ಬೆಂಗಳೂರು : ನ್ಯೂ ವೇವ್ ಬುಕ್ಸ್ ಮತ್ತು ಪ್ರಗತಿ ಗ್ರಾಫಿಕ್ಸ್ ಬೆಂಗಳೂರು ಅರ್ಪಿಸುವ ರಾಜೇಂದ್ರ ಬಿ. ಶೆಟ್ಟಿ ರಚಿಸಿರುವ ‘ಮೊಗ್ಗರಳಿ ಹೂವಾಗಿ’, ‘ಗಣಿತ ಬಹಳ ಸುಲಭ’ ಮತ್ತು ‘ಮ್ಯಾಥ್ಸ್ ಈಸ್ ಈಸೀ’ ಎಂಬ ಪುಸ್ತಕಗಳ ಅನಾವರಣ ಸಮಾರಂಭವನ್ನು ದಿನಾಂಕ 01 ಜೂನ್ 2025 ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಅಶ್ವಥ್ ಕಲಾ ಭವನದಲ್ಲಿ ಆಯೋಜಿಸಲಾಗಿದೆ.
ಈ ಸಮಾರಂಭದಲ್ಲಿ ಪತ್ರಕರ್ತ ಸಾಹಿತಿ ಜೋಗಿ, ಕಥಾಗುಚ್ಛದ ಸಂಸ್ಥಾಪಕಿ ಲತಾ ಜೋಶಿ, ಕವಿ ಡಾ. ಎ. ಭಾನು, ರಂಗಕರ್ಮಿ ಶ್ರೀಪತಿ ಮಂಜನಬೈಲು, ಅಂಕಣಗಾರ ಎನ್. ರಾಮನಾಥ್, ಜನಪದ ತಜ್ಞರಾದ ಡಾ. ಎಂ. ಬೈರೇಗೌಡ, ಪರಂಪರಾ ಕಲ್ಚರಲ್ ಫೌಂಡೇಷನ್ (ರಿ.) ಇದರ ಅಧ್ಯಕ್ಷರಾದ ಜಿ.ಪಿ. ರಾಮಣ್ಣ ಮತ್ತು ಲೇಖಕರಾದ ರಾಜೇಂದ್ರ ಬಿ. ಶೆಟ್ಟಿ ಇವರುಗಳು ಭಾಗವಹಿಸಲಿದ್ದಾರೆ.