ಮೂಡುಬಿದಿರೆ : ಶಿವರಾಮ ಕಾರಂತ ಪ್ರತಿಷ್ಠಾನ ಕಳೆದ 30 ವರ್ಷಗಳಿಂದಲೂ ನಿರಂತರವಾಗಿ ಕನ್ನಡದ ಮಹತ್ವದ ಕೃತಿಗಳಿಗೆ ನೀಡುತ್ತಾ ಬಂದಿರುವ ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಈ ವರ್ಷ ಮೋಹನ್ ಕುಂಟಾರ್ ಇವರ ‘ಅನುವಾದ ಒಲವು ನಿಲುವುಗಳು’, ಹೆಚ್.ಎಸ್. ಅನುಪಮಾರವರ ‘ಬೆಡಗಿನೊಳಗು -ಮಹಾದೇವಿ ಅಕ್ಕ’, ಸಬಿತಾ ಬನ್ನಾಡಿಯವರ ‘ಇದಿರು ನೋಟ’ ಮತ್ತು ಶ್ರೀಪಾದ ಭಟ್ ಇವರ ‘ದಡವ ನೆಕ್ಕಿದ ಹೊಳೆ’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಹತ್ತು ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಸನ್ಮಾನವನ್ಮು ಒಳಗೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ಇವರು ತಿಳಿಸಿದ್ದಾರೆ.