ಮೂಡುಬಿದಿರೆ : ಸಪಳಿಗರ ಯಾನೆ ಗಾಣಿಗರ ಸೇವಾ ಸಂಘ (ರಿ.), ಗಾಣಿಗರ ಯುವ ವೇದಿಕೆ ಮತ್ತು ಗಾಣಿಗರ ಮಹಿಳಾ ವೇದಿಕೆ ಇವರ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ಕಲಾ ಸಂಗಮ ಕಲಾವಿದರು ಅಭಿನಯಿಸುವ ‘ಛತ್ರಪತಿ ಶಿವಾಜಿ’ ಅದ್ದೂರಿ ತುಳು ಚಾರಿತ್ರಿಕ ನಾಟಕ ಪ್ರದರ್ಶನವನ್ನು ದಿನಾಂಕ 29 ಜೂನ್ 2025ರಂದು ಸಂಜೆ 6-30 ಗಂಟೆಗೆ ಮೂಡುಬಿದಿರೆ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಈ ನಾಟಕಕ್ಕೆ ಶಶಿರಾಜ್ ಕಾವೂರು ಇವರ ಕಥೆ ಸಂಭಾಷಣೆ, ಎ.ಕೆ. ವಿಜಯ್ ಕೋಕಿಲ ಮತ್ತು ಕದ್ರಿ ಮಣಿಕಾಂತ್ ಇವರ ಸಂಗೀತ ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9845191269, 9845288217 ಮತ್ತು 9964427968.