ಮುಂಬೈ : ಕಲಾ ಜಗತ್ತು ಕ್ರಿಯೇಷನ್ಸ್ ಮುಂಬೈ ಪ್ರಸ್ತುತ ಪಡಿಸುವ ತೋನ್ಸೆ ವಿಜಯ್ ಕುಮಾರ್ ಶೆಟ್ಟಿಯವರ ನಿರ್ದೇಶನದ ‘ಚೋಖಾ ಮೇಳ’ ಕನ್ನಡ ಐತಿಹಾಸಿಕ ಸಂಗೀತ ನಾಟಕ ಪ್ರದರ್ಶನವನ್ನು ದಿನಾಂಕ 28 ಜೂನ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಮುಂಬೈಯ ಕುರ್ಲಾ ಈಸ್ಟ್, ಬಂಟರ ಭವನದ ಶ್ರೀಮತಿ ರಾಧಬಾಯಿ ಟಿ. ಭಂಡಾರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಸದಾನಂದ ಸ್ವಾಮೀಜಿ ತುಂಗರೇಶ್ವರ ಇವರು ಈ ನಾಟಕದ ಮೂಲ ಮರಾಠೀ ಲೇಖಕರು, ಡಾ. ಜಿ.ಪಿ. ಕುಸುಮ್ ಇವರು ಕನ್ನಡ ಭಾಷಾಂತರ ಮಾಡಿರುತ್ತಾರೆ.