ಬೆಂಗಳೂರು : ಸರಸ್ವತೀ ಸಂಗೀತ ವಿದ್ಯಾಲಯ (ನೋಂ) ಇದರ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ಭಾರತೀಯ ನಾದ ಸೌರಭ ಸಂಗೀತೋತ್ಸವವನ್ನು ದಿನಾಂಕ 01 ಜೂನ್ 2025ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಲಾಗಿದೆ.
ಖ್ಯಾತ ಹಿರಿಯ ಸಿತಾರ್ ವಿದ್ವಾಂಸರಾದ ಗುರು ಪಂಡಿತ್ ಎನ್.ವಿ. ಗೋಪಿನಾಥ್ ಇವರಿಗೆ ಗೋವಿಂದ ಲಕ್ಷ್ಮೀ ಪುರಸ್ಕಾರ ಮತ್ತು ಖ್ಯಾತ ವಯೋಲಿನ್ ವಿದ್ವಾಂಸ ವಿದ್ವಾನ್ ಕೆ.ಸಿ. ಜಯರಾಮ್ ಇವರಿಗೆ ಶ್ಯಾಮಲಾ ಸ್ಮೃತಿ ಸಮ್ಮಾನ್ ಪುರಸ್ಕಾರ ಪ್ರದಾನ ಮಾಡಲಾಗುವುದು. ನಾದೋಪಾಸಕ ಗುರು ಪಂಡಿತ್ ವಾಗೀಶ ಭಟ್ ಇವರ ಹಿಂದೂಸ್ತಾನಿ ಗಾಯನಕ್ಕೆ ಕರ್ಣಾಟಕ ಕಲಾಶ್ರೀ ಪಂಡಿತ್ ಸತೀಶ್ ಹಂಪಿಹೊಳಿ ತಬಲಾ, ಪಂಡಿತ್ ಶಿವಕುಮಾರ್ ಮಹಂತ ಹಾರ್ಮೋನಿಯಂ ಮತ್ತು ರಾಜೇಶ್ ಕುಲಕರ್ಣಿ ಮಂಜಿರ ಸಾಥ್ ನೀಡಲಿದ್ದಾರೆ. ಕುಮಾರಿ ಸ್ಮೃತಿ ಎಸ್. ಭಟ್ ಇವರಿಂದ ಹಿಂದೂಸ್ತಾನಿ ಗಾಯನಕ್ಕೆ ಕುಮಾರ್ ಎಂ. ಪ್ರಣವ್ ಪೈ ತಬಲಾದಲ್ಲಿ ಸಹಕರಿಸಲಿದ್ದಾರೆ. ಪಂಡಿತ್ ಸತೀಶ್ ಹಂಪಿಹೊಳಿಯವರ ಶಿಷ್ಯರಾದ ಶ್ರೀರಾಮ ವಿ. ಸ್ವಾಮಿ, ಸುತೇಜ್ ಆರ್. ಹರಿತ್ಸ, ಶಶಾಂಕ್ ಭಟ್, ರೋಹನ್ ಕುಮಾರ್ ಮತ್ತು ಕೃಷ್ಣ ರಘೋತ್ತಮ್ ಇವರಿಂದ ತಬಲಾ ತರಂಗ ಪ್ರಸ್ತುತಗೊಳ್ಳಲಿದೆ. ವಿದುಷಿ ಸಿ.ಎಸ್. ಸರ್ವಮಂಗಳಾ ಇವರ ಸಿತಾರ್ ವಾದನಕ್ಕೆ ವಿದ್ವಾನ್ ಎಂ.ಎಸ್. ಕಿರಣ್ ತಬಲಾ ಸಾಥ್ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸರಸ್ವತೀ ಸಂಗೀತ ವಿದ್ಯಾಲಯದ ಗಾಂಧಾರ ಮಂದಾಕಿನಿ ಮಹಿಳಾ ವೃಂದದವರಿಂದ ಸಮೂಹ ಗಾಯನ ಪ್ರಸ್ತುತಿ ನಡೆಯಲಿದೆ.