ಉಡುಪಿ : ಗಿರಿಬಳಗ (ರಿ.) ಕುಂಜಾರುಗಿರಿ ಇವರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಸ್ತುತ ಪಡಿಸುವ ‘ಛತ್ರಪತಿ ಶಿವಾಜಿ’ ಕನ್ನಡ ಐತಿಹಾಸಿಕ ನಾಟಕ ಪ್ರದರ್ಶನವನ್ನು ದಿನಾಂಕ 25 ಅಕ್ಟೋಬರ್ 2025ರಂದು ಸಂಜೆ 6-30 ಗಂಟೆಗೆ ಉಡುಪಿಯ ಶಾರದಾ ಕಲ್ಯಾಣ ಮಂಟಪ ರಸ್ತೆ, ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ನಾಟಕದ ರಚನೆ ಶಶಿರಾಜ್ ರಾವ್ ಕಾವೂರು, ಗಿರೀಶ್ ತಂತ್ರಿ ಉಡುಪಿ ಇವರು ಸಂಗೀತ ಹಾಗೂ ಗಣೇಶ್ ರಾವ್ ಎಲ್ಲೂರು ಇವರು ರಂಗ ಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.

