Subscribe to Updates
Get the latest creative news from FooBar about art, design and business.
Author: roovari
ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಿಜಯಪುರ ಜಿಲ್ಲಾ ಗಮಕ ಕಲಾ ಪರಿಷತ್ತು ಹಾಗೂ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ವಿಜಯಪುರ ಇವರ ಸಹಯೋಗದಲ್ಲಿ ಕುಮಾರವ್ಯಾಸ ಜಯಂತಿ ಪ್ರಯುಕ್ತ ‘ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ’ವು ದಿನಾಂಕ 17 ಫೆಬ್ರವರಿ 2025ರಂದು ವಿಜಯಪುರದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಹಿರಿಯ ಸಾಹಿತಿ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಮಾತನಾಡಿ “ಗಮಕ ಕಲೆ ಪ್ರಾಚೀನ ಕಾಲದಿಂದಲೂ ಬಂದಿರುವಂತಹದು. ಕಾವ್ಯಗಳನ್ನು ರಾಗ, ಶ್ರುತಿ. ಬದ್ಧವಾಗಿ ವಾಚನ ಮಾಡುವ ಕಲೆ ಕನ್ನಡಕ್ಕಿದೆ. ಕಾವ್ಯದ ಅರ್ಥ, ಭಾವ, ನವರಸಗಳಿಗೆ ಪ್ರಾಧಾನ್ಯತೆ ಕೊಟ್ಟು ರಸ ಭಾವ ಕೆಡದಂತೆ ಶ್ರೋತೃಗಳಿಗೆ ರಸಗ್ರಹಣ ಮಾಡುವುದೇ ಗಮಕವಾಚನ ಉದ್ದೇಶವಾಗಿದೆ” ಎಂದು ಪ್ರೇಕ್ಷಕರನ್ನು ಗಮನದಲ್ಲಿಟ್ಟು ಗಮಕ ಸಾಹಿತ್ಯದ ಮೌಲ್ಯವನ್ನು ಎತ್ತಿ ಹೇಳಿದರು. ಮಾತನಾಡಿದರು. “ಗಮಕ…
ಮಂಗಳೂರು : ತನ್ನ ಸೇವೆಯ 22ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ನಗರದ ಶಕ್ತಿನಗರದಲ್ಲಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ, ಇಲ್ಲಿನ ವಿಶೇಷ ಮಕ್ಕಳಿಂದ ಇದೇ 23 ಫೆಬ್ರವರಿ 2025ರ ಆದಿತ್ಯವಾರದಂದು ಸಂಜೆ ಘಂಟೆ ಘಂಟೆ 5.00ಕ್ಕೆ ಸರಿಯಾಗಿ ಕದ್ರಿ ಉದ್ಯಾನದ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣಗೊಳ್ಳಲಿದೆ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ವಿಧಾನ ಸೌಧದಲ್ಲಿ, ಸುತ್ತೂರು, ಮೈಸೂರು, ಕುಂಬ್ಳೆ, ಹಾಗೂ ದುಬೈ ಮತ್ತು ಕತಾರ್ನಲ್ಲಿ ತಮ್ಮ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಿದ ‘ಸಾನಿಧ್ಯ’ದ ವಿಶೇಷ ಮಕ್ಕಳು ನಗರದ ಕದ್ರಿ ಉದ್ಯಾನದಲ್ಲಿ ಹವ್ಯಾಸಿ ಬಳಗ ಕದ್ರಿ ಇದರ ನಿರ್ದೇಶಕರರಾಗಿರುವ ಶ್ರೀ ಶರತ್ ಕದ್ರಿ ಇವರ ನಿರ್ದೇಶನದಲ್ಲಿ “ಕೃಷ್ಣ ಜನ್ಮ-ಕಂಸ ವಧೆ” ಎಂಬ ಯಕ್ಷಗಾನವನ್ನು ಹಾಗೂ ಡಾ. ವಸಂತ್ ಕುಮಾರ್ ಶೆಟ್ಟಿಯವರು ನಿರ್ದೇಶಿಸಿ, ಇದೇ ಜನವರಿ ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜರುಗಿದ ರಾಜ್ಯಮಟ್ಟದ ಜನಪದ ನೃತ್ಯೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ “ಕರ್ನಾಟಕ ವೈಭವ”ವನ್ನು ಪ್ರದರ್ಶಿಸಲಿದ್ದಾರೆ. 22 ಫೆಬ್ರವರಿ 2025ನೇ ತಾರೀಕು ಶನಿವಾರದಂದು ಸಂಜೆ…
ದೂರದ ಮುಂಬೈ ಮಹಾನಗರದಲ್ಲಿ ಕನ್ನಡವನ್ನು ಬೆಳಗುವಂತೆ ಮಾಡಿದ ಮಾಸಿಕ ಮೊಗವೀರ. ಈ ಪತ್ರಿಕೆಗೆ ಈಗ 85ರ ಸಂಭ್ರಮ. ಮರಾಠಿ ಮಣ್ಣಿನಲ್ಲಿ ಕನ್ನಡ ಡಿಂಡಿಮ ಮೊಳಗಿಸಿ ಇತಿಹಾಸ ನಿರ್ಮಿಸಿದ ಮೊಗವೀರ ಮಾಸಿಕ ನಡೆದ ಬಂದ ದಾರಿಯ ಕಿರು ಅವಲೋಕನ ಇಲ್ಲಿದೆ. ಮುಂಬೈ ಕನ್ನಡ ಪತ್ರಿಕೋದ್ಯಮಕ್ಕೆ ನೂರೈವತ್ತು ವರ್ಷಗಳಷ್ಟು ಸುದೀರ್ಘವಾದ ಇತಿಹಾಸವಿದೆ. ನರರ ಶ್ರೇಷ್ಠ ನಗರವಾಗಿ ಮೆರೆಯುತ್ತಿದ್ದ ಬಾಂಬೆಪುರದಿ ಎಂಬುದಾಗಿ ಮುಂಬೈ ಮಹಾನಗರವನ್ನು ಕವಿ ಡೇಂಗಾ ದೇವರಾಯ ನಾಯ್ಕ ಬಹು ಹಿಂದೆಯೇ ಕೊಂಡಾಡಿದ್ದಾನೆ. ಕರ್ನಾಟಕದಿಂದ ಮಾಯಾನಗರಿ ಮುಂಬೈಗೆ ವಲಸೆ ಬಂದವರಲ್ಲಿ ಮೊಗವೀರರೇ ಮೊದಲಿಗರು. ಮುಂಬೈಯಲ್ಲಿ ನೆಲೆ ನಿಂತು ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಮೊಗವೀರರ ಸಾಹಸ ಸಾಧನೆ ಅವಲೋಕನೀಯವಾಗಿದೆ. ಸಂಘಟನೆಯಲ್ಲಿ ಮುಂಬೈನ ತುಳು ಕನ್ನಡಿಗರದು ಎತ್ತಿದ ಕೈ. ಮೊಗವೀರ ವ್ಯವಸ್ಥಾಪಕ ಮಂಡಳಿಯು ಮುಂಬೈನ ಪ್ರತಿಷ್ಠಿತ ಸಂಘ – ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. 1902 ರಲ್ಲಿ ಅಸ್ತಿತ್ವಕ್ಕೆ ಬಂದ ಈ ಮಹಾನ್ ಸಂಸ್ಥೆ ಮುಂಬೈ ಮಹಾನಗರದಲ್ಲಿ ಅದ್ಭುತವಾದ ಸಾಧನೆಗೈದಿದೆ. ಮುಂಬೈಯ ಸುತ್ತಮುತ್ತ ನೆಲೆಸಿರುವ…
ಬೆಂಗಳೂರು : ತೊಂಬತ್ತು ವಸಂತಗಳನ್ನು ಕಂಡ ಕನ್ನಡದ ಶ್ರೇಷ್ಠ ಸಾಹಿತಿ, ವಿಮರ್ಶಕ, ಭಾಷಣಕಾರರಾದ ಪ್ರೊ. ಅ.ರಾ.ಮಿತ್ರ ಇವರ ಕೃತಿ ಅವಲೋಕನ, ಅನಾವರಣ ಮತ್ತು ಅಭಿನಂದನ ಸಮಾರಂಭವನ್ನು ದಿನಾಂಕ 23 ಫೆಬ್ರವರಿ 2025ರಂದು ಬೆಳಗ್ಗೆ 9-30 ಗಂಟೆಗೆ ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಖಿಂಚ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಭಾರತೀಯ ವಿದ್ಯಾ ಭವನ ಹಾಗೂ ರಮಣಶ್ರೀ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಮಿತ್ರವೃಂದದವರು ಅರ್ಪಿಸುತ್ತಿರುವ ವಿಶೇಷ ಕಾರ್ಯಕ್ರಮ ‘ಮಿತ್ರಾವರಣ’ವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಉದ್ಘಾಟಿಸುವರು. ಖ್ಯಾತ ಸಾಹಿತಿ, ವಿಮರ್ಶಕ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ‘ಮಿತ್ರಾರ್ಜಿತ’ ಅಭಿನಂದನ ಗ್ರಂಥವನ್ನು ಶತಾವಧಾನಿ ಡಾ. ರಾ.ಗಣೇಶ್ ಇವರ ಜತೆಗೂಡಿ ಲೋಕಾರ್ಪಣೆಗೈಯುವರು. ಕನ್ನಡ ನಾಡಿನ ಹೆಸರಾಂತ ಸಾಹಿತಿಗಳು, ಕಲಾವಿದರು, ದಿಗ್ಗಜರು ಆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಪ್ರೊ. ಅ.ರಾ. ಮಿತ್ರರ ಜೀವನ ಮತ್ತು ಸಾಧನೆಯ ಬಗ್ಗೆ ಬೆಳಕು ಚೆಲ್ಲುವರು. ಮಧ್ಯಾಹ್ನ ಗೀತ-ನೃತ್ಯ-ಕಲಾ ವೈದುಷ್ಯದ ಪ್ರದರ್ಶನವನ್ನು ಸಂಗೀತ ವಿದುಷಿ ಡಾ. ನಾಗವಲ್ಲಿ ನಾಗರಾಜ್, ನೃತ್ಯ ಗುರು ಡಾ.ಶೋಭಾ ಶಶಿಕುಮಾರ್…
ಬೆಂಗಳೂರು : ಸಪ್ನ ಬುಕ್ ಹೌಸ್ ಬೆಂಗಳೂರು, ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಮತ್ತು ದಲಿತ ಸಾಹಿತ್ಯ ಪರಿಷತ್ತು ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ, ಸಾಕ್ಷ್ಯಚಿತ್ರ, ಕಥಾ ಆಲಾಪ, ಐದು ಕೃತಿಗಳ ಜನಾರ್ಪಣೆ ಮತ್ತು ಅಭಿನಂದನೆ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರು, ಕುಮಾರಪಾರ್ಕ್ ಪೂರ್ವ, ಗಾಂಧಿ ನಗರ, ಎರಡನೆಯ ಮಹಡಿ, ಮಹಾದೇವ ದೇಸಾಯಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10-00 ಗಂಟೆಗೆ ಡಾ. ಅಪ್ಪಗೆರೆ ತಿಮ್ಮರಾಜು ಮತ್ತು ತಂಡದವರಿಂದ ‘ಜನಪದ ಗೀತಗಾಯನ’ ಪ್ರಸ್ತುತಗೊಳ್ಳಲಿದೆ. ಉನ್ನತ ಶಿಕ್ಷಣ ಪರಿಷತ್ತು ಇದರ ಉಪಾಧ್ಯಕ್ಷರಾದ ಪ್ರೊ. ಎಸ್.ಆರ್. ನಿರಂಜನ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಬೆಂಗಳೂರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕವಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಇವರು ಆಶಯ ಭಾಷಣ ಮಾಡಲಿರುವರು. ಪ್ರೊ. ಪಿ.ಕೆ. ಖಂಡೋಬಾ, ಪ್ರೊ. ವ್ಹಿ.ಜಿ.…
ಕಾಸರಗೋಡು : ಇತ್ತೀಚೆಗೆ ದೀಪದ ಬೆಳಕಿನ ಯಕ್ಷಗಾನ ಎಂಬ ವಿನೂತನ ಪ್ರಯೋಗ ನಡೆಸಿ ಸೈಯೆನಿಸಿದ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಹಲವಾರು ಮೈಲಿಗಲ್ಲುಗಳನ್ನು ದಾಟಿದೆ. ಇದೀಗ ಸಂಸ್ಥೆಯು ಮತ್ತೊಂದು ದಿಟ್ಟ ಹೆಜ್ಜೆಯಿಡಲು ಸಿದ್ಧವಾಗಿದೆ. ಗಡಿನಾಡು ಕಾಸರಗೋಡಿನ ಕುಂಬಳೆ ಸಮೀಪ ನಾರಾಯಣಮಂಗಲದ ಕಿನ್ನಿಮಾಣಿ ಪೂಮಾಣಿ ಕಟ್ಟೆಯಲ್ಲಿ ಇನ್ನೊಂದು ವಿಶಿಷ್ಟ ಪ್ರಯೋಗ ನಡೆಯಲಿದೆ. ಯಕ್ಷ ಗುರು ಶ್ರೀಯುತ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ಮಾರ್ಗದರ್ಶನದಲ್ಲಿ ‘ದೊಂದಿ ಬೆಳಕಿನ ಯಕ್ಷಗಾನ’ ಪ್ರದರ್ಶನಕ್ಕೆ ರಂಗಸಿರಿಯ ತಂಡವು ಸಿದ್ಧವಾಗಿದೆ. ಯಕ್ಷಗಾನ ಕಲಾಭಿಮಾನಿಗಳಿಗೆ ಇದೊಂದು ಅಪೂರ್ವ ಸುವರ್ಣಾವಕಾಶವಾಗಿದೆ. ಯಕ್ಷಗಾನದ ಗತವೈಭವವನ್ನು ಮರಳಿ ಕಾಣುವ ಪ್ರಯತ್ನವೆಂಬ ನಿಟ್ಟಿನಲ್ಲಿ ಇದು ಮಹತ್ವ ಪಡೆದಿದೆ. ದಿನಾಂಕ 22 ಫೆಬ್ರವರಿ 2025ರಂದು ರಾತ್ರಿ 10-00 ಗಂಟೆಗೆ ಯಕ್ಷಗಾನ ಆರಂಭಗೊಳ್ಳಲಿದ್ದು, ‘ಗಿರಿಜಾ ಕಲ್ಯಾಣ’ ಹಾಗೂ ‘ಪುರುಷಾಮೃಗ’ ಎಂಬ ಪುರಾಣ ಕಥಾನಕಗಳ ಪ್ರಸ್ತುತಿ ನಡೆಯಲಿದೆ. ಪರಂಪರೆಯ ದೇವೇಂದ್ರ ಒಡ್ಡೋಲಗದ ಗಾಂಭೀರ್ಯ, ಮನ್ಮಥ ದಹನದ ಪ್ರಸ್ತುತಿ, ಹನುಮ ಒಡ್ಡೋಲಗಗಳು, ಸಭಿಕರ ಮಧ್ಯದಿಂದೆದ್ದು ಬರುವ ಕೆಲವು ವೇಷಗಳ ಅಬ್ಬರ ಇತ್ಯಾದಿ ಆಕರ್ಷಣೆಗಳಿರಲಿವೆ.…
ಬೆಂಗಳೂರು : ವಿಶ್ವ ಕನ್ನಡ ಆರನೇ ರಾಜ್ಯಮಟ್ಟದ ಕವಿಗಳ ಕವಿಗೋಷ್ಠಿ ಸಮ್ಮೇಳನವು ದಿನಾಂಕ 23 ಫೆಬ್ರವರಿ 2025ರಂದು ಬೆಂಗಳೂರಿನಲ್ಲಿ ಜರುಗಲಿದೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಿತ ದಾಖಲೆಯ ಕವಿಗೋಷ್ಠಿ ಇದು. ಸಾಹಿತ್ಯ, ಸಂಸ್ಕೃತಿ, ಜಾಗೃತಿ ಆಶಯ ಹೊಂದಿದ ವಿಶ್ವ ಕನ್ನಡ ಕಲಾ ಸಂಸ್ಥೆ (ರಿ.) ಇದನ್ನು ಆಯೋಜಿಸಿದ್ದಾರೆ. ಈ ಕವಿಗೋಷ್ಠಿಯ ಭಾಗವಾಗಿ ದ.ರಾ. ಬೇಂದ್ರೆ ವೇದಿಕೆಯಲ್ಲಿ ನಡೆಯುವ ಗೋಷ್ಠಿಯ ಅಧ್ಯಕ್ಷತೆಗೆ ಮಂಗಳೂರಿನ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಇವರು ಆಯ್ಕೆಯಾಗಿದ್ದಾರೆ. ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮೂಲತ: ಗಡಿನಾಡು ಕಾಸರಗೋಡಿನಲ್ಲಿ ಹುಟ್ಟಿ ಬೆಳೆದವರು. ಇವರ ಓದು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್. ಬ್ಯಾಂಕಿನಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೂರು ಕಥಾಸಂಕಲನಗಳು ಪ್ರಕಟವಾಗಿದ್ದು, ‘ನೆಲಸಂಪಿಗೆ’ ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಮಾಡುವ ‘ಶ್ರೀ ಕೆ. ವಾಸದೇವಾಚಾರ್ ದತ್ತಿ ಪ್ರಶಸ್ತಿ’ ದೊರಕಿದೆ.
ಬೆಂಗಳೂರು : ಬಿ.ಎಂ.ಶ್ರೀ ಪ್ರತಿಷ್ಠಾನ (ರಿ.) ಮತ್ತು ಲೇಖಿಕಾ ಸಾಹಿತ್ಯ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ‘ವಾಣಿ ಸ್ಮರಣೆ’ ಒಂದು ಸ್ಮರಣೀಯ ಕಾರ್ಯಕ್ರಮವನ್ನು ದಿನಾಂಕ 25 ಫೆಬ್ರವರಿ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಬಿ.ಎಂ.ಶ್ರೀ ಕಲಾಭವನ ಎಂ.ವಿ.ಸೀ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಂ.ಶ್ರೀ ಪ್ರತಿಷ್ಠಾನದ ಕಾರ್ಯದರ್ಶಿಯಾದ ಡಾ. ಶಾಂತರಾಜು ಇವರು ವಹಿಸಲಿದ್ದು, ಲೇಖಕಿ ಶ್ರೀಮತಿ ಶೈಲಜಾ ಸುರೇಶ್ ಇವರು ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಲೇಖಕರಾದ ಡಾ. ಮಂಗಳ ಪ್ರಿಯದರ್ಶಿನಿ ಡಿ. ಇವರು ‘ವಾಣಿ ಸ್ಮರಣೆ’ಗೈಯ್ಯಲಿದ್ದು, ಪುತ್ತೂರಿನ ಹಿರಿಯ ಲೇಖಕಿ, ಸಾಧಕಿ ಶ್ರೀಮತಿ ಎ.ಪಿ. ಮಾಲತಿ ಇವರಿಗೆ ಸಾವಿತ್ರಮ್ಮ ಅಪ್ಪಯ್ಯ ಹಿರಿಯ ಸಾಧಕಿ ಪ್ರಶಸ್ತಿ 2024 ಪ್ರದಾನ ಮಾಡಲಾಗುವುದು. ವಾಣಿ ಕೌಟುಂಬಿಕ ಕಥಾಸ್ಪರ್ಧೆ-2025 ವಿಜೇತರು – ‘ಸೋತು ಗೆದ್ದವಳು’ – ಸುಹಾಸಿನಿ ಹೆಗಡೆ, ಮೂರೂರು ‘ತಪ್ಪೊಂದ ಹೇಳುವೆ !’ – ಸ್ವರ್ಣಗೌರಿ ಎಸ್. ಕಳಾಸಪುರ ‘ಅಮ್ಮನಾಗುವುದೆಂದರೆ’ – ಕಲ್ಪನಾ ಹೆಗಡೆ ‘ಆತಂಕ’ – ರಮೇಶ್ ಗೋನಾಳ್ ‘ಸಂಪತ್ತು’ – ಸಂಜಯ್…
ಹೊನ್ನಾವರ : ಚಿಂತನ ಉತ್ತರ ಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ ಮತ್ತು ಪ್ರೀತಿಪದ ಇವರ ವತಿಯಿಂದ ಬಹುರೂಪಿಯ ಪ್ರಕಟಣೆ ಕಿರಣ ಭಟ್ ಇವರ ‘ಹೌಸ್ ಫುಲ್’ ಕೃತಿ ಲೋಕಾರ್ಪಣೆಯನ್ನು ದಿನಾಂಕ 26 ಫೆಬ್ರವರಿ 2025ರಂದು ಬೆಳಿಗ್ಗೆ 11-00 ಗಂಟೆಗೆ ಹೊನ್ನಾವರದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಇವರು ವಹಿಸಲಿದ್ದು, ಬರಹಗಾರರಾದ ದೀಪಾ ಹಿರೇಗುತ್ತಿ ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಧಾರವಾಡದ ಸಮಾಜ ವಿಜ್ಞಾನಿಗಳಾದ ಪ್ರಕಾಶ ಭಟ್ ಇವರು ಪುಸ್ತಕದ ಕುರಿತು ಮಾತನಾಡಲಿದ್ದು, ಬಹುರೂಪಿಯ ಜಿ.ಎನ್. ಮೋಹನ್ ಇವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ರಂಗ ಚಟುವಟಿಕೆಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆ. ವಿ. ಸುಬ್ಬಣ್ಣ ಎಂದೇ ಪ್ರಖ್ಯಾತರಾಗಿರುವ ಇವರ ಮೂಲ ಹೆಸರು ಕುಂಟಗೋಡು ವಿಭೂತಿ ಸುಬ್ಬಣ್ಣ. ಇವರ ತಂದೆ ಕೆ. ವಿ. ರಾಮಪ್ಪ, ತಾಯಿ ಸಾವಿತ್ರಮ್ಮ. ಮೂಲಮನೆ ‘ಕುಂಟಗೋಡು’ ಇದು ಒಂದು ಪುಟ್ಟ ಹಳ್ಳಿ. ‘ವಿಭೂತಿ’ ಇವರ ಮನೆತನದ ಹೆಸರು. ಬಿ. ಎ. ಆನರ್ಸ ಪದವಿಯನ್ನು ರ್ಯಾಂಕ್ ನಲ್ಲಿ ಉತ್ತೀರ್ಣರಾಗಿ, ಉದ್ಯೋಗಕ್ಕೆ ಅವಕಾಶಗಳಿದ್ದರೂ, ಅಡಿಕೆ ಬೆಳೆಗಾರರಾದ ಇವರು ಹಳ್ಳಿಗೆ ಬಂದು ಮಾಡಿದ ಸಾಧನೆ ಅಪೂರ್ವವಾದದ್ದು, ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಒಂದು ಚಿಕ್ಕ ಊರು ಹೆಗ್ಗೋಡಿನಲ್ಲಿ 1932 ಫೆಬ್ರವರಿ 20ರಂದು ಇವರ ಜನನವಾಯಿತು. ಇವರು ಹೆಗ್ಗೋಡಿನಲ್ಲಿದ್ದುಕೊಂಡೇ ‘ನೀನಾಸಂ’ ಎಂದು ಖ್ಯಾತಿವೆತ್ತ ‘ನೀಲಕಂಠೇಶ್ವರ ನಾಟ್ಯ ಸೇವಾ ಸಂಘ’ವನ್ನು 1949ರಲ್ಲಿ ಸ್ಥಾಪಸಿ ಸ್ಥಾಪಕಸದಸ್ಯರಾದರು. ಆದರೆ 1974ರಲ್ಲಿ ಕಟ್ಟಿದ ‘ನೀನಾಸಂ ಚಿತ್ರ ಸಮಾಜ’ ಭಾರತದ ಮೊತ್ತಮೊದಲ ಗ್ರಾಮೀಣ ಸಿನಿಮಾ ಸೊಸೈಟಿ ಎಂಬ ಕೀರ್ತಿಯನ್ನು ಪಡೆದಿದೆ. ‘ ನೀನಾಸಂ’ ನ ರಂಗ ಚಟುವಟಿಕೆಗಳ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ…