Author: roovari

ಬೆಳಾಲು : ಕರ್ನಾಟಕ ಗಮಕ ಕಲಾ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಗಮಕ ವಾಚನ ಪ್ರವಚನ ಕಾರ್ಯಕ್ರಮವು ದಿನಾಂಕ 14-06-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಾಗೂ ಗಮಕಿಗಳಾಗಿ ಪಾಲ್ಗೊಂಡ ದ. ಕ. ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯ ಮಾತನಾಡಿ “ಭಾಷೆಯ ಮೂಲಕ ಮಾನವತೆಯನ್ನು ಬೆಳೆಸಬೇಕು. ಅದಕ್ಕೆ ಗಮಕ ಕಲೆ ಮಾಧ್ಯಮವಾಗಿದೆ. ಜೀವನ ಮೌಲ್ಯಗಳನ್ನು ಅರಿಯಲು ಮತ್ತು ಬದುಕಿಗೆ ಸೌಂದರ್ಯವನ್ನು ತಂದುಕೊಳ್ಳಲು ಕಾವ್ಯಾಧ್ಯಯನ ಮೂಲ ಪ್ರೇರಣೆಯಾಗಬಲ್ಲದು. ಕಾವ್ಯದ ರಸಮೌಲ್ಯಗಳು ಜನರಿಗೆ ಪರಿಣಾಮಕಾರಿಯಾಗಿ ತಲಪಿಸುವ ಕೆಲಸವನ್ನು ಗಮಕ ಕಲೆಯು ಮಾಡುತ್ತದೆ. ಹಳೆಗನ್ನಡ ಕಾವ್ಯಗಳು ನಿತ್ಯನೂತನವಾಗಿರುವುದರೊಂದಿಗೆ ಸಮಕಾಲೀನತೆಯ ಪ್ರಸ್ತುತಿಗೆ ಗಮಕ ಕಲೆಯೇ ಕಾರಣ.” ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ವಾಚನಕಾರರಾಗಿ ಗಮಕಿಗಳಾದ ಶ್ರೀವಿದ್ಯಾ ಐತಾಳ್ ಉಜಿರೆ, ಪ್ರವಚನಕಾರರಾಗಿ ಮಧೂರು ಮೋಹನ ಕಲ್ಲೂರಾಯರು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕುಮಾರವ್ಯಾಸ ಭಾರತ ಮತ್ತು ರನ್ನನ…

Read More

ನೃತ್ಯತಜ್ಞೆ ಲಹರಿ ಭಾರಿಘಾಟ್ ನೇತೃತ್ವದ ಸಹಚಾರಿ, ಬೆಂಗಳೂರು ಸಂಸ್ಥೆಯು ರಾಜ್ಯದಾದ್ಯಂತ ‘ಸಂವಾದ ಬದುಕು’ ಫಿಲೋಷಿಫಿನ ಭಾಗವಾಗಿ ಆರು ನೃತ್ಯ ತಜ್ಞರಿಂದ ‘ಪ್ರೀತಿ ಮತ್ತು ಶಾಂತಿಗಾಗಿ ನೃತ್ಯ’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಉಡುಪಿಯಲ್ಲೂ ರಥಬೀದಿ ಗೆಳೆಯರು (ರಿ.) ಸಂಸ್ಥೆಯ ಆಶ್ರಯದಲ್ಲಿ ನೃತ್ಯ ತಜ್ಞೆ ಕೆ. ಶಾರದಾ ಆಚಾರ್ಯರಿಂದ ಈ ಕಾರ್ಯಕ್ರಮ ಜರಗಿತು. ಒಂದು ಸಾಂಪ್ರದಾಯಿಕ ನೃತ್ಯ ಭರತನಾಟ್ಯ ತನ್ನ ಚೌಕಟ್ಟಿನ ಒಳಗೆಯೇ ಪ್ರಸ್ತುತ ವಿದ್ಯಮಾನಕ್ಕೆ ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಒಂದು ಸಾಕ್ಷಿಯಾಯಿತು. ನೃತ್ಯದಲ್ಲಿ ಸಂವಿಧಾನದ ತತ್ವಗಳನ್ನು ಅಳವಡಿಸಿಕೊಂಡು ಅದನ್ನು ಪ್ರತಿಪಾದಿಸುವ ಮತ್ತು ಸುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುವ ಉದ್ದೇಶ ಈ ನೃತ್ಯ ಕಾರ್ಯಕ್ರಮದ್ದಾಗಿದೆ. ಸಹಚಾರಿ ತಂಡ ಇದರಲ್ಲಿ ಯಶಸ್ಸನ್ನು ಸಾಧಿಸಿದೆ. ಮೊದಲು ಸಂವಿಧಾನದ ಪೀಠಿಕೆಯ ಮಾತುಗಳಿಗೆ ರಾಗ ಸಂಯೋಜಿಸಿ ಈ ನೃತ್ಯವು ನ್ಯಾಯ, ಸಮಾನತೆ, ಬಂಧುತ್ವದ ಕುರಿತಂತೆ ಭಾರತದ ಸಂವಿಧಾನದ ಬದ್ಧತೆಯನ್ನು ನೆನಪಿಸುತ್ತದೆ. ಅಲ್ಲದೆ ನಾಗರಿಕರಾದ ನಮ್ಮ ಕರ್ತವ್ಯಗಳ ಬಗ್ಗೆ ಎಚ್ಚರಿಸುತ್ತದೆ. ಈ ನೃತ್ಯದ ನಂತರ ಇಡೀ ಸಂವಿಧಾನದ ಆಶಯ ನಮ್ಮ ಕಣ್ಣ…

Read More

ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸಾರ್ವಜನಿಕ ವಾಚನಾಲಯದಲ್ಲಿ ‘ಪುಸ್ತಕ ವಾರಾಚರಣೆ’ ಪ್ರಾರಂಭವಾಯಿತು. ಬಿ.ಇ.ಎಂ. ಶಾಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಸಹಬಾಗಿತ್ವದಲ್ಲಿ ದಿನಾಂಕ 19-06-2024ರಂದು ಈ ಕಾರ್ಯಕ್ರಮವು ಜರಗಿತು. ಬಿ.ಇ.ಎಂ. ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ ರಾಜೇಶ್ ಚಂದ್ರ ಕೆ.ಪಿ. ಕಾರ್ಯಕ್ರಮ ಉದ್ಘಾಟಿಸಿ “ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಅಂಕ ಪಡೆಯುವ ಯಾಂತ್ರಿಕ ಸಾಗಟದೊಂದಿಗೆ, ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಗ್ರಂಥಾಲಯ, ಸ್ಮಾರಕ, ಚಾರಿತ್ರಿಕ ಸ್ಥಳ ಸಂದರ್ಶನ, ಸಾಹಿತ್ಯ ಕೂಟ ಇವುಗಳೆಲ್ಲ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸಕ್ಕೆ ನಾಂದಿಯಾಗುತ್ತದೆ. ಅಂತಹ ಒಂದು ತಾಣ ಕನ್ನಡ ಭವನ. ಇಲ್ಲಿ ಪ್ರಾಚ್ಯ ವಸ್ತು ಸಂಗ್ರಹ, ಪುರಾತನ ನಾಣ್ಯ ಸಂಗ್ರಹ, ಅಪಾರ ಮಹತ್ವದ ಪುಸ್ತಕ ಸಂಗ್ರಹ ವಿದ್ಯಾರ್ಥಿಗಳಿಗೆ ಸಂದರ್ಶನ ಯೋಗ್ಯ” ಎಂದರು. ಈ ಕಾರ್ಯಕ್ರಮದಲ್ಲಿ 25 ಶಾಲಾ ವಿದ್ಯಾರ್ಥಿಗಳೊಂದಿಗೆ ಹೈಸ್ಕೂಲ್ ಅದ್ಯಾಪಿಕೆ ರಕ್ಷಿತಾ ಬಿ.ಎಂ., ಗ್ರಂಥಾಲಯ ಸಂಚಾಲಕಿ ಸಂದ್ಯಾರಾಣಿ ಟೀಚರ್ ಪ್ರಾತ್ಯಕ್ಷಿಕೆ ನೀಡಿದರು. ಹೈಯರ್ ಸೆಕೆಂಡರಿ ಪ್ರಾಧ್ಯಾಪಕ ಶಿಜಿನ್ ವಿದ್ಯಾರ್ಥಿಗಳಿಗೆ ಪುಸ್ತಕ ವಾರಾಚರಣೆಯ ಮಹತ್ವ…

Read More

ಕುಂದಾಪುರ : ಅರೆಹೊಳೆಯ ನಂದಗೋಕುಲ ರಂಗಶಾಲೆಯಲ್ಲಿ ಎಂ. ಸಿ. ಎಫ್. ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಆರ್ಟ್ ಗ್ಯಾಲರಿಯ ಉದ್ಘಾಟನಾ ಸಮಾರಂಭವು ದಿನಾಂಕ 15-06-2024 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ನಾಡಿನ ಖ್ಯಾತ ಚಿತ್ರಕಲಾವಿದರಾದ ದಿನೇಶ್ ಹೊಳ್ಳ ಮಾತನಾಡಿ “ರೇಖಾ ಚಿತ್ರಗಳ ಮೂಲಕ ನಮ್ಮ ನಾಡಿನ ಕಲೆಗಳಿಗೆ ವಿಶ್ವ ಖ್ಯಾತಿ ಒದಗಿಸಿದ ಮತ್ತು ನೂತನ ಆವಿಷ್ಕಾರಗಳನ್ನು ಈ ರಂಗದಲ್ಲಿ ಮಾಡಿದ ಕೆ. ಕೆ. ಹೆಬ್ಬಾರ್ ಕಲಾಪ್ರಪಂಚದ ದಂತ ಕಥೆ. ಅರೆಹೊಳೆ ಪ್ರತಿಷ್ಠಾನವು ಈ ಆರ್ಟ್ ಗ್ಯಾಲರಿಗೆ ಕೆ. ಕೆ. ಹೆಬ್ಬಾರರ ಹೆಸರಿಡುವ ಮೂಲಕ ಅವಿಭಜಿತ ಜಿಲ್ಲೆಯಲ್ಲಿ ಹೊಸ ದಾಖಲೆ ಬರೆದಿದೆ.” ಎಂದರು ಛಾಯಾಚಿತ್ರ ಗ್ರಾಹಕ ವಿವೇಕ್ ಗೌಡ, ರಂಗಕಲಾವಿದ ಅವಿನಾಶ್ ರೈ, ನಂದಗೋಕುಲ ನಿರ್ದೇಶಕಿ ಶ್ವೇತಾ ಅರೆಹೊಳೆ ಹಾಗೂ ಇತರರು ಉಪಸ್ಥಿತರಿದ್ದರು. ಅರೆಹೊಳೆ ಸದಾಶಿವ ರಾವ್ ನಿರೂಪಿಸಿದರು.

Read More

ಸವದತ್ತಿ : ಸಹೃದಯ ಸಾಹಿತ್ಯ ಪ್ರತಿಷ್ಠಾನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ‘ಸಹೃದಯ ಕಾವ್ಯ ಪ್ರಶಸ್ತಿ’ ಪ್ರದಾನ ಹಾಗೂ ಕವಿಗೋಷ್ಠಿ ಸಮಾರಂಭವು ಸವದತ್ತಿಯ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನಿಲಯದಲ್ಲಿ ದಿನಾಂಕ 16-06-2024ರ ಭಾನುವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಮರ್ಶಕ ಡಾ. ಎಚ್. ಎಸ್. ಸತ್ಯನಾರಾಯಣ ಮಾತನಾಡಿ “ಶಕ್ತಿ ದೇವತೆಯ ನೆಲದಲ್ಲಿ ಇಂದು ಕಾವ್ಯಶಕ್ತಿಯ ಆರಾಧನೆ ನಡೆದಿದೆ. ಪ್ರಶಸ್ತಿಗಳು ಹೊತ್ತು ತಿರುಗಲು ಅಲ್ಲ ಬದಲಾಗಿ ಸಾಹಿತ್ಯ ಸೇರಿ ಆಯಾ ರಂಗದಲ್ಲಿ ಸಾಧಿಸಿದ ಸ್ಫೂರ್ತಿಗೆ ಮತ್ತಷ್ಟು ಹೊಳಪು ನೀಡುವುದಾಗಿದೆ. ನಾಲ್ಕು ದಿಕ್ಕುಗಳಿಂದ ಪ್ರತಿಭಾವಂತ ಕವಿಗಳನ್ನು ಬರುವಂತೆ ಮಾಡಿರುವ ಕಾರ್ಯ ಶ್ಲಾಘನೀಯ. ಕಾವ್ಯ ಎನ್ನುವುದು ನಮ್ಮನ್ನೆಲ್ಲ ಹಿಡಿದಿಡುವ ಸಮ್ಮೋಹನ ಶಕ್ತಿ. ಪ್ರಶಸ್ತಿ ಎನ್ನುವುದು ಇಂದು ಉದ್ಯಮವಾಗಿರುವ ಸಂದರ್ಭದಲ್ಲಿ ಪ್ರಾಮಾಣಿಕತೆ ಮೆರೆದು ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸ ತಂದಿದೆ. ಅದಮ್ಯ ಕಾವ್ಯ ಪ್ರೀತಿಯ ನಾಗೇಶ್ ಜೆ. ನಾಯಕ ಇವರು ಕವಿ ಪೂಜೆ ನಡೆಸಿಲ್ಲ. ಬದಲಾಗಿ ಕಾವ್ಯಪೂಜೆ ಮಾಡುತ್ತಿದ್ದಾರೆ. ಪುಟ್ಟ…

Read More

ಬೆಂಗಳೂರು : ಖ್ಯಾತ ರಂಗಕರ್ಮಿ, ಮೈಸೂರಿನಲ್ಲಿ ರಂಗ ಚಟುವಟಿಕೆಗಳ ಕೇಂದ್ರ ಎನ್ನಿಸಿಕೊಂಡಿದ್ದ ನ. ರತ್ನ ಇವರು ದಿನಾಂಕ 19-06-2024ರಂದು ಬೆಂಗಳೂರಿನ ಬೈಯಪ್ಪನ ಹಳ್ಳಿಯಲ್ಲಿ ನಿಧನರಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. ಕನ್ನಡದಲ್ಲಿ ಅಸಂಗತ ನಾಟಕಗಳ ಪರಿಕಲ್ಪನೆ ಬಂದಾಗ ಅದನ್ನು ಜನರಿಗೆ ತಲುಪಿಸುವಲ್ಲಿ ರತ್ನ ಅವರು ನೀಡಿದ ಕೊಡುಗೆ ಮಹತ್ವದ್ದು. ಕಾಲೇಜು ದಿನಗಳಲ್ಲಿ ‘ಮಿತ್ರ ಮೇಳ’ ತಂಡದ ಮೂಲಕ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಸಮತೆಂತೋ (ಸರಸ್ವತಿಪುರಂ ಮಧ್ಯದ ತೆಂಗಿನ ತೋಪು) ರಂಗತಂಡವನ್ನು ಎಚ್.ಎಂ. ಚನ್ನಯ್ಯ, ಮಿರ್ಲೆ ವಿಶ್ವನಾಥ, ಸಿಂಧುವಳ್ಳಿ ಅನಂತಮೂರ್ತಿ ಇವರೊಂದಿಗೆ ಸ್ಥಾಪಿಸಿ ರಂಗುಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಈ ತಂಡ ಮೈಸೂರು ಮಾತ್ರವಲ್ಲದೆ ಕರ್ನಾಟಕದೆಲ್ಲೆಡೆ ರಂಗಭೂಮಿಯಲ್ಲಿ ಹೊಸತನವನ್ನು ತಂದಿತು. ತಮಿಳುನಾಡಿನ ಚಿದಂಬರಂನಲ್ಲಿ ಡಾ. ಎ.ಎಂ. ನಟೇಶ್ ಮತ್ತು ವಿಠ್ಠೋಬಾಯಿ ಅಮ್ಮಾಳ್ ದಂಪತಿಯ ಮಗನಾಗಿ 1934ರ ಡಿಸಂಬರ್ 12ರಂದು ಜನಿಸಿದ್ದ ಇವರ ವಿದ್ಯಾಭ್ಯಾಸವೆಲ್ಲವೂ ನಡೆದದ್ದು ಮೈಸೂರಿನಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಇಂಗ್ಲೀಷ್ ಅನರ್ಸ್ ಮತ್ತು ಇನ್…

Read More

ಉಡುಪಿ : ಯಕ್ಷಗಾನ ಕಲಾರಂಗ (ರಿ.) ಮತ್ತು ಇನ್ ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ ಮೆಂಟ್, ಟ್ರೈನಿಂಗ್ ಮತ್ತು ರಿಸರ್ಚ್ ಸೆಂಟರ್ (ಐ.ವೈ.ಸಿ.) ಇದರ ವತಿಯಿಂದ ‘ತಾಳಮದ್ದಳೆ ಪ್ರಶಸ್ತಿ 2024’ ಪ್ರದಾನ ಕಾರ್ಯಕ್ರಮವು ದಿನಾಂಕ 23-06-2024ರಂದು ಅಪರಾಹ್ನ 3-00 ಗಂಟೆಗೆ ಉಡುಪಿಯ ಕಲಾರಂಗ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೂಡಬಿದ್ರೆಯ ಶ್ರೀ ಜೈನ ಮಠದ ಸ್ವಸ್ತಿ ಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಗಳು ಅನುಗ್ರಹ ಸಂದೇಶ ಮತ್ತು ಪ್ರಶಸ್ತಿ ಪ್ರದಾನ ಮಾಡಲಿರುವರು. ಶಾರದಾ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಎಂ.ಬಿ. ಪುರಾಣಿಕ್ ಇವರು ಅಧ್ಯಕ್ಷತೆ ವಹಿಸಲಿದ್ದು, ಸುರತ್ಕಲ್ಲಿನ ಆಗಮ ವಿದ್ವಾಂಸರಾದ ವಿದ್ವಾನ್ ಪಂಜ ಭಾಸ್ಕರ ಭಟ್, ಕುಂಭಾಶಿ ಸಾಮಾಜಿಕ ಧುರೀಣರು ಶ್ರೀ ಕೃಷ್ಣ ಪ್ರಸಾದ್ ಅಡ್ಯಂತಾಯ, ಕುಂದಾಪುರ ಆದರ್ಶ ಆಸ್ಪತ್ರೆಯ ಡಾ. ಆದರ್ಶ ಹೆಬ್ಬಾರ್ ಮತ್ತು ಉಡುಪಿ ನಗರ ಸಭಾ ಸದಸ್ಯೆ ಶ್ರೀಮತಿ ರಜನಿ ಹೆಬ್ಬಾರ್ ಇವರು ಅತಿಥಿಗಳಾಗಿ ಭಾಗವಹಿಸಲಿರುವರು. ಶ್ರೀ ಜಬ್ಬಾರ್ ಸಮೊ ಇವರಿಗೆ ‘ಮಟ್ಟಿ ಮುರಲೀಧರ ರಾವ್ ಪ್ರಶಸ್ತಿ’…

Read More

ಉಡುಪಿ: ಕಲಾವಿದರ ವಿವರಗಳನ್ನು ಕ್ರೋಢಿಕರಿಸುವ ದೃಷ್ಟಿಯಿಂದ ಉಡುಪಿ ಜಿಲ್ಲೆಯಲ್ಲಿನ ಕಲಾವಿದರ ಹಾಗೂ ಕಲಾ ತಂಡಗಳ ಪಟ್ಟಿಯನ್ನು ತಯಾರಿಸಿ ಅವರಿಗೆ ಸೂಕ್ತ ಕಾರ್ಯಕ್ರಮಗಳನ್ನು ನೀಡಲು ಹಾಗೂ ನೈಜ ಕಲಾವಿದರ ಪಟ್ಟಿಯನ್ನು ತಯಾರಿಸಿ ಗುರುತಿನ ಚೀಟಿ ನೀಡಲು ಅರ್ಹ ಕಲಾವಿದರು, ಕಲಾತಂಡದವರು ಹಾಗೂ ಸಾಹಿತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದ್ದು, ಅರ್ಜಿಯಲ್ಲಿ ಸ್ವ-ವಿವರದ ಮಾಹಿತಿಯೊಂದಿಗೆ ಆಧಾರ್ ಗುರುತಿನ ಚೀಟಿ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಪಡೆದ ಪ್ರಶಸ್ತಿ ಪುರಸ್ಕಾರಗಳ ವಿವರ, ಪ್ರಮುಖ ಪ್ರದರ್ಶನಗಳ ವಿವರ, ಶಿಲ್ಪ ಚಿತ್ರಕಲೆಗಳ ಕಲಾ ಪ್ರದರ್ಶನಗಳು ಹಾಗೂ ಛಾಯಾಚಿತ್ರಗಳನ್ನು ಲಗತ್ತಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 27-06-2024ರ ಒಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಡಾ. ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿನಗರ, ಅಲೆವೂರು ಗ್ರಾಮ, ಮಣಿಪಾಲ ಅಂಚೆ, ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಒಂಭತ್ತನೆಯ ಗಮಕ  ಕಲಾ  ಸಮ್ಮೇಳನವು ಸುರತ್ಕಲ್ಲಿನ ಗೋವಿಂದಾಸ್ ಪದವಿ  ಪೂರ್ವ ಕಾಲೇಜಿನಲ್ಲಿ  ದಿನಾಂಕ 13-07-2024ರಂದು ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ದ. ಕ. ಜಿಲ್ಲೆಯ ಖ್ಯಾತ ಗಮಕಿ ಶ್ರೀ ಯಜ್ಞೇಶ್ ಆಚಾರ್ ಸುರತ್ಕಲ್ ಇವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು. ಮಾನ್ಯ ಶ್ರೀ ಹರಿಕೃಷ್ಣ ಪುನರೂರು, ಶ್ರೀ ಪ್ರದೀಪ ಕುಮಾರ ಕಲ್ಕೂರು , ಡಾಕ್ಟರ್ ಎಂ. ಬಿ. ಪುರಾಣಿಕ್, ಗಮಕ ಕಲಾಪರಿಷತ್ತು ಜಿಲ್ಲಾಧ್ಯಕ್ಷ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ತಾಲೂಕು ಅಧ್ಯಕ್ಷ ಗಮಕಿ ಶ್ರೀ ಸುರೇಶ್ ರಾವ್ ಅತ್ತೂರು, ಗಮಕ ಕಲಾ ಪರಿಷತ್ತಿನ ಸದಸ್ಯರು ಹೀಗೆ ಇನ್ನೂ ಹಲವು ಗಮಕ ಕಲಾ ಅಭಿಮಾನಿಗಳು ಸೇರಿದ ಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು ಎಂದು ದಕ್ಷಿಣ ಕನ್ನಡ ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ ತಿಳಿಸಿದ್ದಾರೆ .

Read More

ಉಡುಪಿ : ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಡಾ. ಟಿ. ಎಮ್. ಎ. ಪೈ. ಶಿಕ್ಷಣ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿ ಹಾಗೂ ಶಿಕ್ಷಕರಿಗಾಗಿ ಗಮಕ ಕಲೆಯ ಕುರಿತಾದ ವಿಶಿಷ್ಟ ಕಾರ್ಯಕ್ರಮವು ದಿನಾಂಕ 16-06-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ” ಗಮಕ ಕಲೆಯ ಇತಿಹಾಸ ಮತ್ತು ವರ್ತಮಾನದ ಸ್ಥಿತಿ ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸತೀಶ ಕುಮಾರ ಕೆಮ್ಮಣ್ಣು “ಕನ್ನಡದ ಎಲ್ಲ ಶ್ರೇಷ್ಠ ಕಾವ್ಯಗಳನ್ನು ಕಾವ್ಯ ರಸಿಕರಿಗೆ ತಲುಪಿಸಲು ಗಮಕ ವಾಚನ ವ್ಯಾಖ್ಯಾನವೇ ಅತ್ಯುತ್ತಮ ಮಾರ್ಗ.” ಎಂದು ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ಗಮಕ ಕಲಾ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಎಮ್. ಎಲ್. ಸಾಮಗ ಮಾತನಾಡಿ “ಶಿಕ್ಷಣದಲ್ಲಿ ಗಮಕ ಕಲೆಯು ಅನಿವಾರ್ಯವಾಗಿದೆ. ಪುರಾಣಜ್ಞಾನ , ಭಾಷಾ ಶುದ್ಧತೆ ಮೊದಲಾದ ಉತ್ತಮ ಅಂಶಗಳು ಗಮಕದಿಂದ ಸಿದ್ಧಿಸುತ್ತವೆ.” ಎಂದು ಹೇಳಿದರು. ಶಿಕ್ಷಣ ವಿದ್ಯಾಲಯದ ಪ್ರಾಚಾರ್ಯರಾದ…

Read More