Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಶ್ರೀಪಾದ ಕೃಷ್ಣ ರೇವಣಕರ್ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 16 ಮಾರ್ಚ್ 2025ರಂದು ಶ್ರೀಪಾದ ಗುಲಾಬಿ ನಿವಾಸದಲ್ಲಿ ನಡೆಯಿತು. ಸಾಮಾಜಿಕ ಕಾರ್ಯಕರ್ತರೂ, ನಿವೃತ್ತ ಅಧ್ಯಾಪಕರೂ ಆದ ಶ್ರೀ ಸುಧಾಕರ ಪೇಜಾವರರವರು ಶ್ರೀಪಾದ ರೇವಣಕರರ ವ್ಯಕ್ತಿತ್ವ ಪರಿಚಯವನ್ನು ಮಾಡಿಕೊಟ್ಟರು. ಸರಳತೆಯ ಬದುಕನ್ನು ಮೈಗೂಡಿಸಿಕೊಂಡು, ಆದರ್ಶ ತಂದೆಯಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕೊಟ್ಟು ಬೆಳೆಸುವುದರೊಂದಿಗೆ, ಅಂಚೆ ಇಲಾಖೆಯಲ್ಲಿ ಅಂಚೆ ಅಣ್ಣನಾಗಿ ಅವರು ಗೈದ ಸೇವೆಯನ್ನೂ ಮನೆಮನಗಳನ್ನು ಬೆಸೆಯುವಂತಹ ಕೈಂಕರ್ಯಗಳನ್ನೂ ಸ್ಮರಿಸಿಕೊಂಡರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಶ್ರೀ ಪುಷ್ಪರಾಜ್ ಅವರು ‘ಗ್ರಾಮೀಣ ಬದುಕು ಶಿಕ್ಷಣ ನೀತಿ’ ಎಂಬ ವಿಷಯದ ಬಗ್ಗೆ ದತ್ತಿ ಉಪನ್ಯಾಸವನ್ನು ನೀಡಿದರು. ಗ್ರಾಮೀಣ ಶಿಕ್ಷಣವು ವಿದ್ಯಾರ್ಥಿಗಳಿಗೆ ಔಪಚಾರಿಕ ಶಿಕ್ಷಣದೊಂದಿಗೆ ಅನೌಪಚಾರಿಕ ಶಿಕ್ಷಣವನ್ನು ನೀಡಿ ಬದುಕಿನ ಯಾವುದೇ ಸವಾಲುಗಳನ್ನು ಎದುರಿಸಲು ಸಮರ್ಥರಾಗುವಂತೆ ಮಾಡುತ್ತದೆ ಎಂಬುದನ್ನು ಹೇಳುತ್ತಾ, ಇಂದು ಗ್ರಾಮೀಣರು ಅದನ್ನು ಬಿಟ್ಟು ನಗರೀಕರಣದೆಡೆಗೆ ಸೆಳೆಯಲ್ಪಟ್ಟು ಸಂಸ್ಕೃತಿ…
ಕನ್ನಡದ ಭರವಸೆಯ ಕಾದಂಬರಿಕಾರರಲ್ಲೊಬ್ಬರಾದ ಎಂ.ಆರ್. ದತ್ತಾತ್ರಿಯವರ ‘ಸರ್ಪಭ್ರಮೆ’ ಕಾದಂಬರಿಯಲ್ಲಿ ಕಥೆಗಾರನೊಬ್ಬ ಜಗತ್ತನ್ನು ಕಾಣುವ ಬಗೆ, ಅದರಿಂದ ಬಾಳಿನ ಸುಖ ದುಃಖಗಳನ್ನು ಸೋಸುವ ರೀತಿಯನ್ನು, ಅದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವ ವಿಧಾನವನ್ನು ತಾತ್ತ್ವಿಕತೆಯ ಹಿನ್ನೆಲೆಯಲ್ಲಿ ವಿವರಿಸುವ ಪ್ರಾಮಾಣಿಕ ಪ್ರಯತ್ನವಿದೆ. ಇದು ಲೌಕಿಕ ಮತ್ತು ಅಲೌಕಿಕ ಅನುಭವಗಳನ್ನು ಸರಿಸಮವಾಗಿ ಬೆಸೆದ ಕೃತಿ. ಕತ್ತಲಲ್ಲಿ ಬಿದ್ದ ಹಗ್ಗವನ್ನು ಹಾವೆಂದು ತಿಳಿದು ಹೆದರುವ ಪ್ರಕ್ರಿಯೆಯನ್ನು ಸರ್ಪಭ್ರಮೆ ಎನ್ನುತ್ತೇವೆ. ಬದುಕಿನ ಹಾದಿಯಲ್ಲಿ ಹಾವಿನಂತಹ ಹಗ್ಗಗಳನ್ನು ಕಂಡು ಉಂಟಾದ ಭ್ರಮೆಯಿಂದ ಕಳಚಿಕೊಂಡು ಮುಂದುವರಿಯಲು ನಮ್ಮೊಳಗಿನ ಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇದು ತನ್ನನ್ನು ತಾನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿ ತನ್ನನ್ನು ತಾನು ಹುಡುಕಿಕೊಳ್ಳುವ ಪಯಣವೇ ‘ಸರ್ಪಭ್ರಮೆ’ಯ ತಿರುಳು. ಈ ಕಾದಂಬರಿಯ ಕತೆ ಮತ್ತು ನಿರೂಪಣೆಯ ಧಾಟಿಯು ಭಿನ್ನವಾಗಿದೆ. ಕನ್ನಡದಲ್ಲಿ ಈಗಾಗಲೇ ಉತ್ತಮ ಪುರುಷ ನಿರೂಪಣೆಯಲ್ಲಿ ಹಲವಾರು ಕೃತಿಗಳು ಬಂದಿದ್ದರೂ ಸಹ ಈ ಕಾದಂಬರಿಯ ವಸ್ತು ಮತ್ತು ಕಥನ ತಂತ್ರ ವಿಶಿಷ್ಟವಾಗಿದೆ. ಕಂಪ್ಯೂಟರ್ ಇಂಜಿನಿಯರ್ ಆಗಿರುವ ಸಂದೀಪನು ತನ್ನ ಕತೆಯನ್ನು ನಿರೂಪಿಸುತ್ತಾ ತಂದೆಯ…
ಧಾರವಾಡ : ಭಾರತೀಯ ಸಂಗೀತಲೋಕದ ನವೋನ್ವೇಷ, ಸ್ವರಯೋಗಿನಿ ಖ್ಯಾತಿಯ ಪದ್ಮವಿಭೂಷಣ ಡಾ. ಪ್ರಭಾ ಅತ್ರೆ ಸಂಸ್ಮರಣೆಯಲ್ಲಿ ‘ಸ್ವರಯೋಗಿನಿ’ ಸಂಗೀತ ಹಾಗೂ ಭರತನಾಟ್ಯಗಳ ವಿಶೇಷ ಕಾರ್ಯಕ್ರಮವು ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿನಾಂಕ 15 ಮಾರ್ಚ್ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಡಾ. ಪ್ರಭಾ ಅತ್ರೆ ಇವರಿಂದ ರಚಿತ ಬಂದಿಶ್ ಗಳನ್ನು ಕೇಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪುರಸ್ಕೃತ ಕಲಾವಿದೆ, ಹಿರಿಯ ಗಾಯಕಿ ವಿದುಷಿ ಪದ್ಮಾ ತಳವಲಕರ್ ಇವರು ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ತೇಜಸ್ ಮಾಜಗಾಂವಕರ್ ಹಾಗೂ ಅಮೇಯ ಬಿಚ್ಚು ಹಾರ್ಮೋನಿಯಂನಲ್ಲಿ ಸಾಥ್ ಸಂಗತ್ ಮಾಡಿದರು. ಇನ್ನೊಬ್ಬ ಕೇಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪುರಸ್ಕೃತ ಹಿರಿಯ ನೃತ್ಯ ಕಲಾವಿದೆ ಡಾ. ಸುಚೇತಾ ಭಿಡೆ-ಚಾಪೇಕರ್ ಮತ್ತು ತಂಡದವರು ‘ನೃತ್ಯ-ಪ್ರಭ’ ಎಂಬ ವಿಶೇಷ ಭರತನಾಟ್ಯವನ್ನು ಪ್ರಸ್ತುತಪಡಿಸಿದರು. ಇವರೊಂದಿಗೆ ಶಿಷ್ಯೆಯರಾದ ಆರುಂಧತಿ ಪಟವರ್ಧನ, ರುಚಾ, ಅನುಜಾ ಹಾಗೂ ಸಾಗರಿಕಾ ನೃತ್ಯ ಪ್ರದರ್ಶಿಸಿದರು.
ಇದು ಸುಮಾರು 70 ವರ್ಷದ ಹಿಂದಿನ ಕಥೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ 04/01/1955. ಆ ದಿನ ಏಕಾದಶಿಯಂತೆ. ಅಂದು ರಾಧೆ ಕೃಷ್ಣ ದಂಪತಿಯರ ಮಡಿಲು ತುಂಬಿದ ಕಂದ, ಸಾಕಿ ಬೆಳೆಸಿದ ಶಿವ ಪಾರ್ವತಿಗೊಲಿದ ಮಕರಂದ. ಅಣ್ಣಿಗೇರಿ ಎಂಬ ನವಲಗುಂದದ ಹಳ್ಳಿಯೊಂದರಲ್ಲಿ ಅರಳಿದ ಅರವಿಂದ ಅಲ್ಲಿಯ ಕುಲೀನ ಮನೆತನ ಕುಲಕರ್ಣಿ ಕುಲದಾನಂದ… ನಮ್ಮ ಅಭಿನಯ ಭಾರತಿಯ ಹೆಮ್ಮೆಯ ರವಿ ರಶ್ಮಿ… ಅರವಿಂದ ಕುಲಕರ್ಣಿ ಧರೆಗಿಳಿದು ಬಂದ ಪರ್ವ ದಿನವಂತೆ. ಮುಂದಿನ ಇವರ ಜೀವನ ಕಥನ ಕೇಳೋಣ. ಹೂ ಹಣ್ಣು ಬಿಡುವ ತರುಲತೆಗಳು ಚಿಗುರುತ್ತಿರುವಾಗಲೇ ಅಗತ್ಯದ ನೀರು ಗೊಬ್ಬರ ಬುಡಕ್ಕೆ ಬಿದ್ದರೆ ಅದು ಫಲ ಭರಿತ ಹೆಮ್ಮರವಾಗಿ ಬೆಳೆದು ದಾರಿ ಹೋಕರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ ಅಲ್ಲವೇ. ಹೌದು ಹೀಗೆಯೇ ನಂದನವನವಾಗಿತ್ತು ಕುಲಕರ್ಣಿಯವರ ಬಾಲ್ಯದ ಜೀವನ. ಎಳವೆಯಲ್ಲಿಯೇ ಸಾಧನೆಗಳ ಮೆಟ್ಟಲೇರಲು ಬೇಕಾದ ಭದ್ರ ಬುನಾದಿ ದೊರೆತದ್ದು ಹುಟ್ಟೂರು ಅಣ್ಣಿಗೇರಿಯ ಸುಂದರ ಪರಿಸರದಲ್ಲಿಯೇ… ಅರವಿಂದರ ಅಕ್ಷರ ಪಯಣ ಪ್ರಾರಂಭವಾದದ್ದೂ ಅಲ್ಲಿಯ ಸರಕಾರಿ ಶಾಲೆಯಲ್ಲಿಯೇ. ಆ ಶಾಲೆ ಅಮೃತೇಶ್ವರ…
ತುಮಕೂರು : ಶೈನಾ ಅಧ್ಯಯನ ಸಂಸ್ಥೆ ತುಮಕೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಮತ್ತು ‘ಡಮರುಗ’ ರಂಗ ಸಂಪನ್ಮೂಲ ಕೇಂದ್ರ ಮೆಳೇಹಳ್ಳಿ ಇವರ ಸಹಯೋಗದಲ್ಲಿ ಮೆಳೇಹಳ್ಳಿ ದೇವರಾಜ್ ಇವರ ನಿರ್ದೇಶನದಲ್ಲಿ ‘ನೀಲಾಂಬಿಕೆ’ ನಾಟಕ ಪ್ರದರ್ಶನವನ್ನು ದಿನಾಂಕ 19 ಮಾರ್ಚ್ 2025ರಂದು ಮಧ್ಯಾಹ್ನ 3-00 ಗಂಟೆಗೆ ತುಮಕೂರು ಶ್ರೀರಾಮನಗರ, ಅಮಾನಿಕೆರೆ ಎದುರು, ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಅಕ್ಷಯ್ ಬಿ.ಎಸ್., ಪಾತಲಿಂಗಯ್ಯ ಡಿ.ಪಿ., ಶಶಿಕುಮಾರ್ ಗೌಡಿಹಳ್ಳಿ, ಶಿವಶಂಕರ್, ಸುಮಿತ್ರ, ನಂದಿತಾ ದಿನೇಶ್ ಭಟ್, ಲಯ ಮೆಳೇಹಳ್ಳಿ, ಚಿನ್ಮಯ, ಯೋಗೀಶ್, ಪ್ರಕಾಶ್ ಮೆಳೇಹಳ್ಳಿ, ಭರತ್ ಚಕ್ರವರ್ತಿ, ಸ್ನೇಹ, ತನುಜ, ರಾಮು ಇವರುಗಳು ರಂಗ ಮೇಲೆ ಅಭಿನಯಿಸಲಿದ್ದಾರೆ.
ಕಾರ್ಕಳ : ಯಕ್ಷ ರಂಗಾಯಣ ಕಾರ್ಕಳ ವತಿಯಿಂದ “ಕವಿತೆಯ ಮಾತು – ಅಡಿಗರ ನೆನಪು” ಒಂದು ದಿನದ ಕಾರ್ಯಾಗಾರ ದಿನಾಂಕ 15 ಫೆಬ್ರವರಿ 2025 ರಂದು ಕಾರ್ಕಳ ದ ಕೋಟಿ ಚೆನ್ನಯ ಥೀಂ ಪಾರ್ಕ್ ನ ಆವರಣದಲ್ಲಿ ನಡೆಯಿತು. ಅತ್ತೂರು ಸೈಂಟ್ ಲಾರೆನ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಸುಬ್ರಹ್ಮಣ್ಯ ಉಪಾಧ್ಯ ಬಿ. ಉಪನ್ಯಾಸ ನೀಡಿ ಮಾತನಾಡಿ “ಗೋಪಾಲ ಕೃಷ್ಣ ಅಡಿಗರು ನಾಡು ಕಂಡ ಶ್ರೇಷ್ಠ ಕವಿ. ಸಾರ್ವಕಾಲಿಕ ಮೌಲ್ಯಗಳನ್ನು ತಮ್ಮ ಬರವಣಿಗೆಯ ಮೂಲಕ ಜನರಿಗೆ ತಲುಪಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಅವರು ಸಾಹಿತ್ಯ ಲೋಕಕ್ಕೆ ಹೊಸ ಚೈತನ್ಯ ನೀಡಿದರು” ಎಂದರು. ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ವನಿತಾ ಶೆಟ್ಟಿ ಮಾತನಾಡಿ “ಗೋಪಾಲ ಕೃಷ್ಣ ಅಡಿಗರು ‘ಯುಗ ಪ್ರಜ್ಞೆಯ ಕವಿ’ ನವ್ಯ ಪ್ರಕಾರಗಳನ್ನು ಜನಮನಗಳಿಗೆ ತಲುಪಿಸಿದ ಅವರ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಸಾಹಿತ್ಯದ ಬಗೆಗೆ ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು”…
ಶ್ರೀಮತಿ ಚಂದ್ರಕಲಾ ಇಟಗಿಮಠ ಇವರ ಸಾರಥ್ಯದ ಕಪ್ಪತ್ತಗಿರಿ ಫೌಂಡೇಶನ್ (ರಿ.) ಕಳಸಾಪುರ ಗದಗ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ದಿನಾಂಕ 09 ಮಾರ್ಚ್ 2025ರಂದು ಬಂಜಾರ ಭವನದಲ್ಲಿ ಆಯೋಜಿಸಿದ್ದ ಅದ್ದೂರಿ ಮಹಿಳಾ ಸಮ್ಮೇಳನದಲ್ಲಿ ಆಹ್ವಾನಿತನಾಗಿ ಪಾಲ್ಗೊಂಡಿದ್ದು, ಸಾಹಿತ್ಯಕ್ಷೇತ್ರದ ಸಾಧನೆಗಾಗಿ ವಿಶೇಷ ಗೌರವ ಸ್ವೀಕರಿಸಿ, ಪುರಸ್ಕೃತನಾಗಿದ್ದು, ಮರೆಯಲಾಗದ ಅಪೂರ್ವ ಅನುಭವ. ಅವರ್ಣನೀಯ ಆನಂದಾನುಭೂತಿಯ ಅನುಭಾವ. ದಿವ್ಯಶ್ರೀಗಳ ಸಾನಿಧ್ಯ, ಅತ್ಯಂತ ಗಣ್ಯ-ಮಾನ್ಯರ ಉಪಸ್ಥಿತಿ, ನೂರಾರು ವಿವಿಧ ಕ್ಷೇತ್ರದ ಅಪರೂಪದ ಸಾಧಕರ ಸಮಾಗಮ, ನಾಡಿನ ಮೂಲೆ-ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಸಾಧಕ-ಸಾಧಕಿಯರು, ಕವಿ-ಕವಯತ್ರಿಯರು, ಲೇಖಕಿಯರು, ಕಲಾವಿದರು, ಸಾಹಿತ್ಯಾಸಕ್ತರ ಭವ್ಯ ಸಮ್ಮಿಲನ. ಅತಿಥಿ ಮಹೋದಯರ ಅರ್ಥಪೂರ್ಣ ಭಾಷಣ, ಶ್ರೀಗಳ ದಿವ್ಯಾಶೀರ್ವಚನ, ಸಮ್ಮೇಳನಾಧ್ಯಕ್ಷೆ ಶ್ರೀಮತಿ ರತ್ನಾ ಗಿ. ಬದಿ ಇವರ ಭಾವಪೂರ್ಣ ಮಾತುಗಳು, ವೇದಿಕೆಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದ ಮುಖ್ಯ ರೂವಾರಿ ಶ್ರೀಮತಿ ಚಂದ್ರಕಲಾ ಇಟಗಿಮಠ ಇವರ ಸ್ಪೂರ್ತಿದಾಯಕ ನುಡಿಗಳು ಸಮಾರಂಭದ ಮೆರುಗನ್ನು ನೂರ್ಮಡಿಗೊಳಿಸಿತು. 140 ಕವಯಿತ್ರಿಯರ ’ಭೂಮಿ ತೂಕದಾಕೆ’ ಕೃತಿ ಬಿಡುಗಡೆ, ಕವಯತ್ರಿಯರಿಗೆ ಗೌರವ ಸಮ್ಮಾನ, ವಿವಿಧ…
ಕಾಸರಗೋಡು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ವತಿಯಿಂದ ಶ್ರೀ ಎಡನೀರು ಕ್ಷೇತ್ರದ ಭಾರತೀ ಕಲಾ ಸದನದ ಸಭಾ ಮಂದಿರದಲ್ಲಿ ಡಾ. ರಮಾನಂದ ಬನಾರಿ ಮತ್ತು ಡಾ. ವಸಂತ ಕುಮಾರ ಪೆರ್ಲ ಇವರ ಸಂಪಾದಿತ ಕೃತಿಗಳಾದ ‘ಕನ್ನಡಿಯಲ್ಲಿ ಕನ್ನಡಿಗರು’ ಸರಣಿಯ ಎರಡು ಸಂಚಿಕೆಗಳ ಬಿಡುಗಡೆ ಕಾರ್ಯಕ್ರಮವು ದಿನಾಂಕ 15 ಮಾರ್ಚ್ 2025ರಂದು ನಡೆಯಿತು. ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಪರಮಪೂಜ್ಯ ಶ್ರೀಮದ್ ಎಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳು “ಕಾಸರಗೋಡಿನ ಸಾಧಕರನ್ನು ಪರಿಚಯಿಸುವ ‘ಕನ್ನಡಿಯಲ್ಲಿ ಕನ್ನಡಿಗರು’ ಕೃತಿ ಸರಣಿಯ ಸಂಚಿಕೆಗಳು ಅರ್ಥಪೂರ್ಣವಾಗಿ ಮೂಡಿ ಬಂದಿವೆ. ಈ ಕಾರ್ಯ ಇಂದಿನ ಮತ್ತು ಮುಂದಿನ ತಲೆಮಾರಿಗೆ ಪ್ರೇರಣೆಯಾಗಬೇಕು. ಕನ್ನಡದ ಬಂಧುಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಕಾಸರಗೋಡಿನ ಸಾಹಿತ್ಯಕ ಸಾಂಸ್ಕೃತಿಕ ವಾತಾವರಣವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ನಡೆದಿದೆ. ಇಂಥ ಅಪರೂಪದ ಕೃತಿಗಳನ್ನು ನೀಡಿದ ಡಾ. ರಮಾನಂದ ಬನಾರಿ ಮತ್ತು ಡಾ. ವಸಂತ ಕುಮಾರ ಪೆರ್ಲ…
ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ರಂಗಾಯಣ ಕಾರ್ಕಳ ಮತ್ತು ರಂಗಸಂಸ್ಕೃತಿ (ರಿ.) ಕಾರ್ಕಳ ಇವರ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ 11ನೇ ವರ್ಷದ ಬಿ. ಗಣಪತಿ ಪೈ ರಂಗೋತ್ಸವ ‘ಮಾಗಿ-ಸುಗ್ಗಿ ನಾಟಕ ಹಬ್ಬ’ ದಿನಾಂಕ 20 ಮಾರ್ಚ್ 2025ರಿಂದ 25 ಮಾರ್ಚ್ 2025ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಕಾರ್ಕಳದ ಮಂಜುನಾಥ ಪೈ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 20 ಮಾರ್ಚ್ 2025ರಂದು ಹುಲುಗಪ್ಪ ಕಟ್ಟೆಮನಿ ಇವರ ನಿರ್ದೇಶನದಲ್ಲಿ ಧಾರವಾಡ ರಂಗಾಯಣ ಪ್ರಸ್ತುತ ಪಡಿಸುವ ನಾಟಕ ‘ಸತ್ತವರ ನೆರಳು’, ದಿನಾಂಕ 21 ಮಾರ್ಚ್ 2025ರಂದು ಶಕೀಲ್ ಅಹ್ಮದ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ವಿಜಯಪುರದ ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪನಿ (ರಿ.) ಪ್ರಸ್ತುತ ಪಡಿಸುವ ‘ಅನಾಮಿಕನ ಸಾವು’, ದಿನಾಂಕ 22 ಮಾರ್ಚ್ 2025ರಂದು ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ ಇವರ ನಿರ್ದೇಶನದಲ್ಲಿ ಹಾರಾಡಿಯ ಭೂಮಿಕಾ (ರಿ.) ತಂಡ ಅಭಿನಯಿಸುವ ‘ಬರ್ಬರೀಕ’, ದಿನಾಂಕ 23 ಮಾರ್ಚ್ 2025ರಂದು…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ 2024-2025ರ ವಾರ್ಷಿಕ ಮಹಾ ಸಭೆಯು ದಿನಾಂಕ 15 ಮಾರ್ಚ್ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಭಾಸ್ಕರ್ ಬಾರ್ಯರ ಅಧ್ಯಕ್ಷತೆ ನಡೆಯಿತು. ಭಾರತೀ ರೈಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಗೆ ಸತೀಶ್ ಇರ್ದೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆನಂದ ಸವಣೂರುರವರು ಹಾಗೂ ಕೋಶಾಧಿಕಾರಿ ದುಗ್ಗಪ್ಪ ನಡುಗಲ್ಲುರವರು ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಸಭೆ ಮುಂದಿಟ್ಟರು. ಉಪಾಧ್ಯಕ್ಷರುಗಳಾದ ಗುಂಡ್ಯಡ್ಕ ಈಶ್ವರ ಭಟ್ ಹಾಗೂ ಗುಡ್ಡಪ್ಪ ಬಲ್ಯರು ಸಂಘ ಚಟುವಟಿಕೆಗಳ ಕುರಿತು ಶ್ಲಾಘನೀಯ ಮಾತುಗಳನ್ನಾಡಿದರು. ಉಭಯ ಸಂಘದ ಅಧ್ಯಕ್ಷರುಗಳಾದ ಭಾಸ್ಕರ್ ಬಾರ್ಯ ಹಾಗು ಪ್ರೇಮಲತಾ ಟಿ. ರಾವ್ ತಮ್ಮ ಸಹಕಾರವನ್ನು ಮುಂದೆಯೂ ನೀಡಿ ಸಂಘದ ಬೆಳವಣಿಗೆಗೆ ಪಾತ್ರರಾಗೋಣ ಎಂದು ತಿಳಿಸಿದರು. ಮಹಿಳಾ ಯಕ್ಷಗಾನ ಸಂಘದ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ವಂದಿಸಿದರು. ಸಭೆಯಲ್ಲಿ ಸತೀಶ್ ಕುಮಾರ್ ಎಂಕಣ್ಣಮೂಲೆ, ವಸಂತ ಆಚಾರ್ಯ, ಶರಣ್ಯ ನೇತ್ರಕೆರೆ,…