Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹೊನ್ನಾವರದಲ್ಲಿ ಬಹುರೂಪಿ ಪ್ರಕಟಣೆಯ ‘ಹೌಸ್ ಫುಲ್’ ಕೃತಿ ಬಿಡುಗಡೆ
    Book Release

    ಹೊನ್ನಾವರದಲ್ಲಿ ಬಹುರೂಪಿ ಪ್ರಕಟಣೆಯ ‘ಹೌಸ್ ಫುಲ್’ ಕೃತಿ ಬಿಡುಗಡೆ

    February 28, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹೊನ್ನಾವರ : ಚಿಂತನ ಉತ್ತರ ಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ ಹಾಗೂ ಪ್ರೀತಿಪದ ಹೊನ್ನಾವರ ಇವರ ವತಿಯಿಂದ ಬಹುರೂಪಿಯ ಪ್ರಕಟಣೆ, ರಂಗಕರ್ಮಿ ಕಿರಣ ಭಟ್ ರವರ ‘ಹೌಸ್ ಫುಲ್’ ರಂಗಕೃತಿ ಬಿಡುಗಡೆ ಸಮಾರಂಭವು ದಿನಾಂಕ 26 ಫೆಬ್ರವರಿ 2025ರಂದು ಹೊನ್ನಾವರದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

    ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಮಾತನಾಡಿ “ಸದ್ದಿಲ್ಲದೆ ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ವಿಚಾರವಂತಿಕೆಯನ್ನು ರಕ್ಷಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ರಂಗಭೂಮಿ ಸದಾ ಜೀವಂತವಾದದ್ದು. ಚಲನಶೀಲತೆಯನ್ನು ಉಳ್ಳದ್ದು. ಈ ರಂಗಭೂಮಿ ಜನರ ಮನಸ್ಸಿನ ಕನ್ನಡಿ. ಹಾಗಾಗಿಯೇ ರಂಗಭೂಮಿ ಬದಲಾವಣೆಯನ್ನು ಪ್ರೇರೇಪಿಸುತ್ತದೆ. ಕಿರಣ್ ಭಟ್ ಅವರ ‘ಹೌಸ್ ಫುಲ್’ ಕೃತಿ ಬಿ.ವಿ. ಕಾರಂತರ ನಂತರ ನಡೆಯುತ್ತಿರುವ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳನ್ನು ಹಿಡಿದಿಟ್ಟಿದೆ. ರಂಗ ಕೈರಳಿ ಕೃತಿಯ ಮೂಲಕ ಓದುಗರ ಮನ ಗೆದ್ದ ಕಿರಣ್ ಈಗ ರಂಗ ವಿಮರ್ಶೆಯ ಮೂಲಕ ರಂಗ ಚರಿತ್ರೆಯನ್ನು ದಾಖಲಿಸಿದ್ದಾರೆ” ಎಂದರು.

    ಪತ್ರಕರ್ತ, ಬಹುರೂಪಿಯ ಜಿ.ಎನ್. ಮೋಹನ್ ಅವರು ಮಾತನಾಡಿ “ಪ್ರಶ್ನೆ ಕೇಳುವುದನ್ನು ಸಾಹಿತ್ಯವಾಗಲೀ, ರಂಗಭೂಮಿಯಾಗಲೀ ಪ್ರೇರೇಪಿಸುತ್ತದೆ. ಈ ಕಾರಣಕ್ಕಾಗಿಯೇ ವ್ಯವಸ್ಥೆ ಈ ಎರಡೂ ಲೋಕವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ. ರಂಗಭೂಮಿ ಈ ಮೊದಲಿನಿಂದಲೂ ಬದಲಾವಣೆಯ ಅಸ್ತ್ರ. ಹೀಗಾಗಿ ರಂಗಭೂಮಿ ಜಡತ್ವವನ್ನು, ಪ್ರಗತಿ ವಿರೋಧಿ ಮನಸ್ಸುಗಳನ್ನು ಪ್ರಶ್ನಿಸುತ್ತದೆ” ಎಂದರು.

    ಕೃತಿ ಬಿಡುಗಡೆ ಮಾಡಿದ ದೀಪಾ ಹಿರೇಗುತ್ತಿ ಅವರು “ಓದುವ ಸಂಸ್ಕೃತಿಯನ್ನು ಇನ್ನಷ್ಟು ವ್ಯಾಪಕವಾಗಿ ಬೆಳಸಬೇಕಾದ ಅಗತ್ಯವಿದೆ. ಓದುವ ಮನಸ್ಸುಗಳು ಎಂದಿಗೂ ಸಕಾರಾತ್ಮಕವಾಗಿ ಕಟ್ಟುವ ಕೆಲಸವನ್ನು ಮಾಡುತ್ತದೆ. ಓದು ವ್ಯಾಪಕವಾಗಲು ಚಿಂತನ ನಡೆಸಿದ ಪ್ರಯೋಗಗಳು ಇಡೀ ರಾಜ್ಯಕ್ಕೆ ಮಾದರಿ” ಎಂದರು.

    ಕೃತಿ ಕುರಿತು ಸಮಾಜ ವಿಜ್ಞಾನಿ ಡಾ. ಪ್ರಕಾಶ್ ಭಟ್ ಮಾತನಾಡಿದರು. ಕೃತಿಕಾರ ಕಿರಣ್ ಭಟ್ ರವರು ತಾವು ರಂಗಭೂಮಿಯಲ್ಲಿ ಸಾಗಿ ಬಂದ ಹಿನ್ನೆಲೆಯನ್ನು ವಿವರಿಸಿದರು. ಪ್ರೀತಿಪದದ ಯಮುನಾ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿ, ಮಾಸ್ತಿಗೌಡ ವಂದಿಸಿದರು. ಮಾಧವಿ ಭಂಡಾರಿ ರಂಗಗೀತೆ ಹಾಡಿದರು.

    Book release Literature
    Share. Facebook Twitter Pinterest LinkedIn Tumblr WhatsApp Email
    Previous Articleನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಲೆ
    Next Article ಹಿರಿಯ ಪಾಡ್ಡಾನಗಾರ್ತಿ ಲಕ್ಷ್ಮೀ ಸೇರಿಗಾರ್ತಿ ನಿಧನ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.