Subscribe to Updates
Get the latest creative news from FooBar about art, design and business.
Author: roovari
ಬಂಟ್ವಾಳ : ತೆಂಕುತಿಟ್ಟಿನ ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ದಿನಾಂಕ 20 ಜುಲೈ 2025ರಂದು ವಿಧಿವಶರಾಗಿದ್ದಾರೆ. ರಾತ್ರಿಯನ್ನು ಬೆಳಕಾಗಿಸುವ, ಕತ್ತಲಲ್ಲಿ ಸುತ್ತಲ ಲೋಕವನ್ನು ಮಾಯಾ ಲೋಕವನ್ನಾಗಿಸುವ, ಯಕ್ಷಗಾನವೆಂಬ ಅದ್ಭುತ ಕಲೆಯಲ್ಲಿ ಮಿನುಗುವ ನಕ್ಷತ್ರವಾಗಿ ಜ್ವಲಿಸುವ ಪುಂಜವಾಗಿದ್ದವರು. ಜ್ಯೋತಿ ತಾನು ಉರಿದು ಜಗಕೆಲ್ಲ ಬೆಳಕು ನೀಡಿದಂತೆ ಯಕ್ಷಲೋಕದ ಕಲಾ ಪಯಣದಲ್ಲಿ ಅದೆಷ್ಟೋ ಕಷ್ಟಗಳನ್ನು ಪಟ್ಟರೂ, ಇಷ್ಟ ಪಟ್ಟು ಈ ಕ್ಷೇತ್ರದಲ್ಲಿ ಮುಂದುವರಿದು ರಂಗದಲ್ಲಿ ಒಂದಿನಿತೂ ನೋವು ತೋರಿಸದವರು. ಪ್ರೇಕ್ಷಕರ ನಿರೀಕ್ಷೆಗೆ ಎಂದೂ ಅನ್ಯಾಯ ಮಾಡದವರು. ಬಣ್ಣದ ವೇಷದ ಪರಂಪರೆಯ ನಡೆ ಹಾಗೂ ಕ್ರಮಗಳನ್ನು ಅರಿತ ಕೆಲವೇ ಮಂದಿಯ ಪೈಕಿ ಅಗ್ರಣಿಯಾಗಿ ತೆಂಕುತಿಟ್ಟಿನ ಇತಿಹಾಸದಲ್ಲಿ ಛಾಪು ಮೂಡಿಸಿದ್ದರು. ಯಕ್ಷಗಾನ ರಂಗದ ಪ್ರಸಿದ್ಧ ಬಣ್ಣದ ವೇಷಧಾರಿಯಾಗಿ ಗುರುತಿಸಿಕೊಂಡಿರುವ ಶೆಟ್ಟಿಗಾರರ ಸಾಧನೆ ಹಾಗೂ ಪರಿಶ್ರಮ ಅಮೋಘ. ಸಿದ್ಧಕಟ್ಟೆಯಲ್ಲಿ 17-12-1965ರಲ್ಲಿ ಬಾಬು ಶೆಟ್ಟಿಗಾರ್ ಮತ್ತು ಗಿರಿಯಮ್ಮ ದಂಪತಿಗೆ ಪುತ್ರರಾಗಿ ಜನಿಸಿ, ಪ್ರಾಥಮಿಕ ಶಿಕ್ಷಣ ಸಂದರ್ಭದಲ್ಲೇ ಯಕ್ಷಗಾನದತ್ತ ಆಕರ್ಷಿತರಾಗಿ 18ರ ಪ್ರಾಯದಲ್ಲಿ ಕಲಾಸೇವೆ ಪ್ರಾರಂಭಿಸಿದರು. ಹಿರಿಯ ಕಲಾವಿದ…
ಯಲ್ಲಾಪುರ : ತುರುವೆಕೆರೆಯ ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯ ವೃತದ ಪ್ರಯುಕ್ತ ಶ್ರೀಗಳ ಸಮ್ಮುಖದಲ್ಲಿ ಕರ್ಣಾಟಕ ಕಲಾ ಸನ್ನಿಧಿ ತೇಲಂಗಾರ ಹಾಗೂ ಅತಿಥಿ ಕಲಾವಿದರಿಂದ ತಾಳಮದ್ದಲೆ ಸೇವೆಯನ್ನು ದಿನಾಂಕ 25 ಜುಲೈ 2025ರಂದು ಸಂಜೆ 4-30 ಗಂಟೆಗೆ ಚಂದಗುಳಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಕವಿ ಅಮೃತ ಸೋಮೇಶ್ವರ ವಿರಚಿತ ‘ಗಂಗಾವತರಣ’ ತಾಳಮದ್ದಲೆಯ ಹಿಮ್ಮೇಳದಲ್ಲಿ ದಿನೇಶ ಭಟ್ಟ ಯಲ್ಲಾಪುರ, ವಿಶ್ವೇಶ್ವರ ಹೆಬ್ಬಾರ ಹಾಲೆಪಾಲ, ಸುಬ್ರಹ್ಮಣ್ಯ ಭಟ್ಟ ಚಂದಗುಳಿ ಹಾಗೂ ಮುಮ್ಮೇಳದಲ್ಲಿ ನರಸಿಂಹ ಭಟ್ಟ ಕುಂಕಿಮನೆ, ನಿರಂಜನ ಜಾಗನಳ್ಳಿ, ಶ್ರೀಧರ ಅಣಲಗಾರ ಮತ್ತು ದೀಪಕ ಭಟ್ಟ ಕುಂಕಿ ಇವರುಗಳು ಸಹಕರಿಸಲಿದ್ದಾರೆ.
ಬೆಂಗಳೂರು : ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ಮತ್ತು ಜೆ.ಎಸ್.ಡಬ್ಲ್ಯೂ ಇದರ ವತಿಯಿಂದ ಕಲಾವಿಲಾಸಿ ತಂಡದ ಕಲಾವಿದರು ಪ್ರಸ್ತುತ ಪಡಿಸುವ ಪಿ. ಲಂಕೇಶ್ ಅವರ ‘ಕ್ರಾಂತಿ ಬಂತು # ಕ್ರಾಂತಿ’ ಎಂಬ ನಾಟಕ ದಿನಾಂಕ 23 ಜುಲೈ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರಿನಲ್ಲಿ ಪ್ರದರ್ಶನಗೊಳ್ಳಲಿದೆ. ಯುವ ನಿರ್ದೇಶಕ ಅಭಿಷೇಕ ಚಕ್ರಣ್ಣವರ ನಿರ್ದೇಶಿಸುತ್ತಿರುವ ನಾಟಕವನ್ನು ಹಿರಿಯ ರಂಗಕರ್ಮಿ ಮಹಾದೇವ ಹಡಪದ ಇವರು ವಿನ್ಯಾಸ ಮಾಡಿದ್ದಾರೆ. ನಾಟಕದ ಅವಧಿ 110 ನಿಮಿಷಗಳು. ಹೆಚ್ಚಿನ ಮಾಹಿತಿಗೆ 9739398819 ಸಂಖ್ಯೆಗೆ ಕರೆ ಅಥವಾ ವಾಟ್ಸಪ್ ಮಾಡಬಹುದು. ‘ಕ್ರಾಂತಿ ಬಂತು # ಕ್ರಾಂತಿ’ ನಾಟಕವನ್ನು ಸಾಹಿತಿ ಪಿ. ಲಂಕೇಶ್ ಅವರ ‘ಕ್ರಾಂತಿ ಬಂತು ಕ್ರಾಂತಿ’ ನಾಟಕದ ಪಠ್ಯವನ್ನು ಪ್ರಸ್ತುತಕ್ಕೆ ಅಳವಡಿಸಿಕೊಂಡು ಕಟ್ಟಲಾಗಿದೆ. ಈ ನಾಟಕವು ಮೊದಲ ಬಾರಿಗೆ ಪ್ರಕಟವಾಗಿದ್ದು 1971ರಲ್ಲಿ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಲ್ಲಿ ಅಂದಿಗೂ – ಇಂದಿಗೂ ಸಾಕಷ್ಟು ಬದಲಾವಣೆಗಳು ಕಂಡುಬಂದರೂ, ಆ ಬದಲಾದ ಪರಿಸ್ಥಿತಿಗಳು ತಮ್ಮ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿರುವುದು…
ಮಧೂರು : ಉಳಿಯ ದನ್ವ0ತರೀ ಯಕ್ಷಗಾನ ಕಲಾಸಂಘ ಮಧೂರು ಇದರ ವಾರದ ಕೂಟ ಉಳಿಯ ಮನೆಯ ಸುಧಾ ಮಂದಿರದಲ್ಲಿ ದಿನಾಂಕ 20 ಜುಲೈ 2025ರ ಬಾನುವಾರ ‘ಶ್ರೀರಾಮ ಪಟ್ಟಾಭಿಷೇಕ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ವಾಸುದೇವ ಕಲ್ಲೂರಾಯ ಮಧೂರು ಹಾಗೂ ಮದ್ದಲೆಗಳಲ್ಲಿ ಗೋಪಾಲ ಕೃಷ್ಣ ನಾವಡ ಮಧೂರು ಸಹಕರಿಸಿದರು. ಮುಮ್ಮೇಳದಲ್ಲಿ ದಶರಥ : ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಕೈಕೇಯಿ : ನರಸಿಂಹ ಬಲ್ಲಾಳ್, ಲಕ್ಷ್ಮಣ : ಶ್ರೀ ಮಯೂರ ಆಸ್ರ ಉಳಿಯ, ಮಂತರೆ : ಸುದರಕೃಷ್ಣ ಗಟ್ಟಿ ಕಾಸರಗೋಡು, ಶ್ರೀ ರಾಮ : ಗೋಪಾಲ ಅಡಿಗ ಕೂಡಲು, ಕೌಸಲ್ಯಾ : ಶ್ರೀಮತಿ ರಕ್ಷಾ ರಾಮ ಕಿಶೋರ ಆಸ್ರ, ಸೀತಾ : ಶ್ರೀಮತಿ ಸರಸ್ವತಿ ಟೀಚರ್ ಕೂಡ್ಲು ಇವರುಗಳು ಸಹಕರಿಸಿದರು.
ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ಇವರ ಆಯೋಜನೆಯಲ್ಲಿ ರೆಮೋನಾ ಇವೈಟ್ ಪಿರೇರಾ ಇವರಿಂದ ‘ಅನ್ವೇಷಣೆಯ ಲಯಬದ್ಧ’ ದಾಖಲೆಗಾಗಿ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 21 ಜುಲೈ 2025ರಿಂದ 28 ಜುಲೈ 2025ರವರೆಗೆ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ್ದು, ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 21 ಜುಲೈ 2025ರ ಸೋಮವಾರ ಬೆಳಿಗ್ಗೆ ಘಂಟೆ 10.00 ಕ್ಕೆ ನಡೆಯಲಿದೆ. ತಮ್ಮ 3ನೇ ವಯಸ್ಸಿನಿಂದ ಭರತನಾಟ್ಯವನ್ನು ಪ್ರಾರಂಭಿಸಿರುವ ರೆಮೊನಾ ಇವೈಟ್ ಪಿರೇರಾ ಸೌರಭ ನೃತ್ಯ ಕಲಾ ಪರಿಷತ್ತಿನ ವಿದ್ಯಾರ್ಥಿನಿ. ಗುರು ಡಾ. ಶ್ರೀವಿದ್ಯಾ ಮುರಳೀಧರ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿರುವ ಇವರು 2019ರಲ್ಲಿ ರಂಗ ಪ್ರವೇಶ ಮಾಡಿರುತ್ತಾರೆ. ಐದನೇ ವಯಸ್ಸಿನಲ್ಲಿ ‘ಅರಳು ಮಲ್ಲಿಗೆ ಪ್ರಶಸ್ತಿ’ ಹಾಗೂ ಕುಂದಾಪುರದಲ್ಲಿ ನಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುತ್ತಾರೆ. ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ, ಧಾರವಾಡದ ಬಾಲ ವಿಕಾಸ ಅಕಾಡೆಮಿಯಿಂದ ಬಾಲ ಗೌರವ್ ಪ್ರಶಸ್ತಿ, ಹೊಯ್ಸಳಾ ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ…
ವಿರಾಜಪೇಟೆ : ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ದಿನೇಶ್ ಫೌಂಡೇಶನ್ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಸಂಭ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಜೆಎಸ್ಎಸ್ ಶಾಲಾ ಆವರಣದಲ್ಲಿರುವ ಶ್ರೀ ಘನಲಿಂಗ ಶಿವಯೋಗಿ ಸಭಾಂಗಣದಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಭರತನಾಟ್ಯ ಕಲಾವಿದೆ ಕೆ. ಪಿ. ದಿಥ್ಯ ಇವರಿಗೆ ‘ಸ್ಟಾರ್ ಆಫ್ ಕರ್ನಾಟಕ-2025’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿಥ್ಯ ಇವರು ವಿರಾಜಪೇಟೆ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ ವಿರಾಜಪೇಟೆಯ ನಾಟ್ಯಂಜಲಿ ನೃತ್ಯ ಶಾಲೆಯಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ. ವಿರಾಜಪೇಟೆಯ ಚಿಕ್ಕಪೇಟೆಯ ನಿವಾಸಿ ನಿವೃತ್ತ ಶಿಕ್ಷಕರುಗಳಾದ ಕೊಂಫುಳಿ ಪಳಂಗಪ್ಪ, ತಾರಾಮಣಿ ಅವರ ಮೊಮ್ಮಗಳು ಹಾಗೂ ಪೃಥ್ವಿ ಕುಮಾರ್, ಭವ್ಯ ದಂಪತಿಯ ಪುತ್ರಿ.
ಮೂಡುಬಿದಿರೆ : ಆಮ್ನಾಯಃ – ಯಕ್ಷಸಂಸ್ಕೃತಿ ಬಳಗ ಗಾಳಿಮನೆ ಇವರ ವತಿಯಿಂದ ಪಾಕ್ಷಿಕ ತಾಳಮದ್ದಲೆ ಸರಣಿ : ವಿಶ್ವಾವಸು 5127 ದ್ವಿತೀಯ ಪ್ರದರ್ಶನವನ್ನು ದಿನಾಂಕ 24 ಜುಲೈ 2025ರಂದು ಸಂಜೆ 6-00 ಗಂಟೆಗೆ ಮೂಡುಬಿದಿರೆಯ ಶ್ರೀಜೈನ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಪಾರ್ತಿಸುಬ್ಬು ವಿರಚಿತ ‘ಪಾದುಕಾ ಪಟ್ಟಾಭಿಷೇಕ’ ಎಂಬ ಪ್ರಸಂಗದ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ.
ಸೋಮವಾರಪೇಟೆ : ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಯುವ ಬರಹಗಾರ ಹೇಮಂತ್ ಪಾರೇರ ರಚಿಸಿರುವ ‘ಬೆಳ್ಳಿಗೆಜ್ಜೆ’ ಕವನ ಸಂಕಲನ ದಿನಾಂಕ 15 ಜುಲೈ 2025ರಂದು ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ಬಿಡುಗಡೆಗೊಂಡಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ “ಸರಳವಾಗಿ ಬರೆದ ಕವನಗಳು ಓದುಗರ ಹೃದಯಕ್ಕೆ ತಲುಪುತ್ತವೆ. ಯಾವುದೇ ಕಥೆ ಕವನಗಳು ಓದುಗರಿಂದ ಓದಿಸಿಕೊಂಡು ಹೋಗುವಂತೆ, ಭಾಷೆ ಹಿಡಿತ, ಪದಗಳ ಜೋಡಣೆ ಬರಹಗಾರರಿಗೆ ಬಹು ಮುಖ್ಯವಾಗಿರುತ್ತದೆ” ಎಂದು ಹೇಳಿದರು. ಅರಿಸಿನಗುಪ್ಪೆ ಸಿದ್ಧಲಿಂಗಪುರ ಶ್ರೀ ಮಂಜುನಾಥ ದೇವಾಲಯದ ಶ್ರೀ ರಾಜೇಶ್ನಾ ಥ್ ಗುರೂಜಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, “ಸಾಹಿತಿಗಳು, ಬರಹಗಾರರ ಕೊಡುಗೆ ಕನ್ನಡ ಭಾಷೆಗೆ ಬಹಳಷ್ಟು ಇದೆ. ಪತ್ರಿಕೆ ಸೇರಿದಂತೆ, ಸಾಮಾಜಿಕ ಜಾಲತಾಣಗಳಲ್ಲೂ ಬರಹಗಾರರು ತಮ್ಮ ಬರಹವನ್ನು ಬರೆಯಲು ಅವಕಾಶಗಳು ಹೆಚ್ಚಾಗಿವೆ. ಇದು ಯುವ ಸಾಹಿತಿಗಳ ಬೆಳವಣಿಗೆಗೆ ಹೆಚ್ಚಿನ ಸಹಕಾರಿಯಾಗಿದೆ. ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಕನ್ನಡ ಭಾಷೆ ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ಮಾತೃ ಭಾಷೆ…
‘ಕಜ್ಜಾಯ’ವು ಸುನಂದಾ ಬೆಳಗಾಂಕರರ ಮೊದಲ ಸೃಜನಶೀಲ ಕೃತಿಯಾಗಿದೆ. ಎಪ್ಪತ್ತರ ದಶಕದಲ್ಲಿ ಸುಧಾ ವಾರಪತ್ರಿಕೆಯಲ್ಲಿ ಸತತವಾಗಿ ಲಲಿತ ಪ್ರಬಂಧಗಳನ್ನು ಬರೆಯುವ ಮೂಲಕ ಸಾಹಿತ್ಯದ ಪಯಣವನ್ನು ಆರಂಭಿಸಿದ ಅವರಿಗೆ ಓದುಗರ ಅಪಾರ ಮೆಚ್ಚುಗೆಯು ದೊರೆಯಿತು. ‘ಕಜ್ಜಾಯ’ ಲಲಿತ ಪ್ರಬಂಧ ಸಂಕಲನವು ಈಗಾಗಲೇ ಐದು ಮುದ್ರಣಗಳನ್ನು ಕಂಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕಜ್ಜಾಯದಲ್ಲಿ ಹತ್ತು ಲಲಿತ ಪ್ರಬಂಧಗಳಿವೆ. ಮೇಲುನೋಟಕ್ಕೆ ಲಲಿತಪ್ರಬಂಧ ಎನಿಸಿಕೊಳ್ಳುವ ‘ಮಣ್ಣು’ ಎಂಬ ರಚನೆಯಲ್ಲಿ ಕತೆಯನ್ನು ಹೇಳುವ ತಂತ್ರವನ್ನು ಬಳಸಲಾಗಿದೆ. ಕತೆಯನ್ನು ಆರಂಭಿಸುವ ಲೇಖಕಿಯು ಅದಕ್ಕೆ ತಕ್ಕ ಪ್ರಾಥಮಿಕ ಹಿನ್ನೆಲೆಯನ್ನು ಒದಗಿಸಿದ ಬಳಿಕ ಹಿಂದೆ ಸರಿದು ಪಾತ್ರವೊಂದರ ಮೂಲಕ ಕತೆಯನ್ನು ಹೇಳುತ್ತಾರೆ. ಮುಂದೆ ಬರಲಿರುವ ದಾರುಣ ಸನ್ನಿವೇಶದ ಸೂಚನೆಯನ್ನು ಕೊಡದೆ ತಿಳಿ ಹಾಸ್ಯದ ಧಾಟಿಯಲ್ಲಿ ಆರಂಭವಾಗುವ ಪ್ರಬಂಧದಲ್ಲಿ ಬರುವ ಮಣ್ಣಿನ ಪ್ರಸ್ತಾಪದಲ್ಲಿ ಮುಂಬರುವ ಸಾವಿನ ಪೀಠಿಕೆಯಿದೆ. ಮಣ್ಣನ್ನು ನೋಡುವಾಗ ಲೇಖಕಿಗೆ ಮಣ್ಣಿನ ಮೂರ್ತಿಗಳನ್ನು ಮಾಡುತ್ತಿದ್ದ ದಾನಪ್ಪ-ಹಾಲವ್ವ ದಂಪತಿಯರ ನೆನಪು, ಹೆತ್ತವರನ್ನು ಬಿಟ್ಟು ಮುಂಬಯಿಗೆ ಉದ್ಯೋಗಕ್ಕೆ ಹೋಗಬಯಸುವ ಮಗ ಶ್ರೀಶೈಲ, ಇದೇ ಕೊರಗನ್ನು ಅನುಭವಿಸುತ್ತಾ ಮಣ್ಣಿನಲ್ಲಿ…
ಉಪ್ಪಿನಂಗಡಿ : ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್ ಉಪ್ಪಿನಂಗಡಿಯ ತಮ್ಮ ಸ್ವ ಗೃಹದಲ್ಲಿ ದಿನಾಂಕ 19 ಜುಲೈ 2025ರ ಶನಿವಾರದಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಹಿರಿಯ ಪುತ್ರ ಯಕ್ಷಗಾನ ಕಲಾವಿದ ಅಂಬಾಪ್ರಸಾದ್ ಪಾತಾಳ, ಕಿರಿಯ ಪುತ್ರ ಉಪ್ಪಿನಂಗಡಿ ಪಿ. ಎ. ಬ್ಯಾಂಕ್ ನಿರ್ದೇಶಕ ಶ್ರೀರಾಮ ಭಟ್ ಪಾತಾಳ ಸಹಿತ ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಅಪಾರ ಬಂಧುಗಳು ಹಾಗೂ ಅಭಿಮಾನಿಗಳನ್ನು ಆಗಲಿದ್ದಾರೆ. ತೆಂಕು ಮತ್ತು ಬಡಗು ಎರಡೂ ತಿಟ್ಟುಗಳಲ್ಲಿ ವೇಷಗಳನ್ನು ಮಾಡಿ ಭಾವಾಭಿನಯ ಮತ್ತು ನೃತ್ಯ ಲಾಲಿತ್ಯಗಳಿಂದ ವೈವಿಧ್ಯಮಯ ವೇಷಗಳಲ್ಲಿ ಮೆರೆದ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ಟರು. ಮೂರನೇ ತರಗತಿ ಪೂರೈಸಿ 1951ರಲ್ಲಿ ಜೀವನೋಪಾಯಕ್ಕಾಗಿ ಕಾಂಚನ ನಾಟಕ ಕಂಪನಿಯಲ್ಲಿ ಅಡುಗೆಯವರಾಗಿ ಸೇರಿ ಸಹಜ ಪ್ರತಿಭೆಯಿಂದ ಪ್ರಧಾನ ಸ್ತ್ರೀ ವೇಷ ಪಾತ್ರಧಾರಿಯಾಗಿ ಅವಕಾಶ ಪಡೆದರು. 1953ರಲ್ಲಿ ವೃತ್ತಿ ಮೇಳಕ್ಕೆ ಸೇರಿ 1981ರಲ್ಲಿ ಯಕ್ಷ ರಂಗದಿಂದ ನಿವೃತ್ತಿ ಗೊಳ್ಳುವ ತನಕ ತೆಂಕು…