Subscribe to Updates

    Get the latest creative news from FooBar about art, design and business.

    What's Hot

    ಪರಿಷತ್ತಿನ ಚಾಮರಾಜೇಂದ್ರ ಸಭಾಭವನದಲ್ಲಿ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ

    June 6, 2025

    ಡಾ. ಎಂ.ಮೋಹನ ಆಳ್ವ ಇವರಿಗೆ ‘ಡಾ. ಜಿ. ಪಿ. ರಾಜ ರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’

    June 6, 2025

    ಡಾ. ರಾಗೌ ಸಾಹಿತ್ಯ ಪ್ರಶಸ್ತಿ’ ಹಾಗೂ ‘ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ ಪ್ರದಾನ ಸಮಾರಂಭ | ಜೂನ್ 08

    June 6, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗೋವಿಂದದಾಸ ಕಾಲೇಜಿನಲ್ಲಿ ಅಭಿನಂದನಾ ಸಮಾರಂಭ ಮತ್ತು ‘ಗುರುಭ್ಯೋ ನಮಃ’ ಕೃತಿ ಬಿಡುಗಡೆ ಸಮಾರಂಭ
    Book Release

    ಗೋವಿಂದದಾಸ ಕಾಲೇಜಿನಲ್ಲಿ ಅಭಿನಂದನಾ ಸಮಾರಂಭ ಮತ್ತು ‘ಗುರುಭ್ಯೋ ನಮಃ’ ಕೃತಿ ಬಿಡುಗಡೆ ಸಮಾರಂಭ

    April 11, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುರತ್ಕಲ್ : ಪ್ರೊ. ಪಿ.ಕೆ. ಮೊಯಿಲಿಯವರ 94ರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಪ್ರೊ. ಪಿ.ಕೆ. ಮೊಯಿಲಿ ಅಭಿನಂದನಾ ಸಮಿತಿ ಸುರತ್ಕಲ್, ಗೋವಿಂದದಾಸ ಕಾಲೇಜಿನ ಡಾ. ಸೀ. ಹೊಸಬೆಟ್ಟು ಅಧ್ಯಯನ ಕೇಂದ್ರ ಮತ್ತು ಮಾನವಿಕ ಸಂಘಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಮತ್ತು ‘ಗುರುಭ್ಯೋ ನಮಃ’ ಅಭಿನಂದನಾ ಕೃತಿ ಬಿಡುಗಡೆ ಸಮಾರಂಭವು ಗೋವಿಂದದಾಸ ಕಾಲೇಜಿನ ಸಭಾಭವನದಲ್ಲಿ ದಿನಾಂಕ 06-04-2024ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿದ ಹಿರಿಯ ಶಿಕ್ಷಣ ತಜ್ಞ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಪತ್ರಕರ್ತ ಪ್ರೊ. ಪಿ.ಕೆ. ಮೊಯಿಲಿ ಮಾತನಾಡಿ “ಬದುಕಿನಲ್ಲಿ ಉನ್ನತ ಗುರಿಯಿದ್ದಾಗ ಎದುರಾಗುವ ಸವಾಲುಗಳನ್ನು ಅವಕಾಶಗಳನ್ನಾಗಿ ಮಾರ್ಪಡಿಸಿ ಯಶಸ್ಸು ಗಳಿಸಲು ಸಾಧ್ಯವಿದೆ. ಆತ್ಮವಿಶ್ವಾಸದಿಂದ ಗುರುಗಳು ಮತ್ತು ವಿದ್ಯಾರ್ಥಿಗಳ ಅಪಾರ ಪ್ರೀತಿ ವಿಶ್ವಾಸಗಳಿಂದ ಬದುಕಿನಲ್ಲಿ ಕಾರ್ಯ ಪ್ರವೃತ್ತನಾಗಿ ಸಂತೃಪ್ತಿಯ ಜೀವನ ಕಂಡಿದ್ದೇನೆ. ಗುರು ಹಿರಿಯರ ಸತತ ಮಾರ್ಗದರ್ಶನದಿಂದ ಪ್ರೌಢಾ ಶಾಲಾ ಶಿಕ್ಷಕ ಹಂತದಿಂದ ಕಾಲೇಜು ಪ್ರಾಂಶುಪಾಲ ಹುದ್ದೆಯ ತನಕ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳೇ ಗುರುಗಳ ನಿಜವಾದ ಸಂಪತ್ತಾಗಿದ್ದು ತನ್ನ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿರುವುದು ತನಗೆ ಆತ್ಮತೃಪ್ತಿ ತಂದು ಕೊಟ್ಟಿದೆ” ಎಂದು ನುಡಿದರು.

    ಪ್ರೊ. ಪಿ.ಕೆ. ಮೊಯಿಲಿಯವರ ಆತ್ಮಕಥನ ಹಾಗೂ ಲೇಖನಗಳು ಹಾಗೂ ಪ್ರೊ. ಪಿ.ಕೆ. ಮೊಯಿಲಿಯವರ ಕುರಿತಾದ ಲೇಖನಗಳನ್ನೊಳಗೊಂಡ ವಿಶಿಷ್ಟ ಕೃತಿ ‘ಗುರುಭ್ಯೋ ನಮಃ’ ಕೃತಿಯನ್ನು ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಬಿಡುಗಡೆಗೊಳಿಸಿ ಮಾತನಾಡಿ “ಗುರು ಪ್ರೊ. ಪಿ.ಕೆ. ಮೊಯಿಲಿಯವರ ಕುರಿತಾದ ಕೃತಿಯನ್ನು ಶಿಷ್ಯನಾಗಿ ಅನಾವರಣಗೊಳಿಸಿತ್ತಿರುವುದು ಧನ್ಯತೆಯ ಕ್ಷಣವಾಗಿದೆ. ಉತ್ತಮ ಅಧ್ಯಾಪಕರಾಗಿ, ಆಡಳಿತಗಾರರಾಗಿ, ಸಹೃದಯಿ ಕಲಾವಿಮರ್ಶಕರಾಗಿ, ಪತ್ರಕರ್ತರಾಗಿ ತನ್ನ ನಯ ವಿನಯ ನಡೆನುಡಿಗಳಿಂದ ಪ್ರೊ. ಪಿ.ಕೆ. ಮೊಯಿಲಿಯವರು ಆದರ್ಶ ಮಾದರಿಯೊಂದನ್ನು ಸೃಷ್ಟಿಸಿದ್ದಾರೆ” ಎಂದರು.

    ಸಹ ಸಂಪಾದಕ ಡಾ. ದೇವರಾಜ್ ಕೆ. ಮಾತನಾಡಿ “ಹಿರಿಯರ ಆದರ್ಶಗಳನ್ನು ಕಿರಿಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬೆಳೆಯ ಬೇಕಾಗಿದೆ” ಎಂದರು. ಪ್ರೊ. ಪಿ.ಕೆ. ಮೊಯಿಲಿಯವರ ಪುತ್ರಿ ಡಾ. ವಿನತ ಮಾತನಾಡಿ “ಬದುಕು ಕಟ್ಟಿಕೊಳ್ಳುವಲ್ಲಿ ತಮ್ಮತಂದೆಯವರ ದಕ್ಷತೆ, ಪ್ರಾಮಾಣಿಕತೆ, ಶಿಕ್ಷಣ ಪ್ರೇಮ ತಮಗೆಲ್ಲ ಮಾದರಿಯಾಗಿದೆ” ಎಂದರು.

    ಅಧ್ಯಕ್ಷತೆ ವಹಿಸಿದ್ದ ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಹೆಚ್. ಮಾತನಾಡಿ “ಪ್ರೊ. ಪಿ.ಕೆ. ಮೊಯಿಲಿಯವರ ಮೇರು ಸದೃಶ ವ್ಯಕ್ತಿತ್ವದಿಂದ ಅವರ ಶಿಷ್ಯ ಸಮೂಹ ಸಮಾಜದಲ್ಲಿ ಅತ್ಯಂತ ಉನ್ನತ ಸ್ಥಾನಕ್ಕೇರಿದ್ದು ಸಂತಸದಾಯಕವಾಗಿದೆ. ಗುರುಗಳನ್ನು ಸಮ್ಮಾನಿಸಿ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಕಾರ್ಯ ಉತ್ತಮ ಮೌಲ್ಯ ಮತ್ತು ಸುಸಂಸ್ಕೃತ ಹೆಜ್ಜೆಯಾಗಿದೆ” ಎಂದರು.

    ಪ್ರೊ. ಪಿ.ಕೆ. ಮೊಯಿಲಿಯವರ ಅಭಿನಂದನಾ ಸಮಿತಿ ಸದಸ್ಯ ಪ್ರೊ. ಪಿ. ಸೋಮಶೇಖರ ರಾವ್ ಮತ್ತು ಗೋವಿಂದದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ ಉಪಸ್ಥಿತರಿದ್ದರು. “ಗುರುಭ್ಯೋ ನಮಃ” ಕೃತಿಯ ಪ್ರಧಾನ ಸಂಪಾದಕ ಹಾಗೂ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ ಗುರು ಪ್ರೊ. ಪಿ.ಕೆ. ಮೊಯಿಲಿಯವರ ಒಡನಾಟವನ್ನು ಸ್ಮರಿಸಿ ಕೃತಿಯ ಕುರಿತು ಮಾತನಾಡಿದರು.

    ಪ್ರೊ. ಪಿ.ಕೆ. ಮೊಯಿಲಿ ಅಭಿನಂದನಾ ಸಮಿತಿ, ಹಿಂದು ವಿದ್ಯಾದಾಯಿನೀ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಕುಟುಂಬ ವರ್ಗ ಮತ್ತು ಅಭಿಮಾನಿ ವರ್ಗ ಪ್ರೊ. ಪಿ.ಕೆ. ಮೊಯಿಲಿಯವರನ್ನು ಸನ್ಮಾನಿಸಿದರು. ಕು. ಸೌಪರ್ಣಿಕ ಪ್ರಾರ್ಥಿಸಿ, ಮಾನವಿಕ ಸಂಘದ ಸಂಯೋಜಕಿ ಡಾ. ವಿಜಯಲಕ್ಷ್ಮೀ ವಂದಿಸಿ, ಡಾ. ಸಂತೋಷ ಆಳ್ವ ಕಾರ್ಯಧಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಎಂ. ಜಿ. ಎಂ. ಕಾಲೇಜಿನಲ್ಲಿ ಯಕ್ಷಗಾನ ಭಾಗವತಿಕೆಯ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ
    Next Article ಕಲ್ಲಚ್ಚು ಪ್ರಕಾಶನದಿಂದ ‘ಕೂದಲಿಗೆ ಡೈ ಮಾಡುವಾಗ’ ಹಾಗೂ ‘ರಾವಣ ವೀಣೆ’ ಪುಸ್ತಕ ಲೋಕಾರ್ಪಣೆ
    roovari

    Add Comment Cancel Reply


    Related Posts

    ಪರಿಷತ್ತಿನ ಚಾಮರಾಜೇಂದ್ರ ಸಭಾಭವನದಲ್ಲಿ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ

    June 6, 2025

    ಡಾ. ರಾಗೌ ಸಾಹಿತ್ಯ ಪ್ರಶಸ್ತಿ’ ಹಾಗೂ ‘ಕೆ. ಸಿಂಗಾರಿಗೌಡ ಪುಸ್ತಕ ಪ್ರಶಸ್ತಿ’ ಪ್ರದಾನ ಸಮಾರಂಭ | ಜೂನ್ 08

    June 6, 2025

    ಪುಸ್ತಕ ವಿಮರ್ಶೆ – ‘ಹೌಸ್ ಫುಲ್’

    June 6, 2025

    ಕುಷ್ಟಗಿಯಲ್ಲಿ ಮೌನೇಶ ನವಲಹಳ್ಳಿ ಇವರ ‘ನೀಲಿ ಹೊತ್ತಿಗೆ’ ಕಾದಂಬರಿ ಅವಲೋಕನ ಕಾರ್ಯಕ್ರಮ | ಜೂನ್ 08

    June 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.