Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಾಡಿಯ ಸಭಾಂಗಣದಲ್ಲಿ ‘ಬಂಡ್ವಾಳ್ವಲ್ಲದ ಬಡಾಯಿ’ ಮತ್ತು ’ನಂಗ್ಯಾಕೋ ಡೌಟು’ ನಾಟಕ ಪ್ರದರ್ಶನ | ಜುಲೈ 29 ಮತ್ತು 30
    Drama

    ವಾಡಿಯ ಸಭಾಂಗಣದಲ್ಲಿ ‘ಬಂಡ್ವಾಳ್ವಲ್ಲದ ಬಡಾಯಿ’ ಮತ್ತು ’ನಂಗ್ಯಾಕೋ ಡೌಟು’ ನಾಟಕ ಪ್ರದರ್ಶನ | ಜುಲೈ 29 ಮತ್ತು 30

    July 28, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ಬೆಂಗಳೂರಿನ ರಂಗತಂತ್ರ ಅರ್ಪಿಸುವ ಟಿ.ಪಿ.ಕೈಲಾಸಂ ಇವರ ‘ಬಂಡ್ವಾಳ್ವಲ್ಲದ ಬಡಾಯಿ’ ನಾಟಕವು ದಿನಾಂಕ 29-07-2023 ರಂದು ಹಾಗೂ ಬಿ.ಆರ್. ಲಕ್ಷ್ಮಣರಾವ್ ಇವರ ‘ನನಗ್ಯಾಕೋ ಡೌಟು’ ನಾಟಕದ ಪ್ರದರ್ಶನವು ದಿನಾಂಕ 30-07-2023 ರಂದು ಬೆಂಗಳೂರಿನ ಬಸವನಗುಡಿಯ ವಾಡಿಯ ಸಭಾಂಗಣದಲ್ಲಿ ನಡೆಯಲಿದೆ.

    ‘ಬಂಡ್ವಾಳ್ವಲ್ಲದ ಬಡಾಯಿ’
    ಉದ್ದಿನ ಮಣಿ, ಕಂಪೇರಿಟಿವ್ ಕೊಲೊರೊಲಿಗೆ, ಶ್ಯಾಡೋ ಆಫ್ ದ ಸನ್ comparative colorology, shadow of the sun, comparative colorology, shadow of the sun ಮುಂತಾದ ವಿಶಿಷ್ಟ ಪದ ಪ್ರಯೋಗಗಳು ಪ್ರಹಸನ ಪಿತಾಮಹ ಎಂದು ಖ್ಯಾತರಾಗಿರುವ ಟಿ.ಪಿ.ಕೈಲಾಸಂ ಅವರ ಟ್ರೇಡ್ ಮಾರ್ಕ್ ಎಂದರೆ ಉತ್ಪ್ರೇಕ್ಷೆಯಲ್ಲ.
    ವ್ಯವಸ್ಥೆಯನ್ನು ವ್ಯಂಗ್ಯ ಮಾಡಿ, ನಗುವಿನ ಬುಗ್ಗೆ ಹರಿಸುವ ಬಗೆ ಕೈಲಾಸಂರವರಿಗೆ ಸುಲಭವಾಗಿ ಕರಗತ. ಅದಕ್ಕೆ ಅಲ್ಲವೇ ಇವರನ್ನು tipycal ass ಅನ್ನುವುದು.

    ಇಂತಹ ಕೈಲಾಸಂರವರು 1945ರಲ್ಲಿ, ಒಬ್ಬ ಲಾಯರ್ ತನ್ನ ಬದುಕನ್ನ ಹೇಗೆಲ್ಲಾ ನಡೆಸಬಹುದು ಮತ್ತು ಅಂದಿನ ಸಾಮಾಜಿಕ ಸ್ಥಿತಿಗತಿಗಳು ಹೇಗಿದ್ದವು ಎಂಬುದನ್ನ ಉಡಾಫೆ ಮತ್ತು ವ್ಯಂಗ್ಯದ ಮೂಲಕ ಅದ್ಬುತವಾಗಿ ಬರೆದಿರುವ ನಾಟಕವೇ ‘ಬಂಡ್ವಾಳ್ವಲ್ಲದ ಬಡಾಯಿ’. ಈ ನಾಟಕ ಅಂದೇ ಬರೆದಿದ್ದರೂ ಇಂದಿಗೂ ಇಷ್ಟು ಪ್ರಸ್ತುತವಾಗಿರುವುದು ಆಶ್ಚರ್ಯವೇ ಸರಿ.

    ‘’ನಂಗ್ಯಾಕೋ ಡೌಟು’
    ಬಿ.ಆರ್.ಲಕ್ಷ್ಮಣ ರಾಯರು ರಚಿಸಿರುವ ಸಂಶಯ ರಾಧ್ಧಾಂತವೇ ‘ನಂಗ್ಯಾಕೋ ಡೌಟು’ ಎಂಬ ನಗೆ ನಾಟಕ. ಗಂಡ ಹೆಂಡಿರ ನಡುವೆ ಬರುವ ಸಂಶಯ ಇಡೀ ನಾಟಕವನ್ನು ಕಟ್ಟಿಕೊಟ್ಟಿದೆ. ನಾಯಕನ ಅದ್ಬುತ ಗಾಯನ ನಾಟಕಕ್ಕೆ ಧನಾತ್ಮಕ ಅಂಶ . ಕವಿತೆ, ಗಾಯನ ಮತ್ತು ಅಧ್ಬುತವಾದ ಬರವಣಿಗೆಯು ನಾಟಕ ಪ್ರೇಕ್ಷಕರಿಗೆ ರಸದೌತಣವನ್ನು ಒದಗಿಸುವುದರಲ್ಲಿ ಸಂಶಯವೇ ಇಲ್ಲ.

    ತಂಡದ ಬಗ್ಗೆ:
    ವಾರವೆಲ್ಲ ಕಂಪ್ಯೂಟರ್ ನ ಕೀಲಿಮಣೆ ಕುಟ್ಟುವ ಕಾಯಕದಲ್ಲಿ ನಿರತರಾಗಿರುವ, ರಂಗದ ಬಗ್ಗೆ ಅಪಾರವಾದ ಆಸಕ್ತಿಯಿರುವ ತಂಡ ‘ರಂಗ ತಂತ್ರ’.
    ಕಳೆದ 15 ವರ್ಷಗಳಿಂದಲೂ ರಂಗದ ಮೇಲೆ ಕೈಲಾಸಂ ಇವರ ಬಂಡ್ವಾಳ್ವಲ್ಲದ ಬಡಾಯಿ, ಅಮ್ಮಾವ್ರ ಗಂಡ, ಹುತ್ತದಲ್ಲಿ ಹುತ್ತ, ಶ್ರೀರಂಗರ ಶೋಕ ಚಕ್ರ, ಅಶ್ವತ್ ರ ಶ್ರೀಕೃಷ್ಣ ಸಂಧಾನ, ಬಿ.ಆರ್.ಲಕ್ಷ್ಮಣ ರಾವ್ ರ ನನಗ್ಯಾಕೋ ಡೌಟು, ಇಂತಹ ಹಲವು ಪ್ರಯೋಗಗಳನ್ನು ಈ ತಂಡ ಪ್ರಸ್ತುತಪಡಿಸಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರು ನಟನದಲ್ಲಿ ರಂಗಚರ್ಚೆ | ಜುಲೈ 30ರಂದು 
    Next Article ಮೈಸೂರಿನ ಕಿರುರಂಗ ಮಂದಿರದಲ್ಲಿ ‘ಅಶ್ವತ್ಥಾಮನ್’ | ಆಗಸ್ಟ್ 5ರಂದು
    roovari

    Add Comment Cancel Reply


    Related Posts

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಸಮಾರೋಪಗೊಂಡ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರ

    May 5, 2025

    ಮೈಸೂರು ಮತ್ತು ಬೆಂಗಳೂರಿನಲ್ಲಿ ‘ಎದೆಗೆ ಬಿದ್ದ ಅಕ್ಷರ’ ನಾಟಕ ಪ್ರದರ್ಶನ | ಮೇ 04

    May 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.