Author: roovari

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಮಂಗಳ ಸಭಾಂಗಣದಲ್ಲಿ ನಡೆಯಲಿದೆ . ಡಾ.ಪ್ರಭಾಕರ ಶಿಶಿಲ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ ಮತ್ತು ಇತರ ಮಳಿಗೆಗಳಿಗೆ ಅವಕಾಶವಿದೆ. ಮಳಿಗೆಗಳ ವ್ಯವಸ್ಥೆಗೆ ದಿನಾಂಕ 05 ಫೆಬ್ರವರಿ 2025ರ ಒಳಗಾಗಿ ಪುಸ್ತಕ ಮಳಿಗೆ ಮತ್ತು ಇತರೆ ಮಾರಾಟ ಮಳಿಗೆ ಸಮಿತಿ ಸಂಚಾಲಕ ತ್ಯಾಗಂ ಹರೇಕಳ 8904842624, ಪ್ರಸಾದ ಎಸ್. 8317444793 ಸಂಪರ್ಕಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ.ಶ್ರೀ ನಾಥ ತಿಳಿಸಿದ್ದಾರೆ.

Read More

ಧಾರವಾಡ : ಅಭಿನಯ ಭಾರತಿ ಧಾರವಾಡ ಆಯೋಜಿಸಿದ ‘ಬೇಂದ್ರೆಯವರ ಕನ್ನಡ ನಾಟಕಗಳು’ ವಿಷಯದ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 30 ಜನವರಿ 2025ರಂದು ನಡೆಯಿತು. ಹಿರಿಯ ಪ್ರಾಧ್ಯಾಪಕ ಸಂಶೋಧಕ ಹಾಗೂ ಕನ್ನಡ ಸಾಹಿತ್ಯ ಪರಿಚಾರಕ ದಿ. ಡಾ. ವೃಷಭೇಂದ್ರ ಸ್ವಾಮಿ ಇವರ ಸ್ಮರಣಾರ್ಥ ಅವರ ಪುತ್ರ ಡಾ ಎಸ್. ಎಂ. ಶಿವಪ್ರಸಾದ್ ಅವರು ನೀಡಿದ ಕೊಡುಗೆಯ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಡಾ. ವಿನಾಯಕ ನಾಯಕ ಮಾತನಾಡಿ “ವರಕವಿ ಬೇಂದ್ರೆಯವರು ತಮ್ಮ ಅಪ್ರತಿಮ ಕಾವ್ಯ ಪ್ರತಿಭೆಯಿಂದ ಜನ ಮಾನಸದಲ್ಲಿ ಜಗದ ಕವಿ, ಯುಗದ ಕವಿ, ಎಂದು ಕರೆಸಿಕೊಂಡಿದ್ದರೂ. ಸಾಹಿತ್ಯದ ಇತರ ಪ್ರಕಾರಗಳಾದ ಕಥೆ, ಹರಟೆ, ಲಲಿತ ಪ್ರಬಂಧ ಹಾಗೂ ನಾಟಕಗಳಲ್ಲೂ ಅವರು ತಮ್ಮ ಅಗಾಧ ಜೀವನ ಪ್ರಜ್ಞೆ ಹಾಗೂ ವ್ಯಂಗ್ಯ ನಡೆನುಡಿಗಳಿಂದ ಅಸಾಮಾನ್ಯ ಕೃತಿಗಳನ್ನು ರಚಿಸಿ ಇಂದಿಗೂ ಪ್ರಸ್ತುತವೆನಿಸುವ ಸಾಮಾಜಿಕ ಚಿಂತನೆಗಳನ್ನು ಅಭಿವ್ಯಕ್ತಪಡಿಸಿದ್ದಾರೆ. ರಂಗಭೂಮಿ ಜೀವನದ ಪ್ರತಿಬಿಂಬವಾಗಿ, ಜೀವನ ದಾರಿ ತಪ್ಪಿದಾಗ ತಿದ್ದುವ ಕೆಲಸ ಮಾಡುತ್ತದೆ ಎಂದು…

Read More

ಉಡುಪಿ : ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿವಂಗತ ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಜಬ್ಬಾರ್ ಸಮೊ ಆಯ್ಕೆಯಾಗಿದ್ದಾರೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂಪಾಯಿ 25000/- ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ, ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 22 ಫೆಬ್ರವರಿ 2025ರಂದು ನಡೆಯಲಿರುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ. 1963ರಲ್ಲಿ ಎಸ್. ಮೊಯ್ದಿನ್ ಕುಂಞ ಹಾಗೂ ಬೀಫಾತಿಮ ಅವರ ಮಗನಾಗಿ ಸಂಪಾಜೆಯಲ್ಲಿ ಎಸ್. ಎಂ. ಜಬ್ಬಾರ್ ಅವರು ಜನಿಸಿದರು. ಬಾಲ್ಯದಲ್ಲಿಯೇ ಕತೆ ಓದುವುದು, ಕೇಳುವುದರ ಜೊತೆಗೆ ಯಕ್ಷಗಾನ ಕಲೆಯೂ ಕರಗತವಾಯಿತು. ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ‘ಭಕ್ತ ಪ್ರಹ್ಲಾದ’ ಪ್ರಸಂಗದಲ್ಲಿ ದನುಜ ಗುರುವಿನ ವೇಷ ಹಾಕುವುದರೊಂದಿಗೆ ಆರಂಭವಾದ ಇವರ ಕಲಾಜೀವನ ಮುಂದೆ ದೇಶ, ವಿದೇಶಗಳಲ್ಲಿ ಪ್ರದರ್ಶನ ನೀಡುವ ಮಟ್ಟಿಗೆ ಬೆಳೆಯಿತು. ಇದರೊಂದಿಗೆ ಹಲವಾರು ಸಂಘ…

Read More

ಕಾಸರಗೋಡು : ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿರುವ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಡಾ. ವಾಮನ್ ರಾವ್ ಬೇಕಲ್ ಅವರ ಸ್ಥಾಪಕ ಸಂಚಾಲಕತ್ವದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಇದರ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭವು ದಿನಾಂಕ 02 ಫೆಬ್ರವರಿ 2025ರ ಭಾನುವಾರದಂದು ನಡೆಯಿತು. ಕನ್ನಡ ಪುಸ್ತಕ ಪ್ರಾಧಿಕಾರ ಕರ್ನಾಟಕ ಸರಕಾರ ಇದರ ಅಧ್ಯಕ್ಷರಾದ ಡಾ.ಮಾನಸ ಮೈಸೂರು ಇವರು ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ, ಕನ್ನಡ ಧ್ವಜವನ್ನು, ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷರಾದ ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ಅವರಿಗೆ ಹಸ್ತಾಂತರಿಸುವ ಮೂಲಕ ಪರಿಷತ್ತಿಗೆ ಚಾಲನೆ ನೀಡಿದರು. ಶಿಕ್ಷಣ ತಜ್ಞ ವಿ. ಬಿ. ಕುಳಮರ್ವ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕರಾಗಿ ಪತ್ರಕರ್ತ ಹಾಗೂ ಸಾಹಿತಿಗಳಾದ ಜಯಾನಂದ ಪೆರಾಜೆ ಹಾಗೂ ಶಿಕ್ಷಕಿ ಡಾ. ಶಾಂತ ಪುತ್ತೂರು ಇವರಿಗೆ ಅಧಿಕಾರ ಹಸ್ತಾಂತರ…

Read More

ಮೂಲ್ಕಿ : ನಿಮ್ಮಲ್ಲಿರುವ ರಾಶಿ ರಾಶಿ ಪುಸ್ತಕಗಳನ್ನು ಓದುವವರಿಲ್ಲವೆ ? ನಿಮ್ಮ ಮನೆಯಲ್ಲಿ ಕನ್ನಡ ಸಾಹಿತ್ಯದ ಅಮೂಲ್ಯ ಕೃತಿಗಳು ಇವೆ, ಕಥಾ ಸಂಕಲನ, ಕಾದಂಬರಿಗಳಿವೆ, ಮಕ್ಕಳ ಪುಸ್ತಕಗಳಿವೆ. ಹಳೆಯ ಮಾಸಪತ್ರಿಕೆಗಳಿವೆ. ಆದರೆ ಓದುವವರಿಲ್ಲ. ಗುಜರಿಗೆ ಹಾಕಲು ಮನಸ್ಸೊಪ್ಪುತ್ತಿಲ್ಲ. ಅರ್ಹರ ಕೈಗೆ ಈ ಪುಸ್ತಕಗಳು ಸಿಕ್ಕರೆ ಸಮಾಧಾನ… ಇಂತಹ ಮನಸ್ಥಿತಿಯಲ್ಲಿದ್ದೀರಾ.. ದಿನಾಂಕ 08 ಫೆಬ್ರವರಿ 2025ರಂದು ನಡೆಯಲಿರುವ ಮೂಲ್ಕಿ ತಾಲೂಕು 2ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ, ಓದುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಬೇಕೆಂಬ ಸಂಕಲ್ಪ ನಮ್ಮದು. ಸಾಹಿತ್ಯಾಸಕ್ತರಿಗೆ ಪುಸ್ತಕಗಳನ್ನು ನಾವು ಹಂಚುತ್ತೇವೆ. ನಿಮ್ಮ ಹೆಸರು ಬರೆದು, ನಿಮ್ಮಲ್ಲಿರುವ ಸಾಹಿತ್ಯ ಪುಸ್ತಕಗಳನ್ನು, ಮಕ್ಕಳ ಪುಸ್ತಕಗಳನ್ನು ನಮಗೆ ಕೊಡಿ ಅಥವಾ ಸಮ್ಮೇಳನದಲ್ಲಿ ನೀವೇ ಆಸಕ್ತರಿಗೆ ಹಂಚರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 9845362763.

Read More

ಮೂರ್ನಾಡು : ಮೂರ್ನಾಡಿನ ಅಪ್ತಮಿತ್ರರು ಬಳಗದ ನೇವಾರ್ಥವಾಗಿ ದಿನಾಂಕ 08 ಫೆಬ್ರವರಿ 2025ರಂದು ಮೂರ್ನಾಡಿನಲ್ಲಿ ‘ಸಾಕೇತ ಸಾಮ್ರಾಜ್ಞೆ’ ಎಂಬ ಯಕ್ಷಗಾನ ಪ್ರದರ್ಶನವು ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಮತ್ತು ಶಾಲಾ ಮೈದಾನದಲ್ಲಿ ಸಂಜೆ 6-00 ಗಂಟೆಗೆ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ನಡೆಯಲಿದೆ. ಎರಡನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಕಲ್ಲಡ್ಕ ಚಿನ್ಮಯ ಭಟ್ ಚಂಡೆ ಮತ್ತು ಮದ್ದಳೆ ಕಲಾವಿದರಾಗಿ ದೇಲಂತಮಜಲು ಸುಬ್ರಮಣ್ಯ ಭಟ್, ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಟ್ಲ, ಕೌಶಲ್ ರಾವ್ ಪುತ್ತಿಗೆ ಪಾಲ್ಗೊಳ್ಳಲಿದ್ದಾರೆ. ಹಾಸ್ಯ ಕಲಾವಿದರಾಗಿ ಸೀತಾರಾಮ ಕುಮಾರ್ ಕಟೀಲ್, ಮೋಹನ್ ಮುಚ್ಚುರ್, ಸ್ತ್ರೀ ವೇಷದಲ್ಲಿ ಸಂತೋಷ್ ಕುಮಾರ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ, ಸತೀಶ್ ನೀರ್ಕರೆ, ಮಹೇಶ್ ಎಡನೀರು ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ವಾಸುದೇವ ರಂಗ ಭಟ್ ಮಧೂರು, ಸದಾಶಿವ ಕುಲಾಲ್ ವೇಣೂರು, ಪ್ರಸಾದ್ ಸವಣೂರು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ದಿವಾಕರ ರೈ ಸಂಪಾಜೆ, ಶಿವರಾಜ್ ಬಜಕೂಡ್ಲು, ಸಿದ್ಧಕಟ್ಟೆ…

Read More

ಮಂಗಳೂರು : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ‘ನಲ್ವತ್ತರ ನಲಿವು -5’ ಪ್ರಯುಕ್ತ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ಸಾದರ ಪಡಿಸುವ ‘ಚಾರುವಸಂತ’ ನಾಟಕ ಪ್ರದರ್ಶನವು ದಿನಾಂಕ 08 ಫೆಬ್ರವರಿ 2025ರಂದು ಸಂಜೆ 6-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಡೋಜ ಹಂಪನಾ ವಿರಚಿತ ಈ ದೇಸೀ ಕಾವ್ಯಕ್ಕೆ ಡಾ. ಜೀವನ್ ರಾಮ್ ಸುಳ್ಯ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಡಾ. ನಾ. ದಾಮೋದರ ಶೆಟ್ಟಿಯವರು ರಂಗರೂಪ ನೀಡಿರುತ್ತಾರೆ.

Read More

ಮಂಗಳೂರು : ತುಳುಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬ’ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 09 ಮಾರ್ಚ್ 2025ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಖಾವಂದರಾದ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದಲ್ಲಿ ದಿನಾಂಕ 03 ಜನವರಿ 2025ರಂದು  ಬಿಡುಗಡೆಗೊಳಿಸಿದರು. ತುಳುಕೂಟ (ರಿ.) ಕುಡ್ಲದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ, ಉಪಾಧ್ಯಕ್ಷ ಜೆ.ವಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ, ನಾಗೇಶ ದೇವಾಡಿಗ ಕದ್ರಿ, ನಾರಾಯಣ ಬಿ.ಡಿ., ವಿಶ್ವನಾಥ ಸೋಣಳಿಕೆ, ಜಗದೀಶ್ ಬೆಂಗಳೂರು ಹಾಗೂ ಕೂಟದ ಸದಸ್ಯರು ಉಪಸ್ಥಿತರಿದ್ದರು.

Read More

ದೆಹಲಿ : ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ “ಭಾರತ್ ಪರ್ವ” ಉತ್ಸವದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನವು ದಿನಾಂಕ 31 ಜನವರಿ 2025 ರಂದು ನಡೆಯಿತು. ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ನಡೆದ ಈ ಪ್ರದರ್ಶನದಲ್ಲಿ ಕೋಟ ಸುದರ್ಶನ ಉರಾಳ್, ಪ್ರಿಯಾಂಕ ಕೆ. ಮೋಹನ್, ಶ್ರೀರಾಮ್ ಹೆಬ್ಬಾರ್, ಶ್ರೀವತ್ಸ ಅಡಿಗ, ಶಿಲ್ಪಾ ಅರುಣ್, ಶಿಲ್ಪಾ ಆನಂದ್ ಮತ್ತು ಉಷಾ ಅಮೈರಾ ಭಾಗವಹಿಸಿದರು.

Read More

ಪುತ್ತೂರು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಕೇಂದ್ರ, ಯಕ್ಷರಂಜಿನಿ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ‘ಯಕ್ಷಗಾನ ಪ್ರಸಂಗ : ಸ್ವರೂಪ, ವಿಕಾಸ ಮತ್ತು ಅನನ್ಯತೆ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ದಿನಾಂಕ 31 ಜನವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಂಗಗಳ ಕಾವ್ಯಾಂಶದ ಕುರಿತು ಮಾತನಾಡಿದ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ “ಯಕ್ಷಗಾನದ ಹುಟ್ಟು ಅಸ್ಪಷ್ಟ. ಆದರೆ ಬೆಳವಣಿಗೆಯ ಸಂದರ್ಭದಲ್ಲಿ ಪಾರ್ತಿಸುಬ್ಬ ದೇವಿದಾಸರಿಂದ ತೊಡಗಿ ಅಗರಿ, ಬಲಿಪ, ಅಮೃತ ಸೋಮೇಶ್ವರ, ಪುರುಷೋತ್ತಮ ಪೂಂಜ ಹೀಗೆ ಸಾವಿರಾರು ಕವಿಗಳು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನ ಪ್ರಸಂಗಗಳನ್ನು ವಿಮರ್ಶಕರು‌ ಕಾವ್ಯ ಪ್ರಕಾರವೆಂದು ಪರಿಗಣಿಸುತ್ತಿಲ್ಲ. ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲೂ ಕವಿಗಳ ಹೆಸರನ್ನು ಹೇಳುವುದಿಲ್ಲ. ಈ ನಿರ್ಲಕ್ಷ್ಯ ಸರಿಯಲ್ಲ”…

Read More