾನುವಾರ ಸಂಜೆ ಗಂಟೆ 4-30ಕ್ಕೆ ಯಲಹಂಕ ಸ್ಯಾಟಲೈಟ್ ಟೌನಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ…

Read More

ಉಡುಪಿ : ಸುಮನಸಾ ಕೊಡವೂರು ಉಡುಪಿ (ರಿ.) ಇದರ ವತಿಯಿಂದ ‘ರಂಗಹಬ್ಬ 13’ ಸಮಾರಂಭವನ್ನು ದಿನಾಂಕ 23 ಫೆಬ್ರವರಿ 2025ರಿಂದ 01 ಮಾರ್ಚ್ 2025ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 23 ಫೆಬ್ರವರಿ 2025ರಂದು ಶ್ರೀಜಿತ್ ಸುಂದರಂ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಪಯಣ ತಂಡದವರು ‘ತಲ್ಕಿ’, ದಿನಾಂಕ 24 ಫೆಬ್ರವರಿ 2025ರಂದು ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದವರು ‘ಗೊಂದಿ’, 25 ಫೆಬ್ರವರಿ 2025ರಂದು ದಿ. ಕೆ. ಸಾಣ್ಣೇಗೌಡ ಇವರ ನಿರ್ದೇಶನದಲ್ಲಿ ಹಾಸನದ ಅನಿಕೇತನ (ರಿ.) ಇವರು ‘ಕಿರಗೊರಿನ ಗಯ್ಯಾಳಿಗಳು’, 26 ಫೆಬ್ರವರಿ 2025ರಂದು ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದವರು ‘ಈದಿ’, 27 ಫೆಬ್ರವರಿ 2025ರಂದು ಮಹಾದೇವ ಹಡಪದ ಇವರ ನಿರ್ದೇಶನದಲ್ಲಿ ಧಾರವಾಡದ ಆಟಮಾಟ (ರಿ.) ತಂಡದವರು ‘ಗುಡಿಯ ನೋಡಿರಣ್ಣ’, 28 ಫೆಬ್ರವರಿ 2025ರಂದು ಪ್ರಸಾದ್ ಮುದ್ರಾಡಿ ಇವರ ನಿರ್ದೇಶನದಲ್ಲಿ ಸುಮನಸಾ…

Read More

ಸುಳ್ಯ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘವು ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಹಮ್ಮಿಕೊಂಡ “ಬರವಣಿಗೆ ಮಾಧ್ಯಮ ಶಿಬಿರ” ಕಾರ್ಯಕ್ರಮವು ದಿನಾಂಕ 20 ಫೆಬ್ರವರಿ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿವೃತ್ತ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಮಾತನಾಡಿ “ಸುಖ ಯಾವುದನ್ನೂ ಸೃಷ್ಟಿಸುವುದಿಲ್ಲ. ಸತತ ಪರಿಶ್ರಮದಿಂದ ಸಾಹಿತ್ಯ ಸೃಷ್ಟಿಯಾಗುತ್ತದೆ. ಆ ನಿಟ್ಟಿನಲ್ಲಿ ಹಳ್ಳಿಯ ಬೇರುಗಳು ಸಾಹಿತ್ಯವನ್ನು ಸೃಷ್ಟಿಸುತ್ತವೆ. ಬದುಕನ್ನು ಕಟ್ಟಿಕೊಡುವ ಮಾಧ್ಯಮ ಬರವಣಿಗೆ ಶಾಶ್ವತವಾಗಿಸುತ್ತದೆ. ನಿಮ್ಮ ಒಂದೇ ಒಂದು ಬರಹ ಕೂಡ ನಿಮ್ಮನ್ನು ಶಾಶ್ವತವಾಗಿಸಬಹುದು. ಆ ನಿಟ್ಟಿನಲ್ಲಿ ಓದುವ ಹವ್ಯಾಸವನ್ನು ಮೂಡಿಸಿಕೊಂಡು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ” ಎಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ. ಎಂ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ಶುಭ ಹಾರೈಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕುದ್ರಾಜೆ ಸ್ವಾಗತಿಸಿ, ಕಾರ್ಯಕ್ರಮದ ಸಂಘಟಕರು ಹಾಗೂ ಕನ್ನಡ ಸಂಘದ ಸಂಚಾಲಕರಾದ ಡಾ.…

Read More

ಬೆಂಗಳೂರು : ಬಿಂಬ ಆರ್ಟ್ ಫೌಂಡೇಷನ್ ಇದರ ವತಿಯಿಂದ ‘ಕೃಷ್ಣನ ಕೊಳಲಿನ ಕರೆ’ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿಂಬ ದಿ ಅರ್ಥ್ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ನಾರಾಯಣಿ ದೀಪಿಕಾ ದೇವಿ ಇವರ ಪರಿಕಲ್ಪನೆ ಮತ್ತು ನೃತ್ಯ ಸಂಯೋಜನೆಯಲ್ಲಿ ವಿಭವಿ, ಅರವಿಂದ್, ಶಾರದಾ, ಭುವನ ಇವರ ಶಾಸ್ತ್ರೀಯ ಭರತನಾಟ್ಯದಲ್ಲಿ ಚಿತ್ರಿಸಲಾದ ಸ್ವರಜತಿ ‘ರಾ. ರಾ. ವೇಣು ಗೋಪಾ ಬಾಲ’ ಕೃತಿಯ ಭರತನಾಟ್ಯಕ್ಕೆ ಮತ್ತು ಕೃಷ್ಣನಾಗಿ ಮಾಸ್ಟರ್ ದೊರೈ ಇವರು ಸಾಥ್ ನೀಡಲಿದ್ದಾರೆ.

Read More