ಶಿರಸಿ : ಶ್ರೀ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ (ರಿ.) ಸಿದ್ಧಾಪುರ ಮತ್ತು ಅತಿಥಿ ಕಲಾವಿದರ ಸಂಗಮದಲ್ಲಿ ‘ಗಾನ ಸಾರಥಿ’ ಜನ್ಸಾಲೆಯವರ ನಿರ್ದೇಶನದಲ್ಲಿ ‘ಬ್ರಹ್ಮ ಕಪಾಲ’ ಎಂಬ ಪ್ರಸಂಗದ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 07 ಜೂನ್ 2025ರಂದು ಸಂಜೆ 9-00 ಗಂಟೆಗೆ ಇಟಗುಳಿಯ ಶ್ರೀ ಶಾಂತಾರಾಮ ಸೀತಾರಾಮ ಹೆಗಡೆ ಇವರ ಮನೆಯಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಭಾಗವತರು ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ಬಿಲ್ಗಾಡಿ ಗಣೇಶಾಚಾರ್ಯ, ಮದ್ದಳೆಯಲ್ಲಿ ಶಂಶಾಕ ಆಚಾರ್ಯ ಕಿರುಮಂಜೇಶ್ವರ ಮತ್ತು ಚಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಹಾಗೂ ಮುಮ್ಮೇಳದಲ್ಲಿ ಉದಯ ಹೆಗಡೆ ಕಡಬಾಳ, ವಿನಯ್ ಭಟ್ಟ ಬೇರೊಳ್ಳಿ, ಸುಬ್ರಹ್ಮಣ್ಯ ಭಟ್ಟ ನೇರಗೋಡು, ಕಾರ್ತೀಕ ಹೆಗಡೆ ಚಿಟ್ಟಾಣಿ, ಪವನ್ ಕುಮಾರ್ ಸಾಣ್ಮನೆ ಮತ್ತು ಕೆ. ಜಿ. ಕಾರ್ತಿಕ್, ಸ್ತ್ರೀ ವೇಷದಲ್ಲಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಸುಧೀರ ಉಪ್ಪೂರು ಮತ್ತು ಸಂತೋಷ ಕುಮಾರ ಕುಲಾಲ್ ಹಾಗೂ ಹಾಸ್ಯದಲಿ ಪುರಂದರ ಮೂಡ್ಕಣಿ ಇವರು ಸಹಕರಿಸಲಿದ್ದಾರೆ.