Subscribe to Updates

    Get the latest creative news from FooBar about art, design and business.

    What's Hot

    ಸೋಮವಾರಪೇಟೆಯಲ್ಲಿ ಕೃತಿಗಳ ಲೋಕಾರ್ಪಣೆ

    October 29, 2025

    ಕೋಲಾರದ ಪತ್ರಕರ್ತರ ಭವನದಲ್ಲಿ ‘ನುಡಿ ಸಂಭ್ರಮ -2025’ | ನವೆಂಬರ್ 02

    October 29, 2025

    ಕೀರಿಕ್ಕಾಡಿನಲ್ಲಿ ಲೋಕರ್ಪಣೆಗೊಂಡ ‘ಕನ್ನಡಿಯಲ್ಲಿ ಕನ್ನಡಿಗ’ ಕೃತಿಯ ಐದನೇ ಸಂಚಿಕೆ

    October 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸೋಮವಾರಪೇಟೆಯಲ್ಲಿ ಕೃತಿಗಳ ಲೋಕಾರ್ಪಣೆ
    Book Release

    ಸೋಮವಾರಪೇಟೆಯಲ್ಲಿ ಕೃತಿಗಳ ಲೋಕಾರ್ಪಣೆ

    October 29, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸೋಮವಾರಪೇಟೆ : ಕನ್ನಡ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲ್ಲೂಕು, ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಹಿರಿಯ ಸಾಹಿತಿ ಜಲಜಾ ಶೇಖರ್ ಬರೆದಿರುವ ‘ಕನ್ನಡಿಯ ಪ್ರತಿಬಿಂಬ’ ಕವನ ಸಂಕಲನ ಮತ್ತು ‘ದೂರದ ತೀರಯಾನ’ ಪ್ರವಾಸ ಕಥನ ಪುಸ್ತಕಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 26 ಅಕ್ಟೋಬರ್ 2025ರಂದು ನಡೆಯಿತು.
    ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಸಾಹಿತಿ ಮತ್ತು ಜಾನಪದ ವಿದ್ವಾಂಸರಾದ ಡಾ. ಬೆಸೂರು ಮೋಹನ್ ಪಾಳೇಗಾರ್ ಮಾತನಾಡಿ “ಕಾವ್ಯ ಜನರ ಹೃದಯವನ್ನು ತಟ್ಟಿದಾಗ ಮಾತ್ರ ಕವಿಯ ಬರವಣಿಗೆ ಸಾರ್ಥಕವಾಗುತ್ತದೆ. ಕೃತಿ ಮತ್ತು ಕಾವ್ಯ ವಿಮರ್ಶೆಯ ಹೆಸರಿನಲ್ಲಿ ವಿಪರೀತ ಟೀಕೆ ಮಾಡಿದರೆ, ಒಬ್ಬ ಸಾಹಿತಿ ಮತ್ತು ಕವಿ, ಸಾಹಿತ್ಯ ಕೃಷಿಯನ್ನೇ ತ್ಯಜಿಸುವ ಸಂಭವಿರುತ್ತದೆ. ಪ್ರತಿಯೊಬ್ಬರು ಅವರ ಭಾಷಾ ಜ್ಞಾನಕ್ಕೆ ಅನುಗುಣವಾಗಿ ಬರೆದಿರುತ್ತಾರೆ. ಅದು ಸಾಮಾನ್ಯ ಓದುಗನಿಗೆ ಅರ್ಥವಾದರೆ ಸಾಕು ಎಂದು ಅಭಿಪ್ರಾಯಿಸಿದರು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಟಿ. ಪಿ. ರಮೇಶ್ ಮಾತನಾಡಿ ಲೇಖಕನಿಗೆ ಇಡೀ ಸಮಾಜವನ್ನು ಮೆಚ್ಚಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಕಾವ್ಯ ಮತ್ತು ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ತರ್ಜುಮೆ ಮಾಡಲು ಬಹಳಷ್ಟು ಕಷ್ಟವಾಗುತ್ತದೆ. ಕಾವ್ಯ ಸೃಷ್ಟಿಗೆ ಸಾವಿಲ್ಲ. ಓದುಗರು ಇಲ್ಲದಿದ್ದರೂ ಸಾಹಿತಿಗಳು ಬರೆಯುವುದನ್ನು ನಿಲ್ಲಿಸುವುದಿಲ್ಲ. ಇದು ಕನ್ನಡ ಸಾಹಿತ್ಯದ ಶಕ್ತಿ” ಎಂದರು.
    ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಎಸ್. ಡಿ. ವಿಜೇತ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಸ್. ಎ. ಮುರುಳೀಧರ್, ಅಕ್ಷಯ ಪತ್ತಿನ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾದ ಬೇಬಿ ಚಂದ್ರಹಾಸ್, ಗೀತಾ ರಾಜು, ಜೆ. ಸಿ. ಶೇಖರ್, ಎಚ್. ಜೆ. ಜವರಪ್ಪ, ಜಲಜಾ ಶೇಖರ್, ಆಶಾ ಶುಭಾಕ‌ರ್, ಜ್ಯೋತಿ ಅರುಣ್‌, ಎ. ಪಿ. ವೀರರಾಜು ಉಪಸ್ಥಿತರಿದ್ದರು.

    baikady Book release kannada roovari
    Share. Facebook Twitter Pinterest LinkedIn Tumblr WhatsApp Email
    Previous Articleಕೋಲಾರದ ಪತ್ರಕರ್ತರ ಭವನದಲ್ಲಿ ‘ನುಡಿ ಸಂಭ್ರಮ -2025’ | ನವೆಂಬರ್ 02
    roovari

    Add Comment Cancel Reply


    Related Posts

    ಕೋಲಾರದ ಪತ್ರಕರ್ತರ ಭವನದಲ್ಲಿ ‘ನುಡಿ ಸಂಭ್ರಮ -2025’ | ನವೆಂಬರ್ 02

    October 29, 2025

    ಕೀರಿಕ್ಕಾಡಿನಲ್ಲಿ ಲೋಕರ್ಪಣೆಗೊಂಡ ‘ಕನ್ನಡಿಯಲ್ಲಿ ಕನ್ನಡಿಗ’ ಕೃತಿಯ ಐದನೇ ಸಂಚಿಕೆ

    October 29, 2025

    ಗೋಶಾಲೆಯಲ್ಲಿ ‘ವರಾಹ ರೂಪಂ’ ಹಾಡಿನ ಗಾನ ಮಾಧುರ್ಯವನ್ನು ಪ್ರೇಕ್ಷಕರಿಗೆ ಸವಿಸಿದ ಸಾಯಿ ವಿಘ್ನೇಶ್

    October 29, 2025

    ತೆಕ್ಕಟ್ಟೆ ಹಯಗ್ರೀವ ಸಭಾ ಭವನದಲ್ಲಿ ‘ಬತ್ತದ ಚಿತ್ರಗಳು’ ಕವನ ಸಂಕಲನ ಬಿಡುಗಡೆ

    October 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.