Author: roovari

ಸುಳ್ಯ : ವಿಶ್ವ ನೃತ್ಯ ದಿನದ ಅಂಗವಾಗಿ ಗುರುದೇವ ಲಲಿತಕಲಾ ಅಕಾಡೆಮಿ ವತಿಯಿಂದ ದಿನಾಂಕ 29 ಏಪ್ರಿಲ್ 2025ರಂದು ವಿಶ್ವ ನೃತ್ಯ ದಿನ 2025 ಸುಳ್ಯ ತಾಲೂಕಿನ ಕನಕಮಜಲಿನ ಕನಕ ಕಲಾ ಗ್ರಾಮದಲ್ಲಿ ನಡೆಯಿತು. ಇದರ ಅಂಗವಾಗಿ ಬೆಳಗ್ಗೆ 9-00 ಗಂಟೆಯಿಂದ ರಾತ್ರಿ ತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ನಡೆದ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳನ್ನು ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್‌ ಭಾರದ್ವಾಜ್ ಉದ್ಘಾಟಿಸಿ ಶುಭ ಹಾರೈಸಿದರು. ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಕಾಮತ್‌, ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರ್, ಭರತನಾಟ್ಯ ಕಲಾವಿದೆ ಮಂಜುಶ್ರೀ ರಾಘವ್, ಕನಕಮಜಲು ಗ್ರಾ.ಪಂ. ಅಧ್ಯಕ್ಷೆ ಶಾರದಾ ಉಗ್ಗಮೂಲೆ, ಎಸ್. ಗೋಪಾಲಕೃಷ್ಣ ಮೂರ್ಜೆ ಭಾಗವಹಿಸಿದ್ದರು. ಗುರುದೇವ ಲಲಿತ ಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣ ಪಿ.ಎಂ. ಉಪಸ್ಥಿತರಿದ್ದರು. ಅಕಾಡೆಮಿಯ ಕಲಾ ನಿರ್ದೇಶಕಿ ಡಾ. ಚೇತನಾ ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ದಾಮೋದರ ಕಣಜಾಲು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.…

Read More

ಮೈಸೂರು : ಮಂಡ್ಯ ರಮೇಶ್ ನೇತೃತ್ವದ ‘ನಟನ ಮೈಸೂರು’ ಆಯೋಜಿಸಿದ ‘ರಜಾ ಮಜಾ ಮಕ್ಕಳ ಬೇಸಿಗೆ ಶಿಬಿರ 2025’ದ ಸಮಾರೋಪ ಸಡಗರ ಕಾರ್ಯಕ್ರಮವು ದಿನಾಂಕ 05 ಮತ್ತು 06 ಮೇ 2025ರಂದು ಸಂಜೆ 5-00 ಗಂಟೆಗೆ ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಕರ್ನಾಟಕ ಕಲಾಮಂದಿರದಲ್ಲಿ ನಡೆಯಲಿದೆ. ಶಿಬಿರದ ಮಕ್ಕಳಿಂದ ರಂಗಗೀತೆಗಳು, ಕಿರು ನಾಟಕಗಳು, ಕಂಪನಿ ಶೈಲಿಯ ನಾಟಕ, ಮೂಡಲಪಾಯ ಯಕ್ಷಗಾನ, ವೀರಗಾಸೆ, ಕಂಸಾಳೆ, ಮುಳ್ಳು ಕುಣಿತ, ಮಲ್ಲಗಂಬ, ಹಗ್ಗದ ಮಲ್ಲಗಂಬ ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.

Read More

ಬೈಂದೂರು : ಲಾವಣ್ಯ (ರಿ.) ಬೈಂದೂರು ಇವರ ಆಶ್ರಯದಲ್ಲಿ ಕುಂದಾಪುರದ ಪ್ರಥಮದರ್ಜೆ ಗುತ್ತಿಗೆದಾರರಾದ ಶ್ರೀ ರಾಮಕೃಷ್ಣ ಶೇರುಗಾ‌ರ್ ಬಿಜೂರು, ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಹಾಗೂ ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಸಹಾಯಕ ಆಯುಕ್ತರಾದ ಶ್ರೀ ಸತೀಶ್ ಬಟವಾಡಿ ಇವರ ಸಹಯೋಗದೊಂದಿಗೆ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸ್ಮರಣಾರ್ಥ ‘ಲಾವಣ್ಯ ಮಕ್ಕಳ ರಂಗ ತರಬೇತಿ ಶಿಬಿರ’ದಲ್ಲಿ ರೂಪುಗೊಂಡ ನಾಟಕಗಳ ಪ್ರದರ್ಶನವು ದಿನಾಂಕ 10 ಮೇ 2025ರ ಶನಿವಾರದಂದು ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯಲಿದೆ. ಅಂದು ಕೇಶ್ ಎಲ್ಲಂಗಳ ರಚನೆ ಹಾಗೂ ರಾಜೇಶ್ ನಾಯ್ಕ ನಿರ್ದೇಶನದ ‘ಅಜ್ಜಿಕಥೆ’ ಮತ್ತು ಡಾ. ಕಾತ್ಯಾಯಿನಿ ಕುಂಜಿಬೆಟ್ಟು ರಚನೆ ಹಾಗೂ ಬಿ. ಗಣೇಶ್ ಕಾರಂತ್, ರೋಶನ್ ಕುಮಾರ್ ನಿರ್ದೇಶನದ ‘ಹಿಮಮಣಿ’ ನಾಟಕಗಳು ಪ್ರದರ್ಶನಗೊಳ್ಳಲಿವೆ. ಈ ನಾಟಕಗಳಿಗೆ ಚಂದ್ರ ಬಂಕೇಶ್ವರ ಮತ್ತು ಮೂರ್ತಿ ಬೈಂದೂರು ಸಂಗೀತ ನೀಡಿದ್ದು, ಪ್ರಸಾಧನ ಹಾಗೂ ರಂಗ ಸಜ್ಜಿಕೆಯಲ್ಲಿ ತ್ರಿವಿಕ್ರಮ್ ರಾವ್ ಉಪ್ಪುಂದ, ಎಚ್. ಉದಯ್ ಆಚಾರ್ಯ, ನಾಗರಾಜ…

Read More

ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ಶುಭದ ಚಾರಿಟಬಲ್ ಟ್ರಸ್ಟ್, ಮಗ್ಗೆ ಸುಗ್ಗಿ ಟ್ರಸ್ಟ್ ಮತ್ತು ಸ್ನೇಹ ಸೇವಾ ಫೌಂಡೇಶನ್ ಇದರ ವತಿಯಿಂದ ಹಮ್ಮಿಕೊಂಡಿದ್ದ ‘ಬಣ್ಣದ ಬೇಸಿಗೆ’ ಮಕ್ಕಳ ರಂಗ ಶಿಬಿರದ ಸಮಾರೋಪ ಸಮಾರಂಭವನ್ನು ದಿನಾಂಕ 04 ಮೇ 2025ರಂದು ಸಂಜೆ 4-30 ಗಂಟೆಗೆ ಸಿವಗಂಗ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಬಸವ ಜಯಂತಿ, ಮಕ್ಕಳ ಸಾಂಸ್ಕೃತಿಕ ಉತ್ಸವ ಮತ್ತು ನಾಡಿನ‌ ಖ್ಯಾತ ರಂಗಸಂಘಟಕ ಹಾಗೂ ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ ಇವರಿಗೆ ‘ ಸಿವಗಂಗ ರಂಗ ಪ್ರಶಸ್ತಿ ‘ ಪ್ರದಾನ ಮಾಡಲಾಗುವುದು. ಶಿಬಿರದ ಮಕ್ಕಳಿಂದ ‘ಭಕ್ತ ಪ್ರಹ್ಲಾದ’ ನಾಟಕ ಪ್ರದರ್ಶನ ಹಾಗೂ ಗೀತಾ ಭತ್ತದ್ ಬಳಗದಿಂದ ‘ವಚನ ಸಂಗೀತ’ ಪ್ರಸ್ತುತಗೊಳ್ಳಲಿದೆ.

Read More

ಉಡುಪಿ : ರಂಗಭೂಮಿ ಉಡುಪಿ ಸಂಸ್ಥೆಯು 60ರ ಸಂಭ್ರಮದಲ್ಲಿದ್ದು ಸಂಸ್ಥೆಯ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ 45 ವರ್ಷಗಳ ಕಾಲ ‘ರಂಗಭೂಮಿ’ಯನ್ನು ಕಟ್ಟಿ ಬೆಳೆಸಿದ ದಿ. ಕುತ್ಪಾಡಿ ಆನಂದ ಗಾಣಿಗರ ಸಂಸ್ಮರಣಾರ್ಥ ಆಯೋಜಿಸುವ ‘ರಂಗಭೂಮಿ ಆನಂದೋತ್ಸವ -2025 ’ ಕಾರ್ಯಕ್ರಮವು ದಿನಾಂಕ 04 ಮೇ 2025ರಂದು ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ‘ರಂಗಭೂಮಿ’ಯ ಆರಂಭದಿಂದ ಇಂದಿನವರೆಗೂ ನಿರಂತರವಾಗಿ ಸಲಹೆ, ಸಹಕಾರ, ಮಾರ್ಗದರ್ಶನ ನೀಡುತ್ತಾ ಮಣಿಪಾಲದ ಪೈ ಕುಟುಂಬದವರು ಸಂಸ್ಥೆಯನ್ನು ಬೆಳೆಸುತ್ತಾ ಬಂದಿದ್ದು, ಟಿ. ಅಶೋಕ್ ಪೈ ಅವರು ನಾಡಿನ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ರಂಗಕ್ಕೆ ನೀಡಿರುವ ಕೊಡುಗೆಗಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ‘ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾಹಿತಿ ನೀಡಿದರು. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ. ಶ್ಯಾಮ್ ಭಟ್ ಕಾರ್ಯಕ್ರಮ…

Read More

ಕಾಸರಗೋಡು : ಕಾಸರಗೋಡು ಜಿಲ್ಲೆಯ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆಯಾದ ರಂಗಚಿನ್ನಾರಿ ಕಳೆದ ಹಲವು ವರ್ಷಗಳಿಂದ ಕಾಸರಗೋಡಿನ ಹಿರಿಯ ಕಿರಿಯ ಪ್ರತಿಭೆಗಳಿಗೆ ನಗದು ಬಹುಮಾನ ಸಹಿತ ‘ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ’, ‘ರಂಗ ಚಿನ್ನಾರಿ ಪ್ರಶಸ್ತಿ’, ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ ನೀಡಿ ಪ್ರತಿಭೆಗಳನ್ನು ಗೌರವಿಸಿದೆ. ಇದರಂತೆ 2024-25ನೇ ಸಾಲಿನ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ರಂಗ ಚಿನ್ನಾರಿಯ ನಿರ್ದೇಶಕರುಗಳಾದ ಕಾಸರಗೋಡು ಚಿನ್ನಾ, ಸತೀಶ್ಚಂದ್ರ ಭಂಡಾರಿ, ಸತ್ಯನಾರಾಯಣ ಕೆ. ಮತ್ತು ಮನೋಹರ ಶೆಟ್ಟಿ ತಿಳಿಸಿದ್ದಾರೆ. ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ ಹಾಗೂ ಹರಿರಾಯ ಕಾಮತ್, ಪ್ರೇಮಾ ಕಾಮತ್ ಸ್ಮರಣಾರ್ಥ ನಗದು ಬಹುಮಾನಕ್ಕೆ ಮಾಧವ ಪಾಟಾಳಿ ನೀರ್ಚಾಲು, ರಂಗ ಚಿನ್ನಾರಿ ಪ್ರಶಸ್ತಿ ಹಾಗೂ ಎನ್.ಆರ್. ಬೇಕಲ್ ಸ್ಮರಣಾರ್ಥ ನಗದು ಬಹುಮಾನಕ್ಕೆ ರಾಂ ಎಲ್ಲಂಗಳ ಮತ್ತು ಕುಂಚಿನಡ್ಕ ಶಕುಂತಲಾ ಕೃಷ್ಣ ಭಟ್, ರಂಗ ಚಿನ್ನಾರಿ ಯುವ ಪ್ರಶಸ್ತಿ ಹಾಗೂ ಕೆ. ದೇರಪ್ಪ ಸ್ಮರಣಾರ್ಥ ನಗದು ಬಹುಮಾನಕ್ಕೆ ಕಿರಣ್ ರಾಜ್ ಮತ್ತು ದೀಕ್ಷಾ…

Read More

ಸಾಣೇಹಳ್ಳಿ : ಶ್ರೀ ಶಿವಕುಮಾರ ಕಲಾಸಂಘ (ರಿ.) ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಇದರ ವತಿಯಿಂದ ‘ಮಕ್ಕಳ ಹಬ್ಬ ಸಮಾರೋಪ’ ಸಮಾರಂಭವು ದಿನಾಂಕ 29 ಏಪ್ರಿಲ್ 2025ರಂದು ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು “ಬೇರೆ ಬೇರೆ ಸ್ಥಳಗಳಿಂದ, ವಿಭಿನ್ನ ಸಂಸ್ಕೃತಿಯಿಂದ ಮಕ್ಕಳು ಸಾಣೇಹಳ್ಳಿಗೆ ಬಂದು ಇಲ್ಲಿ ಒಂದಾಗಿ ಶಿಬಿರದಲ್ಲಿ ಸಂತೋಷದಿಂದ ಭಾಗವಹಿಸಿದ್ದು ನಮಗೆ ಖುಷಿ ತಂದಿದೆ. ಈ ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಕಾಲ, ಕಾಯಕದ ಪ್ರಜ್ಞೆ ಬೆಳೆಯುವುದು. ಮಕ್ಕಳು ಸೃಷ್ಟಿ ಮಾಡಿಕೊಂಡು ಸುಳ್ಳು ಹೇಳಿ ಆತ್ಮವಂಚನೆ ಮಾಡಿಕೊಳ್ಳದೇ ಸತ್ಯವನ್ನು ಹೇಳಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವರು. ಆ ಮೂಲಕ ಗಟ್ಟಿತನ ಕಟ್ಟಿಕೊಟ್ಟಿದೆ. ಮಕ್ಕಳ ಮನಸ್ಸು ಹಸಿಗೋಡೆ ಇದ್ದ ಹಾಗೆ. ಅದಕ್ಕೆ ಏನೇ ಅಂಟಿಸಿದರೂ ತಕ್ಷಣ ಹಿಡಿದುಕೊಳ್ಳುತ್ತದೆ. ಹಾಗೆಯೇ ಏನೇ ವಿಷಯಗಳನ್ನು ಹೇಳಿದರು ತಕ್ಷಣ ಕಲಿಯುವರು. ಇಂತಹ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರಗಳನ್ನು ಬಿತ್ತಿದರೆ ಮನೆ ಆಸ್ತಿಯಾಗುವುದಷ್ಟೇ ಅಲ್ಲ; ರಾಷ್ಟ್ರದ ಆಸ್ತಿಯಾಗುವರು.…

Read More

ಬೆಂಗಳೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಗೌರವ ಕಾರ್ಯದರ್ಶಿ ಶ್ರೀ ರಂಗನಾಥ ರಾವ್ ಇವರ ಸಹಸ್ರ ಚಂದ್ರ ದರ್ಶನ ಶಾಂತಿ ಅಂಗವಾಗಿ ಬೆಂಗಳೂರಿನ ಅಕ್ಷಯ ನಗರದ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ದಿನಾಂಕ 28 ಏಪ್ರಿಲ್ 2025ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಾಳಮದ್ದಳೆ ಕಾರ್ಯಕ್ರಮವು ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ‘ಶರಸೇತು ಬಂಧ’ ಎಂಬ ಆಖ್ಯಾನದೊಂದಿಗೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣು ಪ್ರಸಾದ್ ಕಲ್ಲೂರಾಯ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಅಕ್ಷಯ್ ರಾವ್ ವಿಟ್ಲ ಮತ್ತು ಶಿಖಿನ್ ಶರ್ಮ ಶರವೂರು ಸಹಕರಿಸಿದರು. ಮುಮ್ಮೇಳದಲ್ಲಿ ಪ್ರೇಮಲತಾ ರಾವ್ (ಶ್ರೀರಾಮ), ಶುಭಾ ಅಡಿಗ (ಹನೂಮಂತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ), ಶುಭಾ ಗಣೇಶ್ (ವೃದ್ಧ ವಿಪ್ರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಪ್ರೇಮಲತಾ ರಂಗನಾಥ ರಾವ್ ದಂಪತಿಗಳು ಹಾಗೂ ಮಕ್ಕಳು ಕಲಾವಿದರಿಗೆ ಶಾಲು ಹೊದಿಸಿ ಸ್ಮರಣಿಕೆ ಇತ್ತು…

Read More

ಬೆಂಗಳೂರು : ಶ್ರೀ ರಾಮ ಕಲಾ ವೇದಿಕೆ ಪ್ರಸ್ತುತ ಪಡಿಸುವ ಬೆಂಗಳೂರು ಗೋಷ್ಠಿ ಬೈಠಕ್ ಭಾರತೀಯ ಶಾಸ್ತ್ರೀಯ ಸಂಗೀತ ಸಂಜೆ ಕಾರ್ಯಕ್ರಮವನ್ನು ದಿನಾಂಕ 04 ಮೇ 2025ರಂದು ಸಂಜೆ 5-30 ಗಂಟೆಗೆ ಬೆಂಗಳೂರಿನ ದೇವ ಕೃಪಾ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚೈತನ್ಯ ಭಟ್ ಇವರ ಹಿಂದೂಸ್ಥಾನಿ ಹಾಡುಗಾರಿಕೆಗೆ ವಿಘ್ನೇಶ್ ಕಾಮತ್ ತಬಲಾ ಮತ್ತು ವಿಘ್ನೇಶ್ ಭಾಗವತ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

Read More

ಮಂಗಳೂರು : ಕರಾವಳಿ ಲೇಖಕಿಯರ-ವಾಚಕಿಯರ (ಕಲೇವಾ) ಸಂಘದ ನೇತೃತ್ವದಲ್ಲಿ ಸಾಹಿತ್ಯ ಸದನದಲ್ಲಿ ದಿನಾಂಕ 26 ಏಪ್ರಿಲ್ 2025ರಂದು ನಡೆದ ಸಮಾರಂಭದಲ್ಲಿ ಯಶೋದಾ ಜೆನ್ನಿ ಸ್ಮೃತಿಸಂಚಯ ಪ್ರಾಯೋಜಿತ ಸಣ್ಣಕಥಾ ಸಂಕಲನ ಸ್ಪರ್ಧೆಯ ಬಹುಮಾನವನ್ನು ಪ್ರದಾನ ಮಾಡಲಾಯಿತು. ಗೀತಾ ಕುಂದಾಪುರ ಅವರ ‘ಪಾಂಚಾಲಿಯಾಗಲಾರೆ’ ಸಣ್ಣ ಕಥಾ ಸಂಕಲನಕ್ಕೆ ಈ ಬಹುಮಾನ ಬಂದಿದ್ದು, ಅದನ್ನು ಪ್ರದಾನ ಮಾಡಲಾಯಿತು. ಅಕ್ಷತರಾಜ್ ಪೆರ್ಲ ಇವರ ‘ರಾಜೀ ಪ್ರಸಂಗ’ ನಾಟಕಕ್ಕೆ ನಾಟಕ ರಚನಾ ಹಸ್ತಪ್ರತಿಯ ಬಹುಮಾನ ನೀಡಲಾಯಿತು. ‘ಕಲೇವಾ’ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ಹಾಲಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ದಶಕದ ಸಣ್ಣ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ’ ವಿಷಯದ ಬಗ್ಗೆ ಗುಲಾಬಿ ಪೂಜಾರಿ ಮಾತನಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ವೇದಿಕೆಯಲ್ಲಿದ್ದರು.

Read More