Subscribe to Updates

    Get the latest creative news from FooBar about art, design and business.

    What's Hot

    ಸಂಗೀತವನ್ನು ಅನುಭವಿಸಬೇಕು – ಕಲಾವಿದ ಪ್ರಭಾಕರ ರಾವ್

    December 26, 2025

    ಶ್ರೀಕ್ಷೇತ್ರ ಮಂಗಳಾದೇವಿಯಲ್ಲಿ ಉದ್ಘಾಟನೆಗೊಂಡ ‘ಯಕ್ಷ ತ್ರಿವೇಣಿ’

    December 26, 2025

    ‘ನಿರಂತರಂ’ – ರಾಷ್ಟ್ರೀಯ ಸಂಗೀತ ಮತ್ತು ನೃತ್ಯೋತ್ಸವ – 2026 | ಜನವರಿ 1ರಿಂದ 4

    December 26, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಲಾಲೋಕದಲ್ಲಿ ಲೀನವಾದ ಮಾಸದ ವರ್ಣ – ಬಿ.ಕೆ.ಎಸ್. ವರ್ಮಾ
    News

    ಕಲಾಲೋಕದಲ್ಲಿ ಲೀನವಾದ ಮಾಸದ ವರ್ಣ – ಬಿ.ಕೆ.ಎಸ್. ವರ್ಮಾ

    February 6, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು, ಫೆಬ್ರವರಿ 06: ಕಲಾವಿದ ಡಾ. ಬಿ. ಕೆ. ಎಸ್. ವರ್ಮಾ (ಬುಕ್ಕಾ ಸಾಗರ ಕೃಷ್ಣಯ್ಯ ಶ್ರೀನಿವಾಸ್ ವರ್ಮಾ) ಇಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ ಜನಿಸಿದ ಇವರ ತಂದೆ ಸಂಗೀತಗಾರರು ಹಾಗೂ ತಾಯಿ ಜಯಲಕ್ಷ್ಮಿ ಚಿತ್ರ ಕಲಾವಿದೆ. ತಾಯಿಯ ಪ್ರತಿಭೆಯನ್ನು ಮೈಗೂ ಡಿಸಿಗೊಂಡು ಬೆಳೆದ ಇವರು 6ನೆಯ ವಯಸ್ಸಿನಲ್ಲಿಯೇ ಚಿತ್ರ ಕಲೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದರು. ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದ ಬಿ.ಕೆ.ಎಸ್ ತೈಲ ಚಿತ್ರಗಳನ್ನೂ ಬಿಡಿಸುತ್ತಿದ್ದರು. ಇವರು ಬಿಡಿಸಿದ ಪೂಜೆಯಲ್ಲಿ ಮೈಮರೆತ ರಾಘವೇದ್ರಸ್ವಾಮಿಯ ಕಲಾಕೃತಿ ಬಹು ಮನೆಯ ದೇವರ ಕೋಣೆಯಲ್ಲಿ ಪೂಜಿಸಲ್ಪಡುತ್ತಿದೆ. ಸಿನಿ ತಾರೆಗಳಾದ ಡಾ.ರಾಜ್ ಕುಮಾರ್, ರಜನಿಕಾಂತ್, ಮತ್ತು ಅನೇಕ ದೆವಾನುದೇವತೆಗಳ ಚಿತ್ರಗಳು ಇವರ ಕುಂಚದಿಂದ ಅದ್ಭುತವಾಗಿ ಮೂಡಿಬಂದಿವೆ. ಎಂಬೋಸಿಂಗ್, ಅದರಲ್ಲೂ ಥ್ರೆಡ್ ಪೈಂಟಿಂಗ್ ಗಳಲ್ಲಿ ಇವರ ಪ್ರತಿಭೆ ಅಡಗಿದೆ ಎಂಬುದು ಅವರ ಕಲಾಕೃತಿಗಳಲ್ಲಿ ಎದ್ದು ಕಾಣುತ್ತದೆ. ನೃತ್ಯಕ್ಕೆ,ಕಾವ್ಯಕ್ಕೆ ಅವರು ಬಿಡಿಸುವ ಚಿತ್ರದಲ್ಲಿನ ಕೈಚಳಕದಲ್ಲಿ ಅವರ ಪ್ರತಿಭೆ ಮತ್ತು ಪರಿಣತಿ ಕಂಡು ಬರುತ್ತದೆ.ಶತಾವಧಾನಿ ಗಣೇಶ್ ಅವರ ಹಾಡುಗಳಿಗೆ ಪೂರಕ ಚಿತ್ರ ಬಿಡಿಸುವ ಮೂಲಕ ಹಾಡುಗಳಿಗೆ ಕಣ್ಣಾದರು. ಇವರ ಕಲಾಸಾಧನೆಗೆ 1986ರಲ್ಲಿ ರಾಜ್ಯ ಲಲಿತಕಲಾ ಅಕಾಡಮಿ ಪ್ರಶಸ್ತಿ 2001ರಲ್ಲಿ ಕರ್ನಾಟಕ ಸರಕಾರದ ಕರ್ನಾಟಕ ರಾಜ್ಯ ಪುರಸ್ಕಾರ, ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಾಗೂ 2011 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಇವರ ಕಲಾಸೇವೆಗೆ ಸಾಕ್ಷಿಯಾಗಿವೆ.

    Share. Facebook Twitter Pinterest LinkedIn Tumblr WhatsApp Email
    Previous ArticlePainting workshops conducted at Mahalasa College of Visual Art
    Next Article ಶ್ರೀ ಕೃಷ್ಣ ಗಾನ ಸುಧಾ ಸಂಗೀತ ವಿದ್ಯಾಲಯ ವತಿಯಿಂದ ಶ್ರೀ ರಾಮಕೃಷ್ಣ ಮಠ, ಮಂಗಳೂರು ಸಹಯೋಗದೊಂದಿಗೆ “ನಾದ ವಿಂಶತಿ”
    roovari

    Add Comment Cancel Reply


    Related Posts

    ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ವರ್ಣಿಕಾ ಆಚಾರ್ಯ ನೃತ್ಯ ಪ್ರದರ್ಶನ | ಡಿಸೆಂಬರ್ 25

    December 24, 2025

    ನೃತ್ಯ ವಿಮರ್ಶೆ | ಕಾಮನಬಿಲ್ಲಿನ ರಂಗು ಬಿಂಬಿಸಿದ ‘ನೃತ್ಯ ದರ್ಪಣ್’ದ ‘ತಾಳ್ ತರಂಗ್’

    December 18, 2025

    ನಾಣಿ ಅಂಗಳದಲ್ಲಿ ‘ಮಾಯಾ ಬೇಟೆ’ ನಾಟಕ ಪ್ರದರ್ಶನ | ಡಿಸೆಂಬರ್ 20

    December 17, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ‘ರಾಗ ಸುಧಾರಸ 2025’ | ಡಿಸೆಂಬರ್ 13ರಿಂದ 20

    December 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.