Author: roovari

ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆಯ ಬೆಳ್ಳಿ ಹಬ್ಬದ ‘ಸಿನ್ಸ್ 1999 ಶ್ವೇತಯಾನ’ದ ಸಮಾಪನ “ಮಧ್ಯಮಾವತಿ” ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 19 ಏಪ್ರಿಲ್ 2025ರಂದು ತೆಕ್ಕಟ್ಟೆಯ ಪಿ. ಎಂ. ಶ್ರೀ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು. ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಗೀತಾನಂದ ಫೌಂಡೇಶನ್‌ ಇದರ ಆನಂದ ಸಿ. ಕುಂದರ್ ಮಾತನಾಡಿ “ಯಶಸ್ವೀ ಕಲಾವೃಂದ ಕರಾವಳಿ ಭಾಗದ ಹೆಮ್ಮೆಯ ಸಂಸ್ಥೆ. ಮರೆಯಾದ ಯಕ್ಷಗಾನದ ಎಲ್ಲಾ ಆಯಾಮಗಳನ್ನು ಮತ್ತೆ ನೆನಪಿಸಿ, ಜೀವಂತ ಉಳಿಸಿದ ಸಂಸ್ಥೆ ಇದು. ಕೇವಲ ಯಕ್ಷಗಾನವಲ್ಲದೆ ಎಲ್ಲಾ ಲಲಿತಕಲಾ ವಿಭಾಗದಲ್ಲಿ ಅನೇಕ ಕಲಾವಿದರನ್ನು ಸಮಾಜಕ್ಕೆ ಕೊಟ್ಟ ಸಂಸ್ಥೆಯ ಬೆಳ್ಳಿ ಹಬ್ಬದ ಸಡಗರದಲ್ಲಿ ಭಾಗಿಯಾಗುವ ಅವಕಾಶಕ್ಕೆ ಎಲ್ಲರೂ ಕೃತಜ್ಙತೆ ಸಲ್ಲಿಸಲೇಬೇಕು” ಎಂದರು . ಶ್ವೇತಯಾನ ಸಮಾಪನ ‘ಮಧ್ಯಮಾವತಿ’ ಕಾರ್ಯಕ್ರಮದಲ್ಲಿ ಗುರುವಂದನೆ ಸಲ್ಲಸಿಕೊಂಡು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ “ಕಲೆಯಲ್ಲಿ ಆಸಕ್ತಿ ಇಲ್ಲದೇ…

Read More

ಮುಂಬಯಿ : ಅಭಿಜಿತ್ ಪ್ರಕಾಶನ ಮತ್ತು ಕನಕ ಸಭಾ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಆಶ್ರಯದಲ್ಲಿ ಅಭಿಜಿತ್ ಪ್ರಕಾಶನ ಪ್ರಕಟಿಸಿದ ವಿದುಷಿ ಸರೋಜಾ ಶ್ರೀನಾಥ್ ಇವರ ಹನ್ನೊಂದನೆಯ ಕೃತಿ ‘ಅಂದು ಇಂದು’ ನೆನಪಿನ ಲಹರಿ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 20 ಏಪ್ರಿಲ್ 2025ರಂದು ಮುಂಬಯಿ ಚೆಂಬೂರಿನ ನೀಲಕಂಠ್ ಇಲ್ಲಿರುವ ಕನಕಾಸಭಾ ಫರ್ಫಾರ್ಮಿಂಗ್ ಆರ್ಟ್ಸ್ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಅಭಿಜಿತ್ ಪ್ರಕಾಶನದ ರೂವಾರಿಯಾಗಿರುವ ಡಾ. ಜಿ ಎನ್.ಉಪಾಧ್ಯ ಮಾತನಾಡಿ “ವಿದ್ವಾನ್ ಸರೋಜಾ ಶ್ರೀನಾಥ್ ಅವರದು ಮಾದರಿ ಸಾಧನೆ.ನಮ್ಮಲ್ಲಿ ಸಾಕಷ್ಟು ಮಂದಿ ಕಲಾವಿದರಿದ್ದಾರೆ. ಆದರೆ ಕಲಾ ಸಾಹಿತ್ಯ ನಿರ್ಮಾಣ ಕಡಿಮೆ. ಹೀಗಿರುವಾಗ ಸಂಗೀತ, ನೃತ್ಯ, ಸಾಹಿತ್ಯ ಕ್ಷೇತ್ರಗಳಲ್ಲಿ ಅವರು ಗೈದ ಪರಿಚಾರಿಕೆ ಬಲು ದೊಡ್ಡದು.ಅವರದು ಸುಸಂಸ್ಕೃತ ವ್ಯಕ್ತಿತ್ವ. ಇಂದು 90ರ ಪ್ರಾಯದಲ್ಲೂ ಸರೋಜಾ ಅವರ ಬತ್ತದ ಅದಮ್ಯ ಜೀವನೋತ್ಸಾಹ, ಧನಾತ್ಮಕ ಚಿಂತನೆ ನಮಗೆಲ್ಲ ಪ್ರೇರಣದಾಯಿಯಾಗಿದೆ. ಸರೋಜಾ ಶ್ರೀನಾಥ್ ಅವರು ಸಾಂಸ್ಕೃತಿಕ ರಾಯಭಾರಿಯಾಗಿ ಮಿಂಚಿದವರು. ಇವತ್ತಿಗೂ ಅವರ…

Read More

ಕೋಟ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ ಪರ್ವದ ಸರಣಿ ಕಾರ್ಯಕ್ರಮವಾಗಿ ಕೋಟ ಮೂರ್ಕೈಯ ಹಂದೆ ಮಹಾ ವಿಷ್ಣು ವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ ಎರಡು ದಿವಸಗಳ ಆಹ್ವಾನಿತ ತಂಡಗಳ ‘ಯಕ್ಷ ತ್ರಿವಳಿ’ ಯಕ್ಷೋತ್ಸವದ ಸಮಾರೋಪ ಸಮಾರಂಭ ದಿನಾಂಕ 18 ಏಪ್ರಿಲ್ 2025ರ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಮಚಂದ್ರ ಐತಾಳ್ ಮಾತನಾಡಿ “ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಕೆಯಾಗುತ್ತದೆ, ಚಿನ್ನಕ್ಕೆ ಸಂಸ್ಕಾರ ಕೊಟ್ಟರೆ ಒಡವೆಯಾಗುತ್ತದೆ, ಸೆಗಣಿಗೆ ಸಂಸ್ಕಾರ ಕೊಟ್ಟರೆ ವಿಭೂತಿಯಾಗುತ್ತದೆ, ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ಮಹಾದೇವನಾಗುತ್ತಾನೆ. ಮಕ್ಕಳಿಗೆ ಬದುಕಿನ ಮೌಲ್ಯವನ್ನು ಕೊಡ ಬಲ್ಲ ಶಕ್ತಿ ಯಕ್ಷಗಾನಕ್ಕಿದೆ. ಮಗುವನ್ನು ತಾಯಿಯಂತೆ ಪೋಷಿಸಬಲ್ಲ ಶಕ್ತಿ ಯಕ್ಷಗಾನದ ನಿಜ ಸತ್ವವಾಗಿದೆ. ಸಾಲಿಗ್ರಾಮ ಮಕ್ಕಳ ಮೇಳದ ಹಂದೆ ಉಡುಪರು ಕಲೆಯ ಮೂಲಕ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಹೇಳಿದರು. ಸಮಾರಂಭದಲ್ಲಿ ಮಕ್ಕಳ ಕ್ಷೇತ್ರದ ಅನನ್ಯ ಸಾಧಕ ಯಕ್ಷ…

Read More

ಮಂಗಳೂರು : ವಿಶ್ವ ಪುಸ್ತಕ ದಿನದ ಅಂಗವಾಗಿ ಇಂಟಾಕ್ ಮಂಗಳೂರು ಆಯೋಜಿಸುವ ಪ್ರೊ. ಮಾಧವ ಗಾಡ್ಗೀಳರ ಆತ್ಮಕಥೆಯಾದ ‘ಏರು ಘಟ್ಟದ ನಡಿಗೆ’ ಪುಸ್ತಕ ಓದು ಹಾಗೂ ಚರ್ಚಾ ಕಾರ್ಯಕ್ರಮವು ದಿನಾಂಕ 23 ಏಪ್ರಿಲ್ 2025ರಂದು ಸಂಜೆ ಘಂಟೆ 5.30ಕ್ಕೆ ಮಂಗಳೂರಿನ ಕೊಡಿಯಾಲ್ ಗುತ್ತು ಸೆಂಟರ್ ಫಾರ್ ಆರ್ಟ್ ಆಂಡ್ ಕಲ್ಚರ್ ಇಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಪ್ರಕಾಶಕರಾದ ಕಲ್ಲೂರು ನಾಗೇಶ್, ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೃಷ್ಣಮೂರ್ತಿ ಹಾಗೂ ಕಲಾವಿದರಾದ ದಿನೇಶ್ ಹೊಳ್ಳ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರಾಜೇಂದ್ರ ಕೇದಿಗೆ 9480014812 ಇವರನ್ನು ಸಂಪರ್ಕಿಸಬಹುದು.

Read More

ಮಂಗಳೂರು : ಕಥಾ ಬಿಂದು ಪ್ರಕಾಶನ ಏರ್ಪಡಿಸಿದ ‘ಕಥಾ ಬಿಂದು ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವು ದಿನಾಂಕ 18 ಏಪ್ರಿಲ್ 25ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರಿನ ಜನಪ್ರಿಯ ದಿನಪತ್ರಿಕೆ ‘ಜಯಕಿರಣ’ದ ವಾರದ ವಿಭಾಗದಲ್ಲಿ ಪ್ರಕಟವಾದ ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ಶಸ್ತ್ರ ಕ್ರಿಯಾ ಕ್ಷಾರ ತಜ್ಞ ಹಾಗೂ ಬರಹಗಾರರಾದ ಡಾ. ಸುರೇಶ ನೆಗಳಗುಳಿಯವರ ಕವನಗಳ ಸಂಕಲನ ‘ಕಾವ್ಯಕಿರಣ’ವನ್ನು ಲೋಕಾರ್ಪಣೆಗೊಳಿಸಲಾಯಿತು. 63 ಕವನಗಳಿರುವ ಈ ಸಂಕಲನವು ತಯಾರಾಗುವಲ್ಲಿ ತನ್ನ. ರಚನೆಗಳನ್ನು ಪ್ರಕಟಿಸುತ್ತಾ ಸ್ಪೂರ್ತಿಯಾದ ಜಯಕಿರಣ ದಿನಪತ್ರಿಕೆ ಸಂಪಾದಕ ಶ್ರೀ ಜಿತೇಶ್ ಹಾಗೂ ಪ್ರಕಟಿಸುವಲ್ಲಿ ನೆರವಾದ ಕಥಾಬಿಂದು ಪ್ರಕಾಶನದ ಪಿ. ವಿ. ಪ್ರದೀಪ ಕುಮಾರ್ ಇವರನ್ನು ಲೇಖಕರು ಸ್ಮರಿಸಿದರು. “ಇದರಲ್ಲಿ ಗಜಲ್, ನವ್ಯ ನವ್ಯೋತ್ತರ, ಷಟ್ಪದಿ ,ತನಗ ಮುಂತಾದ ಪ್ರಕಾರಗಳ ತನ್ನ ರಚನೆಗಳನ್ನು ಪ್ರಕಟಿಸಲಾಗಿದೆ. ಇದು ಹಲವು ಪ್ರಕಾರಗಳ ಮಾಹಿತಿಗೆ ಅನುಕೂಲ” ಎಂದು ತಿಳಿಸಿದರು. ಸಮಾರಂಭದಲ್ಲಿ ಧರ್ಮದರ್ಶಿಶ್ರೀ ಹರಿಕೃಷ್ಣ ಪುನರೂರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಯುಗಪುರುಷ ಪ್ರಕಾಶನದ ಮುಖ್ಯಸ್ಥರಾದ ಭುವನಾಭಿರಾಮ ಉಡುಪ,…

Read More

ಮಂಗಳೂರು : ಸರಯೂ ಬಾಲ ಯಕ್ಷ ವೃಂದ(ರಿ) ಮಕ್ಕಳ ಮೇಳ ಇದರ ರಜತೋತ್ಸವ ಸಮಾರಂಭ (2000-2025) ದ ಆಚರಣೆಯ ಪ್ರಯುಕ್ತ 16 ಮೇ 2025 ರಿಂದ 01 ಜೂನ್ 2025ರ ವರೆಗಿನ ನಡೆಯಲಿರುವ “ಯಕ್ಷ ಪಕ್ಷ- ರಜತ ಸರಯೂ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ದಿನಾಂಕ 17 ಏಪ್ರಿಲ್ 2025ರ ಗುರುವಾರದಂದು ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ, ತೋಟದ ಮನೆ ದೇರೇಬೈಲ್ ಇಲ್ಲಿ ನಡೆಯಿತು. ದೇವಳದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ, ವಾರ್ಡಿನ ಮಾಜಿ ಮ. ನ. ಪಾ. ಸದಸ್ಯೆ ಶ್ರೀಮತಿ ರಂಜಿನಿ ಎಲ್. ಕೋಟ್ಯಾನ್, ಶ್ರೀ ನಾಗರಾಜ ಖಾರ್ವಿ, ಮಧುಸೂದನ ಅಲೆವೂರಾಯ ವರ್ಕಾಡಿ, ಗುರುಪ್ರಸಾದ್ ಕಡಂಬಾರ್, ಶಿವಪ್ರಸಾದ್ ದಂಪತಿ, ಗೌತಂ ಭಂಡಾರಿ ದಂಪತಿ, ರಾಘಣ್ಣ, ಯೋಗೀಶ್, ವರ್ಕಾಡಿ ರವಿ ಅಲೆವೂರಾಯ, ಕು. ಸೈಶಾ ಭಂಡಾರಿ, ಹಂಸಿಕಾ, ಕೃತಿ ದೇವಾಡಿಗ, ಗೌರವ್ ಕೊಂಚಾಡಿ, ಶ್ರೀಮತಿ ವಿಜಯಲಕ್ಮೀ ಎಲ್. ಎನ್., ದೇವಳದ ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Read More

ಮಡಿಕೇರಿ : ಕಲಾಕಾವ್ಯ ನಾಟ್ಯ ಶಾಲೆಯ ಏಳನೇ ವರ್ಷದ ವಾರ್ಷಿಕೋತ್ಸವವವು ಸಂಭ್ರಮದಿಂದ ದಿನಾಂಕ 14 ಏಪ್ರಿಲ್ 2025ರಂದು ನಡೆಯಿತು. ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ನಡೆದ ಕಾರ್ಯಕ್ರಮವನ್ನು ಭರತನಾಟ್ಯ ಕಲಾವಿದೆ ಮಿಲನ ಭರತ್ ಹಾಗೂ ಯೋಗ ಗುರು ಶಿಲ್ಪ ರವೀಂದ್ರ ರೈ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಿಲನಾ ಭರತ್ “ಒಂದು ನಾಟ್ಯಶಾಲೆಯನ್ನು ಸ್ಥಾಪಿಸುವುದು ಸುಲಭದ ವಿಷಯವಲ್ಲ, ತಾನು ಕಲಿತು ಬಳಿಕ ಇತರರಿಗೆ ಆ ವಿದ್ಯೆಯನ್ನು ಧಾರೆಯೆರೆಯಬೇಕಾಗಿರುತ್ತದೆ, ಇದಕ್ಕೆ ಬಹಳ ಅತ್ಮಸ್ಥೆರ್ಯದ ಅಗತ್ಯವಿರುತ್ತದೆ. ಕಾವ್ಯಶ್ರೀ ಅವರು ಎಲ್ಲವನ್ನೂ ಮೀರಿ ಈ ಶಾಲೆಯನ್ನು ಕಟ್ಟಿದ್ದಾರೆ. ಅವರ ಸಾಧನೆ ನಿಜಕ್ಕೂ ಅಭಿನಂದನೀಯ” ಎಂದರು. ಶಿಲ್ಪಾ ರವೀಂದ್ರ ರೈ ಮಾತನಾಡಿ “ಇಂದು ಭಾರತೀಯ ನೃತ್ಯಕಲೆ ಕಲಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಂಠಿತವಾಗುತ್ತಿದೆ, ಜನರು ಆಸಕ್ತಿ ಕಳೆದುಕೊಳ್ಳುತ್ತಿರುವುದು ಇದಕ್ಕೆ ಮೂಲ ಕಾರಣ. ಆದರೆ ಕಾವ್ಯಶ್ರೀ ದಕ್ಷಿಣ ಭಾರತದ ಪ್ರಮುಖ ನೃತ್ಯ ಪ್ರಕಾರವಾದ ಭರತನಾಟ್ಯದ ಮೇಲಿಟ್ಟಿರುವ ಗೌರವ, ಅಭಿಮಾನ ನಿಜಕ್ಕೂ ಮೆಚ್ಚುವಂತದ್ದು, ಈ ನೃತ್ಯಶಾಲೆ ಸ್ಥಾಪಿಸಲು ಅವರು ಅಂದು…

Read More

ಒಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ವತಿಯಿಂದ ‘ರಾಣಿ ಅಬ್ಬಕ್ಕ ಬಹುಮುಖಿ ಚಿಂತನೆ’ ಎಂಬ ವಿಷಯದ ಕುರಿತು ಒಂದು ದಿನ ಪೂರ್ತಿ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮ ದಿನಾಂಕ 18 ಏಪ್ರಿಲ್ 2025ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ “ರಾಣಿ ಅಬ್ಬಕ್ಕ ಈ ಮಣ್ಣಿನವಳಾಗಿದ್ದು ಸ್ವಾತಂತ್ರ್ಯಕ್ಕಾಗಿ ಧಾರೆ ಎರೆದಿದ್ದವಳಾಗಿದ್ದರೂ ಕಥೆ, ಕಾವ್ಯ ಗಳಲ್ಲಿ ಬಿಂಬಿತವಾದದ್ದು ಅತೀ ಕಡಿಮೆ. 1995 ರಲ್ಲಿ ಬಿ. ಸಿ. ರೋಡಿನ ಸಂಚಯಗಿರಿಯಲ್ಲಿ ಆರಂಭಗೊಂಡ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಿಂದ ಅಬ್ಬಕ್ಕ ಹೆಚ್ಚು ಪ್ರಚಾರಕ್ಕೆ ಬಂದಿದ್ದಾಳೆ ಎಂಬುದನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ. ವಿದ್ವಾಂಸ ಡಾ. ರುಡೊಲ್ಫ್ ನೊರೊನ್ ಇವರು ಪೋರ್ಚುಗೀಸ್ ದಾಖಲೆಯಲ್ಲಿ ಅಬ್ಬಕ್ಕ ಹೇಗೆ ಪ್ರತಿಬಿಂಬಿತವಾಗಿದ್ದಾಳೆ ಎನ್ನುವುದನ್ನು ಪೊರ್ಚುಗೀಸ್ ಬರವಣಿಗೆ ಗಳ ಮುಖಾಂತರ ತಿಳಿಸಿದರು. ಸಂಸ್ಕೃತಿಕ ಚಿಂತಕ ರಾಜಗೋಪಾಲ್ ಕನ್ಯಾನ ಅವರು ಅಬ್ಬಕ್ಕ…

Read More

ಕೋಟ : ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ ಪರ್ವದ ಸರಣಿ ಕಾರ್ಯಕ್ರಮವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಿದ ಯಕ್ಷ ತ್ರಿವಳಿ’ ಯಕ್ಷೋತ್ಸವದ ಉದ್ಘಾಟನಾ ಸಮಾರಂಭವು ದಿನಾಂಕ 17 ಏಪ್ರಿಲ್ 2025ರಂದು ಕೋಟ ಮೂರ್ಕೈಯ ಹಂದೆ ಮಹಾ ವಿಷ್ಣು ವಿನಾಯಕ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕುಂದಾಪುರ ವಿಧಾನ ಸಭಾ ಶಾಸಕರಾದ ಕಿರಣ ಕುಮಾರ ಕೊಡ್ಗಿ ಮಾತನಾಡಿ “ಯಕ್ಷಗಾನ ಕಲೆ ಉಳಿದು ಬೆಳೆಯುವಲ್ಲಿ ಎಲ್ಲರೂ ಕೈ ಜೋಡಿಸಬೇಕು. ಸರಕಾರದಿಂದ ಬರುವ ಎಲ್ಲಾ ರೀತಿಯ ಅನುದಾನದ ಜೊತೆಗೆ ಈ ಭಾಗದ ಜನ ಪ್ರತಿನಿಧಿಗಳಾಗಿ ನಮ್ಮಿಂದ ಮಾಡಬಹುದಾದ ಹೆಚ್ಚಿನ ನೆರವನ್ನು ನೀಡುವಲ್ಲಿ ನಾವು ಸದಾ ಸಿದ್ಧರು. ಶ್ರೀಧರ ಹಂದೆ ಮತ್ತು ಕಾರ್ಕಡ ಶ್ರೀನಿವಾಸ ಉಡುಪರ ಸಾಲಿಗ್ರಾಮ ಮಕ್ಕಳ ಮೇಳ ಐವತ್ತು ವರ್ಷಗಳ ಸಾರ್ಥಕ ಇತಿಹಾಸವನ್ನು ಸೃಷ್ಟಿಸಿರುವುದು ಅಭಿನಂದನೀಯ. ಈ ಕಲೆಯ ಏಳಿಗೆಗಾಗಿ ಶ್ರಮಿಸುತ್ತಿರುವ ಯಕ್ಷಗಾನ ಅಕಾಡೆಮಿ ಹಾಗೂ ಉಡುಪಿ ಕಲಾರಂಗದ ಚಟುವಟಿಕೆಗಳು ಸ್ಮರಣಿಯ” ಎಂದು ಹೇಳಿದರು. ಅಧ್ಯಕ್ಷತೆ…

Read More

ಅಂಕೋಲಾ : ಅಂಕೋಲಾ ತಾಲ್ಲೂಕಿನ ಬೇಲೇಕೇರಿಯ ಶ್ರೀ ಜೈನಬೀರ ದೇವಾಲಯದ ಸನಿಹದಲ್ಲಿ ಎಪ್ರಿಲ್ 21ರ ಸೋಮವಾರದಂದು ರಾತ್ರಿ 10:00 ಗಂಟೆಗೆ ಉಪನ್ಯಾಸಕರಾದ ಹರೀಶ ಬೀರಣ್ಣ ನಾಯಕರವರ ಸಂಯೋಜನೆಯಲ್ಲಿ ಬೇಲೇಕೇರಿ ಊರ ನಾಗರಿಕರ ಪ್ರಾಯೋಜಕತ್ವದಲ್ಲಿ ದಕ್ಷಿಣೋತ್ತರದ ಹೆಸರಾಂತ ಕಲಾವಿದರಿಂದ “ಶ್ರೀ ಶನೀಶ್ವರ ಮಹಾತ್ಮೆ” ಎಂಬ ಸುಂದರ ಪೌರಾಣಿಕ ಯಕ್ಷಗಾನ ಕಥಾನಕವು ಬಯಲಾಟವಾಗಿ ಪ್ರದರ್ಶನಗೊಳ್ಳಲಿದೆ. “ರಸರಾಗ ಚಕ್ರವರ್ತಿ” ಜಿ. ಆರ್. ಕಾಳಿಂಗ ನಾವಡರನ್ನು ನೆನಪಿಸುವ ತುಂಬು ಕಂಠಸಿರಿಯ ಭಾಗವತದ್ವಯರಾದ ವಿನಯ ಶೆಟ್ಟಿ ಮತ್ತು ಗಣಪತಿ ಕೋಡ್ಕಣಿಯವರ ಸುಮಧುರವಾದ ಹಾಡುಗಾರಿಕೆಗೆ ಮದ್ದಳೆಯಲ್ಲಿ ನರಸಿಂಹ ಹೆಗಡೆ ಮುರೂರು ಹಾಗೂ ಚಂಡೆಯಲ್ಲಿ ಗಜಾನನ ಹೆಗಡೆ ಕೋಣಾರೆಯವರು ಸಾಥ್ ನೀಡಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ “ಕಣ್ಣೆದುರುಗಿನ ಬೃಹಸ್ಪತಿ” ಡಾ. ಜಿ.ಎಲ್. ಹೆಗಡೆಯವರು ಪ್ರಪ್ರಥಮವಾಗಿ ಬೃಹಸ್ಪತಿಯ ವೇಷದಲ್ಲಿಯೂ, ವಿಕ್ರಮನ ಪಾತ್ರಕ್ಕೆ ಹೆಸರಾದ ”ಪದವಿಗಳ ಸರದಾರ”, “ರಂಗ ವಿಕ್ರಮ” ಎಂಬ ಅಭಿದಾನಗಳಿಂದ ಸುವಿಖ್ಯಾತರಾದ ಮಂಜುನಾಥ ಗಾಂವಕರ್ ಬರ್ಗಿಯವರು ವಿಕ್ರಮಾದಿತ್ಯ ಮಹಾರಾಜನ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿರುವರು. ಲಾಲಿತ್ಯಮಯ ನೃತ್ಯದ ಲಯಬ್ರಹ್ಮ ಬಿ. ಎಸ್.…

Read More