Subscribe to Updates

    Get the latest creative news from FooBar about art, design and business.

    What's Hot

    ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನಲ್ಲಿ ‘ಬೆಸೆಂಟ್ ಸ್ಪ್ಲಾಶ್’ ಸಮಾರಂಭ

    December 1, 2025

    ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ‘ಅಖಿಲ ಭಾರತ ಕನ್ನಡ ನುಡಿ ಸಮ್ಮೇಳನ’ | ನವೆಂಬರ್ 30

    November 29, 2025

    ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ 10 ಮಂದಿಗೆ ‘ಗೌರವ ಪುರಸ್ಕಾರ’ ಪ್ರಕಟ

    November 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನಲ್ಲಿ ‘ಬೆಸೆಂಟ್ ಸ್ಪ್ಲಾಶ್’ ಸಮಾರಂಭ
    Competition

    ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನಲ್ಲಿ ‘ಬೆಸೆಂಟ್ ಸ್ಪ್ಲಾಶ್’ ಸಮಾರಂಭ

    December 1, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿ ‘ಬೆಸೆಂಟ್ ಸ್ಪ್ಲಾಶ್’ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅಂತರ್ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧಾ ಉತ್ಸವ ಉದ್ಘಾಟನಾ ಸಮಾರಂಭ ಜರಗಿತು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿತ್ರ ಸಾಹಿತಿ ಶ್ರೀ ಕೀರ್ತನ್ ಭಂಡಾರಿಯವರು ಉಪಸ್ಥಿತರಿದ್ದು, ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಶಾಲೆಗಳಲ್ಲಿ ಸಿಗುವ ವೇದಿಕೆ ಸಣ್ಣದಾಗಿದ್ದರು ಬದುಕಿನ ಸಂದರ್ಭದಲ್ಲಿ ಅದು ಬಹುದೊಡ್ಡ ವೇದಿಕೆ ಆಗುತ್ತದೆ. ಕಲಾವಿದರ ಕನಸುಗಳು ಶಾಲಾ ವೇದಿಕೆಗಳಿಂದಲೇ ಮೂಡುತ್ತದೆ. ಸಿಕ್ಕಿದ ವೇದಿಕೆಗಳನ್ನು ಚೆನ್ನಾಗಿ ಬಳಸಿಕೊಂಡು ವಿದ್ಯಾರ್ಥಿಗಳಾಗಿರುವಾಗಲೇ ನಮ್ಮ ಕನಸುಗಳನ್ನು ರೂಪಿಸಿಕೊಳ್ಳಬೇಕಾದದು ವಿದ್ಯಾರ್ಥಿಗಳ ಜವಾಬ್ದಾರಿ” ಎಂದು ನುಡಿದರು.

    ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಸಂಚಾಲಕರಾದ ಶ್ರೀ ಸತೀಶ್ ಭಟ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು “ಪ್ರತಿಯೊಬ್ಬರಲ್ಲೂ ಪ್ರತಿಭೆಗಳಿವೆ. ಅದನ್ನು ಪ್ರದರ್ಶಿಸುವ ಮೂಲಕ ಬೆಳಕಿಗೆ ತರಬೇಕಾದುದು ವಿದ್ಯಾರ್ಥಿಗಳ ಕರ್ತವ್ಯ. ಅದಕ್ಕೆ ಬೇಕಾದ ವೇದಿಕೆಗಳು ಇಂತಹ ಸ್ಪರ್ಧಾ ಉತ್ಸವಗಳಿಂದ ವಿದ್ಯಾರ್ಥಿಗಳಿಗೆ ಸಿಗುತ್ತದೆ” ಎಂದರು.

    ಕಾರ್ಯಕ್ರಮದಲ್ಲಿ ಫಿಲಂ ಎಡಿಟರ್ ಶ್ರೀ ನಿತಿನ್ ಶೆಟ್ಟಿ, ಫಿಲಂ ಕೊರಿಯೋಗ್ರಾಫರ್ ವಿನಾಯಕ ಆಚಾರ್ಯ, ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಮನೇಲ್ ಅಣ್ಣಪ್ಪ ನಾಯಕ್, ಬೆಸೆಂಟ್ ಕನ್ನಡ ಮಾಧ್ಯಮ ಶಾಲೆ ಮತ್ತು ಹೈಸ್ಕೂಲ್ ಸಂಚಾಲಕರಾದ ಶ್ರೀ ಗಣೇಶ್ ಪೈ, ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಯಕ್ ರೂಪಸಿಂಗ್ ಉಪಸ್ಥಿತರಿದ್ದರು. ಸ್ಪರ್ಧೆಗಳ ಸಂಯೋಜಕಿ ಉಪನ್ಯಾಸಕಿ ಶ್ರೀಮತಿ ಶೈಲಶ್ರೀ ಸಿ. ಮೇಲ್ಮಾರಿ ಮತ್ತು ಸಹ ಸಂಯೋಜಕಿ ಉಪನ್ಯಾಸಕಿ ಶ್ರೀಮತಿ ರಾಜಿ ಮೋಲ್ ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ಶ್ರೀ ಕೀರ್ತನ್ ಭಂಡಾರಿ, ಶ್ರೀ ನಿತಿನ್ ಶೆಟ್ಟಿ, ಶ್ರೀ ವಿನಾಯಕ ಆಚಾರ್ಯ ಇವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕ್ಯಾನ್ವಾಸ್ ಪೇಂಟಿಂಗ್, ಫಿಲ್ಮಿ ಡಾನ್ಸ್, ಕುಣಿತ ಭಜನೆ, ವಿಜ್ಞಾನದ ಮಾದರಿಗಳು, ಪವರ್ ಪಾಯಿಂಟ್ ಪ್ರೆಸೆಂಟೇಷನ್, ಫ್ಯೂಶನ್ ಮ್ಯೂಸಿಕ್, ಭಾಷಣ, ಪೋಸ್ಟರ್ ತಯಾರಿಕೆ ಮುಂತಾದ ಹಲವು ಸ್ಪರ್ಧೆಗಳು ನಡೆದವು. ಅನೇಕ ಶಾಲೆಗಳ ವಿದ್ಯಾರ್ಥಿಗಳು ಇವುಗಳಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಅಂಕಿತ ಮತ್ತು ತ್ರಿಯಾ ನಿರೂಪಿಸಿ, ರಿದಾ ಧನ್ಯವಾದಗಳು ಸಮರ್ಪಣೆಗೈದರು.

    baikady competition dance drawing Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಶೇಷಾದ್ರಿಪುರಂನಲ್ಲಿ ‘ಅಖಿಲ ಭಾರತ ಕನ್ನಡ ನುಡಿ ಸಮ್ಮೇಳನ’ | ನವೆಂಬರ್ 30
    roovari

    Add Comment Cancel Reply


    Related Posts

    ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ‘ಅಖಿಲ ಭಾರತ ಕನ್ನಡ ನುಡಿ ಸಮ್ಮೇಳನ’ | ನವೆಂಬರ್ 30

    November 29, 2025

    ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ 10 ಮಂದಿಗೆ ‘ಗೌರವ ಪುರಸ್ಕಾರ’ ಪ್ರಕಟ

    November 29, 2025

    ನಾಟ್ಯ ಭೈರವಿ ಕಲಾ ಕುಟೀರದ ಪ್ರತಿಭೆಗಳಿಂದ ‘ನೃತ್ಯಾರ್ಚನೆ ನೃತ್ಯಹಬ್ಬ’ | ಡಿಸೆಂಬರ್ 01

    November 29, 2025

    ಸಾಧನ ಸಂಗಮ ನೃತ್ಯ ಸಂಸ್ಥೆಯಿಂದ ‘ಮುಕುಳ ನೃತ್ಯೋತ್ಸವ – 2025’ | ನವೆಂಬರ್ 30

    November 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.