Subscribe to Updates

    Get the latest creative news from FooBar about art, design and business.

    What's Hot

    ಸಿಂಧನೂರು ಸತ್ಯಾ ಗಾರ್ಡನ್ ನಲ್ಲಿ 11ನೇ ‘ಮೇ ಸಾಹಿತ್ಯ ಮೇಳ’ | ಮೇ 17 ಮತ್ತು 18

    May 16, 2025

    ಕಯ್ಯಾರರ ಜನ್ಮದಿನ ಸಂಭ್ರಮದಲ್ಲಿ ಭಾಗವಹಿಸಲು ಆಸಕ್ತರಿಗೆ ಆಹ್ವಾನ

    May 16, 2025

    ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಲ್ವತ್ತರ ನಲಿವು 11ನೇ ಸರಣಿ ಕಾರ್ಯಕ್ರಮ

    May 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟಿನ ವತಿಯಿಂದ ಕುಣಿತ ಭಜನಾ ಸ್ಪರ್ಧೆ
    Competition

    ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟಿನ ವತಿಯಿಂದ ಕುಣಿತ ಭಜನಾ ಸ್ಪರ್ಧೆ

    May 30, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಳ್ಳಾಲ : ದ.ಕ. ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ಸಂಘಟನೆಯು ತ್ರಿವಳಿ (ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು) ಜಿಲ್ಲಾ ಮಟ್ಟದ ‘ಸುಗಿತ್ ನಲಿಪುಗ 2024’ ಕುಣಿತ ಭಜನಾ ಸ್ಪರ್ಧೆಯನ್ನು ದಿನಾಂಕ 19-05-2024ರಂದು ಅಂಬಿಕಾ ರಸ್ತೆಯ ಗಟ್ಟಿ ಸಮಾಜ ಭವನದಲ್ಲಿ ಆಯೋಜಿಸಿದ್ದರು.

    ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು “ಹಿಂದೆ ಭಜನೆ ಮತ್ತು ಯಕ್ಷಗಾನವನ್ನು ತಾತ್ಸಾರವಾಗಿ ನೋಡುತ್ತಿದ್ದು, ಇಂದು ಶಿಕ್ಷಣ, ಪದವಿ ಪಡೆದವರೇ ಈ ಕ್ಷೇತ್ರದತ್ತ ಬರುತ್ತಿದ್ದಾರೆ. ಭಜನೆ ಎನ್ನುವುದು ಧರ್ಮ ಶಿಕ್ಷಣದ ಪಠ್ಯ, ಅಸ್ಪೃಶ್ಯತೆಯ ಘಾಟು ಇದರಲ್ಲಿಲ್ಲ, ಇಹ ಪರದ ಸೇರುವಿಕೆಯಾಗಿರುವ ಭಜನೆಯ ಮೂಲಕ ಬದುಕು‌ ಕಟ್ಟಿಕೊಳ್ಳಬಹುದು. ಹತ್ತು ಮಂದಿಗೆ ಜಾಗೃತಿ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸ್ಪರ್ಧೆ ಅಗತ್ಯ” ಎಂದು ನುಡಿದರು. ಈ ವೇಳೆ ಸಾಯಿ ಪರಿವಾರ್ ಟ್ರಸ್ಟಿನ ಮಹಾಪೋಷಕರಾದ ಪ್ರವೀಣ್ ಶೆಟ್ಟಿ ಪಿಲಾರು ಮೇಗಿಮನೆ ಇವರಿಗೆ ‘ಸಾಯಿ ಪರಿವಾರ್ ಗೌರವ’ ನೀಡಿ ಸನ್ಮಾನಿಸಲಾಯಿತು.

    ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಂಜಪ್ಪ ಕಾರ್ನವರ್, ಉಳ್ಳಾಲ ಭಗವತೀ ಕ್ಷೇತ್ರದ ಮೊಕ್ತೇಸರರಾದ ಸುರೇಶ್ ಭಟ್ನಗರ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್, ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್, ವಕೀಲರಾದ ಗಂಗಾದರ ಉಳ್ಳಾಲ್, ಕೈರಂಗಳ ಶಾರದಾ ವಿದ್ಯಾಗಣಪತಿ ಸಂಸ್ಥೆಯ ಸಂಚಾಲಕ ರಾಜಾರಾಮ ಭಟ್, ಉಳ್ಳಾಲ ಆರಕ್ಷಕ ಠಾಣಾಧಿಕಾರಿ ಬಾಲಕೃಷ್ಣ, ಕಲ್ಲಾಪು ಕೊರಗಜ್ಜ ಮಧ್ಯಸ್ಥರಾದ ದೇವದಾಸ್ ಗಟ್ಟಿ, ಹಿಂದೂ ಯುವ ಸೇನಾ ಅಧ್ಯಕ್ಷ ಯಶೋದರ ಚೌಟ, ಬಿಜೆಪಿ ಮಂಗಳೂರು ಮಂಡಲಾಧ್ಯಕ್ಷ ಜಗದೀಶ್ ಆಳ್ವ, ವಿದ್ಯಾರತ್ನ ವಿದ್ಯಾಸಂಸ್ಥೆಯ ರವೀಂದ್ರ ಉಳಿದೊಟ್ಟು, ಕದ್ರಿ ಕ್ರಿಕೆಟರ್ಸ್ ನ ಜಗದೀಶ್ ಕದ್ರಿ, ದುರ್ಗಾವಾಹಿನಿ ಮಹಿಳಾ ಮಂಡಳಿಯ ಸುನೀತಾ ಗಟ್ಟಿ ಕುತ್ತಾರ್, ಧನಲಕ್ಷ್ಮಿ ಗಟ್ಟಿ, ಧಾರ್ಮಿಕ ಮುಖಂಡ ಕೃಷ್ಣ ಶಿವಕೃಪಾ ಕುಂಜತ್ತೂರು, ಇನ್ನಿತರ ವಿವಿಧ ಕ್ಷೇತ್ರದ ಪ್ರಮುಖರಾದ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು, ನಾಗರಾಜ ಆಚಾರ್ಯ ಮಂಗಳಾದೇವಿ, ಭಗವಾನ್ ದಾಸ್ ತೊಕ್ಕೊಟ್ಟು, ದಯಾನಂದ ತೊಕ್ಕೊಟ್ಟು, ಆನಂದ ಶೆಟ್ಟಿ ತೊಕ್ಕೊಟ್ಟು, ಗೋಪಾಲಕೃಷ್ಣ ಮೇಲಾಂಟ, ಸಪ್ನಾ ಶೆಟ್ಟಿ, ಯಶವಂತ ಅಮೀನ್ ಉಳ್ಳಾಲ, ದೀಕ್ಷಿತ್ ನಿಸರ್ಗ, ಪ್ರವೀಣ್ ಬಸ್ತಿ, ಪ್ರವೀಣ್ ರೈ ಕೆರೆಬೈಲ್ ಗುಡ್ಡೆ, ರಾಜೇಶ್‌ ಕೊಲ್ಯ, ಗಜೇಂದ್ರ ಮಡಿಲು, ಸಾಯಿ ಪರಿವಾರ್ ಟ್ರಸ್ಟ್ ಸ್ಥಾಪಕ ಪುರುಷೋತ್ತಮ ಕಲ್ಲಾಪು, ಅಧ್ಯಕ್ಷ ಗಣೇಶ್ ಅಂಚನ್ ಉಪಸ್ಥಿತರಿದ್ದರು. ಸಾಯಿ ಪರಿವಾರ್ ಟ್ರಸ್ಟಿನ ಗೌರವ ಸದಸ್ಯ ಡಾ. ಅರುಣ್ ಉಳ್ಳಾಲ್ ಸ್ವಾಗತಿಸಿ, ಟ್ರಸ್ಟಿನ ಸ್ಥಾಪಕರಾದ ಪ್ರವೀಣ್ ಎಸ್. ಕುಂಪಲ ಅವರು ಕಾರ್ಯಕ್ರಮ ನಿರೂಪಿಸಿ, ಕೃಷ್ಣ ಪೊನ್ನತ್ತೋಡು ವಂದಿಸಿದರು.

    ಈ ಕುಣಿತ ಭಜನಾ ಸ್ಪರ್ಧೆಯಲ್ಲಿ ಹೊಸಬೆಟ್ಟುವಿನ ಬಾಲವಿಕಾಸ ಭಜನಾ ತಂಡವು ಪ್ರಥಮ ಪ್ರಶಸ್ತಿ, ದ್ವಿತೀಯ ಪ್ರಶಸ್ತಿ ಕುಳಾಯಿಯ ಯುವ ಭಜನಾ ತಂಡ, ತೃತೀಯ ಪ್ರಶಸ್ತಿ ಮೂಡುಬಿದಿರೆ ನಿರ್ಕೆರೆ ರಾಧಾಕೃಷ್ಣ ಭಜನಾ ಮಂಡಳಿ, ಚತುರ್ಥ ಪ್ರಶಸ್ತಿ ಕಾನ ಮುಚ್ಚೂರಿನ ಶ್ರೀರಾಮ ಭಜನಾ ಮಂಡಳಿಗೆ ಲಭಿಸಿದೆ. ಒಟ್ಟು ಆಹ್ವಾನಿತ 14 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಯುವ ಸಾಹಿತಿ ಡಾ. ಅರುಣ್ ಉಳ್ಳಾಲ್ ಸ್ಪರ್ಧೆಯ ಪ್ರಸ್ತುತಿ ನಡೆಸಿಕೊಟ್ಟರು.

    ಸಮಾರೋಪ ಸಮಾರಂಭದಲ್ಲಿ ಚೀರುಂಭಾ ಭಗವತಿ ಕ್ಷೇತ್ರದ ಮೊಕ್ತೇಸರ ಸುರೇಶ್ ಭಟ್ನಗರ, ಸಾಯಿ ಪರಿವಾರ್ ಟ್ರಸ್ಟಿನ ಅಧ್ಯಕ್ಷ ಗಣೇಶ್ ಅಂಚನ್, ಪ್ರಮುಖರಾದ ಪ್ರವೀಣ್ ಎಸ್. ಕುಂಪಲ, ಪುರುಷೋತ್ತಮ ಕಲ್ಲಾಪು, ಸತೀಶ್ ಭಟ್ನಗರ, ಸಂಪತ್ ಪಿಲಾರ್, ಧೀರಜ್ ಗಟ್ಟಿ ಕೊಲ್ಯ, ಗಣೇಶ್ ಪಂಡಿತ್ ಮುಳಿಹಿತ್ಲು, ಅಶೋಕ್ ಉಚ್ಚಿಲ್, ಕುಶಾಲ್ ರಾಜ್ ತೊಕ್ಕೊಟ್ಟು, ಕೃಷ್ಣ ಪೊನ್ನೆತ್ತೋಡು, ಮಟನ್ ರಾಜಾ, ಶವಿತ್ ಉಚ್ಚಿಲ್, ರಜನೀಶ್ ನಾಯ್ಕ್, ದೀಪಕ್ ಬನಾರಿ, ಜಗದೀಶ್ ಆಚಾರ್ಯ, ಮಾಧವ ಉಳ್ಳಾಲ್, ಶೈಲೇಶ್‌ ಸೇವಂತಿಗುತ್ತು, ತಾರನಾಥ ತೊಕ್ಕೊಟ್ಟು, ಹರೀಶ್ ಕೊಟ್ಟಾರಿ, ದಯಾನಂದ ಕೋಟ್ಯಾನ್, ರತ್ನಾಕರ ಉಳ್ಳಾಲ್, ಪ್ರೀತಂ ಶೆಟ್ಟಿ ಮಾಡೂರು, ಕೌಶಿಕ್ ಸೇವಂತಿಗುಡ್ಡೆ, ರಾಜೇಶ್ ಯು.ಬಿ., ಹರ್ಷರಾಜ್ ಕುಂಪಲ, ಕಿಶೋರ್ ಡಿ.ಕೆ., ನಾರಾಯಣ ಬಿ., ಉಮೇಶ್ ಕುತ್ತಾರ್, ಸುಧೀರ್ ಕುಲಾಲ್ ಪಂಡಿತ್ ಹೌಸ್, ಸತೀಶ್ ದೀಪಂ, ಪ್ರವೀಣ್ ಮೆಸ್ಕಾಂ, ಪ್ರಕಾಶ್ ಸಿಂಪೋನಿ, ಶಿವರಾಮ ಗಟ್ಟಿ, ಪ್ರವೀಣ್ ಸುವರ್ಣ ಜಪ್ಪಿನಮೊಗರು, ಪ್ರವೀಣ್ ಕೊಲ್ಯ, ವೆಂಕಟೇಶ್ ಕುಂಪಲ, ಅಭಿಷೇಕ್ ಆಚಾರ್ಯ, ಕಾರ್ತಿಕ್ ಉಚ್ಚಿಲ್ ಉಪಸ್ಥಿತರಿದ್ದರು. ತೀರ್ಪುಗಾರಿಕೆಯನ್ನು ಸಂಗೀತ ವಿದ್ವಾನ್ ವೆಂಕಟೇಶ್ ರಾವ್ ಮತ್ತು ಕುಣಿತ ಭಜನಾ ಶಿಕ್ಷಕ ಯೋಗೀಶ್ ನರಿಕೊಂಬು ನಡೆಸಿಕೊಟ್ಟರು.

    Share. Facebook Twitter Pinterest LinkedIn Tumblr WhatsApp Email
    Previous Articleಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ‘ದಿಗಂತ-2024’
    Next Article ಕೊಲ್ಯದ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ‘ನಾಟ್ಯ ಮೋಹನ ನವತ್ಯೋತ್ಸವ’ | ಮೇ 31
    roovari

    Add Comment Cancel Reply


    Related Posts

    ಸಿಂಧನೂರು ಸತ್ಯಾ ಗಾರ್ಡನ್ ನಲ್ಲಿ 11ನೇ ‘ಮೇ ಸಾಹಿತ್ಯ ಮೇಳ’ | ಮೇ 17 ಮತ್ತು 18

    May 16, 2025

    ಕಯ್ಯಾರರ ಜನ್ಮದಿನ ಸಂಭ್ರಮದಲ್ಲಿ ಭಾಗವಹಿಸಲು ಆಸಕ್ತರಿಗೆ ಆಹ್ವಾನ

    May 16, 2025

    ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಲ್ವತ್ತರ ನಲಿವು 11ನೇ ಸರಣಿ ಕಾರ್ಯಕ್ರಮ

    May 16, 2025

    ಸಾಹಿತಿ ರತ್ನ ಕುಮಾರ್ ಎಂ. ಇವರಿಗೆ ಕ.ಸಾ.ಪ.ದಿಂದ ಸನ್ಮಾನ

    May 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.