Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಎಲ್.ಸಿ.ಆರ್ು.ಐ. ಸಭಾಂಗಣದ ‘ಅಗರಿ ಶ್ರೀನಿವಾಸ ಭಾಗವತ ವೇದಿಕೆ’ಯಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ 17ನೇ ವಾರ್ಷಿಕೋತ್ಸವ ಮತ್ತು ವಿಶ್ವನಾಥ ಶೆಣೈ ಉಡುಪಿ ಪ್ರಾಯೋಜಿತ ರಂಗ ಭಾಸ್ಕರ 2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 07 ಜುಲೈ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಜನಪದ ವಿದ್ವಾಂಸ ಡಾ. ಬಿ.ಎ. ವಿವೇಕ ರೈ “ರಂಗಶಿಕ್ಷಣದ ಔನ್ನತ್ಯ ಹಾಗೂ ಪ್ರಸ್ತುತತೆ ಪ್ರಮುಖವಾದುದು. ನಮ್ಮ ಕಲ್ಪನೆಗಳಿಗೆ ರೆಕ್ಕೆ ಕೊಡುವ ಕೆಲಸವನ್ನು ರಂಗಭೂಮಿ ಮಾಡುತ್ತದೆ” ಎಂದು ಹೇಳಿದರು. ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಯ ಸ್ಥಾಪಕ ಸದಸ್ಯ ದಿ. ಭಾಸ್ಕರ ನೆಲ್ಲಿತೀರ್ಥ ಸ್ಮರಣಾರ್ಥ ನೀಡುವ ‘ರಂಗ ಭಾಸ್ಕರ ಪ್ರಶಸ್ತಿ’ಯನ್ನು ಹಿರಿಯ ರಂಗ ನಟ, ನಿರ್ದೇಶಕ ಹಾಗೂ ಚಲನಚಿತ್ರ ನಟ ಲಕ್ಷಣ ಕುಮಾರ್ ಮಲ್ಲೂರು ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಕಲಾ ಸಂಘಟಕ ಕರ್ಮಯೋಗಿ ಡಾ. ಹರಿಕೃಷ್ಣ ಪುನರೂರು, ಹಿರಿಯ ರಂಗ ನಿರ್ದೇಶಕ ವಿಜಯ…
ಬೆಂಗಳೂರು : ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಇವರ ಜಂಟಿ ಸಹಯೋಗದೊಂದಿಗೆ ಆಯೋಜಿಸುತ್ತಿರುವ ‘ಬೆಂಗಳೂರು ಕಿರುನಾಟಕೋತ್ಸವ’ದ ಅಂತಿಮ ಹಂತದ ಸ್ಪರ್ಧೆಯು ದಿನಾಂಕ 12 ಜುಲೈ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಯಲಿದೆ. ಅಂತಿಮ ಹಂತದ ಸ್ಪರ್ಧೆಗೆ ಆರು ನಾಟಕಗಳು ಆಯ್ಕೆಯಾಗಿದ್ದು, ರಿ-ವ್ಯೂ ಥಿಯೇಟರ್ ಕಲೆಕ್ಟೀವ್ ತಂಡದಿಂದ ‘ವಿಧುರ’, ವೀಕೆಂಡ್ ಥಿಯೇಟರ್ ಆನೇಕಲ್ ತಂಡದಿಂದ ‘3/4’, ದೃಶ್ಯ ಕಾವ್ಯ ತಂಡದಿಂದ ‘ನೀಲಿ–ನೀರು’, ಖಾಲಿರಂಗ ತಂಡದಿಂದ ‘ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ’, ವಿಜಯನಗರದ ಸ.ಪ್ರ.ದ. ಕಾಲೇಜಿನ ರಂಗ ಚಿರಂತನ ತಂಡದಿಂದ ‘ಅಕ್ಕ’ ಮತ್ತು ಸ್ಪಷ್ಟ ಥಿಯೇಟರ್ ತಂಡದಿಂದ ‘ಪಲ್ಸ್’ ನಾಟಕಗಳು ಪ್ರದರ್ಶನಗೊಳ್ಳಲಿದೆ.
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಮತ್ತು ಹೋಬಳಿ ಘಟಕ ಇದರ ವತಿಯಿಂದ ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಗ್ರಂಥಾಲಯ ಸಲಹಾ ಸಮಿತಿ ಗ್ರಾಮ ಪಂಚಾಯತ್ ಕೊಯ್ಯೂರು ಮತ್ತು ಸರಕಾರಿ ಪ್ರೌಢ ಶಾಲೆ ಕೊಯ್ಯೂರು ಇವರ ಸಹಭಾಗಿತ್ವದಲ್ಲಿ ‘ಸಾಹಿತ್ಯ ಸಂಘ ಉದ್ಘಾಟನೆ ಮತ್ತು ಓದುವ ಸಂಸ್ಕೃತಿ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 10 ಜುಲೈ 2025ರಂದು ಮಧ್ಯಾಹ್ನ 2-00 ಗಂಟೆಗೆ ಕೊಯ್ಯೂರು ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರು ಸಾಹಿತ್ಯ ಸಂಘ ಉದ್ಘಾಟನೆ ಮಾಡಲಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಯಾಮಣಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ಡಿ. ಯದುಪತಿ ಗೌಡ ಇವರು ಉಪನ್ಯಾಸ ನೀಡಲಿದ್ದು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಪ್ರಕಾಶ್ ಎಸ್.…
ಸುನಂದಾ ಬೆಳಗಾಂವಕರರ ‘ನಾಸು’ ಮತ್ತು ‘ಝವಾದಿ’ ಧಾರವಾಡದ ಬ್ರಾಹ್ಮಣ ಸಮುದಾಯದ ಬದುಕಿನ ಅನುಭವಗಳನ್ನು ಕಟ್ಟಿಕೊಟ್ಟರೆ ‘ಕಾಯಕ ಕೈಲಾಸ’ವು ಧಾರವಾಡ ಭಾಗದ ಲಿಂಗಾಯತ ಸಮುದಾಯದ ಕುಟುಂಬವೊಂದರ ಮೂರು ಪೀಳಿಗೆಗಳ ಬದುಕಿನ ಚಿತ್ರಣವನ್ನು ನೀಡುತ್ತದೆ. ಅವರ ಬದುಕನ್ನು ಸೂಕ್ಷ್ಮಾತಿಸೂಕ್ಷ್ಮ ನೆಲೆಯಲ್ಲಿ ದಟ್ಟವಾಗಿ ಸೆರೆ ಹಿಡಿಯುವ ವಿವರಗಳು ಬದುಕಿನ ವಿನ್ಯಾಸದ ನೇಯ್ಗೆಯಾಗಿ ಹೆಣೆದುಕೊಂಡಿವೆ. ಪಾಶ್ವಾತ್ಯ ವಾಸ್ತವವಾದಿ ಮಾದರಿಯನ್ನು ಹಿಂಬಾಲಿಸದೆ ಪ್ರಾದೇಶಿಕ ಕಥನದ ಮಾದರಿಯನ್ನು ಮುಂದಿಡುವ ನಿರೂಪಣ ವಿಧಾನವು ಸರಳ ರೇಖಾತ್ಮಕವಾಗಿ ಮುನ್ನುಗ್ಗದೆ ಅಲೆಗಳಂತೆ ಸುತ್ತಲೂ ಹರಡಿಕೊಳ್ಳುತ್ತದೆ. ಗಂಗವ್ವನ ಹೆರಿಗೆಯೊಂದಿಗೆ ಆರಂಭವಾಗುವ ಕಾದಂಬರಿಯು ಮಗ ಹುಟ್ಟಿದ ಸಂಭ್ರಮ ಸಡಗರಗಳನ್ನು ದಾಖಲಿಸದೆ ಆಕೆಯ ನೋವಿಗೆ ದನಿಯಾಗುತ್ತದೆ. ಗಂಡ ಶಿವಲಿಂಗಪ್ಪನು ಆಕೆಯ ಒಡವೆಗಳನ್ನು ತನ್ನ ಗೆಳೆಯನಾದ ಎಡೆಯೂರಪ್ಪನಲ್ಲಿ ಅಡವಿರಿಸಿದ್ದಲ್ಲದೆ ಹೆಂಡತಿ ಮೂರು ತಿಂಗಳ ಬಸುರಿಯಾಗಿದ್ದಾಗ ಹೇಳದೆ ಕೇಳದೆ ಓಡಿಹೋಗಿರುತ್ತಾನೆ. ಅಂಥ ಆರ್ಥಿಕ ಸಂಕಷ್ಟದಲ್ಲಿ, ನಾಜೂಕಿನ ಪರಿಸ್ಥಿತಿಯಲ್ಲಿ ಆಕೆಯು ಏಕಾಂಗಿಯಾಗಿ ಕಳೆಯುತ್ತಿರುವಾಗ ಚಿಗವ್ವನ ಸಹಾಯದಿಂದ ಹೆರಿಗೆಯು ಸುಸೂತ್ರವಾಗಿ ನಡೆಯುತ್ತದೆ. ಕಷ್ಟಕಾಲದಲ್ಲಿ ದೇವರು ಮನುಷ್ಯ ರೂಪದಲ್ಲಿ ಸಹಾಯ ಮಾಡುತ್ತಾನೆ ಎಂಬ ನಂಬಿಕೆಯು ಇಲ್ಲಿನ…
ಕಾಸರಗೋಡು: ಕಲ್ಲಕಟ್ಟದ ಕೆ. ಜಿ. ಭಟ್ ಗ್ರಂಥಾಲಯದ ವತಿಯಿಂದ ವಾಚನಾ_ ಪಕ್ಷಾಚರಣೆ, ಕಯ್ಯಾರ ಕಿಞ್ಞಣ್ಣ ರೈ ಅವರ ಸಂಸ್ಮರಣೆ ಹಾಗೂ ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾಪಕ ಪ್ರೊ. ಎ.ಶ್ರೀ ನಾಥ್ ಇವರಿಗೆ ಅಭಿನಂದನಾ ಕಾರ್ಯಕ್ರಮವು ದಿನಾಂಕ 29 ಜೂನ್ 2025ರಂದು ಕಲ್ಲಕಟ್ಟ ಮದ್ದೂರರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಾತನಾಡಿ “ಗಡಿನಾಡ ಚೇತನ ಕಯ್ಯಾರ ಕಿಞ್ಞಣ್ಣ ರೈಗಳು ಬದುಕು ಬರಹಗಳ ಮೂಲಕ ನವ ಸಮಾಜ ನಿರ್ಮಿಸಿದವರು. ನವೋದಯ ಸಾಹಿತ್ಯದ ಆರಂಭ ಕಾಲದಲ್ಲಿ ಸಾಹಿತ್ಯ ವಲಯಕ್ಕೆ ಪ್ರವೇಶಿಸಿದ ಅವರ ಕಾವ್ಯ ಪರಂಪರೆ ಬಹುಮುಖಗಳೊಡನೆ ಕನ್ನಡ ನಾಡು ನುಡಿಗೆ ಅಮೂಲ್ಯ ಸಾಹಿತ್ಯ ರತ್ನಗಳನ್ನು ನೀಡುವಲ್ಲಿ ಸಾಫಲ್ಯಗೊಂಡಿತು. ಆದರ್ಶ ಜೀವನ ನಡೆಸಿದ್ದ ಕಯ್ಯಾರರು ಬದುಕಿನ ಕೊನೆವರೆಗೂ ಖಾದಿ ವಸ್ತ್ರಧಾರಿಗಳಾಗಿ ಮಹಾತ್ಮನ ಹಾದಿಯಲ್ಲಿ ನಡೆದವರು. ದಕ್ಷ ರಾಜಕಾರಣಿಯಾಗಿಯೂ ಗಮನ ಸೆಳೆದಿದ್ದರು. ಅಧ್ಯಾಪನ, ಮಾಧ್ಯಮ, ಕೃಷಿ, ಸಂಶೋಧನೆ ಸಹಿತ ವಿವಿಧ ರಂಗಗಳಲ್ಲಿ ಅವರು…
ಮಡಿಕೇರಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸರ್ಕಾರದ ಯೋಜನೆ ಹಾಗೂ ಸಾಧನೆ ಕುರಿತು ಬೀದಿ ನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಬೀದಿನಾಟಕ, ಜಾನಪದ ಸಂಗೀತ ಕಲಾ ತಂಡ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 19 ಜುಲೈ 2025 ಕೊನೆಯ ದಿನಾಂಕವಾಗಿದೆ. ಜಿಲ್ಲೆಯಿಂದ 3 ಬೀದಿನಾಟಕ ಹಾಗೂ 3 ಜಾನಪದ ಸಂಗೀತ ಕಲಾ ತಂಡ ಆಯ್ಕೆ ಮಾಡಲಾಗುವುದು. ಪ್ರತಿ ಬೀದಿನಾಟಕ ತಂಡದಲ್ಲಿ 8 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರು ಇರಬೇಕು. ಪ್ರತಿ ಜಾನಪದ ಸಂಗೀತ ಕಲಾ ತಂಡದಲ್ಲಿ 3 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಒಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರಿರಬೇಕು. ಈ ಹಿಂದೆ ಸರ್ಕಾರದ ವಿವಿಧ ಇಲಾಖೆಗಳ ಬೀದಿ ನಾಟಕ ಹಾಗೂ ಜಾನಪದ…
ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ನಡೆಯುವ ಇಪತ್ತೊಂದನೇ ವರ್ಷದ ತಾಳಮದ್ದಳೆ ಸಪ್ತಾಹ ‘ಪಾಂಡವಾನಾಂ ಧನಂಜಯಃ’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 07 ಜುಲೈ 2025ರ ಸೋಮವಾರದಂದು ಕಟೀಲಿನ ಸರಸ್ವತಿ ಸದನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಟೀಲು ದೇವಳದ ಅರ್ಚಕ ವೆಂಕಟರಮಣ ಆಸ್ರಣ್ಣ ಮಾತನಾಡಿ “ಕಟೀಲು ತಾಳಮದ್ದಳೆ ಸಪ್ತಾಹ ಪ್ರತಿ ವರ್ಷ ನಡೆಯುತ್ತಿದ್ದು, ಕಲಾಭಿಮಾನಿಗಳು ಹಾಗೂ ಭಕ್ತರು ಸಹಕಾರ ನೀಡುತ್ತ ಕಲೆಯನ್ನು ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ” ಎಂದು ಹೇಳಿದರು. ಕಟೀಲು ದೇವಳದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಈಶ್ವರ್ ಕಟೀಲು, ಲೋಕಯ್ಯ ಸಾಲಿಯಾನ್, ಯಕ್ಷಗಾನ ಕಲಾಪೋಷಕ ಪದ್ಮನಾಭ ಕಟೀಲು, ವಾಸುದೇವ ಆಚಾರ್ಯ ಕಿನ್ನಿಗೋಳಿ, ದಿನೇಶ್ ಶೆಟ್ಟಿ ಅಜಾರ್, ತಿಮ್ಮಪ್ಪ ಕೋಟ್ಯಾನ್, ಆದರ್ಶ್ ಶೆಟ್ಟಿ ಎಕ್ಕಾರು, ಕಿನ್ನಿಗೋಳಿ ರಾಮಮಂದಿರದ ರಾಜೇಶ್ ನಾಯಕ್, ಯಕ್ಷಧರ್ಮಬೋಧಿನೀ ಟ್ರಸ್ಟ್ ಇದರ ರವಿರಾಜ್ ಆಚಾರ್ಯ ಬಜಪೆ, ಪ್ರಭಾಕರ್ ರಾವ್ ದೊಡ್ಡಯ್ಯ ಮೂಲ್ಯ ಉಪಸ್ಥಿತರಿದ್ದರು. ವಾಸುದೇವ ಶಣೈ ನಿರೂಪಿಸಿದರು. ನಂತರ ಖ್ಯಾತ ಕಲಾವಿದರಿಂದ ಶರಸೇತು ಯತಿಪೂಜೆ ತಾಳಮದ್ದಳೆ…
ಮಹಾನ್ ವಿದ್ವಾಂಸ, ಶಿಕ್ಷಣ ತಜ್ಞ, ಸಾಹಿತಿ, ಶಿಕ್ಷಕ, ಪ್ರೊಫೆಸರ್ ಸೇತುರಾಮ ರಾಘವೇಂದ್ರ ಮಳಗಿಯವರು ಎಸ್. ಆರ್. ಮಳಗಿ ಎಂದೇ ಪ್ರಸಿದ್ಧರು. ಶಿಕ್ಷಕರಾಗಿದ್ದರೂ ಶಾಲೆಯ ಪಾಠಕ್ಕೆ ಮಾತ್ರ ಸೀಮಿತವಾಗಿರದೆ, ವಿದ್ಯಾರ್ಥಿಗಳನ್ನು ಬುದ್ದಿ ಹೇಳಿ, ತಿದ್ದಿ, ಯೋಗ್ಯ ಪ್ರಜೆಗಳನ್ನಾಗಿ ಮಾಡುವುದರೊಂದಿಗೆ ಕನ್ನಡ ನಾಡು – ನುಡಿಗಾಗಿ ಶ್ರಮಿಸಿದ ಇವರು ಜನಸಾಮಾನ್ಯರ ಪ್ರೀತಿ ಗೌರವಕ್ಕೆ ಪಾತ್ರರಾಗಿ ಖ್ಯಾತರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿ, ಗಿರೀಶ್ ಕಾರ್ನಾಡ್ , ಚಂದ್ರಶೇಖರ ಪಾಟೀಲ, ಚನ್ನವೀರ ಕಣವಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಪಾಟೀಲ ಪುಟ್ಟಪ್ಪ, ಸು. ರಂ. ಎಕ್ಕುಂಡಿ, ಬರಗೂರು ರಾಮಚಂದ್ರಪ್ಪ, ಗಿರಡ್ಡಿ ಗೋವಿಂದರಾಜ ಮುಂತಾದ ಅಪೂರ್ವ ಶಿಷ್ಯ ವೃಂದವನ್ನು ನಾಡಿಗೆ ನೀಡಿದವರು ಮಳಗಿಯವರು. ಈ ಶಿಷ್ಯ ಸಂತತಿಯಲ್ಲಿ ಅನೇಕರು ಪ್ರಸಿದ್ಧ ಅಧ್ಯಾಪಕರಾಗಿ ಹೆಸರುವಾಸಿಯಾಗಿದ್ದಾರೆ. ಆದ್ದರಿಂದಲೇ “ಮೇಷ್ಟ್ರುಗಳ ಮೇಷ್ಟ್ರು” ಎಂಬ ವಿಶೇಷಣ ಮಳಗಿಯವರಿಗೆ ಚೆನ್ನಾಗಿ ಒಪ್ಪುತ್ತದೆ. ಆಚಾರ್ಯ ಮನೆತನದ ಮೊಳಗಿಯವರು ಬಿಜಾಪುರ ಜಿಲ್ಲೆಯ, ಬಾದಾಮಿ ತಾಲೂಕಿನ, ಖ್ಯಾಡ ಗ್ರಾಮದಲ್ಲಿ 8 ಜುಲೈ 1910 ರಂದು ಜನಿಸಿದರು. ಹೊಳೆ ಆಲೂರು, ಗದಗ, ಧಾರವಾಡದಲ್ಲಿ…
ಮಂಗಳೂರು : ಭರತಾಂಜಲಿ (ರಿ) ಕೊಟ್ಟಾರ ಮಂಗಳೂರು ಇದರ ಕಿಂಕಿಣಿ ತ್ರಿoಶತ್ ಸಂಭ್ರಮದಲ್ಲಿ ಆಯೋಜಿಸಿದ ‘ನೃತ್ಯಾಮೃತಂ 2೦25’ ಕಾರ್ಯಕ್ರಮ ದಿನಾಂಕ 06 ಜುಲೈ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಯತಿವರೇಣ್ಯರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು “ಬಾಲ್ಯದಲ್ಲಿ ಮಕ್ಕಳಲ್ಲಿ ಕಲಾಭಿವೃದ್ಧಿ ಬೆಳೆಸಬೇಕು ಅದು ಹೆಮ್ಮರವಾಗಿ ಬೆಳೆದು ಬಾಳಿಗೆ, ಕುಟುಂಬಕ್ಕೆ ಹಾಗೂ ಸಮಾಜಕ್ಕೆ ದಾರಿದೀಪವಾಗಬಲ್ಲದು. ಋಷಿಮುನಿಗಳು ಧಾರ್ಮಿಕ ಮಹತ್ವಗಳ ಜೊತೆಗೆ ಮನುಷ್ಯನ ಮಾನಸಿಕ ಅಭಿವೃದ್ಧಿಗೆ ಕೊಟ್ಟಂತಹ ದೊಡ್ಡ ಕೊಡುಗೆ ಈ ನೃತ್ಯ ಕಲೆ, ಭರತಾಂಜಲಿ ಸಂಸ್ಥೆಯು ಕಳೆದ 30 ವರ್ಷಗಳಲ್ಲಿ ಸಮಾಜಮುಖಿ ಚಿಂತನೆಗಳೊಂದಿಗೆ ಕಲಾ ಸೇವೆ ಮಾಡುತ್ತಿರುವುದು ಅಭಿನಂದನೀಯ” ಎಂದು ಹರಸಿದರು. ನಟರಾಜನಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಮಾತನಾಡಿ “ಶಾಸ್ತ್ರೀಯ ಚೌಕಟ್ಟನ್ನು ಸರಳಗೊಳಿಸದೆ ಅದರೊಳಗೆ ಹೊಸತನವನ್ನು ಅಳವಡಿಸಿ ಕೊಂಡಾಗ ಪರಂಪರೆ ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಭರತಾಂಜಲಿಯ ತನ್ನ ಶಿಷ್ಯರಾದ…
ದಾವಣಗೆರೆ : ಮಾನವ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ಕಲಾ ಬಂಧುತ್ವ ವೇದಿಕೆ ದಾವಣಗೆರೆಯ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ನಡೆಯಲಿರುವ ಬೀದಿ ನಾಟಕ ಹಾಗೂ ಜನಪದ ಹಾಡುಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ದಿನಾಂಕ 07 ಜುಲೈ 2025ರಂದು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಬೆಳಿಗ್ಗೆ ಘಂಟೆ 10:00ಕ್ಕೆ ನಡೆಯಿತು. ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬೀದಿ ನಾಟಕ ಹಾಗೂ ಜನಪದ ಗೀತೆಗಳ ಗೀತೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಡಿ. ವೈ. ಎಸ್. ಪಿ. ರವಿ ನಾರಾಯಣ್ ಮಾತನಾಡಿ “ಕಲಾತಂಡಗಳು ಉತ್ತಮ ಪ್ರದರ್ಶನ ನೀಡಲಿ. ಇದರಿಂದ ಸಮಾಜದ ಸಕಾರಾತ್ಮಕ ಬೆಳವಣಿಗೆಗೆ ಉತ್ತಮ ಸಂದೇಶ ನೀಡಲು ಸಹಕಾರಿಯಾಗಲಿದೆ” ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ರಾಮಚಂದ್ರಪ್ಪ ಮಾತನಾಡಿ “ಮಾನವ ಬಂಧು ವೇದಿಕೆಯಿಂದ ಪ್ರತಿ ಜಿಲ್ಲೆಗೊಂದರಂತೆ ಜಿಲ್ಲೆಯ ಬೇರೆ ಭಾಗಗಳಲ್ಲಿ ಬೀದಿ ನಾಟಕ ಮತ್ತು ಜನಪದ ಗೀತೆಗಳ ಪ್ರದರ್ಶನ ನೀಡಲು ಕಲಾಬಂಧುತ್ವ ವೇದಿಕೆಯ ಆಶ್ರಯದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದ್ದು,…