Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಲೋಕಾರ್ಪಣೆಗೊಂಡ ‘ಬೆಳಕು’ ಕವನ ಸಂಕಲನ
    Book Release

    ಲೋಕಾರ್ಪಣೆಗೊಂಡ ‘ಬೆಳಕು’ ಕವನ ಸಂಕಲನ

    February 25, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಪುರಭವನದಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ದಿನಾಂಕ 14 ಫೆಬ್ರವರಿ 2025 ರಂದು ನಡೆದ 10 ಪುಸ್ತಕಗಳ ಲೋಕರ್ಪಣಾ ಕಾರ್ಯಕ್ರಮದಲ್ಲಿ ಕರುಣಾಕರ ಬಳ್ಕೂರು ಇವರ ಎರಡನೇಯ ಕೃತಿ ‘ಬೆಳಕು’ ಕವನ ಸಂಕಲನವನ್ನು ಅರೆಹೊಳೆ ಪ್ರತಿಷ್ಠಾನದ ರೂವಾರಿ ಶ್ರೀ ಅರೆಹೊಳೆ ಸದಾಶಿವ ರಾವ್ ಬಿಡುಗಡೆಗೊಳಿಸಿ ಮಾತನಾಡುತ್ತಾ “ಈ ಕವನ ಸಂಕಲನವು ಅರ್ಥಪೂರ್ಣವಾಗಿದೆ. ಕಾರಣ ತಂದೆ ತಾಯಿ ಮಕ್ಕಳನ್ನು ಬೆಳಕಾಗಿ ಮುನ್ನಡೆಸಬೇಕು ಎಂಬ ಪ್ರಜ್ಞೆಯನ್ನು ಈ ಕೃತಿ ನಮ್ಮಲ್ಲಿ ಮೂಡಿಸುತ್ತಾರೆ.
    ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ಧಕಟ್ಟೆ ಬಂಟ್ವಾಳ ತಾಲೂಕು ಇಲ್ಲಿನ ಕನ್ನಡ ಉಪನ್ಯಾಸಕರಾದ ಸಂಜಯ ಬಿಳಿಕಿಕೊಪ್ಪ ಇವರು ‘ಬೆಳಕು’ ಕವನ ಸಂಕಲನವನ್ನು ಪರಿಚಯ ಮಾಡುತ್ತಾ “ಬೆಳಕು ಇರುವಂತದ್ದೇ. ಆದರೆ ಆ ಬೆಳಕು ಕೆಲವರಿಗೆ ಕತ್ತಲಾಗಬಹುದು ಮತ್ತು ಕೆಲವರಿಗೆ ಗುರುತಿಸಲಾಗದ ಸ್ಥಿತಿಯಲ್ಲಿ ಇರಬಹುದು. ಆ ಸಂದರ್ಭದಲ್ಲಿ ಬಳ್ಕೂರು ಬರೆದ ಕವನಗಳಲ್ಲಿ ಅರ್ಥೈಸಿಕೊಳ್ಳಬಹುದು ಎನ್ನುವುದು ಇಲ್ಲಿನ ಕವನಗಳ ಮೂಲಕ ತಿಳಿಯಪಡಿಸಿದ್ದಾರೆ. ಸಹೃದಯರಲ್ಲಿ ಇವರ ಕವನಗಳು ಬೆಳಕು ಮೂಡಿಸಲಿ ಎಂದು ಶುಭ ಹಾರೈಸುತ್ತೇನೆ. ಸಮಾಜದ ನಡುವೆ ಇರುವ ವಸ್ತುಗಳನ್ನು ಇಲ್ಲಿನ ಕವನಗಳಲ್ಲಿ ಬಳಸಿಕೊಳ್ಳುತ್ತ ಕೆಲವೊಂದು ವಿರೋಧ ಭಾಸವನ್ನು ಗುರುತಿಸಿದ್ದಾರೆ. ಸಮಕಾಲೀನತೆ, ಪ್ರಕೃತಿ, ರಮ್ಯತೆ, ವಿಶ್ವ ಸಂದೇಶ ಹೀಗೆ ಹಲವು ಅಂಶಗಳನ್ನು ಸರಳವಾಗಿ ತಮ್ಮ ಕವನಗಳಲ್ಲಿ ಗುರುತಿಸಿದ್ದಾರೆ .ಲೇಖಕರಾದ ಡಾ. ಬಿ. ಎ. ವಿವೇಕ್ ರೈ ಅವರು ಇದಕ್ಕೆ ಮುನ್ನುಡಿ ಬರೆದಿರುವುದು ವಿಶೇಷ” ಎಂದರು.
    ವೇದಿಕೆಯಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಶಶಿರಾಜ್ ರಾವ್ ಕಾವೂರ್, ‘ಬೆಳಕು’ ಸಂಕಲನದ ಲೇಖಕರಾದ ಕವಿ ಕರುಣಾಕರ ಬಳ್ಕೂರು , ಶಿಲ್ಪ ಕೆ. ಬಳ್ಕೂರು, ಅಥರ್ವ ಕೆ. ಬಳ್ಕೂರು, ಅದ್ವೈತ್ ಕೆ. ಬಳ್ಕೂರು ಉಪಸ್ಥಿತರಿದ್ಧರು. ಕೆನರಾ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ರಘು ಇಡ್ಕಿದು ಇವರು ಕಾರ್ಯಕ್ರಮ ನಿರೂಪಿಸಿದರು. ಗಾಯಕಿ ಪುಷ್ಪಲತಾ ಕಾರಂತ್ ಕೆಲವು ಕವನಗಳನ್ನು ಹಾಡಿದರು.

    Book release
    Share. Facebook Twitter Pinterest LinkedIn Tumblr WhatsApp Email
    Previous Articleಕುಶಾಲನಗರದಲ್ಲಿ ಕೊಡಗು ‘ಕಾವ್ಯ ಸಂಸ್ಕೃತಿ ಯಾನ’
    Next Article ನಿರಂಜನ ಬದುಕಿನ ‘ನೂರರ’ ಅವಲೋಕನ
    roovari

    Add Comment Cancel Reply


    Related Posts

    ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಅನುವಾದಿತ ಕೃತಿ ಲೋಕಾರ್ಪಣೆ

    May 23, 2025

    ಉಡುಪಿಯ ರವೀಂದ್ರ ಮಂಟಪದಲ್ಲಿ ‘ಸಾಮರಸ್ಯ ಪ್ರಶಸ್ತಿ ಪುರಸ್ಕಾರ’ ಪ್ರದಾನ | ಮೇ 24

    May 23, 2025

    ಬ್ಯಾರಿ ಜಾನಪದ ಕಥೆಗಳ ಇಂಗ್ಲೀಷ್ ಅನುವಾದಿತ ಕೃತಿ ಬಿಡುಗಡೆ

    May 22, 2025

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.