Subscribe to Updates

    Get the latest creative news from FooBar about art, design and business.

    What's Hot

    ಕೊಲ್ಯದ ನಾಟ್ಯನಿಕೇತನದ ನೃತ್ಯಾಂಗಣದಲ್ಲಿ ನೃತ್ಯಶ್ರೀ ಸರಣಿ-ಮಾಲಿಕೆ 19 ‘ನಾಟ್ಯ ಮೋಹನ ನವತ್ಯುತ್ಸಹ’ | ಜುಲೈ 31

    July 30, 2025

    ಮೇಲುಕೋಟೆಯಲ್ಲಿ ‘ಚಿಗುರು’ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ | ಜುಲೈ 31

    July 30, 2025

    ನೃತ್ಯಾಂತರಂಗದಲ್ಲಿ ಮಿಂಚಿದ ದುಬೈಯ ಬಾಲಪ್ರತಿಭೆ ಕು. ನಿತಾರಾ ನಾಯರ್

    July 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪ್ರೊ. ಬಿ.ಎ. ವಿವೇಕ ರೈಯವರಿಂದ ಮಂಗಳೂರು ವಿವಿ ಗ್ರಂಥಾಲಯಕ್ಕೆ ಕೃತಿಗಳ ಕೊಡುಗೆ
    Literature

    ಪ್ರೊ. ಬಿ.ಎ. ವಿವೇಕ ರೈಯವರಿಂದ ಮಂಗಳೂರು ವಿವಿ ಗ್ರಂಥಾಲಯಕ್ಕೆ ಕೃತಿಗಳ ಕೊಡುಗೆ

    April 28, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಸುಮಾರು 5400ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಪ್ರೊ. ಬಿ.ಎ. ವಿವೇಕ ರೈ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಹಾಗೂ ಗ್ರಂಥಾಲಯದ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ 25-04-2023ರಂದು ಮ.ವಿ.ವಿ ಗ್ರಂಥಾಲಯದಲ್ಲಿ ನಡೆಸಲಾಯಿತು.

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ಬಿ.ಎ. ವಿವೇಕ ರೈ “ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಮಂಗಳೂರು ವಿವಿಯ ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ್ದೇನೆ. ಈ ಒಂದು ಪ್ರೀತಿ ಅಭಿಮಾನಕ್ಕೆ ಪ್ರತಿಯಾಗಿ ನಾನು ನನ್ನಲ್ಲಿರುವ ಅಪಾರ ಸಂಖ್ಯೆಯ ಪುಸ್ತಕಗಳನ್ನು ಮ.ವಿ.ವಿ. ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ್ದೇನೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಸಂಶೋಧಕರು ಹಾಗೂ ಯುವಜನತೆ ಪಡೆದುಕೊಳ್ಳಬೇಕು. ಜೊತೆಗೆ ಮಂಗಳೂರು ವಿ.ವಿ. ಅಭಿವೃದ್ದಿ ಪಥದಲ್ಲಿ ಮುಂದುವರೆಯಲಿ” ಎಂದು ಶುಭ ಹಾರೈಸಿದರು.

    ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಮಂ.ವಿ.ವಿ. ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯರು ಮಾತನಾಡುತ್ತ “ಬಿ.ಎ. ವಿವೇಕ ರೈ ಇವರ ಸೇವಾ ಮನೋಭಾವನೆ ಪಾಂಡಿತ್ಯ ನಮಗೆಲ್ಲ ಸ್ಪೂರ್ತಿಯಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಪುಸ್ತಕಗಳ ಮಹತ್ವದ ಬಗ್ಗೆ ಯುವಜನತೆ ತಿಳಿದುಕೊಳ್ಳಬೇಕು. ತಮ್ಮ ಸಂಗ್ರಹದ ಅಮೂಲ್ಯ ಕೃತಿಗಳನ್ನು ವಿವಿ ಗ್ರಂಥಾಲಯಕ್ಕೆ ನೀಡಿ ಮುಂದಿನ ತಲೆಮಾರಿನ ಆಸಕ್ತರಿಗೆ ಒದಗಿಸಿರುವುದು ಶ್ಲಾಘನೀಯ” ಎಂದರು. ಯೂತ್ ರೆಡ್ ಕ್ರಾಸ್ ಸಂಸ್ಥೆಯ ‘ಸೇವಾ ಕಲಿಕೆ’ ಎಂಬ ವಿನೂತನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕುಲಪತಿಗಳು ಸಮಾಜಕ್ಕೆ ನಮ್ಮಿಂದ ಆಗುವಂತಹ ಸಹಾಯ ಸಹಕಾರ ಮಾಡೋಣ ಎಂದು ನುಡಿದರು.

    ಕಾರ್ಯಕ್ರಮದ ಸಂಯೋಜಕ ಮಂಗಳೂರು ವಿ.ವಿ.ಗ್ರಂಥಪಾಲಕ ಡಾ.ಎಂ.ಪುರುಷೋತ್ತಮ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಗೆ ಸರ್ವರನ್ನು ಸ್ವಾಗತಿಸಿದರು. ಮಂಗಳೂರು ವಿ.ವಿ. ಗ್ರಂಥಾಲಯದ ಸಿಬ್ಬಂದಿಗಳು, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಂಥಾಲಯ ಸಿಬ್ಬಂದಿಗಳಾದ ಶ್ರೀಮತಿ ವೀಣಾರವರು ಪ್ರಾರ್ಥನೆಗೈದು, ಶ್ರೀಮತಿ ಉಷಾರವರು ವಂದನಾರ್ಪಣೆ ಮಾಡಿದರು ಹಾಗೂ ಶ್ರೀಮತಿ ಸವಿತಾಕುಮಾರಿ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous ArticleSandesha Shibirotsava 23 – Annual Summer Camp Closing Ceremony
    Next Article ಪರಿಚಯ ಲೇಖನ | ‘ಪ್ರತಿಭೆಯ ಬಹುಮುಖದ ವಿದ್ವಾಂಸ’ – ಡಾ.ವಿನಾಯಕ ಭಟ್ಟ ಗಾಳಿಮನೆ
    roovari

    Add Comment Cancel Reply


    Related Posts

    ಪುತ್ತೂರಿನಲ್ಲಿ ಶಿಕ್ಷಕ ಕವಿಗಳಿಗಾಗಿ ರಾಜ್ಯ ಮಟ್ಟದ ಕವಿಗೋಷ್ಠಿ | ಆಗಸ್ಟ್ 04

    July 29, 2025

    ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಜಗದೀಶ್ ಪೈ ನಿಧನ

    July 29, 2025

    ಸಂದೇಶ ಸಭಾಂಗಣದಲ್ಲಿ ಗ್ಲೇಡಿಸ್ ರೇಗೊರವರಿಗೆ ಶ್ರದ್ಧಾಂಜಲಿ ಸಭೆ

    July 29, 2025

    ಯಶಸ್ವಿಯಾಗಿ ಜರಗಿದ ‘ಮನೆ ಮನೆ-ಕನ್ನಡ ಜಾಗೃತಿ ಅಭಿಯಾನ’ದ ದ್ವಿತೀಯ ಕಾರ್ಯಕ್ರಮ

    July 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.