Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಮೂರು ಕೃತಿಗಳ ಲೋಕಾರ್ಪಣೆ 
    Literature

    ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಮೂರು ಕೃತಿಗಳ ಲೋಕಾರ್ಪಣೆ 

    October 24, 2024Updated:January 7, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮುಂಬೈ : ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭವು ದಿನಾಂಕ 19 ಅಕ್ಟೋಬರ್ 2024ರ ಶನಿವಾರದಂದು ಕಲೀನಾ ಕ್ಯಾಂಪಸ್ ನಲ್ಲಿರುವ  ಜೆ. ‌ಪಿ. ನಾಯಕ್ ಭವನದಲ್ಲಿ ನಡೆಯಿತು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ  ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ  ಪ್ರಾಧ್ಯಾಪಕರಾದ ಪ್ರೊ. ಜಿ. ಎನ್. ಉಪಾಧ್ಯ ಮಾತನಾಡಿ “ಮುಂಬೈ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಕೃತಿಗಳನ್ನು ಪ್ರಕಟಣೆ ಮಾಡಿದ ಹಿರಿಮೆ ಕನ್ನಡ ವಿಭಾಗದ್ದಾಗಿದೆ. ಕನ್ನಡದ ಪ್ರಚಾರ ಹಾಗೂ ಪ್ರಸಾರದ ಕೈಂಕರ್ಯವನ್ನು ವಿಭಾಗ ಸತತವಾಗಿ ಮಾಡುತ್ತಿದೆ. ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದುದು ಹಾಗೂ ಸಮೃದ್ಧವಾದುದು. ವಿದ್ಯಾರ್ಥಿಗಳು ಒಳ್ಳೆಯ ಸಾಹಿತ್ಯವನ್ನು ಓದುವ, ಬೆಳೆಯುವ, ಕಟಾವು ಮಾಡುವ, ಆನಂದ ಪಡುವ ಕಾರ್ಯವನ್ನು ಮಾಡಬೇಕಾಗಿದೆ.” ಎಂದರು
    ಭರತನ ನಾಟ್ಯ ಶಾಸ್ತ್ರದಲ್ಲಿ ಹೇಳಿರುವಂತೆ ಕಾವ್ಯವನ್ನು ಓದುವುದರಿಂದ ಆಗುವ ಬದಲಾವಣೆ , ನಮ್ಮ ಚಿತ್ತದಲ್ಲಿ ಆಗುವ ವಿಕಾಸ, ವಿಸ್ತಾರ, ಮಥನ ಮತ್ತು ವಿಕ್ಷೇಪ ಎಂಬ ನಾಲ್ಕು ರೀತಿಯ ಪ್ರಕ್ರಿಯೆಗಳನ್ನು ಅವರು ಈ ಸಂದರ್ಭದಲ್ಲಿ ಸವಿಸ್ತಾರವಾಗಿ ವಿವರಿಸಿದರು. ಹಾಗೂ ಬಿಡುಗಡೆ ಕಂಡ ಕೃತಿಕಾರರ ಸಾಧನೆಗಳನ್ನು ಪರಿಚಯಿಸಿ ಕೃತಿಕಾರರನ್ನು ಅಭಿನಂದಿಸಿದರು.
    ಹಿರಿಯ ಲೇಖಕರಾದ ವೆಂಕಟ್ರಾಜ್ ಯು. ರಾವ್ ಇವರ ‘ಪಟೇಲರ ಹುಲಿ ಬೇಟೆ’, ಹಿರಿಯ ಯಕ್ಷಗಾನ ಕಲಾವಿದರು ಹಾಗೂ  ಲೇಖಕರಾದ ಕೊಲ್ಯಾರು ರಾಜು ಶೆಟ್ಟಿ ಇವರ ‘ಕುಮಾರವ್ಯಾಸ ಭಾರತದಲ್ಲಿ ಕರ್ಣ’, ಮತ್ತು ಖ್ಯಾತ ಕಾದಂಬರಿಕಾರರಾದ ಮಿತ್ರಾ ವೆಂಕಟ್ರಾಜ್ ಇವರ ಅನುವಾದಿತ ಕಾದಂಬರಿ ‘ಒಂದು ಪುರಾತನ ನೆಲದಲ್ಲಿ’ ಕೃತಿಗಳು ಲೋಕಾರ್ಪಣೆಗೊಂಡವು.
    ‘ಪಟೇಲರ ಹುಲಿ ಬೇಟೆ’ ಕೃತಿಯ ಕರ್ತೃ, ಚಿತ್ರ ಕಲಾವಿದರು, ಅನುವಾದಕರೂ ಆದ ವೆಂಕಟ್ರಾಜ್ ಯು. ರಾವ್ ಅವರು ತಮ್ಮ ಚೊಚ್ಚಲ ಕನ್ನಡ ಕೃತಿಯ ಕುರಿತು ಮಾತನಾಡಿ “ಕೆಲಸದ ಒತ್ತಡದ ನಡುವೆ ಸಿಕ್ಕ ಸಮಯದಲ್ಲಿ ಬರೆಯುವಾಗ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ಕಥಾಸಂಕಲನದ ಹೆಚ್ಚಿನ ಕತೆಗಳು ನನ್ನ ಅನುಭವದಿಂದಲೇ ಹುಟ್ಟಿದವು. ಅನುಭವದೊಂದಿಗೆ ಹಲವಾರು ಭಾವಗಳು ಹುಟ್ಟಬಹುದು, ಯಾವುದಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂಬುದು ಅನುಭವಿಸುವವರ ಮೇಲಿದೆ.” ಎಂದರು. ಕತೆಗಳನ್ನು ಬರೆಯಲು ಪ್ರೋತ್ಸಾಹಿಸಿದವರನ್ನು ಮತ್ತು ಕೃತಿ ಪ್ರಕಟಣೆ ಮತ್ತು ಬಿಡುಗಡೆಯಲ್ಲಿ ಕಾಳಜಿ ವಹಿಸಿದ ಪ್ರೊ. ಉಪಾಧ್ಯ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
    ‘ಕುಮಾರವ್ಯಾಸ ಭಾರತದಲ್ಲಿ ಕರ್ಣ’ ಕೃತಿಯ ಲೇಖಕರಾದ ಕೊಲ್ಯಾರು ರಾಜು ಶೆಟ್ಟಿ ಇವರು ಕನ್ನಡ ಸಾಹಿತ್ಯಕ್ಕೆ ಪ್ರಾಚೀನ ಕವಿಗಳ ಕೊಡುಗೆಗಳನ್ನು ಸ್ಮರಿಸುತ್ತಾ “ಇಂದಿನ ಕವಿಗಳು ಅವರನ್ನು ಅಭ್ಯಸಿಸಬೇಕು ಹಾಗೂ ಅವರ ಕಾವ್ಯಗಳನ್ನು ಆನಂದಿಸಬೇಕು. ವಿಶ್ವವಿದ್ಯಾಲಯದಲ್ಲಿ ಕೃತಿ ಬಿಡುಗಡೆಯಾಗಿರುವುದು ಸಂತಸವನ್ನು ತಂದಿದೆ.” ಎಂದರು.
    ನಾಮಾಂಕಿತ ಕಥನಕಾರರಾದ ಮಿತ್ರಾ ವೆಂಕಟ್ರಾಜ್ ಅವರು ತಮ್ಮ ಅನುವಾದಿತ ಕೃತಿ ‘ಒಂದು ಪುರಾತನ ನೆಲದಲ್ಲಿ’ ಬಗೆಗೆ ಮಾತನಾಡುತ್ತಾ “ಮುಂಬೈಯಂತಹ ಬಹುಭಾಷಿಕ ನಗರದಲ್ಲಿ ನಾವು ಒಂದಲ್ಲ ಒಂದು ರೀತಿಯಲ್ಲಿ ಅನುವಾದ ಮಾಡುತ್ತಲೇ ಇರುತ್ತೇವೆ. ನಮ್ಮ ಅರಿವಿಲ್ಲದೆಯೇ ಅನುವಾದವೆನ್ನುವುದು ನಿತ್ಯ ಜೀವನದಲ್ಲಿ ಆಗುತ್ತದೆ. ಕಾದಂಬರಿಯ ಅನುವಾದದಲ್ಲಿ ಭಾಷೆಯಷ್ಟೇ ಅಲ್ಲದೆ ಇಡೀ ಸಂಸ್ಕೃತಿಯನ್ನೇ ಅನುವಾದಿಸುವ ಕಾರ್ಯ ನಡೆಯುತ್ತದೆ. ಅನುವಾದದ ಈ ಪಯಣವನ್ನು ನಾನು ಆನಂದಿಸಿದ್ದೇನೆ.” ಎಂದರು.
     ಕೃತಿಗಳ ಕುರಿತು ಕ್ರಮವಾಗಿ ಸವಿತಾ ಅರುಣ್ ಶೆಟ್ಟಿ,  ಕಲಾ ಭಾಗ್ವತ್ ಮತ್ತು ವಿದ್ಯಾ ರಾಮಕೃಷ್ಣ ಅವರು ಮಾತನಾಡಿದರು. ಕಲಾ ಭಾಗ್ವತ್ ಅವರು ತಾವು ಪರಿಚಯಿಸಿದ ಕೃತಿಯ ಕೆಲ ಪದ್ಯಗಳನ್ನು ಗಮಕದಲ್ಲಿ ಸಾದರ ಪಡಿಸಿದರು. ಇದೇ ಸಂದರ್ಭದಲ್ಲಿ ಕೃತಿಕಾರರನ್ನು ಶಾಲು ಹೊದಿಸಿ, ಗ್ರಂಥ ಕಾಣಿಕೆ ನೀಡಿ ಗೌರವಿಸಲಾಯಿತು.
     ವಿಭಾಗದ ಸಂಶೋಧನಾ ವಿದ್ಯಾರ್ಥಿ ಪ್ರತಿಭಾ ರಾವ್ ಅವರು ಕನ್ನಡದ ಖ್ಯಾತ ಸಾಹಿತಿ , ಸಾಧಕಿ ಸುಧಾ ಮೂರ್ತಿ ಜೀವನ ಸಾಧನೆ ಕುರಿತು ಬರೆದ ತಮ್ಮ ಎಂ. ಎ. ಸಂಪ್ರಬಂಧದ ಮುದ್ರಿತ ಪ್ರತಿಗಳನ್ನು ವಿಭಾಗಕ್ಕೆ ಸಮರ್ಪಿಸಿದರು. ಕನ್ನಡ ವಿಭಾಗದ ಎಂ. ಎ. ವಿದ್ಯಾರ್ಥಿಗಳು ತಮ್ಮ ಸಂಪ್ರಬಂಧಗಳನ್ನು ಸಾದರಪಡಿಸಿದರು. ಇದೇ ಸಂದರ್ಭದಲ್ಲಿ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
    ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ, ಐಲೇಸಾ, ದ ವಾಯ್ಸ್ ಆಫ್ ಓಷಿಯನ್ ಮತ್ತು ಟೀಂ ರೆಂಜಾಳ ಇವರ ಸಂಯುಕ್ತ ಆಶ್ರಯದಲ್ಲಿ ನ. 03 ನವಂಬರ್ 2024ರಂದು ನಡೆಯಲಿರುವ ‘ಕುಸುಮೋತ್ಸವ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನುಇದೇ ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು.
    ಎಲ್ಲಾ ಕಾರ್ಯಕ್ರಮಗಳು ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ ಅವರ ಸಂಯೋಜನೆಯಲ್ಲಿ ನಡೆಯಿತು. ಕನ್ನಡ ಸರ್ಟಿಫಿಕೇಟ್ ಕೋರ್ಸ್ ಇದರ ಶಿಕ್ಷಕಿಯಾದ ಕುಮುದಾ ಆಳ್ವ ವಂದನಾರ್ಪಣೆ ಸಲ್ಲಿಸಿದರು.
    ಹಿರಿಯ ಲೇಖಕಿ ಹಾಗೂ ಅನುವಾದಕಿ ಡಾ. ಶ್ಯಾಮಲಾ ಮಾಧವ, ಕಲಾವಿದರಾದ ಮೋಹನ್ ಮಾರ್ನಾಡ್, ಅಹಲ್ಯಾ ಬಲ್ಲಾಳ, ವಾಸುದೇವ ಮಾರ್ನಾಡ್, ಸುರೇಂದ್ರ ಕುಮಾರ್ ಮಾರ್ನಾಡ್, ಎಸ್. ಕೆ. ಸುಂದರ್ ಮತ್ತಿತರ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು . ವಿಭಾಗದ ವಿದ್ಯಾರ್ಥಿಗಳಾದ ವಿದ್ಯಾ ಶೆಟ್ಟಿ, ಪುಷ್ಪ ಲತಾ ಗೌಡ, ರಾಜಶ್ರೀ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಬಿ.ಎಂ.ಶ್ರೀ. ಕಲಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ | ಅಕ್ಟೋಬರ್ 26
    Next Article ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇವರಿಗೆ ಶ್ರದ್ಧಾಂಜಲಿ ಸಭೆ | ಅಕ್ಟೋಬರ್ 27
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ | ಮೇ 27

    May 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.