Subscribe to Updates
Get the latest creative news from FooBar about art, design and business.
Author: roovari
ಮೈಸೂರು : ಸಮಾಜವಾದಿ ಅಧ್ಯಯನ ಕೇಂದ್ರ ಟಸ್ಟ್ (ರಿ), ಮೈಸೂರು ಆಯೋಜಿಸುವ ಲೇಖಕ ಪ್ರಸನ್ನ ಇವರ ‘ಆಕ್ಟಿಂಗ್ ಅಂಡ್ ಬಿಯಾಂಡ್’ ಪುಸ್ತಕ ಲೋಕಾರ್ಪಣೆ ಮತ್ತು ಚರ್ಚಾ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರ ಭಾನುವಾರ ಸಂಜೆ ಘಂಟೆ 5.00ಕ್ಕೆ ಮೈಸೂರಿನ ಜೆ. ಎಲ್. ಬಿ. ರಸ್ತೆಯಲ್ಲಿರುವ ಹಾರ್ಡ್ರಿಕ್ ಶಾಲೆ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಇಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೈಸೂರಿನ L&T ಟೆಕ್ನಾಲಜಿ ಸರ್ವಿಸಸ್ ಸಂಸ್ಥೆಯ ಡೆಲಿವರಿ ಮುಖ್ಯಸ್ಥ ಹಾಗೂ ಲೇಖಕರಾದ ಶಶಿಧರ ಡೋಂಗ್ರೆ, ಮೈಸೂರಿನ ಲೇಖಕರಾದ ಪ್ರೀತಿ ನಾಗರಾಜ್ ಹಾಗೂ ಲೇಖಕರು ಮತ್ತು ಖ್ಯಾತ ರಂಗ ನಿರ್ದೇಶಕರಾದ ಪ್ರಸನ್ನ ಭಾಗವಹಿಸಲಿದ್ದಾರೆ.
ಬೇಲೂರಿನ ನಾಟ್ಯ ಶಿಲ್ಪದ ರೂವಾರಿಯಾದ ಜಕ್ಕಣಾಚಾರಿಯಷ್ಟೇ ಅವಕ್ಕೆ ರಾಜಪೋಷಣೆ ಒದಗಿಸುವುದರೊಂದಿಗೆ ಸ್ವತಃ ರೂಪದರ್ಶಿಯೂ ಆಗಿದ್ದ ರಾಣಿ ಶಾಂತಲೆಯೂ ಜನಪದದಲ್ಲಿ ಸುಖ್ಯಾತಳು. ಈಕೆ ಹೊಯ್ಸಳೇಶ್ವರ ವಿಷ್ಣುವರ್ಧನನ ಪಟ್ಟಮಹಿಷಿ. ಇವಳ ಕುರಿತು ಹಲವು ಸಾಹಿತ್ಯ ಕಥನಗಳೂ (ಕೆವಿ ಅಯ್ಯರ್, ಸಿ. ಕೆ. ನಾಗರಾಜರಾವ್, ಮನ ಮೂರ್ತಿ…), ನಾಟಕ, ಸಿನಿಮಾಗಳೂ ಬಂದಿವೆ. ನಾನು ತಿಳಿದಂತೆ, ಅಲ್ಲೆಲ್ಲ ಶಾಂತಲೆಯ ಜೀವನ ಮತ್ತು ಸಾಧನೆಗಳಿಗೆ ಅನಿವಾರ್ಯವಾಗಿ ಸಾಹಿತ್ಯದ ಹೊರೆಯನ್ನು ಸಂಘರ್ಷದ ಬಿಸಿಯನ್ನು ತುಸು ಹೆಚ್ಚೇ ಸೇರಿಸಿದ್ದಾರೆ. ಆದರೆ ಆಕೆಯ ಪ್ರಧಾನ ಶಕ್ತಿಯಾದ ನೃತ್ಯ ಮೆರೆಯುವುದರೊಡನೆ, ಸಂವಹನಶೀಲತೆ ಕುಗ್ಗದಂತೆ ನಾಟಕೀಯತೆಯನ್ನು ಬೆಸೆದು ಮೂಡಿದ ಏಕವ್ಯಕ್ತಿ ಪ್ರಯೋಗ – ‘ಹೆಜ್ಜೆಗೊಲಿದ ಬೆಳಕು’. ಅರೆಹೊಳೆ-ಕಲಾಭೀ ಪಂಚ ದಿನ ನಾಟಕೋತ್ಸವದ ಕೊನೆಯ ದಿನಕ್ಕಿದನ್ನು (೩೧-೩-೨೫), ವಿದುಷಿ ಸಂಸ್ಕೃತಿ ಪ್ರಭಾಕರ್ ಕೇಂದ್ರವಾಗಿರುವ ಉಡುಪಿಯ ಪ್ರಜ್ಞಾನಂ ಟ್ರಸ್ಟ್ ಪ್ರಸ್ತುತಪಡಿಸಿತು. ಸುಧಾ ಆಡುಕಳ ರಂಗ ಪಠ್ಯವನ್ನೂ ಗಣೇಶ್ ರಾವ್ ಎಲ್ಲೂರು ರಂಗ ವಿನ್ಯಾಸ, ಸಂಗೀತ ಮತ್ತು ಬೆಳಕಿನೊಡನೆ ನಿರ್ದೇಶನವನ್ನೂ ಸಮರ್ಥವಾಗಿ ನಡ್ಡೆಸಿದ್ದಕ್ಕೆ ‘ಹೆಜ್ಜೆಗೊಲಿದ ಬೆಳಕು’, ನಮ್ಮೆಲ್ಲರ ಮನದುಂಬಿ ಹರಿಯಿತು.…
ಮಂಗಳೂರು: ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರು ಮಂಗಳೂರಿನ ಕೊಡಿಯಾಲಗುತ್ತು ಸಂಸ್ಕೃತಿ ಕೇಂದ್ರದಲ್ಲಿ (ಇಂಟ್ಯಾಕ್) ಭರತನಾಟ್ಯದ ಆಂಗಿಕದ ಚಾರಿಗೆ ಸಂಬಂಧಿಸಿದ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯೊಂದನ್ನು ದಿನಾಂಕ 04 ಏಪ್ರಿಲ್ 2025ರ ಶುಕ್ರವಾರ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರಿನ ಹಿರಿಯ ಉದ್ಯಮಿ ಎಂ. ಮುರಳೀಧರ ಶೆಟ್ಟಿ ಮಾತನಾಡಿ “ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆ ಹೊಂದಿರುವ ಭರತನಾಟ್ಯವು ಹಾಡು, ವೇಷಭೂಷಣ, ನರ್ತನ, ಅಭಿನಯ ಮುಂತಾದ ಎಲ್ಲ ಅಂಗಗಳನ್ನೂ ಹೊಂದಿರುವ ಒಂದು ಪರಿಪೂರ್ಣ ಕಲೆ. ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಭರತನಾಟ್ಯವು ಎತ್ತಿ ಹಿಡಿಯುತ್ತದೆ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸುಮಾರು ಐವತ್ತು ವರ್ಷಗಳ ಹಿಂದೆ ಕರಾವಳಿ ಜಿಲ್ಲೆಗಳಲ್ಲಿ ಅಷ್ಟೊಂದು ಪ್ರಚಾರದಲ್ಲಿ ಇರದಿದ್ದ ಭರತನಾಟ್ಯವು ಇಂದು ಪ್ರಸಿದ್ಧಿ ಗಳಿಸಿರುವುದು ಸಂತೋಷದ ವಿಷಯ. ಈ ಶ್ರೀಮಂತ ಕಲೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹೇಳಿದರು. ಇನ್ನೋರ್ವ ಮುಖ್ಯ…
ಮೈಸೂರು : ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ.), ರಂಗಾಯಣ ಮೈಸೂರು ಸಹಯೋಗದೊಂದಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಸಹಕಾರದೊಂದಿಗೆ ಮೈಸೂರಿನಲ್ಲಿ ದಿನಾಂಕ 22 ಮಾರ್ಚ್ 2025ರಿಂದ 27 ಮಾರ್ಚ್ 2025ರವರೆಗೆ ‘ವಿಶ್ವ ರಂಗ ಸಂಭ್ರಮ -2025’ ಎಂಬ ಆರು ದಿನಗಳ ರಂಗೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಸಮಗ್ರ ವರದಿಯು ರಂಗೋತ್ಸವದ ಯೋಜನೆ, ಅನುಷ್ಠಾನ ಮತ್ತು ಪ್ರಮುಖ ಅಂಶಗಳನ್ನು ವಿವರಿಸುತ್ತದೆ. ಈ ಉತ್ಸವವು ನಾಟಕಗಳ ಪ್ರದರ್ಶಿಸುವುದು, ರಂಗಕಲೆಯನ್ನು ಆಚರಿಸುವುದು, ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಸಮುದಾಯವನ್ನು ತೊಡಗಿಸಿಕೊಳ್ಳುವುದನ್ನು ಗುರಿಯಾಗಿರಿಸಿಕೊಂಡಿತ್ತು. ಯೋಜನೆ ಮತ್ತು ಸಂಘಟನೆ: ಈ ಉತ್ಸವವನ್ನು ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ.) ಕಾರ್ಯಕಾರಿ ಸಮಿತಿಯು ಗೌರವಾಧ್ಯಕ್ಷರ ಅಮೂಲ್ಯ ಸಲಹೆಗಳು ಮತ್ತು ಸೂಚನೆಗಳೊಂದಿಗೆ ರೂಪಿಸಿ ಯೋಜಿಸಿತ್ತು. ರಂಗಪ್ರದರ್ಶನಗಳು, ಪ್ರಗತಿಪರ ಚರ್ಚೆ – ವಿಚಾರ ಸಂಕಿರಣ, ಸಾಧನೆಗಳ ಗುರುತಿಸುವಿಕೆ, ಸಾಂಪ್ರದಾಯಿಕ ಜಾನಪದ ಕಲೆ ಮತ್ತು ರಂಗ ಸಂಗೀತವನ್ನು ಒಳಗೊಂಡ…
ಬೆಂಗಳೂರು : ಹನುಮಂತನಗರ ಬಿಂಬ ಇದರ ವತಿಯಿಂದ ‘ಕಲಾಭಿರುಚಿ ಶಿಬಿರ 2025’ವನ್ನು ದಿನಾಂಕ 15 ಏಪ್ರಿಲ್ 2025ರಿಂದ 30 ಏಪ್ರಿಲ್ 2025ರವರೆಗೆ ಬೆಂಗಳೂರು ಹೊಸಕೆರೆ ಹಳ್ಳಿ ಔಡೆನ್ ಸ್ಕೂಲಿನಲ್ಲಿ ಪ್ರತಿದಿನ 10-30 ಗಂಟೆಯಿಂದ 4-30 ಗಂಟೆ ತನಕ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ 9ರಿಂದ 15 ವರ್ಷದ ಮಕ್ಕಳು ಭಾಗವಹಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ ವನಮಾಲಾ ಪ್ರಕಾಶ್ 9731211147 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು : ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರ ಮಂಗಳೂರು ಆಯೋಜನೆಯಲ್ಲಿ ಸಂತ ಅಲೋಶಿಯಸ್ ವಿ.ವಿ. ಕನ್ನಡ ವಿಭಾಗ ಮತ್ತು ಅಸ್ತಿತ್ವ (ರಿ.) ಇವರ ಸಹಯೋಗದಲ್ಲಿ ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ‘ಅಶ್ವತ್ಥಾಮ’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 08 ಏಪ್ರಿಲ್ 2025ರಂದು ಸಂಜೆ 6-30 ಗಂಟೆಗೆ ಸಂತ ಅಲೋಶಿಯಸ್ ಪರಿಗಣಿತ ವಿ.ವಿ. ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೋಹನಚಂದ್ರ ಉರ್ವ ಇವರು ಈ ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.
ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೆಸ್ಕ್ಲಬ್ನಲ್ಲಿ ದಿನಾಂಕ 04 ಎಪ್ರಿಲ್ 2025ರಂದು ಹರಿದಾಸ ‘ದೇವಕಿತನಯ’ ಮಹಾಬಲ ಶೆಟ್ಟಿ ಕೂಡ್ಲು ಇವರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಪಾದಕತ್ವದಲ್ಲಿ ‘ಮಹಾಪರ್ವ’ ಅಭಿನಂದನಾ ಸಂಪುಟವನ್ನು ಲೋಕರ್ಪಣೆಗೊಂಡಿತು. ಈ ಅಭಿನಂದನಾ ಸಂಪುಟವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ “ಸಾಧಕರ ಬದುಕಿನಲ್ಲಿ ಏಳು ಬೀಳುಗಳು ಸಹಜ. ಅವರ ಸಾಧನೆಯನ್ನು ಕೃತಿ ರೂಪದಲ್ಲಿ ದಾಖಲಿಸಿದರೆ ಅದು ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ. ಹಾಗೆಯೇ ಅಂಥವರ ಬದುಕು ಬವಣೆಗಳಿಂದ ನಾಳಿನ ಜನಾಂಗ ಸಾಕಷ್ಟು ಪಾಠವನ್ನೂ ಕಲಿತಂತಾಗುವುದು. ಹರಿಕಥಾ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಮಹಾಬಲ ಶೆಟ್ಟಿಯವರ ಸಾಧನೆಗಳು ‘ಮಹಾಪರ್ವ’ದಲ್ಲಿ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಮನೆ ಮನ ತಲುಪಲು ಸಾಧ್ಯವಾಗಲಿದೆ. ಭವಿಷ್ಯದ ಜನಾಂಗದ ಸಾಧನೆಗೆ ಅದುವೇ ಸ್ಫೂರ್ತಿಯಾಗುವುದು” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮಾತನಾಡಿ…
ಬಾಲ್ಯದಲ್ಲಿ ಅಜ್ಜನ ಒಟ್ಟಿಗೆ ಯಕ್ಷಗಾನ ನೋಡಲು ಹೋಗುತ್ತಿದ್ದ ಇವರು ಅಜ್ಜ ತಂದ ಯಕ್ಷಗಾನದ ಸಿಡಿಗಳಲ್ಲಿ ಪ್ರಸಂಗದ ಬಗ್ಗೆ ನೋಡುತ್ತಿದ್ದರು. ಹಾಗೆಯೇ ಯಕ್ಷಗಾನವನ್ನು ನೋಡುತ್ತಾ ಇವರಿಗೆ ಯಕ್ಷಗಾನದ ಮೇಲೆ ಆಸಕ್ತಿಗೊಂಡು ಯಕ್ಷಗಾನ ಕಲಿಯಲು ಆರಂಭಿಸಿ ಇಂದು ಒಬ್ಬ ಒಳ್ಳೆಯ ಕಲಾವಿದನಾಗಿ ರೂಪುಗೊಳ್ಳುತ್ತಿರುವ ಯುವ ಪ್ರತಿಭೆ ಸನತ್ಕುಮಾರ್ ಆಚಾರ್ಯ. 26.10.2004 ರಂದು ಪುರುಷೋತ್ತಮ ಆಚಾರ್ಯ ಹಾಗೂ ಉಮಾವತಿ ಇವರ ಮಗನಾಗಿ ಜನನ. ಪ್ರಸ್ತುತ BSc ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶ್ರೀಮತಿ ವಿ. ಸುಮಂಗಲಾ ರತ್ನಾಕರ್ ರಾವ್ ಇವರ ಯಕ್ಷಗಾನ ಹಾಗೂ ಭರತನಾಟ್ಯ ಗುರುಗಳು. ಹೆಚ್ಚಿನ ಎಲ್ಲಾ ಪ್ರಸಂಗಗಳು ಇಷ್ಟವೇ, ಹೆಚ್ಚಾಗಿ ಇಷ್ಟಪಡುವುದು ಪೌರಾಣಿಕ ಪ್ರಸಂಗಗಳನ್ನು. ನೆಚ್ಚಿನ ವೇಷಗಳು: ಎಲ್ಲಾ ಬಣ್ಣದ ವೇಷಗಳು, ಕೌಂಡ್ಲಿಕ, ಶಿಶುಪಾಲ, ಶತ್ರುಘ್ನ, ಸುದರ್ಶನ, ಬಬ್ರುವಾಹನ, ರಕ್ತಬೀಜ, ಮಾಗಧ, ಚಂಡ ಮುಂಡರು, ಹನುಮಂತ. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ: ಮೊದಲು ಗುರುಗಳು ಹೇಳಿಕೊಟ್ಟದನ್ನು ಅಷ್ಟೇ ಕಂಠಪಾಠ ಮಾಡಿ ಹೇಳ್ತಾ ಇದ್ದೆ. ಮತ್ತೆ ಸ್ವಲ್ಪ ಸಮಯದ…
ಧಾರವಾಡ : ಪ್ರತಿಷ್ಠಿತ ಪ್ರತಿಷ್ಠಾನಗಳಲ್ಲಿ ಪ್ರಮುಖವಾದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ), ಧಾರವಾಡ ತನ್ನ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಲಲಿತಕಲಾ ಚಟುವಟಿಕೆಗಳ ಮೂಲಕ ಕಲಾ ಪ್ರೇಮಿಗಳ ಮನಸ್ಸಿಗೆ ಮುದ ನೀಡುತ್ತಾ ಬಂದಿದೆ. ಇದೇ ದಿನಾಂಕ 09 ಏಪ್ರಿಲ್ 2025, ಬುಧವಾರದಂದು ಸಂಜೆ 5-30 ಗಂಟೆಗೆ ಧಾರವಾಡದ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ‘ನೃತ್ಯ ಸಂಭ್ರಮ’ ಎಂಬ ಭರತನಾಟ್ಯ ಪ್ರದರ್ಶನ ಹಮ್ಮಿಕೊಂಡಿದೆ. ಈ ‘ನೃತ್ಯ ಸಂಭ್ರಮ’ ಕಾರ್ಯಕ್ರಮವನ್ನು ಬೆಂಗಳೂರಿನ ಸಂಸ್ಕೃತಿ ನೃತ್ಯ ಅಕಾಡೆಮಿ (ರಿ.) ಇದರ ನೃತ್ಯ ಗುರುಗಳಾದ ವಿದುಷಿ ಶೃತಿ ನಾಯಕ್ ಹಾಗೂ ವಿದುಷಿ ಅಪರ್ಣ ದೀಕ್ಷಿತ ಇವರ ಶಿಷ್ಯ ವೃಂದದವರು ಪ್ರಸ್ತುತ ಪಡಿಸಲಿದ್ದಾರೆ. ಸುಮಾರು 25 ಮಂದಿ ನೃತ್ಯ ಕಲಾವಿದೆಯರು ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲರಿಪು, ಶಬ್ದಂ, ದೇವರನಾಮ, ರಾಗ ಮಾಲಿಕೆ ಮುಂತಾದವುಗಳನ್ನು ಪ್ರಸ್ತುತಪಡಿಸಿ, ತಮ್ಮ ಕೌಶಲ್ಯ ಪೂರ್ಣವಾದ ನೃತ್ಯಗಳಿಂದ ಮನರಂಜಿಸುವ ಜೊತೆಗೆ ಅಪರೂಪದ ರಸಾನುಭೂತಿಯನ್ನುಂಟು ಮಾಡುವವರಿದ್ದಾರೆ. ಈ ಕಾರ್ಯಕ್ರಮವನ್ನು ರತಿಕಾ ನೃತ್ಯ…
ರಾಯಚೂರು : ಸಂಸ ಥಿಯೇಟರ್ ಬೆಂಗಳೂರು ಮತ್ತು ಗುರುಪುಟ್ಟ ಕಲಾ ಬಳಗ (ರಿ.) ಆಸ್ಕಿಹಾಳ್ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ‘ಶಾಂತರಸ 100’ ಶಾಂತರಸ ಶತಮಾನೋತ್ಸವ ಆಚರಣೆಯನ್ನು ದಿನಾಂಕ 07 ಏಪ್ರಿಲ್ 2025ರಂದು ಬೆಳಿಗ್ಗೆ 10-30 ಗಂಟೆಗೆ ರಾಯಚೂರು ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್. ಮುಕ್ತಾಯಕ್ಕ ಅವರ ‘ಅಪ್ಪ ನಾನು ಕಂಡಂತೆ’ ಶಾಂತರಸರ ನೆನಪುಗಳ ಓದು ಪ್ರಸ್ತುತಿ ರಂಗ ನಿರ್ದೇಶಕ ಪ್ರವೀಣ್ ಗುಂಜಳ್ಳಿ ಮತ್ತು ಸ್ಥಳೀಯ ಕಲಾವಿದರಿಂದ ವಚನ ಸಂಗೀತ ಪ್ರಸ್ತುತಗೊಳ್ಳಲಿದೆ. ಬಂಡುರಾವ್ ಚಾಗಿ ಇವರ ಅಧ್ಯಕ್ಷತೆಯಲ್ಲಿ ಸಿದ್ಧನಗೌಡ ಪಾಟೀಲ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು ಇವರು ಅನ್ವೇಷಣೆ ಸಾಹಿತ್ಯ ಪತ್ರಿಕೆಯ ಶಾಂತರಸರ ಕುರಿತ ವಿಶೇಷಾಂಕ ಮತ್ತು ಆರ್.ಜಿ. ಹಳ್ಳಿ ನಾಗರಾಜ್ ಇವರು ಉಷಾ ಜ್ಯೋತಿಯವರ ‘ಇರುವಿಕೆಯ ಹಾದಿಯಲ್ಲಿ’ ಗಜಲ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿಚಾರಗೋಷ್ಠಿ 01ರಲ್ಲಿ ‘ಶಾಂತರಸರ ಸಾಹಿತ್ಯ’ ಇದರ ಬಗ್ಗೆ ಪ್ರಾಧ್ಯಾಪಕರಾದ ಡಾ. ಅಪ್ಪಗೆರೆ ಸೋಮಶೇಖರ್, ‘ಶಾಂತರಸರ ಬದುಕು’ ಇದರ ಬಗ್ಗೆ…