Subscribe to Updates

    Get the latest creative news from FooBar about art, design and business.

    What's Hot

    ಕವನ | ಹೂ ಮನಸ್ಸು

    December 15, 2025

    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

    December 15, 2025

    ತುಳು ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭ

    December 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ
    Literature

    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

    December 15, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಿಸೆಂಬರ್ ಮತ್ತು ಜನವರಿ ಮಾಹೆಯಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರಮಾಣ ವರ್ಷ ನಡೆಸುವ ಈ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರ ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ನಮ್ಮದು ಎಂದು ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ.

    ಡಿಸೆಂಬರ್ ಕೊನೆಯ ವಾರದಲ್ಲಿ ಎಲ್ಲಾ ತಾಲೂಕು ಮಟ್ಟದಲ್ಲಿ ಸಮ್ಮೇಳನ ಏರ್ಪಡಿಸಲಾಗುವುದು. ಜನವರಿ ಮೊದಲ ವಾರ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಂತರ ರಾಜ್ಯ ಮಟ್ಟದ ಸಮ್ಮೇಳನ ಏರ್ಪಡಿಸಲಾಗುವುದು. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪ್ರಾಥಮಿಕ, ಪ್ರೌಢಶಾಲಾ, ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸ್ವಂತ ಕವನ, ಕಥೆ, ಪ್ರಬಂಧ ಬರೆಯುತ್ತಿದ್ದರೆ, ಆಶುಭಾಷಣದಲ್ಲಿ ಆಸಕ್ತಿಯಿದ್ದರೆ ನಿಮಗೆ ಸಾಮೂಹಿಕ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.

    ಈ ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿಯಿರುವ ವಿದ್ಯಾರ್ಥಿಗಳು ತಮ್ಮ ಶಾಲಾ ಮುಖ್ಯಸ್ಥರು ಅಥವಾ ಪೋಷಕರ ಸಹಿಯೊಂದಿಗೆ ಹೆಸರು, ಓದುತ್ತಿರುವ ತರಗತಿ, ವಿಳಾಸ, ದೂರವಾಣಿ, ಆಸಕ್ತಿ, ಬರೆದಿರುವ ಪ್ರಕಾರಗಳನ್ನು ಬರೆದು ತಿಳಿಸಲು ಕೋರುತ್ತೇವೆ. ಕವನ, ಕಥೆ, ಪ್ರಬಂಧ ಬರೆದವರು, ಪುಸ್ತಕ ಪ್ರಕಟಿಸಿದವರು, ಬೇರೆ ಬೇರೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರ ಮಾಹಿತಿಗಳನ್ನು ಬರೆದು ತಿಳಿಸಬಹುದು.

    ಆಸಕ್ತಿಯಿರುವವರು ಶಿವಮೊಗ್ಗ ತಾಲೂಕು ಡಿ. ಮಂಜುನಾಥ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಉಡುಗಿರಿ ನಿಲಯ, ಭಗೀರಥ ವೃತ್ತದ ಹತ್ತಿರ, ವಿನೋಬನಗರ, ಶಿವಮೊಗ್ಗ. 9449552795. ತೀರ್ಥಹಳ್ಳಿ ರೇಣುಕಾ ಹೆಗಡೆ : 9480010403, ಭದ್ರಾವತಿ ಸುಧಾಮಣಿ ವೆಂಕಟೇಶ : 9880070989, ಹೊಸನಗರ ರಾಘವೇಂದ್ರ ನಗರ : 9449494324, ಶಿಕಾರಿಪುರ ನರಸಿಂಹ ಸ್ವಾಮಿ :8296388380, ಸೊರಬ ಶಂಕರ್ ಶೇಟ್ : 9844163114, ಸಾಗರ : ಸದಾನಂದ ಶರ್ಮ :9482029149 ಆಯಾಯ ತಾಲೂಕು ವಿದ್ಯಾರ್ಥಿಗಳು ಆಯಾಯ ತಾಲೂಕು ಅಧ್ಯಕ್ಷರಲ್ಲಿ ಹೆಸರು ನೋಂದಣಿ ಮಾಡಿಸಲು ಡಿ. ಮಂಜುನಾಥ ಮನವಿ ಮಾಡಿದ್ದಾರೆ.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleತುಳು ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭ
    Next Article ಕವನ | ಹೂ ಮನಸ್ಸು
    roovari

    Add Comment Cancel Reply


    Related Posts

    ಕವನ | ಹೂ ಮನಸ್ಸು

    December 15, 2025

    ತುಳು ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭ

    December 15, 2025

    ಮಳಲಿ ಸರ್ಕಾರಿ ಶಾಲೆಯಲ್ಲಿ ‘ಮಣೇಲಿನ ಹೆಮ್ಮೆ ರಾಣಿ ಅಬ್ಬಕ್ಕ’ ವಿಚಾರ ಸಂಕಿರಣ

    December 15, 2025

    ನೃತ್ಯ ವಿಮರ್ಶೆ | ವೇದಿಕೆಯ ಮೇಲೆ ಝೇಂಕಾರ ಸೃಷ್ಟಿಸಿದ ‘ಕಲಾಂಗನ್’

    December 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.