Author: roovari

ಕೋಟ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ಸುವರ್ಣ ಪರ್ವ -7ರ ಸರಣಿಯಲ್ಲಿ ಶ್ರೀನಿವಾಸ ಉಳ್ಳೂರ ಹಟ್ಟಿಕುದ್ರು ಪ್ರವರ್ತಕರು ಶೇಷಕೃಷ್ಣ ಕನ್ವೆನ್ಶನ್ ಹಾಲ್ ತಲ್ಲೂರು ಇವರ ಮುಖ್ಯ ಪ್ರಯೋಜಕತ್ವದಲ್ಲಿ ‘ಯಕ್ಷಲೋಕದೊಳಗೊಂದು ಪಯಣ’ ಬಡಗುತಿಟ್ಟು ಯಕ್ಷಗಾನದ ವೇಷ ಭೂಷಣಗಳ ಪರಿಚಯ ಕಾರ್ಯಕ್ರಮವನ್ನು ದಿನಾಂಕ 17 ಫೆಬ್ರವರಿ 2025ರಂದು ಮಧ್ಯಾಹ್ನ 2-00 ಗಂಟೆಗೆ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಉದ್ಯಮಿ ಹೆಚ್. ಗಣೇಶ್ ಕಾಮತ್, ಪ್ರವರ್ತಕರಾದ ಶ್ರೀನಿವಾಸ ಉಳ್ಳೂರ, ಜಿ.ಎಸ್.ವಿ.ಎಸ್. ಅಸೋಸಿಯೇಷನ್ ಇದರ ಅಧ್ಯಕ್ಷರಾದ ಡಾ. ಕಾಶೀನಾಥ ಪೈ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿಯಾದ ಎನ್. ಸದಾಶಿವ ನಾಯಕ್ ಇವರುಗಳು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿರುವರು.

Read More

ತಮ್ಮದೇ ಆದ ವಿಶಿಷ್ಟ ರೀತಿಯ ಬರಹಗಳಿಂದ ಹಾಗೂ ವಿದ್ವತ್ ವಲಯದಲ್ಲಿ ನಾನಾ ರೀತಿಯಾಗಿ ಸ್ಥಾನ ನಿರ್ವಹಿಸಿ ಕನ್ನಡ ಸಾಹಿತ್ಯ ಲೋಕದ ಸಿರಿವಂತಿಕೆಗೆ ಕಾರಣರಾದ ಸಾಹಿತಿಗಳಲ್ಲಿ ಡಾಕ್ಟರ್ ಸೋಮಶೇಖರ್ ಇಮ್ರಾಪುರ ಇವರೂ ಒಬ್ಬರು. ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಮ್ಮನಭಾವಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಪುರಸ್ಕಾರಗಳಿಂದ ಅಲಂಕೃತರಾದ ಇವರು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಗುರಪ್ಪ ಮತ್ತು ಸಂಗವ್ವ ದಂಪತಿಗಳ ಸುಪುತ್ರರಾಗಿ 14 ಫೆಬ್ರವರಿ 1940ರಲ್ಲಿ ಜನಿಸಿದರು. ಇವರ ಪ್ರಾರಂಭದ ಶಿಕ್ಷಣ ಅಬ್ಬಿಗೇರಿಯಲ್ಲಿ ಮತ್ತು ಮುಂದಿನ ವಿದ್ಯಾಭ್ಯಾಸ ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಭಾಷಾವಿಜ್ಞಾನದಲ್ಲಿ ಸುವರ್ಣ ಪದಕದೊಂದಿಗೆ ಎಂ.ಎ. ಪದವಿ ಪಡೆದವರು. ಮುಂದೆ ‘ಜನಪದ ಒಗಟುಗಳು’ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ ಪಿ.ಎಚ್.ಡಿ. ಪದವಿಯನ್ನು ಪಡೆದರು. ತಾವು ಬಿ.ಎ. ಪದವಿಯನ್ನು ಸುವರ್ಣ ಪದಕದೊಂದಿಗೆ ಪಡೆದ ಜೆ.ಎಸ್.ಎಸ್. ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಕೆಲಕಾಲ ಸೇವೆ ಸಲ್ಲಿಸುವ ಭಾಗ್ಯ ಸೋಮಶೇಖರರಿಗೆ…

Read More

ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡೆಮಿಯ 2021 ಮತ್ತು 2022ನೇ ಸಾಲಿನ ‘ವರ್ಣಶ್ರೀ’ ಪ್ರಶಸ್ತಿ ಹಾಗೂ 2022- 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ 51-52ನೇ ವಾರ್ಷಿಕ ಕಲಾ ಬಹುಮಾನ ಪ್ರಕಟಗೊಂಡಿದೆ. 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿಗೆ ತಲಾ ಮೂವರು ಸಾಧಕರು ಆಯ್ಕೆಯಾಗಿದ್ದಾರೆ. 2022ನೇ ಸಾಲಿಗೆ ಗದಗದ ಕಮಲ್‌ ಅಹಮದ್‌, ತುಮಕೂರಿನ ನಿರ್ಮಲಾ ಕುಮಾರಿ, ಬೆಂಗಳೂರಿನ ಬಿ. ಪಿ. ಕಾರ್ತಿಕ್‌ ಮತ್ತು 2023ನೇ ಸಾಲಿನ ಪ್ರಶಸ್ತಿಗೆ ಯಾದಗಿರಿಯ ನಿಜಲಿಂಗಪ್ಪ ಹಾಲ್ವಿ, ಹುಬ್ಬಳ್ಳಿಯ ವಿಠಲ ರೆಡ್ಡಿ ಚುಳಕಿ ಹಾಗೂ ಕಲಬುರಗಿಯ ಎಚ್‌. ಬಾಬೂರಾವ್‌ ಆಯ್ಕೆಗೊಂಡಿದ್ದಾರೆ. ವರ್ಣಶ್ರೀ ಪ್ರಶಸ್ತಿ: 2021-22ನೇ ಸಾಲಿನ ‘ವರ್ಣಶ್ರೀ’ ಪ್ರಶಸ್ತಿಗೆ ಮಂಗಳೂರಿನ ವೀಣಾ ಶ್ರೀನಿವಾಸನ್‌, ಬಾಗಲಕೋಟೆಯ ಪರಮೇಶ ಜೋಳದ, ರಾಯಚೂರಿನ ಪಿ. ಎ. ಬಿ.ಈಶ್ವರ, ಪುಣೆಯ ಕುಡಲಯ್ಯ ಹಿರೇಮಠ, ತುಮಕೂರಿನ ಅಶೋಕ ಕಲ್ಲಶೆಟ್ಟಿ, ವಿಜಯಪುರದ ನಂದಬಸಪ್ಪ ವಾಡೆ, ರಾಮನಗರದ ಕೆ. ಜಿ. ಲಿಂಗದೇವರು, ಮಡಿಕೇರಿಯ ಬಿ.ಮಹೇಶ್‌, ಹುಬ್ಬಳ್ಳಿಯ ಶಕುಂತಲಾ ವರ್ಣೇಕರ ಮತ್ತು ಬಳ್ಳಾರಿಯ ಜಿ.ಮಂಜುನಾಥ ಆಯ್ಕೆಯಾಗಿದ್ದಾರೆ. 2022-23ನೇ…

Read More

ಮಂಗಳೂರು : ಕನ್ನಡ ಹಾಗೂ ತುಳು ಭಾಷೆಯಲ್ಲಿ ಕಳೆದ 54 ವರ್ಷಗಳಿಂದ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಹಿರಿಯ ಸಂಶೋಧಕ, ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಇವರು ಕರ್ನಾಟಕ ರಾಜ್ಯ ಸರಕಾರ ಸಾಹಿತ್ಯಕ್ಕೆ ನೀಡುವ ಅತ್ಯುನ್ನತ ಗೌರವವಾದ ‘ಪಂಪ ಪ್ರಶಸ್ತಿ’ಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು ಐದು ಲಕ್ಷ ರೂ. ನಗದು ಹೊಂದಿದೆ. ಡಾ. ಬಿ.ಎ. ವಿವೇಕ ರೈಯವರು ತಂದೆ ಅಗ್ರಾಳ ಪುರಂದರ ರೈಯವರ ಮೂಲಕ ಶಿವರಾಮ ಕಾರಂತರ ಸಂಪರ್ಕ ಬೆಳೆಸಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅದ್ವಿತೀಯ ಕಾರ್ಯ ನಡೆಸಿ, ಸಂಶೋಧನೆಯ ಯೋಜನೆಗಳನ್ನು ನಿರ್ವಹಿಸಿ, ಗ್ರಂಥಗಳನ್ನು ಪ್ರಕಟಿಸಿದರು. ಪ್ರಾದೇಶಿಕ ಅಧ್ಯಯನ ಹಾಗೂ ಸಂಸ್ಕೃತಿಯ ಅಧ್ಯಯನ ಕ್ಷೇತ್ರದ ಇವರ ಕೆಲಸಗಳು ಅಂತಾರಾಷ್ಟ್ರೀಯ ವಿದ್ವಾಂಸರ ಗಮನ ಸೆಳೆದಿವೆ. ಅಗ್ರಾಳ ಪುರಂದರ ರೈ – ಯಮುನಾ ರೈ ದಂಪತಿಯ ಪುತ್ರರಾಗಿ ಬಿ.ಎ. ವಿವೇಕ ರೈ 1946ರಲ್ಲಿ ಪುಣಚದಲ್ಲಿ ಜನಿಸಿದರು. ಪರಿಯಾಲ್ತಡ್ಕ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ,…

Read More

ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಿಜಯಪುರ ಜಿಲ್ಲಾ ಗಮಕ ಕಲಾ ಪರಿಷತ್ತು ಹಾಗೂ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ವಿಜಯಪುರ ಇವರ ಸಹಯೋಗದಲ್ಲಿ ಕುಮಾರವ್ಯಾಸ ಜಯಂತಿ ಪ್ರಯುಕ್ತ ‘ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ’ವನ್ನು ದಿನಾಂಕ 17 ಫೆಬ್ರವರಿ 2025ರಂದು ಸಂಜೆ 4-00 ಗಂಟೆಗೆ ವಿಜಯಪುರದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರದ ಖ್ಯಾತ ಇತಿಹಾಸ ಸಂಶೋಧಕರಾದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಇವರು ವಹಿಸಲಿದ್ದು, ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್. ಮದಭಾವಿ ಇವರು ಉದ್ಘಾಟನೆ ಮಾಡಲಿದ್ದಾರೆ. ವಾಚನವನ್ನು ಶ್ರೀಮತಿ ಪುಷ್ಪಾ ಕುಲಕರ್ಣಿ ಮತ್ತು ವ್ಯಾಖ್ಯಾನವನ್ನು ಶ್ರೀ ಕಲ್ಯಾಣರಾವ್ ದೇಶಪಾಂಡೆ ಇವರು ನಿರ್ವಹಿಸಲಿರುವರು.

Read More

ಮಂಗಳೂರು : ಮಂಗಳೂರಿನ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಪುಸ್ತಕ ಪ್ರೇಮಿಗಳ ದಿನಾಚರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 14 ಫೆಬ್ರವರಿ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಮಂಗಳೂರು ಹಲವಾರು ವಿಷಯಗಳಿಗೆ ನಾಂದಿಯಾಗಿದೆ. ಇಂದು ನಡೆಯುತ್ತಿರುವ ಈ ಪುಸ್ತಕ ಪ್ರೇಮಿಗಳ ದಿನಾಚರಣೆ ಬೇರೆ ಎಲ್ಲಿಯೂ ನಡೆದ ಬಗ್ಗೆ ಮಾಹಿತಿ ಇಲ್ಲ, ಇದು ಇಲ್ಲಿಂದ ಆರಂಭಗೊಂಡು ವಿಶ್ವದಾದ್ಯಂತ ಹರಡಲಿ. ನಾನೂ ಒಬ್ಬ ಪುಸ್ತಕ ಪ್ರೇಮಿ. ಅದಕ್ಕಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಆದರೆ ನಾನು ಪ್ರೇಮದಿಂದ ಪುಸ್ತಕ ಓದು ಆರಂಭಿಸಿದವನಲ್ಲ, ಬದಲಾಗಿ ಒತ್ತಾಯದಿಂದ ಆರಂಭಿಸಿದವ. ಸೇನಾ ತರಬೇತಿಯಲ್ಲಿ ಇದ್ದಾಗ ಪುಸ್ತಕ ಓದಿ ಅದರ ವಿಮರ್ಶೆ ಬರೆಯುವುದು ತರಬೇತಿಯ ಭಾಗವಾಗಿತ್ತು. ಮುಂದೆ ಅದು ಪ್ರೀತಿಯಾಗಿ ಬದಲಾಯಿತು” ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ ಆಳ್ವ ಮಾತನಾಡಿ “ರಂಗ ಸಂಗಾತಿಯ ಕಾರ್ಯಕ್ರಮಗಳು…

Read More

ಬೆಂಗಳೂರು : ರಂಗ ಶಂಕರ ಮತ್ತು ಸಮುದಾಯ ಬೆಂಗಳೂರು ಅರ್ಪಿಸುವ ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಜ್ ಕಾದಂಬರಿ ಆಧರಿತ ‘ಕರ್ನಲ್ ಗೆ ಯಾರೂ ಬರೆಯೋದಿಲ್ಲ’ ನಾಟಕ ಪ್ರದರ್ಶನವನ್ನು ದಿನಾಂಕ 16 ಫೆಬ್ರವರಿ 2025ರಂದು ಮಧ್ಯಾಹ್ನ ಗಂಟೆ 3-30 ಮತ್ತು ಸಂಜೆ ಗಂಟೆ 7-30ಕ್ಕೆ ಬೆಂಗಳೂರಿನ ರಂಗ ಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀನಿವಾಸ ವೈದ್ಯ ಈ ನಾಟಕದ ಅನುವಾದ ಮಾಡಿದ್ದು, ಕೆ.ಪಿ. ಲಕ್ಷ್ಮಣ ಇವರು ಪಠ್ಯ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 8884929549 ಮತ್ತು 9901299228 ಸಂಖ್ಯೆಯನ್ನು ಸಂಪರ್ಕಿಸಿರಿ. ನೊಬೆಲ್ ಪ್ರಶಸ್ತಿ ವಿಜೇತ ಗೇಬ್ರಿಯೆಲ್ ಗಾರ್ಸಿಯ ಮಾರ್ಕ್ವೆಝ್ ರ ನೀಳ್ಗತೆ ‘No one writes to the colonel’ ನ ಕನ್ನಡ ರಂಗರೂಪ ಇಂದಿನ ನಾಟಕ ‘ಕರ್ನಲ್ ಗೆ ಯಾರೂ ಬರೆಯುವುದಿಲ್ಲ’. ರಂಗಶಂಕರದ ಸಹಯೋಗದೊಂದಿಗೆ ಸಮುದಾಯ, ಬೆಂಗಳೂರು ಪ್ರಸ್ತುತಿ ಪಡಿಸುವ ಈ ನಾಟಕದ ನಿರ್ದೇಶಕರು ಕೆ.ಪಿ. ಲಕ್ಷ್ಮಣ್. ಮಾರ್ಕ್ವೆಝ್ ರ ಈ ಕಥೆ ವಿಶ್ವಾದ್ಯಂತ ಅತ್ಯಂತ ಪ್ರಸಿದ್ಧಿ ಪಡೆದ ಕಥೆ‌. ಬಡತನದ ಬೇಗೆಯಲ್ಲಿ ಹೆಂಡತಿಯ…

Read More

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ದಿನಾಂಕ 09 ಫೆಬ್ರವರಿ 2025 ಭಾನುವಾರದಂದು ಬದಿಯಡ್ಕದ ಗಣೇಶ ಪೈಗಳ ಮನೆಯಲ್ಲಿ ದಿವಂಗತ ಬಿ. ಕೃಷ್ಣ ಪೈ ಬದಿಯಡ್ಕ ಇವರ ಬದುಕು-ಬರಹದ ಮೆಲುಕು ‘ಸ್ಮರಣಾಂಜಲಿ’ ಕಾರ್ಯಕ್ರಮದಲ್ಲಿ ನಡೆದ ‘ಚುಟುಕು ಕವಿಗೋಷ್ಠಿ’ಯಲ್ಲಿ ಸುಮಾರು ಹದಿಮೂರು ಮಂದಿ ಚುಟುಕು ಸಾಹಿತಿಗಳು ಭಾಗವಹಿಸಿದ್ದರು. ಹಿರಿಯ ಮತ್ತು ಕಿರಿಯರು ಸೇರಿದ ಕವಿಗೋಷ್ಠಿಯು ಕಾವ್ಯಾಸಕ್ತರಿಗೆ ಮುದ ನೀಡಿತ್ತು. ಶಾರದಾ ಮೊಳೆಯಾರ್ ಎಡನೀರು ಇವರು ಫ್ಯಾಷನ್ ತುಂಡುಡುಗೆ ಹಾಗೂ ಕೃಷಿಕರ ಹರಕು ಬಟ್ಟೆಯ ಭಿನ್ನತೆಯಲ್ಲಿನ ವ್ಯತ್ಯಸ್ಥ ಮನೋಭಾವವನ್ನು ಚುಟುಕದ ಮೂಲಕ ತಿಳಿಸಿದರು. ದು:ಖದಲ್ಲೂ ಆತ್ಮಾಭಿಮಾನ ಬಿಡಬಾರದು ಎಂಬ ಸಂದೇಶ ನೀಡುವ ಚುಟುಕು, ಸಂಕಲನ ವ್ಯವಕಲನದ ಆಟದ ರಸದೌತಣ ನೀಡುವ ‘ಗಣಿತ’ ಎಂಬ ಚುಟುಕು ಆಕರ್ಷಕವಾಗಿತ್ತು. ಕೆ. ನರಸಿಂಹ ಭಟ್ ಎತಡ್ಕ ಇವರ ಹಕ್ಕುಗಳಿವೆಯೆಂದು ಸೊಕ್ಕು ತೋರಬಾರದು, ಎಲ್ಲರೊಡನೆ ಸವಿನಯದಿಂದ ಬದುಕಬೇಕು ಎಂಬ ಚುಟುಕ, ಕಾಡಾನೆಗಳ ಹಾವಳಿಯಿಂದ ಕೃಷಿ ಕ್ಷೇತ್ರದ ಸಂಕಷ್ಟವನ್ನು ಬಣ್ಣಿಸುವ ಚುಟುಕ, ವ್ಯಕ್ತಿಗತ ಕರ್ತವ್ಯವನ್ನು…

Read More

ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 16 ಫೆಬ್ರವರಿ 2025ರಂದು ಸಂಜೆ 4-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗ ಐ.ವೈ.ಸಿ. ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 2024ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾನ್ಯ ಶಾಸಕರಾದ ಶ್ರೀ ಯಶ್ ಪಾಲ್ ಎ. ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಸಚಿವರಾದ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಸಚಿವರಾದ ಶಿವರಾಜ ಎಸ್. ತಂಗಡಗಿ ಇವರು ಪ್ರಶಸ್ತಿ ಪ್ರದಾನ ಹಾಗೂ ಕಿರು ಪರಿಚಯ ಪುಸ್ತಕ ಬಿಡುಗಡೆ ಮಾಡಲಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಬಡಗುತಿಟ್ಟು ಯಕ್ಷಗಾನ ಪ್ರದರ್ಶನದಲ್ಲಿ ಶ್ರೀ ವಿದ್ಯಾಧರ ವೆಂಕಟೇಶ ಮಡಿವಾಳ ಜಲವಳ್ಳಿ ಮತ್ತು ಬಳಗದವರಿಂದ ‘ಮಾಗದ ವಧೆ’ ಎಂಬ ಪ್ರಸಂಗ, ಬಳಿಕ…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಅರ್ಪಿಸುವ 38ನೇ ಕಾರ್ಯಕ್ರಮದಲ್ಲಿ 2025ನೇ ವರ್ಷ ಪೂರ್ತಿ ‘ರಾಮಸಾಗರಗಾಮಿನೀ’ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸ ಮಾಲೆಯನ್ನು ದಿನಾಂಕ 15 ಫೆಬ್ರವರಿ 2025ರಂದು ಸಂಜೆ 5-00 ಗಂಟೆಗೆ ಕಾರ್ಕಳ ಹೊಟೇಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಇವರು ‘ದ್ವಿತೀಯ ಸೋಪಾನ : ಯಜ್ಞ ಸಂರಕ್ಷಣೆಯ ಪಥದಲ್ಲಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿರುವರು. ಡಾ. ರಾಘವೇಂದ್ರ ರಾವ್ : ಉತ್ತರ ಕನ್ನಡ ಜಿಲ್ಲೆಯ ಶಿರಸಿಮೂಲದವರಾದ ರಾಘವೇಂದ್ರ ರಾವ್ ಇವರು ತಂದೆ ವಾಸುದೇವ ರಾವ್ ಮತ್ತು ತಾಯಿ ಅರುಂಧತಿ ರಾವ್ ರವರ ಪೌರಾಣಿಕ ಆಧ್ಯಾತ್ಮಿಕ ಜ್ಞಾನಗಳಿಂದ ಪ್ರೇರಿತರಾಗಿ ಬಾಲ್ಯದಲ್ಲೇ ತನ್ನ ಆಸಕ್ತಿಯನ್ನು ಆ ಕಡೆಗೆ ಹರಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಬಳಿಕದ ವಿದ್ಯಾಭ್ಯಾಸವನ್ನು ಇವರು ಉಡುಪಿ ಮತ್ತು ತಿರುಪತಿಯಲ್ಲಿ ನಡೆಸಿದರು. ಬಿ.ಕಾಂ, ಕನ್ನಡ ರತ್ನ,…

Read More