Subscribe to Updates

    Get the latest creative news from FooBar about art, design and business.

    What's Hot

    ಬೇಕಲದಲ್ಲಿ ‘ಸಮನ್ವಯ ಗಡಿನಾಡ ಜಾನಪದ ಉತ್ಸವ’ | ಫೆಬ್ರುವರಿ 01

    January 31, 2026

    ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ‘ಉಡುಪಿ ಜಿಲ್ಲಾ ಗಮಕ ಕಲಾ ಸಮ್ಮೇಳನ’

    January 31, 2026

    ಪುಸ್ತಕ ಬಹುಮಾನಕ್ಕೆ ಕೃತಿ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    January 31, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಲೇಖಕಿ ರಮ್ಯ ಎಸ್. ರವರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’ ಪ್ರದಾನ
    Awards

    ಲೇಖಕಿ ರಮ್ಯ ಎಸ್. ರವರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’ ಪ್ರದಾನ

    January 10, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೋಟ : ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನದ ವತಿಯಿಂದ ಕೋಟದ ಮಿತ್ರಮಂಡಳಿಯ ಸಹಕಾರದೊಂದಿಗೆ ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ. ಕಾರಂತ ಸಭಾಂಗಣದಲ್ಲಿ ದಿನಾಂಕ 07 ಜನವರಿ 2026ರಂದು ‘ವರ್ಣತಂತು’ ಕಾದಂಬರಿಯ ಲೇಖಕಿ ರಮ್ಯ ಎಸ್. ರವರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.

    ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಇವರು ಪ್ರಶಸ್ತಿಯ ಮಹತ್ವದ ಕುರಿತು ಮಾತನಾಡಿ, ಯಾವುದೇ ಬಣಕ್ಕೆ ಸಾಹಿತ್ಯಕ ವಲಯಕ್ಕೆ ಸೇರದಿರುವ ಮೂವರು ಸಾಮಾನ್ಯ ಓದುಗರ ಅಭಿಪ್ರಾಯದೊಂದಿಗೆ ಪ್ರಶಸ್ತಿಗೆ ಪಾತ್ರವಾಗುವ ಕೃತಿಯ ಆಯ್ಕೆಯು ಸಂಪೂರ್ಣವಾಗಿ ಪಕ್ಷಪಾತ ರಹಿತವಾಗಿರುತ್ತದೆ ಎಂಬುವುದೇ ಮುಖ್ಯ. ಅಂತೆಯೇ ಹಲವರ ಓದಿಗೆ ಪರ್ಯಾಯವಾಗಿ ಕಾರಣವಾಗುವ ಸ್ಪರ್ಧಾ ಪ್ರಾಯೋಜಕರು ಅಭಿನಂದನಾರ್ಹರು” ಎಂದರು.

    “ಬದುಕು ಸವಾಲು ಗಳನ್ನು ಒಡ್ಡುತ್ತಾ ಹೋದ ಹಾಗೆ ವಿಜ್ಞಾನ ಹೊಸ ಉತ್ತರಗಳನ್ನು ಹುಡುಕಿ ಕೊಡುತ್ತಾ ಹೋಗುವ ಚೋದ್ಯವನ್ನು ರಮ್ಯ ಎಸ್.ರವರ ‘ವರ್ಣತಂತು’ ಕಾದಂಬರಿ ತೆರೆದಿಡುತ್ತದೆ. ಸಾಹಿತ್ಯ ಇರುವುದು ಮನರಂಜನೆಗಾಗಿ ಮಾತ್ರವಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಕೆಲಸವನ್ನು ಈ ಕಾದಂಬರಿಯು ಮಾಡಿದಂತಿದೆ” ಎಂದು ಬೆಳಗೋಡು ರಮೇಶ ಭಟ್ಟರು ಅಭಿಪ್ರಾಯಪಟ್ಟರು.

    ಉಡುಪಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಚಡಗರ ಸಂಸ್ಮರಣೆಗೈದರು. ಚಡಗರ ಸುಪುತ್ರ ಬೆಂಗಳೂರಿನ ಶೇಷನಾರಾಯಣ ಚಡಗ ಶುಭಾಶಂಸನೆಗೈದರು. ಪ್ರಶಸ್ತಿ ಪ್ರಾಯೋಜಕ ಕೋಟೇಶ್ವರದ ಡಾ. ಎನ್. ಭಾಸ್ಕರ ಆಚಾರ್ಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಪಿ. ಶೀಪತಿ ಹೇರ್ಳೆ ವಂದಿಸಿ, ನಿವೃತ್ತ ಶಿಕ್ಷಕಿ ಕಮಲಾ ಪ್ರಾರ್ಥನೆಗೈದರು. ಬ್ಯಾಂಕ್ ನಿವೃತ್ತ ಉದ್ಯೋಗಿ ಮಂಜುನಾಥ ಉಪಾಧ್ಯ ನಿರೂಪಿಸಿ ಸಹಕರಿಸಿದರು. ‘ಸ್ಥಿತಿ ಗತಿ’ ಪ್ರಕಾಶಕಿ ಡಾ. ಸಬಿತಾ ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

    award baikady felicitation Literature roovari
    Share. Facebook Twitter Pinterest LinkedIn Tumblr WhatsApp Email
    Previous Articleತುಳು ಭವನದಲ್ಲಿ ಕೆ. ಅನಂತರಾಮ ಬಂಗಾಡಿ ಸಂಸ್ಮರಣಾ ಗೋಷ್ಠಿ ಹಾಗೂ ಯಕ್ಷಗಾನ | ಜನವರಿ 11
    Next Article ರಾಕೇಶ್ ರೈ ಅಡ್ಕ ಇವರಿಗೆ ‘ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ’
    roovari

    Add Comment Cancel Reply


    Related Posts

    ಬೇಕಲದಲ್ಲಿ ‘ಸಮನ್ವಯ ಗಡಿನಾಡ ಜಾನಪದ ಉತ್ಸವ’ | ಫೆಬ್ರುವರಿ 01

    January 31, 2026

    ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ‘ಉಡುಪಿ ಜಿಲ್ಲಾ ಗಮಕ ಕಲಾ ಸಮ್ಮೇಳನ’

    January 31, 2026

    ಪುಸ್ತಕ ಬಹುಮಾನಕ್ಕೆ ಕೃತಿ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    January 31, 2026

    ಸಾಗರದಲ್ಲಿ ಮನೆಯಂಗಳದಿ ಜಾನಪದ ಸಂಭ್ರಮ ಹಾಗೂ ಸನ್ಮಾನ ಕಾರ್ಯಕ್ರಮ | ಫೆಬ್ರುವರಿ 01

    January 31, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.