Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಭಾರತದ ಸಂತ ಸತ್ವ – ಸರಣಿ ಉಪನ್ಯಾಸ
    News

    ಭಾರತದ ಸಂತ ಸತ್ವ – ಸರಣಿ ಉಪನ್ಯಾಸ

    March 17, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    17 ಮಾರ್ಚ್ 2023, ಮಂಗಳೂರು: ನಾರಾಯಣ ಗುರುಗಳಿಂದ ಶೂದ್ರ ಶಿವನ ಅನಾವರಣ –ಶ್ರೀ ಜಯಾನಂದ ಚೇಳಾಯರು

    “19ನೇ ಶತಮಾನದ ವಿಶ್ವ ಸಂತ ನಾರಾಯಣ ಗುರುಗಳು ದೇವರಿಂದ ವಂಚಿತರಾದವರಿಗೆ ದೇವರನ್ನು ನೀಡಿದ, ಪೂಜಿಸುವ ಅಧಿಕಾರ ಕೊಟ್ಟ ಸಂತ ಸತ್ವ. ಅವರಿಂದ ಶೂದ್ರ ಶಿವನ ಅನಾವರಣ ಆದುದು 19ನೇ ಶತಮಾನದ ದೊಡ್ಡ ಧಾರ್ಮಿಕ ಕ್ರಾಂತಿ” ಎಂದು ಯುವ ಚಿಂತಕ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಶ್ರೀ ಜಯಾನಂದ ಚೇಳಾಯರು ಹೇಳಿದರು. ಅವರು ಚೇಳಾಯರು ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣಗುರು ಅಧ್ಯಯನ ಪೀಠ ಸಂಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

    ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪುಷ್ಪರಾಜ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ “ವಿಶ್ವವಿದ್ಯಾನಿಲಯದ ಅಧ್ಯಯನ ಪೀಠ ನಾರಾಯಣ ಗುರುಗಳ ತತ್ವದ ಮೂಲಕ ಗ್ರಾಮೀಣ ಯುವ ಜನಾಂಗವನ್ನು ಸಾಮರಸ್ಯದ ಬದುಕಿಗೆ ಕೊಂಡು ಹೋಗುವ ಮಾರ್ಗದರ್ಶನವನ್ನು ನೀಡುತ್ತಿರುವುದು ಸಂತೋಷ” ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತೆರೇಸಾ ವೇಗಸ್ ಅವರು “ಭಾರತದ ಸರ್ವಧರ್ಮಗಳ ಸಾರ ನಾರಾಯಣ ಗುರುಗಳ ಸಂದೇಶದಲ್ಲಿದೆ. ಅವರು ಮತ ಧರ್ಮವನ್ನು ಮೀರಿ ನಿಂತ ವಿಶ್ವಗುರು” ಎಂದರು.

    ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತದೊಂದಿಗೆ ಪ್ರಸ್ತಾವನೆಯನ್ನು ಮಾಡುತ್ತಾ ಅಧ್ಯಯನ ಪೀಠದ ಕೆಲಸಗಳಿಗೆ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ಪ್ರೋತ್ಸಾಹ ಅಭಿನಂದನೀಯ ಎಂದರು. ಕೊನೆಯಲ್ಲಿ ನಾರಾಯಣ ಗುರುಗಳ ಸಂದೇಶಗಳ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಹಿರಿಯ ಗಾಯಕಿ ಭಾವ ಕೋಗಿಲೆ ಬಿ.ಕೆ.ಸುಮಿತ್ರಾಗೆ ಜಿ.ಎಸ್.ಎಸ್. ಪುರಸ್ಕಾರ
    Next Article ಮಂಗಳೂರಿನ ಮಂಗಳವಾದ್ಯ ಗೋಷ್ಠಿಯಲ್ಲಿ ಸ್ಯಾಕ್ಸೋಫೋನ್ ಸಮ್ಮೇಳನ
    roovari

    Add Comment Cancel Reply


    Related Posts

    “Sri Krishna Leela Amrutham” Transcends audiences at Bharat Nritya Utsav 2025, Chennai

    February 5, 2025

    ಮಂಗಳೂರಿನಲ್ಲಿ ಗಾಯಕಿ ಸೂರ್ಯಗಾಯತ್ರಿ ‘ರಾಮಂ ಭಜೇ’ | ಜ. 12ರಂದು

    January 11, 2025

    ಮಂಗಳೂರಿನ ಪುರಭವನದಲ್ಲಿ ‘ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ’ | ಜನವರಿ 04

    December 31, 2024

    ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ  

    October 21, 2024

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.