Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಉದ್ಘಾಟನೆಗೊಂಡ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’

    November 25, 2025

    ‘ದಶಕ ಸಮರ್ಪಣಂ’ ಆರೋಹಣಂ ಸಂಗೀತ ಶಾಲೆಯ ದಶಮಾನೋತ್ಸವ ಸಂಭ್ರಮಾಚರಣೆ

    November 25, 2025

    ಯಕ್ಷಗಾನ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಇವರಿಗೆ ಪ್ರಶಸ್ತಿ ಪ್ರದಾನ

    November 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಡಾ.ವಾಮನ ನಂದಾವರ ಅವರ ‘ಸಿಂಗದನ’ ಕೃತಿಯ ಮೂರನೇ ಮರುಹುಟ್ಟು
    Literature

    ಡಾ.ವಾಮನ ನಂದಾವರ ಅವರ ‘ಸಿಂಗದನ’ ಕೃತಿಯ ಮೂರನೇ ಮರುಹುಟ್ಟು

    August 8, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಹಿರಿಯ ಸಾಹಿತಿ ಡಾ.ವಾಮನ ನಂದಾವರ ಅವರ ಬಹುಮಾನಿತ ‘ಸಿಂಗದನ’ ಕೃತಿಯ ಮೂರನೇ ಮುದ್ರಣವನ್ನು ನಗರದ ಬಲ್ಲಾಳ್ ಬಾಗ್‌ನ ಪತ್ತುಮುಡಿ ಸೌಧದಲ್ಲಿ ದಿನಾಂಕ 05-08-2023ರಂದು ಮೈಸೂರು ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನ ನಿರ್ದೇಶಕ ಡಾ. ಬಿ. ಶಿವರಾಮ ಶೆಟ್ಟಿ ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತಾ “ನಮಗೆ ಸಂಶೋಧನೆಯ ಬದಲು, ಸಂಶೋಧನ ವಿಷಯದ ಆಯ್ಕೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಾಹಿತಿ ಡಾ. ವಾಮನ ನಂದಾವರ ಅವರ ‘ಸಿಂಗದನ’ ಪುಸ್ತಕ ಜಾನಪದ ಸಂಶೋಧನೆಗೆ ದಿಕ್ಕೂಚಿ ಕೃತಿ. ಸಂಶೋಧನಾರ್ಥಿಗಳಿಗೆ ಬೇಕಾಗುವ ಅನೇಕ ಸಂಗತಿಗಳನ್ನು ಈ ಕೃತಿ ಹೊಂದಿದೆ. ನಮ್ಮತನವನ್ನು ತೋರಿಸುವ ಪ್ರಯತ್ನ, ದೇಸೀಯತೆ, ಸಾಂಸ್ಕೃತಿಕ ನೆಲೆಯಲ್ಲಿ ತುಳುವಿನ ವಿವೇಚನ ಮಾಡುವ ಚಿಂತನೆ ಈ ಪುಸ್ತಕದಲ್ಲಿ ಕಾಣಬಹುದು. ‘ಸಿಂಗದನ’’ ಕೃತಿಗೆ ಮೂರನೇ ಮರುಹುಟ್ಟು ಪ್ರಾಪ್ತವಾಗಿದೆ. 104 ಪುಟಗಳನ್ನು ಹೊಂದಿದ ಅಷ್ಟದಳದ ನಾಲ್ಕು ಲೇಖನವನ್ನು ಈ ಪುಸ್ತಕ ಹೊಂದಿದೆ. ಈ ನೆಲದ ತೌಳವ ಸಂಸ್ಕೃತಿ, ಭೂತಾರಾಧನೆಯ ಹುಟ್ಟು, ಪ್ರಸರಣ, ಮಡಿವಾಳ ಜಾತಿಗೆ ಸಂಬಂಧಿತ ಲೇಖನಗಳನ್ನು ಹೊಂದಿದೆ. ಭಯ-ಭಕ್ತಿಗೆ ಒಳಗಾದ ಆಚರಣೆಯ ಕ್ರಮ, ಅಧ್ಯಯನದ ಕುರಿತ ಕುತೂಹಲ ಈ ಕೃತಿ ಉಂಟುಮಾಡುತ್ತದೆ. ಬದುಕನ್ನು ಕುತೂಹಲದಿಂದ ಕಾಣುವ ನಂದಾವರ ಅವರು ಬದುಕಿನ ಸಂಸ್ಕೃತಿಯ ಅನಾವರಣವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ. ನಂದಾವರ ಅವರಿಗೆ ಜಾಗತಿಕ ಮನ್ನಣೆ ಪ್ರಾಪ್ತವಾಗಬೇಕಿತ್ತು. ಅವರ ಕೃತಿಗಳೆಲ್ಲ ಒಂದೇ ಸಂಪುಟವಾಗಿ ಹೊರಬರಬೇಕಿದೆ” ಎಂದು ಹೇಳಿದರು.

    ಈ ಕಾರ್ಯಕ್ರಮದಲ್ಲಿ ವಚನ ಗಾಯಕ ಮೌನೇಶ್ ಕುಮಾರ್ ಛಾವಣಿ, ಉದ್ಯಮಿ ಸೂರ್ಯನಾರಾಯಣ ರಾವ್, ಸಾಹಿತಿ ಡಾ. ವಾಮನ ನಂದಾವರ, ಹೇಮಾಶ್ರೀ, ಸುಧಾಂಶು ಅವರು ಉಪಸ್ಥಿತರಿದ್ದರು. ಬಳಿಕ ಮೌನೇಶ್ ಕುಮಾರ್ ಛಾವಣಿ ಮತ್ತು ಬಳಗದವರಿಂದ ವಚನ, ದಾಸ ಸಾಹಿತ್ಯ ಗಾಯನ ನಡೆಯಿತು. ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಪ್ರಸ್ತಾವಿಸಿ, ವಂದಿಸಿದರು. ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರಿನ ಕಲ್ಲೂರು ನಾಗೇಶ್‌ ಸ್ವಾಗತಿಸಿ, ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರು ಅಬ್ಬಕ್ಕ ಪ್ರತಿಷ್ಠಾನದಿಂದ ‘ಆಷಾಢದ ಆಶಯ’ ಸಂವಾದ ಕಾರ್ಯಕ್ರಮ
    Next Article ಮಂಗಳೂರು ಕ್ವಿಜಿಂಗ್ ಫೌಂಡೇಶನ್ ವತಿಯಿಂದ ‘ಅಲ್ಟಿಮೇಟ್ ಇಂಡಿಯಾ ರಸಪ್ರಶ್ನೆ’ | ಆಗಸ್ಟ್ 13ರಂದು
    roovari

    Add Comment Cancel Reply


    Related Posts

    ವಿಶೇಷ ಲೇಖನ | ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರ ಸಮೇತನಹಳ್ಳಿ ರಾಮ ರಾವ್

    November 24, 2025

    ಉಡುಪಿಯಲ್ಲಿ ‘ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳು’ ಕುರಿತ ವಿಚಾರ ಸಂಕಿರಣ

    November 24, 2025

    ಜಾಣಗೆರೆ ವೆಂಕಟರಾಮಯ್ಯ ಇವರಿಗೆ ‘ಕರ್ನಾಟಕ ಚೂಡಾಮಣಿ’ ಪ್ರಶಸ್ತಿ ಪ್ರದಾನ | ನವೆಂಬರ್ 25

    November 24, 2025

    ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪರವರ ಕವನಗಳ ವಾಚನ ಮತ್ತು ಭಾವರ್ಥ ವಿಚಾರ ಸಂಕಿರಣ

    November 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.