Subscribe to Updates

    Get the latest creative news from FooBar about art, design and business.

    What's Hot

    ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿಗೆ ಕ.ಸಾ.ಪ. ವತಿಯಿಂದ ಪುಸ್ತಕಗಳ ಕೊಡುಗೆ

    September 17, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಸಂಕ್ರಾಂತಿ’ | ಸೆಪ್ಟೆಂಬರ್ 20

    September 17, 2025

    ತಿಂಗಳ ನಾಟಕ ಸಂಭ್ರಮದಲ್ಲಿ ‘ಚೌಕಟ್ಟಿನಾಚೆಯ ಚಿತ್ರ’ ನಾಟಕ ಪ್ರದರ್ಶನ | ಸೆಪ್ಟೆಂಬರ್ 20

    September 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಾಮಕೃಷ್ಣ ಮಠದಲ್ಲಿ ‘ಭಜನಾ ಸಂಗಮ’ ಕಾರ್ಯಕ್ರಮ ಸಂಪನ್ನ
    Dance

    ರಾಮಕೃಷ್ಣ ಮಠದಲ್ಲಿ ‘ಭಜನಾ ಸಂಗಮ’ ಕಾರ್ಯಕ್ರಮ ಸಂಪನ್ನ

    January 10, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಭಜನಾ ಸಂಗಮ’ ಕಾರ್ಯಕ್ರಮವು ದಿನಾಂಕ 01-01-2024ರಂದು ಸಂಪನ್ನಗೊಂಡಿತು. ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಭಕ್ತರ ಆಧ್ಯಾತ್ಮಿಕ ಮನೋಭಿಲಾಶೆಗಳನ್ನು ಈಡೇರಿಸಿದ ಕಲ್ಪತರು ದಿನದಂದು, ಕಲ್ಪತರು ಉತ್ಸವದ ಪ್ರಯುಕ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಈ ಕಾರ್ಯಕ್ರಮದ ಅಂಗವಾಗಿ ಸಂಜೆ 4-30ಕ್ಕೆ ಸರಿಯಾಗಿ ದೀನ್‌ರಾಜ್ ಕಳವಾರು ಅವರ ನೇತೃತ್ವದಲ್ಲಿ 400ಕ್ಕೂ ಹೆಚ್ಚಿನ ಮಕ್ಕಳಿಂದ ಮಂಗಳಾದೇವಿ ವೃತ್ತದಿಂದ ರಾಮಕೃಷ್ಣ ಮಠದವರೆಗೆ ಕುಣಿತ ಭಜನೆಯೊಂದಿಗೆ ಭವ್ಯ ಭಜನಾ ಶೋಭಾಯಾತ್ರೆ ನಡೆಯಿತು. ಈ ಶೋಭಾಯಾತ್ರೆಯಲ್ಲಿ 500ಕ್ಕೂ ಮಿಕ್ಕ ಭಕ್ತರು ಹಾಗೂ ವಿವಿಧ ಭಜನಾ ಮಂಡಳಿಗಳ ಸದಸ್ಯರು ಪಾಲ್ಗೊಂಡಿದ್ದರು. ಮಂಗಳಾದೇವಿ ವೃತ್ತದಿಂದ ಆರಂಭಗೊಂಡ ಭಜನಾ ಶೋಭಾಯಾತ್ರೆಯು ಮಂಗಳಾದೇವಿ ರಥಬೀದಿಯ ಮೂಲಕ ಸಾಗಿ ಮಂಗಳಾದೇವಿ ದೇವಸ್ಥಾನದ ಮುಂಭಾಗವಾಗಿ ರಾಮಕೃಷ್ಣ ಮಠವನ್ನು ಪ್ರವೇಶಿಸಿತು. ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದರ ಪ್ರತಿಮೆಯ ಮುಂಭಾಗದಲ್ಲಿ ಮಕ್ಕಳು ಕುಣಿತ ಭಜನೆಯ ವಿಶೇಷ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಹಾಗೂ ಆಹ್ವಾನಿತ ಅತಿಥಿಗಳು ಮಕ್ಕಳೊಂದಿಗೆ ಕುಣಿತ ಭಜನೆಯಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು. ಭಜನಾ ಶೋಭಾಯಾತ್ರೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣ ಆಸ್ರಣ್ಣ ಚಾಲನೆ ನೀಡಿದರು.

    ನಂತರ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2024 ಸಾಲಿನ ಭಜನ್ ಸಂಧ್ಯಾ ಕಾರ್ಯಕ್ರಮದ ಉದ್ಘಾಟನೆಯು ನಡೆಯಿತು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರ ದಿವ್ಯ ಸಾನಿಧ್ಯದಲ್ಲಿ ಬೆಂಗಳೂರಿನ ಖ್ಯಾತ ಶಾಸ್ತ್ರೀಯ ಸಂಗೀತಗಾರರಾದ ಶ್ರೀ ವಿದ್ಯಾಭೂಷಣ ಅವರು ಭಜನ್ ಸಂಧ್ಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಕುಲಾಧಿಪತಿಗಳಾದ ಶ್ರೀ ಎನ್. ವಿನಯ್ ಹೆಗ್ಡೆ, ಮಂಗಳೂರಿನ ಎಸ್.ಸಿ.ಎಸ್. ಆಸ್ಪತ್ರೆಯ ಚೇರ್ಮನ್‌ ಡಾ. ಜೀವರಾಜ್ ಸೊರಕೆ, ಎಂ.ಆರ್.ಪಿ.ಎಲ್. ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಬಿ.ಹೆಚ್.ವಿ. ಪ್ರಸಾದ್, ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಈ ಕಾರ್ಯಕ್ರಮದ ಅಂಗವಾಗಿ ಖ್ಯಾತ ಗಾಯಕರಾದ ಶ್ರೀ ವಿದ್ಯಾಭೂಷಣ ಬೆಂಗಳೂರು ಅವರಿಂದ ಗಾನಸುಧೆ ಕಾರ್ಯಕ್ರಮ ನಡೆಯಿತು. ಮಂಗಳೂರು ರಾಮಕೃಷ್ಣ ಮಠದ ಭಕ್ತರು, ಸ್ವಯಂಸೇವಕರು, ಮಕ್ಕಳು ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

    Share. Facebook Twitter Pinterest LinkedIn Tumblr WhatsApp Email
    Previous Articleರಾಮಕ್ಷತ್ರಿಯ ಸಮಾಜದ ಸಾಹಿತಿಗಳ ಕವಿ, ಕವಯತ್ರಿಯರ ಕವಿತಾ ಸಮಾಹಾರಕ್ಕೆ ಕವಿತೆಗಳ ಆಹ್ವಾನ | ಕೊನೆ ದಿನಾಂಕ ಫೆಬ್ರವರಿ 1
    Next Article ಮನುಷ್ಯನ ಹುಳುಕುಗಳನ್ನು ತೆರೆದಿಡುವ ಕಥೆಗಳು ‘ನಾಯಿ ನಾನು’ – ಪುಸ್ತಕ ವಿಮರ್ಶೆ
    roovari

    Add Comment Cancel Reply


    Related Posts

    ಮೂಡುಬಿದಿರೆಯಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ | ಸೆಪ್ಟೆಂಬರ್ 20

    September 17, 2025

    ಬೆಂಗಳೂರಿನ ವಿಜಯನಗರ ಬಿಂಬದಲ್ಲಿ ಒಂದು ವರ್ಷದ ರಂಗಭೂಮಿ ಡಿಪ್ಲೋಮೋ   

    September 16, 2025

    ಬೈಲೂರಿನಲ್ಲಿ ಕೃತಿಯ ನರ್ಸಿಂಗ್ ರಾಣ ಇವರಿಂದ ಒಡಿಸ್ಸಿ ನೃತ್ಯ | ಸೆಪ್ಟೆಂಬರ್ 19

    September 16, 2025

    ಮಂಚಿ ಲಯನ್ಸ್ ಕ್ಲಬ್ ನಲ್ಲಿ ನೃತ್ಯಸರಣಿ ಮಾಲಿಕೆ ‘ಕಲಾಧಾರಾ’

    September 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.