Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರು ಪುರಭವನದಲ್ಲಿ ಕೊಂಕಣಿ ಯಕ್ಷಗಾನ

    June 5, 2025

    ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜಯಂತ್ಯುತ್ಸವ

    June 5, 2025

    ಶ್ರೀ ಮಹಾಂತೇಶ ಎಂ. ಗಜೇಂದ್ರಗಡ ಇವರಿಗೆ “ಮೇಘರತ್ನ ಪ್ರಶಸ್ತಿ”

    June 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಆಳ್ವಾಸ್ ವಿರಾಸತ್‌ನಲ್ಲಿ ಶ್ರೇಯಾ ಘೋಷಾಲ್ ‘ಭಾವ ಲಹರಿ’ ಮತ್ತು ಸಾಹಸ ನೃತ್ಯ ವೈಭವ ಮೆರೆದ ಆಳ್ವಾಸ್ ವಿದ್ಯಾರ್ಥಿಗಳು
    Bharathanatya

    ಆಳ್ವಾಸ್ ವಿರಾಸತ್‌ನಲ್ಲಿ ಶ್ರೇಯಾ ಘೋಷಾಲ್ ‘ಭಾವ ಲಹರಿ’ ಮತ್ತು ಸಾಹಸ ನೃತ್ಯ ವೈಭವ ಮೆರೆದ ಆಳ್ವಾಸ್ ವಿದ್ಯಾರ್ಥಿಗಳು

    January 11, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆಯ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂಟಪದಲ್ಲಿ ದಿನಾಂಕ 16-12-2023ರಂದು ನಡೆಯುತ್ತಿರುವ ಆಳ್ವಾಸ್ ವಿರಾಸತ್‌ನ ಮೂರನೇ ದಿನ ‘ಭಾವ ಲಹರಿ’ ಕಾರ್ಯಕ್ರಮವನ್ನು ಪ್ರಸಿದ್ಧ ಚಲನಚಿತ್ರ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಪ್ರಸ್ತುತಪಡಿಸಿದರು. ಶ್ರೇಯಾ ಜತೆಗೆ ಕಿಂಜಲ್ ಚಟರ್ಜಿ ಸಹ ಗಾಯಕರಾಗಿದ್ದರು. ಆಳ್ವಾಸ್ ವಿದ್ಯಾರ್ಥಿಗಳು ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಸಾಹಸ ನೃತ್ಯಗಳ ಮೂಲಕ ಮೆರುಗು ನೀಡಿದರು.

    ‘ಇಂಥ ಪ್ರೇಕ್ಷಕರನ್ನು, ಇಂಥ ಸೊಬಗಿನ, ಸಂಭ್ರಮೋಲ್ಲಾಸದ ಉತ್ಸವವನ್ನು ನಾನೆಂದೂ ಕಂಡಿಲ್ಲ. ಎಂಥ ಪ್ರೀತಿ, ಗೌರವದ ಸ್ವಾಗತ, ವೇದಿಕೆ, ಸಂಗೀತವನ್ನು ಆಸ್ವಾದಿಸುವವರ ದಂಡು ದೂರ ದಿಗಂತದವರೆಗೂ ಹಬ್ಬಿದೆಯೇನೋ ಎಂಬ ಭಾವನೆ ಹುಟ್ಟಿಸುವ ಸಭೆ, ತನ್ಮಯರಾಗಿ ಸಂಗೀತದೊಂದಿಗೆ ಮನಸ್ಸನ್ನು ಬೆಸೆದುಕೊಂಡಂತಿರುವ ನಿಮ್ಮನ್ನೆಲ್ಲ ಕಂಡಾಗ ನಾನೊಬ್ಬ ಭಾರತೀಯಳೆನ್ನಲು ಹೆಮ್ಮೆ ಪಡುತ್ತೇನೆ’ ಎಂದು ಉದ್ಗರಿಸಿದ ಶ್ರೇಯಾ ಘೋಷಾಲ್ “ಈ ಊರಲ್ಲಿ ಇಷ್ಟೊಂದು ಅಗಾಧ ಸಂಖ್ಯೆಯಲ್ಲಿ ಸಂಗೀತಾಸಕ್ತರು ಸೇರುತ್ತಾರೆಂದು ನಿರೀಕ್ಷಿಸಿರಲಿಲ್ಲ. ಆಳ್ವಾಸ್ ವಿರಾಸತ್ ಅನ್ನು ಸುಂದರವಾಗಿ ನಿರ್ವಹಿಸಲಾಗಿದೆ” ಎಂದರು. ‘ನಾನು ಹೃದಯಾಂತರಾಳದಿಂದ ಹಾಡುವೆ, ನೀವೂ ನನ್ನ ಹಾಡಿಗೆ ಧ್ವನಿಗೂಡಿಸುವಿರಲ್ಲ, ಹೆಜ್ಜೆ ಹಾಕುವಿರಲ್ಲ’ ಎಂದಾಗ ‘ಹೋ….’ ಎಂದು ಯುವಜನರು ಸಂಭ್ರಮಿಸಿದರು.

    ಡಾ. ಮೋಹನ ಆಳ್ವರು ಶ್ರೇಯಾ ಅವರನ್ನು ಗೌರವಿಸಿದರು. ಶ್ರೇಯಾ ಘೋಷಾಲ್ “ವಿರಾಸತ್ ಸಂಘಟಕ ಮೋಹನ ಆಳ್ವರಂಥ ಅದ್ಭುತ, ಜೀನಿಯಸ್ ಪ್ರತಿಭೆಗೆ ವಂದಿಸುವೆ, ಸಾಂಸ್ಕೃತಿಕ ರಂಗದಲ್ಲಿ ಕ್ರಾಂತಿಕಾರಿ ಯೋಚನೆಗಳಿರುವ ಆಳ್ವರು ನನ್ನನ್ನು ಆಮಂತ್ರಿಸಿರುವುದಕ್ಕಾಗಿ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುವೆ. ಮತ್ತೊಮ್ಮೆ ಮರೆಯದೇ ನನ್ನನ್ನು ಕರೆಯುವಿರಲ್ಲ” ಎಂದು ನಸುನಗುತ್ತ ಕೋರಿಕೊಂಡರು.

    ಬಳಿಕ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ದಾಂಡಿಯಾ ಅಥವಾ ರಾಸ್ ಅಥವಾ ದಾಂಡಿಯಾ ರಾಸ್ ಎಂದೇ ಪ್ರಸಿದ್ಧವಾದ ಭಾರತದ ಗುಜರಾತ್‌ನ ಸಾಂಪ್ರದಾಯಿಕ ಜಾನಪದ ನೃತ್ಯ ರೂಪ. ಇದು ಕೃಷ್ಣನಿಂದ ವೃಂದಾವನದಲ್ಲಿ ಹುಟ್ಟಿಕೊಂಡಿತು. ಅಲ್ಲಿ ಇದನ್ನು ಹೋಳಿ ಮತ್ತು ಕೃಷ್ಣ ಹಾಗೂ ರಾಧೆಯರ ಲೀಲೆಯನ್ನು ಚಿತ್ರಿಸಿ ಆಡಲಾಗುತ್ತದೆ. ಗರ್ಬಾದೊಂದಿಗೆ ಇದು ಪಶ್ಚಿಮ ಭಾರತದಲ್ಲಿ ನವರಾತ್ರಿ ಸಂಜೆಗಳ ವೈಶಿಷ್ಟ್ಯಪೂರ್ಣ ನೃತ್ಯವಾಗಿದೆ. ಆಳ್ವಾಸ್ ವಿದ್ಯಾರ್ಥಿಗಳು ಗುಜರಾತಿ ಸಾಂಪ್ರದಾಯಿಕ ಧಿರಿಸು ಧರಿಸಿ, ಕೋಲಾಟದ ಮೂಲಕ ಕೃಷ್ಣನ ಗುಣಗಾನದ ಸಾಲಿಗೆ ನರ್ತಿಸಿದರು. ಗುಜರಾತಿ ಜಾನಪದ ಭತ್ರಿ, ಬಿಂದಿಗೆ, ತಾಳ, ಕೋಲಾಟದ ವೈಭವ ರಂಗೇರಿತು.

    ಬಳಿಕ ಮಂಗಳೂರಿನ ವಿದುಷಿ ಶಾರದಾಮಣಿ ಶೇಖರ್ ಅವರ ಸನಾತನ ನಾಟ್ಯಾಲಯದ ವಿದೂಷಿ ಲತಾ ನಾಗರಾಜ್ ಶಿಷ್ಯೆಯಂದಿರು ‘ತೋಡಯಂ ಮಂಗಳಂ’ ಪ್ರಸ್ತುತ ಪಡಿಸಿದರು. ಸರಸ್ವತಿ, ಲಕ್ಷ್ಮೀ ಸ್ತುತಿಯ ಭಾವಾಭಂಗಿಗಳು, ಆಕರ್ಷಕವಾಗಿ ಮೂಡಿ ಬಂದವು.

    ‘ಡೊಳ್ಳುಕುಣಿತ’ ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತ. ಇದನ್ನು 2012ರಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ 10 ಮಂದಿ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ್ದು, ಮುಂದಿನ 10 ವರ್ಷದಲ್ಲೇ ಈ ವೇದಿಕೆಯಲ್ಲಿ 120 ಮಂದಿ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಡೊಳ್ಳು ಕುಣಿತ ತನ್ನ ವಿಶಿಷ್ಟವಾದ ನೃತ್ಯ ಶೈಲಿಗಳಿಂದ ಉಳಿದುಕೊಂಡು ಬಂದ ಜನಪದ ಪ್ರಕಾರ. ಮೂಲತಃ ಕುರುಬ ಸಮುದಾಯದ ಈ ಕುಣಿತವು ಕರಿ ಕಂಬಳಿ ಹೊದ್ದುಕೊಂಡು ಬೀರೇಶ್ವರ ದೇವರನ್ನು ಆರಾಧಿಸುವ ನರ್ತನ.

    ಆಳ್ವಾಸ್ ವಿದ್ಯಾರ್ಥಿಗಳು ಕುಣಿತಕ್ಕೆ ಹುಮ್ಮಸ್ಸು ತುಂಬಿದ್ದು, ಒಬ್ಬರ ಮೇಲೊಬ್ಬರು ಏರುವ ಮೂಲಕ ಪ್ರೇಕ್ಷಕರಿಗೆ ಸ್ಫೂರ್ತಿ ನೀಡಿದರು. ಗಂಡು ಕಲೆ ಎನಿಸಿಕೊಂಡಿದ್ದ ಡೊಳ್ಳಿನಲ್ಲಿ ಹುಡುಗಿಯರೂ ಪಾಲ್ಗೊಂಡಿದ್ದರು. ಹುಡುಗ – ಹುಡುಗಿಯರ ಜುಗಲ್ ಬಂದಿ ಯುವ ಮನಸ್ಸುಗಳಿಗೆ ರೋಮಾಂಚನ ಮೂಡಿಸಿತು. ಚಕ್ರದ ಮೇಲೆ ಏಣಿ ಇರಿಸಿ ಅದನ್ನು ಏರಿ ಕನ್ನಡ ಬಾವುಟ ಹಾರಾಡಿಸಿದಾಗ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಮೂಡಿಬಂತು.

    ಬಿದಿರಿನ ಕಡ್ಡಿ ನೃತ್ಯವು ಅನೇಕ ಸಂಸ್ಕೃತಿಗಳಿಗೆ ಸಾಂಪ್ರದಾಯಿಕವಾಗಿದೆ. ಇವುಗಳಲ್ಲಿ ಫಿಲಿಪೈನ್ಸ್, ಚೀನಾ, ಹವಾಯಿ, ತೈವಾನ್ ಮತ್ತು ವಿಯೆಟ್ನಾಂ ದೇಶಗಳ ಸಂಸ್ಕೃತಿಗಳು ಸೇರಿವೆ. ಈಶಾನ್ಯ ಭಾರತದ ಮಣಿಪುರದ ಸ್ಟಿಕ್ ಡ್ಯಾನ್ಸ್ ಒಂದು ರೀತಿಯ ಏಕಾಗ್ರತೆ ಸಮತೋಲನದ ನೃತ್ಯ. ಈಶಾನ್ಯ ಬೆಟ್ಟದ ನಿನಾದಕ್ಕೆ ಸಮತೋಲನದಿಂದ ಮಾಡುವ ನೃತ್ಯ. ಮೂಲತಃ ಏಕವ್ಯಕ್ತಿ ನೃತ್ಯವನ್ನು ಸಮೂಹ ನೃತ್ಯವಾಗಿ ಡಾ.ಎಂ ಮೋಹನ ಆಳ್ವ ರೂಪು ನೀಡಿದ್ದು, ಸಾಹಸ ಪ್ರಯೋಗಗಳ ಮೂಲಕ ವೇದಿಕೆಯಲ್ಲಿ ಪ್ರಸ್ತುತಗೊಂಡಿತು. ಮಣಿಪುರ ವಿದ್ಯಾರ್ಥಿಗಳ ಸಾಹಸ- ಏಕಾಗ್ರತೆಗೆ ಪ್ರೇಕ್ಷಕರು ತಲೆದೂಗಿದರು. ಮೈ ನವಿರೇಳಿಸುವ ಪ್ರದರ್ಶನ ಪುಳಕಗೊಳಿಸಿತು. ಆಳ್ವಾಸ್ ಜೊತೆಗಿನ ಮಣಿಪುರ ನಂಟು ಜನರಿಗೂ ಬಾಂಧವ್ಯ ಮೂಡಿಸಿತು.

    ಸಾಹಸ ನೃತ್ಯದ ಬೆನ್ನಲ್ಲೇ ಜನರನ್ನು ಮಂತ್ರ ಮುಗ್ಧಗೊಳಿಸಿದ್ದು, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ. ತುಳುನಾಡಿನ ದೈವಾರಾಧನೆ ನೆನಪಿಸುವ ವೇಷಭೂಷಣ, ತೂಟೆ ಬೆಂಕಿ, ತಿರುಗುವ ಚಕ್ರ, ಹೆಜ್ಜೆಗಳು ಆಕರ್ಷಕವಾಗಿ ಮೂಡಿ ಬಂದವು. ಶ್ರೀಲಂಕಾದ ಧಾರ್ಮಿಕ ನೃತ್ಯಗಳು ತಮ್ಮ ವಿಭಿನ್ನ ಅತೀಂದ್ರಿಯ ಸೌಂದರ್ಯಕ್ಕಾಗಿ ವಿಶ್ವ ಖ್ಯಾತಿಯನ್ನು ಗಳಿಸಿವೆ. ಭಾರತದಿಂದ ಹೆಚ್ಚು ಪ್ರಭಾವಿತವಾಗಿರುವ ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ ಮತ್ತು ಕೋಲಂ ನಾಟಕಗಳು ದಕ್ಷಿಣ ಭಾರತದ ಮೂಲವನ್ನು ಹೊಂದಿವೆ.

    ಬಳಿಕ ಖುಷಿ ನೀಡಿದ್ದು ರೋಪ್ ಜಂಪ್. ಸರ್ಕಸ್ ಗಳಲ್ಲಿ ಪ್ರಯೋಗಿಸುತ್ತಿದ್ದ ಸಾಹಸ ಹಾಗೂ ಕ್ರೀಡೆಗೆ ಡಾ. ಎಂ. ಮೋಹನ ಆಳ್ವ ಅವರ ಪರಿಕಲ್ಪನೆಯಂತೆ ಕಲಾ ರೂಪ ನೀಡಿದ ನೃತ್ಯ. ಜಂಪ್, ರಿಂಗ್, ರೋಪ್, ಸ್ಟಿಕ್, ಚೆಂಡು ಪ್ರದರ್ಶನದ ಆಕರವಾಯಿತು. ಸರ್ಕಸ್ ನೆನಪು ಮರುಕಳಿಸಿತು.

    Share. Facebook Twitter Pinterest LinkedIn Tumblr WhatsApp Email
    Previous Articleಆಳ್ವಾಸ್ ವಿರಾಸತ್ ನಲ್ಲಿ ಬಿನ್ನಿ ದಯಾಲ್ – ‘ಗಾನ ವೈಭವ’ ಮತ್ತು ಡಾ.ಎಂ. ಮೋಹನ ಆಳ್ವರ ಪರಿಕಲ್ಪನೆಯ ‘ಆಳ್ವಾಸ್ ಸಾಂಸ್ಕೃತಿಕ ವೈಭವ’
    Next Article ಬಾನ್ಸುರಿ, ವಯೋಲಿನ್, ಸ್ವರ ದಿಗ್ಗಜರಿಗೆ ‘ವಿರಾಸತ್ ಪ್ರಶಸ್ತಿ’ ಗೌರವ, ‘ತಾಳ ವಾದ್ಯ ಸಂಗೀತ’ ಮತ್ತು ‘ಸಂಗೀತ ರಸಸಂಜೆ’
    roovari

    Add Comment Cancel Reply


    Related Posts

    ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ‘ನೃತ್ಯಾಂತರಂಗ 128’ | ಜೂನ್ 07

    June 5, 2025

    ಬೆಂಗಳೂರಿನ ಪರಂಪರಾ ಅಡಿಟೋರಿಯಂನಲ್ಲಿ ‘ಲಲಿತ ಕಲೋತ್ಸವ, ಸಮ್ಮಾನ ಮತ್ತು ಯಕ್ಷಗಾನ’ | ಜೂನ್ 08

    June 5, 2025

    ಯುವ ನೃತ್ಯೋತ್ಸವ-2025| ಜೂನ್ 08

    June 4, 2025

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.