Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪ್ರಶಸ್ತಿಗೆ ಆಯ್ಕೆಯಾದ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ
    Awards

    ಪ್ರಶಸ್ತಿಗೆ ಆಯ್ಕೆಯಾದ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ

    February 22, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಭಾರತದ ಪ್ರತಿಷ್ಠಿತ ನಾಟಕೋತ್ಸವಗಳಲ್ಲಿ ಒಂದಾದ ಮಹೀಂದ್ರ ಎಕ್ಸ್ಲೆನ್ಸ್ ಇನ್ ಥಿಯೇಟರ್ ಅವಾರ್ಡ್ 2025 (META)’ಗೆ 367 ನಾಟಕಗಳ ಪೈಕಿ ಆಯ್ಕೆಯಾದ 10 ನಾಟಕಗಳಲ್ಲಿ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕವು ಒಂದು.

    ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕದ ಬಗ್ಗೆ :
    ತನ್ನ ಜನಾಂಗದ ಮೇಲೆ ನಿರಂತರ ನಡೆಯುತ್ತಿದ್ದ ಶೋಷಣೆಯನ್ನ ವಿರೋಧಿಸಿ, ತನ್ನ ಹಾಡಿನ ಮೂಲಕ ಜಗತ್ತಿಗೆ ಪರಿಚಯ ಇರುವ ಜಮೈಕಾದ ಹಾಡುಗಾರ, ಹೋರಾಟಗಾರ ‘ಬಾಬ್ ಮಾರ್ಲಿ’ಯ ರೂಪಕದಂತಿದೆ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ.

    ಹಲವು ಕನಸುಗಳನ್ನು ಹೊತ್ತು, ಸ್ವಚ್ಛಂದ ಬದುಕು ಕಟ್ಟಿಕೊಳ್ಳಲು ಹಳ್ಳಿಯಿಂದ ಪಟ್ಟಣಕ್ಕೆ ಬಂದ ಮೂವರು ತಮ್ಮ ಆಹಾರದಿಂದಾಗಿ ಅನುಭವಿಸುವ ಮಾನಸಿಕ ವೇದನೆ, ಒಬ್ಬಂಟಿತನ ಮತ್ತು ಅವರ ನಡುವೆ ನಡೆವ ಸಂಭಾಷಣೆ ನೋಡುಗರನ್ನು ಪ್ರಶ್ನಿಸುತ್ತಾ, ಅಣಕಿಸುತ್ತಾ ಸಾಗುತ್ತದೆ.

    ಕಥೆಯಲ್ಲಿ ಉಪಕಥೆಗಳು, ಹಾಡುಗಳು, ತಾವು ಅನುಭವಿಸಿದ ಅನೇಕ ನೈಜ ಘಟನೆಗಳಿದ್ದು ಕೇಳಲು ಕಷ್ಟವಾದರೂ ಅವು ಸತ್ಯವೇ ಆಗಿವೆ. ನಾಟಕ ನೋಡುತ್ತಿದ್ದ ಹಾಗೇ ನಮ್ಮ ಸುತ್ತ ಈಗ ನಡೆಯುತ್ತಿರುವ ಹಲವು ಪ್ರಸಂಗಗಳು ಥಟ್ಟನೆ ಕಣ್ಣ ಮುಂದೆ ಬಂದು ಹೋಗುತ್ತವೆ, ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತವೆ. ಈ ನಾಟಕದ ಮೂಲಕ, ನಾಟಕ ರಚನೆಯಲ್ಲೂ ನಿರ್ದೇಶಕರು ಸೈ ಎನಿಸಿಕೊಂಡಿದ್ದಾರೆ.

    ನಾಟಕದಲ್ಲಿ ಬರುವ ‘ಮಿಂಚುಳ’, ‘ನಾಯಿ’, ‘ಪಡಸಾಲೆ’, ‘ಟಿವಿ’, ‘ಹಾಡುಗಳು’ ನಿಮ್ಮನ್ನು ಊರಿನ ಬಾಲ್ಯದ ನೆನಪಿಗೆ ಕರೆದುಕೊಂಡು ಹೋಗುವುದು ನಿಶ್ಚಿತ. ವೇದಿಕೆಯಲ್ಲಿ ಮೂರು ಜನರ ನಟನೆ, ಹಿತವಾದ ಸಂಗೀತ, ಕಣ್ಣಿಗೆ ಕಥೆಯನ್ನು ಇನ್ನೂ ಹತ್ತಿರ ಮಾಡುವ ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ಬಹಳ ಮೆಚ್ಚುವಂತದ್ದು.

    ಈ ಹಿಂದೆ ನಿರ್ದೇಶಕ ‘ಲಕ್ಷ್ಮಣ ಕೆ.ಪಿ.’ಯ – ‘We the people of India’, ದಕ್ಲಕಥಾ ದೇವಿಕಾವ್ಯ’ ನಮ್ಮ ಸುತ್ತ ಇರುವ ಧ್ವನಿ ಇಲ್ಲದವರ ಕಥೆಗಳಾದರೆ, ಈ ನಾಟಕದಲ್ಲಿ ‘ಬೃಹತ್ ಸುಂದರ ಮಹಾನಗರದಲ್ಲಿ ಆಹಾರದ ಆಧಾರದ ಮೇಲೆ ನಡೆವ ದೌರ್ಜನ್ಯ’ ಮುಖ್ಯವಾಗಿದೆ. ಪ್ರಸ್ತುತ ರಾಜಕೀಯ ವಿದ್ಯಮಾನಗಳು, ಧರ್ಮ ಸಂಘರ್ಷಗಳ ಎಳೆ ಸಾಮಾನ್ಯ ಜನರ ಆಹಾರದ ಮೇಲೆ ಹೇಗೆ ಹಿಡಿತ ಸಾಧಿಸುತ್ತಿದೆ ಎನ್ನುವ ಸೂಕ್ಷ್ಮ ವಿಚಾರವನ್ನು ರಂಗದ ಮೇಲೆ ತಂದಿರುವುದು ಇದೇ ಮೊದಲು.

    ಈ ನಾಟಕದ ರಚನೆ, ವಿನ್ಯಾಸ, ನಿರ್ದೇಶನ ಲಕ್ಷ್ಮಣ ಕೆ.ಪಿ.ಯವರದು. ಸಂಗೀತ ಮರಿಯಮ್ಮನವರದು. ರಂಗದ ಮೇಲೆ – ಭರತ್ ಡಿಂಗ್ರಿ, ಶ್ವೇತಾ ಹೆಚ್.ಕೆ. ಮತ್ತು ಚಂದ್ರಶೇಖರ್ ಕೆ. ಹಾಗೂ ಬೆಳಕಿನ ವಿನ್ಯಾಸ ಮಂಜು ನಾರಾಯಣ.

    award drama
    Share. Facebook Twitter Pinterest LinkedIn Tumblr WhatsApp Email
    Previous Articleಈರಮಂಡ ಹರಿಣಿ ವಿಜಯ್ ಇವರಿಗೆ ‘ವಿಶ್ವಮಾನ್ಯ ಕನ್ನಡಿಗ ರಾಜ್ಯ ಪ್ರಶಸ್ತಿ’ | ಫೆಬ್ರವರಿ 23
    Next Article ಕೋಲಾರದಲ್ಲಿ ರಾಜ್ಯಮಟ್ಟದ ‘ಜನಪರ ಉತ್ಸವ -2025’ | ಫೆಬ್ರವರಿ 24 ಮತ್ತು 25
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.