Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯಗುರು ಕಮಲಾ ಭಟ್ ಇವರಿಗೆ ನುಡಿ ನಮನ
    Bharathanatya

    ನೃತ್ಯಗುರು ಕಮಲಾ ಭಟ್ ಇವರಿಗೆ ನುಡಿ ನಮನ

    December 31, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ನೃತ್ಯಗುರು ಕಮಲಾ ಭಟ್ ಇವರ ಶಿಷ್ಯ ವರ್ಗದವರು ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮವು ದಿನಾಂಕ 29 ಡಿಸೆಂಬರ್ 2024ರಂದು ಉರ್ವದ ಗೋಕುಲ ಕಲ್ಯಾಣ ಮಂಟಪದಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಕಟೀಲಿನ ವೇದಮೂರ್ತಿ ಕಮಲಾದೇವಿ ಪ್ರಸಾದ್ ಆಸ್ರಣ್ಣ “ನಾಲ್ಕು ದಶಕದ ಹಿಂದೆ ನಗರದಲ್ಲಿ ನಾಟ್ಯದ ಮೂಲಕ ಕಲೆಯ ದೀಪ ಬೆಳಗಿಸಿ ಅಸಂಖ್ಯಾತ ಶಿಷ್ಯ ವರ್ಗವನ್ನು ಹೊಂದಿ, ಕಲಾ ಬದುಕಿನಲ್ಲಿ ಸಾರ್ಥಕ್ಯ ಕಂಡು ಇದೀಗ ದೇವರ ಪಾದ ಸೇರಿದ ಗುರು ಕಮಲ ಭಟ್ ಸದಾ ಸ್ಮರಣೀಯರು. ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ. ಆದರೆ ಇವೆರಡುಗಳ ಮಧ್ಯೆ ಬದುಕನ್ನು ಕಟ್ಟಿಕೊಂಡು ಕಲಾಮಾತೆಯ ಸೇವೆಯನ್ನು ಮಾಡುತ್ತ, ಶ್ರೀ ಕ್ಷೇತ್ರ ಕಟೀಲಿನ ಪರಮ ಭಕ್ತೆ ಕಮಲ ಭಟ್ ಅವರಿಗೆ ಜಗನ್ಮಾತೆಯು ಸದ್ಗತಿ ನೀಡಲಿ, ಅವರು ಹಾಕಿ ಕೊಟ್ಟ ದಾರಿಯಲ್ಲಿ ಅವರ ಶಿಷ್ಯರು ಮುನ್ನಡೆಯಲು ದೇವರ ಆಶೀರ್ವಾದ ಸದಾ ಇರಲಿ” ಎಂದು ನುಡಿದರು.

    ಪ್ರದೀಪ್ ಕುಮಾರ್’ ಕಲ್ಕೂರ ಮಾತನಾಡಿ, “ಕಲಾಸೇವೆ ತನ್ನ ಜೀವನದ ಸರ್ವಸ್ವ, ಕಲಾರಾಧನೆಯೊಂದಿಗೆ ಸಮಾಜಮುಖಿಯಾಗಿ ಆದರ್ಶ ಗುರುವಾಗಿ ಎಲ್ಲರೊಂದಿಗೆ ಸೌಹಾರ್ದ ಬದುಕನ್ನು ಕಟ್ಟಿಕೊಂಡ ಗುರು ಕಮಲ ಭಟ್ ಸದಾ ಸ್ಮರಣೀಯರು” ಎಂದರು. ನಾಟ್ಯ ಗುರು ಉಳ್ಳಾಲ ಮೋಹನ ಕುಮಾರ್ ಮಾತನಾಡುತ್ತಾ “ಶಿಷ್ಯೆಯಾಗಿದ್ದು ಮಗಳ ಸಮಾನರಾಗಿದ್ದ ಕಮಲಾ ಭಟ್ ಅವರ ಗುರುಭಕ್ತಿ, ನೃತ್ಯದ ಬಗೆಗೆ ಅವರಿಗಿದ್ದ ಆಸಕ್ತಿ ಹೀಗೆ ಹಳೆಯ ನೆನಪು ಗಳನ್ನು ಮತ್ತೆ ನೆನಪಿಸಿಕೊಳ್ಳುವ ಮೂಲಕ ನುಡಿ ನಮನ ಸಲ್ಲಿಸಿದರು.

    ಹಿರಿಯ ಶಿಷ್ಯೆ ವಿದುಷಿ ಪ್ರತಿಮಾ ಶ್ರೀಧರ್, ವಿದುಷಿ ಸಹನ ಭಟ್ ಹುಬ್ಬಳ್ಳಿ, ವಿದುಷಿ ಸೌಮ್ಯ ಸುಧೀಂದ್ರ, ವಿದುಷಿ ಸುನಿತಾ ಶೃಂಗೇರಿ, ಡಾ. ಹರಿಕೃಷ್ಣ ಪುನರೂರು, ಸಂಸ್ಕಾರ ಭಾರತಿಯ ಚಂದ್ರಶೇಖರ ಶೆಟ್ಟಿ, ವಿದ್ವಾನ್ ಚಂದ್ರಶೇಖರ ನಾವಡ ಮೊದಲಾದವರು ನುಡಿ ನಮನ ಸಲ್ಲಿಸಿದರು. ಶಾಸಕ ವೇದವ್ಯಾಸ ಕಾಮತ್, ಪುತ್ರ ಕಿರಣ್, ಸೊಸೆ ಸಿಂಧು, ವಿನಯರಾವ್, ವಾಣಿ ಲಕ್ಷ್ಮೀಶ್ ಉಪಸ್ಥಿತರಿದ್ದರು. ಸಂಘಟಕ ಶ್ರೀಧರ ಹೊಳ್ಳ ನಿರೂಪಿಸಿ, ವಿದ್ವಾನ್ ಗಣೇಶ್ ರಾಜ್ ನಾದನಮನ ಸಲ್ಲಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕಾದಂಬರಿ ಪ್ರಶಸ್ತಿಗೆ ಕೃತಿ ಆಹ್ವಾನ | ಜನವರಿ 30
    Next Article ‘ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರ’ಕ್ಕೆ ರಂಗನಟ ಭುವನ್ ಮಣಿಪಾಲ್ ಆಯ್ಕೆ
    roovari

    Add Comment Cancel Reply


    Related Posts

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01

    May 31, 2025

    ಬೆಂಗಳೂರಿನಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ಭಾರತೀಯ ನಾದ ಸೌರಭ ಸಂಗೀತೋತ್ಸವ | ಜೂನ್ 01

    May 31, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.