Subscribe to Updates

    Get the latest creative news from FooBar about art, design and business.

    What's Hot

    ದಕ್ಷಿಣ ಕನ್ನಡ ಜಿಲ್ಲಾ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ‘ಚಿತ್ರಕಲಾ ಸ್ಪರ್ಧೆ’ | ನವೆಂಬರ್ 09

    October 14, 2025

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಚ್.ವಿ. ನಂಜುಂಡಯ್ಯ ಮತ್ತು ಕೀರ್ತಿನಾಥ ಕುರ್ತುಕೋಟಿಯವರ ಜನ್ಮದಿನೋತ್ಸವ

    October 14, 2025

    ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ ‘ಬಾಲಪ್ರತಿಭಾ ಅನ್ವೇಷಣೆ 2025’ | ಅಕ್ಟೋಬರ್ 24, 25 ಮತ್ತು 26

    October 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪಿಂಗಾರ ಸಾಹಿತ್ಯ ಬಳಗ’ದಿಂದ ‘ಸಾಹಿತ್ಯ ಸಂಭ್ರಮ ಮತ್ತು ಬಹುಭಾಷಾ ಕವಿಗೋಷ್ಠಿ’
    Literature

    ಪಿಂಗಾರ ಸಾಹಿತ್ಯ ಬಳಗ’ದಿಂದ ‘ಸಾಹಿತ್ಯ ಸಂಭ್ರಮ ಮತ್ತು ಬಹುಭಾಷಾ ಕವಿಗೋಷ್ಠಿ’

    January 30, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಣಿಪಾಲ : ಮಂಗಳೂರಿನ ‘ಪಿಂಗಾರ ಸಾಹಿತ್ಯ ಬಳಗ’ದಿಂದ ಮಣಿಪಾಲದ ದಶರಥನಗರದಲ್ಲಿ ಆಂಟನಿ ಲೂವಿಸ್ ಅವರ ಅಂಗಳದಲ್ಲಿ ಇಪ್ಪತ್ತನೆಯ ವರುಷದ ‘ಸಾಹಿತ್ಯ ಸಂಭ್ರಮ ಮತ್ತು ಬಹುಭಾಷಾ ಕವಿಗೋಷ್ಠಿ’ಯು ದಿನಾಂಕ 27-01-2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ರೇಮಂಡ್ ಡಿಕುನ್ಹಾ ತಾಕೊಡೆ ಮಾತನಾಡಿ “ಯಾವುದೇ ಸಾಹಿತ್ಯದ ರಚನೆ ಮಾತೃ ಭಾಷೆಯ ಸರಿಯಾದ ಋಣ ಸಂದಾಯದ ಅವಕಾಶವಾಗಿದೆ. ನಮ್ಮ ಸುತ್ತಲಿನ ಸಹೋದರ ಭಾಷೆಯಲ್ಲಿ ಸಾಹಿತ್ಯದ ಓದುವ ಹವ್ಯಾಸ ಬಹಳಷ್ಟು ಲಾಭದಾಯಕ” ಎಂದು ನುಡಿದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಸುರೇಶ ನೆಗಳಗುಳಿ ಮಾತನಾಡಿ “ಸಾಹಿತಿ ಆಗಲು ಆಶಯ, ಆಕ್ರೋಶ, ಆಶಾಭಾವಗಳು ಬೇಕು ಮತ್ತು ಓದುವ ಹವ್ಯಾಸ ಬೆಳೆಸಬೇಕು” ಎಂದು ಹೇಳಿದರು. ಕನ್ನಡ, ಕೊಂಕಣಿ, ತುಳು, ತೆಲುಗು, ಹಿಂದಿ ಪಂಚಭಾಷಾ‌ ಕವಿಗೋಷ್ಟಿಗೆ ಹಿರಿಯ ಕೊಂಕಣಿ ಸಾಹಿತಿ ಡಾ. ನಾಗೇಶ್ ಕುಮಾರ್ ಕವಿತೆ ಹಾಡಿ ಚಾಲನೆ ನೀಡಿದರು. ‘ಪನ್ವಾರ್’ ಕೊಂಕಣಿ ಮಾಸಿಕದ ಸಂಪಾದಕರಾದ ಜ್ಞಾನದೇವ್ ಮಲ್ಯಾ ಕವಿಗಳಿಗೆ ಪುಸ್ತಕ ಗೌರವ ನೀಡಿದರು.

    ಕವಿಗಳಾದ ವಿನೋದ ಪ್ರಕಾಶ್ ಪಡುಬಿದ್ರಿ, ಸುಮಾಕಿರಣ್ ಬಸ್ರೂರು, ಪ್ರೇಮಾ ಆರ್. ಶೆಟ್ಟಿ ಮುಲ್ಕಿ, ಯಶೋಧ ಗಾಣಿಗ ಕುಂದಾಪುರ, ವಸಂತಿ ಅಂಬಪಾಡಿ, ಕೆ. ವಾಣಿಶ್ರೀ, ಅಶೋಕ್ ಐತಾಳ್, ದಿಯಾ ಉದಯ್ ಡಿ.ಯು., ನೇಹನ್ ಕ್ರಾಸ್ಟಾ ಉಡುಪಿ, ವ. ಉಮೇಶ್ ಕಾರಂತ ಕುಂದಾಪುರ, ಮಂಜುನಾಥ ಗುಡ್ಮಿ, ಆಶ್ವಿನಿ ಕೆ., ಮಾತಿನ ರಮೇಶ್ ಕೆಮ್ಮಣ್ಣು, ಪ್ರೇಮ ಬಸನಗೌಡ ಬಿರಾದಾರ, ಅನಿತಾ ಸಿಕ್ವೇರಾ, ಡಾಕ್ಟರೇಟ್‌ ಪ್ಲಾವಿಯಾ ಕ್ಯಾಸ್ಟಲಿನೊ, ಜ್ಞಾನದೇವ್ ಮಲ್ಯಾ ಮಣಿಪಾಲ, ಡಾ. ನಾಗೇಶ್ ಕುಮಾರ್, ರೇಮಂಡ್ ಡಿಕುನ್ಹಾ ತಾಕೊಡೆ, ಡಾ. ಸುರೇಶ ನೆಗಳಗುಳಿ ಮತ್ತು ಆಂಟನಿ ಲೂಯಿಸ್ ತಮ್ಮ ಕವಿತೆಗಳು ಸಾಧರಪಡಿಸಿದರು. ಜ್ಯೋತಿ ಲೂವಿಸ್‌ ಮತ್ತು ಆಲನ್ ಸಿಕ್ವೇರಾ ಸಹಕರಿಸಿದರು. ಅನಿತಾ ಸಿಕ್ವೇರಾ ವಂದಿಸಿ, ಡಾಕ್ಟರೇಟ್‌ ಪ್ಲಾವಿಯಾ ಕ್ಯಾಸ್ಟಲಿನೊ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Article‘ಉಡುಪಿ ಜಿಲ್ಲಾ ಬರಹಗಾರರ ಕೋಶ’ ಕಾವ್ಯ ಸಂಪುಟ ಬಿಡುಗಡೆ ಸಮಾರಂಭ ಮತ್ತು ವಿಚಾರಗೋಷ್ಠಿ
    Next Article ಉಳ್ಳಾಲ ಕಸಾಪ ವತಿಯಿಂದ ರವೀಂದ್ರ ರೈ ಕಲ್ಲಿಮಾರು ಕೃತಿ ‘ಮೇಲೋಗರ’ ಲೋಕಾರ್ಪಣೆ
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಚ್.ವಿ. ನಂಜುಂಡಯ್ಯ ಮತ್ತು ಕೀರ್ತಿನಾಥ ಕುರ್ತುಕೋಟಿಯವರ ಜನ್ಮದಿನೋತ್ಸವ

    October 14, 2025

    ಧಾರವಾಡದಲ್ಲಿ ‘ಕೀರ್ತಿ ನೆನಪು’ ಹಾಗೂ ‘ವಾಗರ್ಥ’ ಕೃತಿ ಕುರಿತು ಸಂವಾದ ಕಾರ್ಯಕ್ರಮ

    October 13, 2025

    ಮಂಗಳೂರಿನಲ್ಲಿ ಏರ್ಯ ಪ್ರಶಸ್ತಿ ಪ್ರದಾನ ಸಮಾರಂಭ | ಅಕ್ಟೋಬರ್ 14

    October 13, 2025

    ಉಡುಪಿಯ ನೂತನ ರವೀಂದ್ರಮಂಟಪದಲ್ಲಿ ಡಾ. ಕೋಟ ಶಿವರಾಮ ಕಾರಂತರ 123ನೇ ಜನ್ಮದಿನಾಚರಣೆ

    October 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.