Subscribe to Updates

    Get the latest creative news from FooBar about art, design and business.

    What's Hot

    ಖ್ಯಾತ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿ ನಿಧನ

    May 30, 2025

    ಬೇಸಿಗೆ ರಂಗ ಶಿಬಿರದ ವಿದ್ಯಾರ್ಥಿಗಳಿಂದ ‘ಆಷಾಢದ ಒಂದು ದಿನ’ ನಾಟಕ ಪ್ರದರ್ಶನ | ಮೇ 31

    May 30, 2025

    ಅಂತರ್ಜಾಲ ಆಧಾರಿತ ಅಂತರ್ರಾಜ್ಯಮಟ್ಟದ ಚಿತ್ರ ಕಾವ್ಯ ರಚನೆ ಸ್ಪರ್ಧೆ

    May 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದಿಂದ ಸಾಹಿತ್ಯ ವಿಮರ್ಶೆ, ಕೃತಿ ಲೋಕಾರ್ಪಣೆ, ಜನಪದ ಹಾಡುಗಳ ಪ್ರಸ್ತುತಿ
    Book Release

    ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದಿಂದ ಸಾಹಿತ್ಯ ವಿಮರ್ಶೆ, ಕೃತಿ ಲೋಕಾರ್ಪಣೆ, ಜನಪದ ಹಾಡುಗಳ ಪ್ರಸ್ತುತಿ

    February 22, 2024No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮುಂಬಯಿ : ‘ಸೃಜನಾ’ ಮುಂಬಯಿ ಕನ್ನಡ ಲೇಖಕಿಯರ ಬಳಗದಲ್ಲಿ ಸಾಹಿತ್ಯ ವಿಮರ್ಶೆ, ಕೃತಿ ಲೋಕಾರ್ಪಣೆ ಮತ್ತು ಜನಪದ ಹಾಡುಗಳ ಪ್ರಸ್ತುತಿ ಕಾರ್ಯಕ್ರಮವು ಮುಂಬಯಿಯ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿರುವ ಮೈಸೂರು ಅಸೋಸಿಯೇಷನ್ ಇದರ ಕಿರು ಸಭಾಗೃಹದಲ್ಲಿ ದಿನಾಂಕ 17-02-2024ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಸಭಾ ಅಧ್ಯಕ್ಷತೆಯನ್ನು ಸೃಜನಾ ಮುಂಬಯಿ ಕನ್ನಡ ಲೇಖಕಿಯರ‌ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ವಹಿಸಿಕೊಂಡಿದ್ದು. ದೀಪ ಬೆಳಗಿಸಿ ‌ಕಾರ್ಯಕ್ರಮಕ್ಕೆ ಚಾಲನೆ ಇತ್ತು ಸ್ವಾಗತಿಸಿ ಪ್ರಾಸ್ತಾವಿಕ ‌ನುಡಿಗಳನ್ನಾಡುತ್ತಾ “ಜನಪದದಲ್ಲಿ ‌ಹಾಡುಗಳದ್ದೇ ಸಿಂಹಪಾಲು. ಇದು ಹಳ್ಳಿಯ ಜನರ ಸಂಗೀತ. ಇದು ವೇದಕಾಲದಷ್ಟು ಪುರಾತನವಾದುದು. ಇಂತಹ ಜನಪದವು ಮನುಕುಲದ ಜೀವನವಾಗಿತ್ತು. ಕನ್ನಡ ಸಾಹಿತ್ಯ ರತ್ನ ಗರ್ಭಿತ ಕಡಲಿಗೆ ಸಮಾನ. ಈ ಸಾಹಿತ್ಯದಲ್ಲಿ ಹುದುಗಿದ ಸಂಪತ್ತನ್ನು ಹೆಕ್ಕಿ ತೆಗೆದು ಬೆಳಕಿಗೆ ತರುವ ಕೆಲಸ ನಾವು ಮಾಡಬೇಕಾಗಿದೆ. ಹೊಸ ಪೀಳಿಗೆಯಲ್ಲಿ ಆಸಕ್ತಿ ಮತ್ತು ಆದ್ಯತೆಗಳು ಬದಲಾಗುತ್ತಿದ್ದು ಜನಪದ ಗೀತೆಗಳು ತೆರೆಮರೆಗೆ ಸರಿಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ‘ಸೃಜನಾ’ದಲ್ಲಿ ಜನಪದಕ್ಕೆ ಮಹತ್ವ ಕೊಟ್ಟಿದ್ದು ಸ್ತುತ್ಯವಾಗಿದೆ” ಎಂದು ಹೇಳಿದರು.

    ಸೃಜನಾ ಬಳಗ ಹಮ್ಮಿಕೊಂಡ ಸಾಹಿತ್ಯ ವಿಮರ್ಶೆಯ ಬಗ್ಗೆ ಉಪನ್ಯಾಸ ನೀಡಲು ಆಗಮಿಸಿದ ಸಾಹಿತಿ, ಅಕ್ಷಯ ಮಾಸಪ್ರತಿಕೆಯ ಮುಖ್ಯ ಸಂಪಾದಕರಾದ ಡಾ. ಈಶ್ವರ ಅಲೆವೂರು ಇವರು ವಿಮರ್ಶೆಯ ಕುರಿತು ಉಪನ್ಯಾಸ ‌ನೀಡಿ ಕೃತಿಯ ಔಚಿತ್ಯವನ್ನು ಹೇಳುತ್ತಾರೆ. “ವಿಮರ್ಶಕ ಕವಿ ಹೃದಯದವನಾಗಿರಬೇಕು. ಜನಪರ ಕಾಳಜಿ ಹಾಗೂ ಸೂಕ್ಷ್ಮತೆಯನ್ನು ಹೊಂದಿರಬೇಕು. ವಿಮರ್ಶಕ ರಸಾನುಭವ ಸಾಧನೆಯ ಮತ್ತು ಇತಿಮಿತಿಯ ವಿದ್ವತ್ತನ್ನು ಹೊಂದಿರಬೇಕು. ಮೌಲ್ಯ ನಿರ್ಣಯ, ಪರಸ್ಪರ ಹೋಲಿಕೆ ಹೊಗಳುವುದು, ತೆಗಳುವುದು ವಿಮರ್ಶೆ ಅಲ್ಲ. ಒಂದು ಕೃತಿಯ ಕಳಪೆಗೂ ಹಲವಾರು ಕಾರಣಗಳಿವೆ. ಪ್ರಾಯೋಗಿಕ ಮತ್ತು ತೌಲನಿಕ ಹೀಗೆ ಎರಡು ವಿಧಗಳುಂಟು. ವಿಮರ್ಶಕ ಒಬ್ಬ ಗೆಳೆಯನಂತೆ ಸಲಹೆ, ಸೂಚನೆ ನೀಡಬೇಕು. ವ್ಯಕ್ತಿತ್ವ ವಿಮರ್ಶೆ, ನೀತಿ ನಿಷ್ಠೆ ವಿಮರ್ಶೆ, ಸಮಾಜವಾಚಕ ವಿಮರ್ಶೆ. ವಿಮರ್ಶಕರಲ್ಲಿ ವಿನಯ ಇರಬೇಕು. ಸಾಹಿತ್ಯ ವಿಮರ್ಶೆ ಎಂದರೆ ಸಾಹಿತ್ಯವನ್ನು ಒಳಗೊಂಡ ಸಮೀಕ್ಷೆ. ವಿಮರ್ಶೆ ಒರೆಗೆ ಹಚ್ಚಿ ಉಜ್ಜಿ ನೋಡುವುದು. ಉತ್ತಮ ಸಾಹಿತ್ಯ ವಿಮರ್ಶೆ ಉತ್ತಮ ಸಾಂಸ್ಕೃತಿಕ ವಿಮರ್ಶೆ ಆಗಿರುತ್ತದೆ ಮತ್ತು ಸಾಹಿತ್ಯ ಚರಿತ್ರೆಯನ್ನು ಗುರುತಿಸುವುದಾಗಿರುತ್ತದೆ” ಎಂಬ ಅನೇಕ ವಿಚಾರ, ವಿಷಯವನ್ನೊಳಗೊಂಡ ಮಾಹಿತಿ ನೀಡಿ ತಮ್ಮ ವಿಷಯಕ್ಕೆ ನ್ಯಾಯ ಒದಗಿಸಿದ್ದಾರೆ.

    ಗೌರವ ಅತಿಥಿಯಾಗಿ ಆಗಮಿಸಿದ ಸ್ಪ್ಯಾರೋದ ಡೈರೆಕ್ಟರ್ ಡಾ. ಸಿ.ಎಸ್. ಲಕ್ಷ್ಮೀ ತನ್ನ ಹಾಗೂ ಸೃಜನಾದ ಅವಿನಾಭಾವ ನಂಟನ್ನು ಹಂಚಿಕೊಳ್ಳುತ್ತಾ. “ಸೃಜನಾ ಕನ್ನಡ ಲೇಖಕಿಯರ ಬಳಗ ನನಗೆ ಚಿರಪರಿಚಿತ. ಬಹಳಷ್ಟು ಹಳೆಯ ಪರಿಚಯ ನನಗೆ ಸೃಜನಾದ್ದು. ನಾನು ಸೃಜನಾದ ಇಂತಹ ಸೃಜನಶೀಲ ಕಾರ್ಯಕ್ರಮಗಳಲ್ಲಿ ಎರಡನೇ ಸಲ ಭಾಗವಹಿಸುತ್ತಿದ್ದೇನೆ. ಶ್ಯಾಮಲಾ ಅವರು ಒಳ್ಳೆಯ ಲೇಖಕಿ ಮತ್ತು ಅನುವಾದಕಿ. ಸಾಹಿತ್ಯದಲ್ಲಿ ಬಹಳಷ್ಟು ಸಾಧನೆ ಮಾಡಿದ ಅವರಿಗೆ ‘ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿ’ ದೊರೆತಿದೆ. ಇಂದು ಅವರ ಕೃತಿಗಳು ಲೋಕಾರ್ಪಣೆಗೊಂಡಿವೆ. ಇದು ಬಹಳ ಸಂತೋಷದ ವಿಷಯ ಮತ್ತು ನಮಗೆಲ್ಲ ಹೆಮ್ಮೆ ಮತ್ತು ಅಭಿನಂದನೀಯ ಸಂಗತಿ. ಈ ಮೂಲಕ ಶ್ಯಾಮಲಾ ಮಾಧವ್ ಅವರು ಇನ್ನೂ ಹೆಚ್ಚಿನದನ್ನು ಸಾಧಿಸಲಿ” ಎಂದು ನುಡಿದರು.

    ಇದೇ ಸಂದರ್ಭದಲ್ಲಿ ಮುಂಬಯಿಯ ಖ್ಯಾತ ಲೇಖಕಿ, ಅನುವಾದಕಿ, ಸೃಜನಾದ ಮಾಜಿ ಸಂಚಾಲಕಿ ಶ್ಯಾಮಲಾ ಮಾಧವ ಅವರು ಆಂಗ್ಲಮೂಲದ ಡಾ. ಸಾವಿತ್ರಿ ಬಾಬುಲ್ ಕರ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ‘ಬಾಲ್ಯಕಾಲ ಮಾಯಾಜಾಲ’ ಸ್ಮೃತಿ ಚಿತ್ರಕೃತಿಯನ್ನು ಲೋಕಾರ್ಪಣೆಗೊಳಿಸಿದ ಡಾ. ಸಿ.ಎಸ್. ಲಕ್ಷ್ಮೀಯವರು ಕೃತಿ ಬಿಡುಗಡೆಗೊಳಿಸಲು ಅನುವು ಮಾಡಿಕೊಟ್ಟ ಸೃಜನಾ ಬಳಗ ಹಾಗೂ ಲೇಖಕಿ ಶ್ಯಾಮಲ ಮಾಧವರಿಗೆ ಅಭಿನಂದನೆ ಸಲ್ಲಿಸಿದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪತ್ರಕರ್ತ, ಸಾಂಸ್ಕೃತಿಕ ಸಂಘಟಕ ದಯಾಸಾಗರ ಚೌಟ ‘ನಾಳೆ ಇನ್ನೂ ಕಾದಿದೆ’ ಶ್ಯಾಮಲಾ ಮಾಧವ ಅವರ ಆತ್ಮ ಕಥನ‌‌ ಕೃತಿಯನ್ನು ಬಿಡುಗಡೆಗೊಳಿಸಿದರು. ಅಂದು ಬಿಡುಗಡೆಗೊಂಡ ಎರಡು ಕೃತಿಗಳ ಪರಿಚಯಿಸುತ್ತಾ “ಮೊರೆವ ಕಡಲು, ಹರಿವ ನದಿ, ಹಕ್ಕಿ ಪಿಕ್ಕಿಗಳ ಕಲರವ ಅಕ್ಷರಗಳಲ್ಲಿ ಬರೆಯಲಾಗದನ್ನು ಹೇಳುವ ಕೃತಿ ಇದು. ಒಂದು ಕಾಲಘಟ್ಟದ ಭಾವತ್ವವನ್ನು, ಸ್ನೇಹವನ್ನು, ಪ್ರೀತಿಯನ್ನು ಕಟ್ಟಿಕೊಡುವ ಕೃತಿ ‘ನಾಳೆ ಇನ್ನೂ ಕಾದಿದೆ’. ಸಜ್ಜನಿಕೆ ಸದ್ದು ಗದ್ದಲವಿಲ್ಲದೆ ಬರುವ ಶಾಮ ಭಾಮ ಅಂಟಿ ಹೀಗೆ ಕೃತಿ ಓದುತ್ತಿದ್ದಂತೆ ಎಲ್ಲವೂ ಇಷ್ಟವಾಗುತ್ತ ಹೋಗಿ ಆಪ್ತವಾಗುತ್ತದೆ. ಒಂದು ಕಾಲದ ಜನಾಂಗಗಳ ಕಥನವಿದು. ಆತ್ಮಕ್ಕೆ ಹತ್ತಿರವಾಯಿತು ಈ ಆತ್ಮಕಥನ. ಎಲ್ಲವನ್ನು ಸಹಜವಾಗಿ ಸಂಬಂಧದೊಳಗೆ ಭಾವಬಂಧಗಳನ್ನು ಕಾಪಿಟ್ಟು ಕೊಡುವುದು. ಮತದ, ಧರ್ಮದ ಪರಿವರ್ತನೆ. ಇಡೀ ಕೃತಿಯಲ್ಲಿ ಮುಂಬೈ ಕುರಿತು ಅನೇಕ ಬರಹಗಳಿವೆ. ಶ್ಯಾಮಲಾ ಅವರ ಮನೆ ಸಾಹಿತ್ಯದ ಮನೆ ! ಒಟ್ಟು ಕೃತಿ ಅಪ್ಯಾಯಮಾನ ಗಾಳಿಯಾಗಿ ನನ್ನೊಳಗೆ ಸುಳಿದಾಡುತ್ತಿದೆ.

    ಒಂದು ಹಿಡಿ ಪ್ರೀತಿ, ಒಂದಷ್ಟು ಮೈತ್ರಿ, ಒಂದಷ್ಟು ತಾಳ್ಮೆ ಸಮತೆ, ಮಮತೆ, ಕ್ಷಮತೆ ಕೈಗೂಡುತ್ತದೆ. ಬಿಡಿಯಲ್ಲೇ ಇಡೀ ಬದುಕನ್ನು ಕಟ್ಟಿಕೊಟ್ಟ ಕೃತಿ ‘ಬಾಲ್ಯಕಾಲ ಮಾಯಾಜಾಲ’. ಅಪ್ಪನಲ್ಲದ ವ್ಯಕ್ತಿ ಅಪ್ಪನಾಗಿ, ಅಮ್ಮನಲ್ಲದ ವ್ಯಕ್ತಿ ಅವ್ವಳಾಗುತ್ತಾಳೆ. ಏಳರ ಬಾಲೆ ದಾರ್ಶನಿಕ ಭಾವ ತೋರುವ ಮುಗ್ಧತೆಯಲ್ಲಿ ಆ ಪಡುವಣ ಗಾಳಿಗೆ ಮೈ ಒಡ್ಡಿ ನಿಂತಂತ ಮನೆ. ಹೃದ್ಯ, ಗದ್ಯ, ಪದ್ಯವಾಗಿ ಲೇಖಕಿಯ ಕೃತಿ ನಮ್ಮೊಂದಿಗೆ ಬೆರೆಯುತ್ತದೆ. ಎರಡು ಕೃತಿಗಳು ‌ಮನ ಮುಟ್ಟುತ್ತವೆ” ಎಂದು ಅರುಹಿದರು.

    ಶ್ಯಾಮಲ ಮಾಧವ ತಮ್ಮ ಮನದಾಳದ ‌ಮಾತಿನಲ್ಲಿ “ತನ್ನ ಎರಡೂ ‌ಕೃತಿಗಳು ಇಂದು ಇಲ್ಲಿ‌ ಬೆಳಕು ‌ಕಾಣುವುದನ್ನು ಕಣ್ಣ್ ತುಂಬಿಸಿಕೊಳ್ಳಲು ಆಗಮಿಸಿದ ನಿಮಗೆಲ್ಲಾ ನಾನು ಅಭಾರಿ. ಇಂದು ಹೃದಯ ತುಂಬಿ ಬಂದಿದೆ. ದಯಾಸಾಗರ ಅವರ ಮಾತು ಕೇಳಿ, ಹೃದ್ಯವಾಗಿ ತಿಳಿಸುವ ಅವರ ನಲ್ನುಡಿಗಳು ಮನಸ್ಸಿಗೆ ಇನ್ನೂ ಹತ್ತಿರವಾದವು. ಕೃತಿ 2021ರಲ್ಲಿ ಅವಧಿಯಲ್ಲಿ ಆನ್ಲೈನ್ ಮೂಲಕ ಪ್ರಕಟಗೊಂಡಿತ್ತು. ಮುನ್ನಡಿ ಬರೆದಂತಹ ವೈದೇಹಿ ಅವರಿಗೂ ಕೂಡ ತುಂಬು ಹೃದಯದ ಧನ್ಯವಾದಗಳು. ಡಾ. ಸಿ.ಎಸ್. ಲಕ್ಷ್ಮೀಯವರಿಗೆ ವಂದನೆಗಳು. ಸೃಜನ ಗೆಳತಿಯರೆಲ್ಲರಿಗೂ ಧನ್ಯವಾದಗಳು” ಎಂದು ನುಡಿದರು.

    ಸೃಜನಾ ಬಳಗದ ಸದಸ್ಯೆಯರು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ವಿವಿಧ ಪ್ರಶಸ್ತಿ ಗಳಿಸಿದ್ದು ಮಿತ್ರಾ ವೆಂಕಟ್ರಾಜ್ – ಕರ್ಕಿ ಪ್ರಶಸ್ತಿ, ಡಾ. ದಾಕ್ಷಾಯಣಿ ಯಡಹಳ್ಳಿ -ಸುಶೀಲ ಶೆಟ್ಟಿ ಕಥಾ ಪ್ರಶಸ್ತಿ, ಶ್ಯಾಮಲ ಮಾಧವ -ಸ್ಪ್ಯಾರೋ ಪ್ರಶಸ್ತಿ, ಸರ್ವ ಮಂಗಳ ಅರಸ – ಸಾಹಿತ್ಯ ರತ್ನ ಪ್ರಶಸ್ತಿ, ಲತಾ ಸಂತೋಷ್ – ತುಳು ನಾಡ ಐಸಿರಿ ಪ್ರಶಸ್ತಿ. ಈ ಎಲ್ಲರನ್ನು ಗ್ರಂಥ ಹಾಗೂ ಪುಷ್ಪ ಗೌರವ ನೀಡಿ ಗೌರವಿಸಲಾಯಿತು.

    ಸೃಜನಾ ಬಳಗದ ಸದಸ್ಯರಾದ ಲಕ್ಷ್ಮೀ ಹೆರೂರು, ರಜನಿ ಪೈ, ಡಾ. ದಾಕ್ಷಾಯಣಿ ಯಡಹಳ್ಳಿ, ಸುಶೀಲಾ ದೇವಾಡಿಗ, ಶೋಭಾ ಶೆಟ್ಟಿ, ಯಶೋದಾ ಶೆಟ್ಟಿ, ಲಲಿತಾ ಪ್ರಭು ಅಂಗಡಿ, ಸರೋಜಾ ಅಮಾತಿ, ರಶ್ಮಿ ಭಟ್ಟ್ ಜನಪದ ಹಾಡುಗಳ ‌ಪ್ರಸ್ತುತಿ ನಡೆಸಿಕೊಟ್ಟರು. ಸೃಜನಾ ಬಳಗಕ್ಕೆ ಸ್ಫೂರ್ತಿಯ ಸೆಲೆಯಾದ ಡಾ. ಸುನೀತಾ ಶೆಟ್ಟಿಯವರು ಶ್ಯಾಮಲ ಮಾಧವರನ್ನು ಗ್ರಂಥ ಹಾಗೂ ‌ಪುಷ್ಪದೊಂದಿಗೆ ಗೌರವಿಸಿದರು. ಸಂಚಾಲಕಿ ಪದ್ಮಜಾ ‌ಮಣ್ಣೂರ, ಕೋಶಾಧಿಕಾರಿ ಡಾ. ದಾಕ್ಷಾಯಣಿ ಯಡಹಳ್ಳಿ ಮತ್ತು ಕಾರ್ಯದರ್ಶಿ ಲತಾ ಸಂತೋಷ್ ‌ಮುದ್ದುಮನೆ ಇವರುಗಳು ಮುಖ್ಯ ಅತಿಥಿಗಳನ್ನು ಸ್ಮರಣಿಕೆ, ಗ್ರಂಥ ಹಾಗೂ ಪುಷ್ಪವಿತ್ತು ಗೌರವಿಸಿದರು.

    ಜೊತೆ ಕೋಶಾಧಿಕಾರಿ ಸರೋಜಾ ಅಮಾತಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅತಿಥಿ ಗಣ್ಯರನ್ನು ಡಾ. ದಾಕ್ಷಾಯಣಿ ಯಡಹಳ್ಳಿ, ದೀಪಾ ಶೆಟ್ಟಿ, ಶೋಭಾ ಶೆಟ್ಟಿ ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಕುಸುಮ ಚಂದ್ರ ಪೂಜಾರಿ ಧನ್ಯವಾದಗೈದರು. ಕಾರ್ಯದರ್ಶಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮುದ್ದಣ ಕವಿಯ ‘ಶ್ರೇಷ್ಠ ಯಕ್ಷಗಾನ ಪ್ರಸಂಗಗಳ ಧ್ವನಿ ಮುದ್ರಣ’ದ ಲೋಕಾರ್ಪಣೆ
    Next Article ‘ಪದ’ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಉದ್ಘಾಟನೆಗೊಂಡ ‘ಕರ್ನಾಟಕ ಜಾನಪದ ಉತ್ಸವ’
    roovari

    Add Comment Cancel Reply


    Related Posts

    ಖ್ಯಾತ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿ ನಿಧನ

    May 30, 2025

    ಅಂತರ್ಜಾಲ ಆಧಾರಿತ ಅಂತರ್ರಾಜ್ಯಮಟ್ಟದ ಚಿತ್ರ ಕಾವ್ಯ ರಚನೆ ಸ್ಪರ್ಧೆ

    May 30, 2025

    ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ‘ಬೀಚಿ ರಸಾಯನ’ | ಮೇ 30

    May 29, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

    May 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.