Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕ್ರಾಸ್ ಫೇಡ್ – ಬೆಳಕಿನ ವಿನ್ಯಾಸ ಕಾರ್ಯಾಗಾರ ಸಮಾರೋಪ
    Drama

    ಕ್ರಾಸ್ ಫೇಡ್ – ಬೆಳಕಿನ ವಿನ್ಯಾಸ ಕಾರ್ಯಾಗಾರ ಸಮಾರೋಪ

    July 1, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಜರ್ನಿ ಥೇಟರ್ ಮಂಗಳೂರು ಹಾಗೂ ಮಾಂಡ್ ಸೊಭಾಣ್ ಇದರ ಸಹಯೋಗದಲ್ಲಿ ಆಯೋಜಿಸಿದ ಮೂರು ದಿನಗಳ ಬೆಳಕಿನ ವಿನ್ಯಾಸ ಕರ‍್ಯಾಗಾರ `ಕ್ರಾಸ್ ಫೇಡ್’ ಇದರ ಸಮಾರೋಪ ಸಮಾರಂಭ ದಿನಾಂಕ 27-06-2024ರಂದು ಮಂಗಳೂರಿನ ಶಕ್ತಿನಗರದ ಕಾಲಾಂಗಣ್ ನಲ್ಲಿ ನಡೆಯಿತು.
    ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ತುಳು ರಂಗ ಹಾಗೂ ಸಿನೆಮಾ ನಿರ್ದೇಶಕ ಮತ್ತು ನಟರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ “ಒಂಬತ್ತು ಗಂಟೆಗೆ ನಾಟಕವಾದರೆ ನಮಗೆ ವೇದಿಕೆ ದೊರೆಯುತ್ತಿದ್ದುದು ಎಂಟು ಮುಕ್ಕಾಲಿಗೆ. ಬೇಗ ಶುರು ಮಾಡಿ ಎಂಬ ಒತ್ತಾಯ ಬೇರೆ. ಆಗ ಬೆಳಕಿನ ವಿನ್ಯಾಸದ ಬಗ್ಗೆ ಚಿಂತಿಸಲು ಪುರುಸೊತ್ತಾದರೂ ಎಲ್ಲಿ? ನಮಗೆ ಗೊತ್ತಿದ್ದದ್ದು ಎರಡೇ ಲೈಟು. ಕೋಪ ಬಂದರೆ ಕೆಂಪು, ಮತ್ತೊಂದು ನೀಲಿ. ಏಕೆಂದರೆ ನಮ್ಮ ಕಾಲದ ತುಳು ಕಲಾವಿದರಿಗೆ ಇಂತಹ ರಂಗ ಶಿಕ್ಷಣ ದೊರೆತಿರಲಿಲ್ಲ. ನಾವು ಮೂರು ಗಂಟೆ ಪ್ರೇಕ್ಷಕರನ್ನು ನಗಿಸುವ ಬಗ್ಗೆ, ನೂರಾರು ಪ್ರದರ್ಶನ ಮಾಡುವ ಬಗ್ಗೆ ಹಾಗೂ ಅದರಿಂದ ನಮ್ಮ ಹೊಟ್ಟೆ ಹೊರೆಯುವ ಬಗ್ಗೆ ಮಾತ್ರ ಯೋಚಿಸಿದ್ದು. ನೀವು ಅದೃಷ್ಟವಂತರು. ನಿಮಗೆ ದೊರೆತ ಈ ಅಧ್ಯಯನದ ಶಿಸ್ತನ್ನು ಬಳಸಿಕೊಂಡು ರಂಗಭೂಮಿಯನ್ನು ಅಭಿವೃದ್ಧಿ ಮಾಡುವ ಜವಾಬ್ದಾರಿ ಉತ್ಸಾಹವಿರಲಿ, ಕಲಿಕೆ ನಿರಂತರವಾಗಿರಲಿ’’ ಎಂದು ಹಾರೈಸಿದರು.
    ಇನ್ನೋರ್ವ ಅತಿಥಿ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಮಾತನಾಡಿ ‘’ಕಲಾಂಗಣವನ್ನು ಕಟ್ಟಿದ್ದೇ ಇಂತಹ ರಂಗಭೂಮಿ ಚಟುವಟಿಕೆಗಳಿಗಾಗಿ. ಇಲ್ಲಿ ಕಲಾವಿದರು ಜಾತಿ ಮತ ರಹಿತರಾಗಿ ಸೇರಿ ಕಲಿಯಬೇಕು, ಕಲಿಸಬೇಕು, ರಂಗಭೂಮಿ ಬೆಳೆಯಬೇಕು ಎಂಬ ಉದ್ದೇಶವಿತ್ತು. ರಂಗಭೂಮಿಯಲ್ಲಿ ಬೆಳಕಿನ ವಿನ್ಯಾಸದ ಬಗ್ಗೆ ಚಿಂತಿಸಿದವರು ಕಮ್ಮಿ. ಇದೊಂದು ಬಹು ಅಗತ್ಯವಾಗಿದ್ದ ಕರ‍್ಯಾಗಾರ.’’ ಎಂದು ಅಭಿಪ್ರಾಯಪಟ್ಟರು. ರಂಗಭೂಮಿಯಲ್ಲಿ ಬೆಳಕಿನ ವಿನ್ಯಾಸದ ಚರಿತ್ರೆ, ಸಹಜ ಬೆಳಕು, ಬೇರೆ ಬೇರೆ ಕೋನಗಳು, ಬಣ್ಣಗಳು, ಭಾವನೆಗಳು, ವಿವಿಧ ಪರಿಕರಗಳು ಹಾಗೂ ಸಂಪ್ರದಾಯಿಕತೆಯಿಂದ ಆಧುನಿಕತೆ ಬೆಳೆದ ಬಗೆ ಹೀಗೆ ಮೂರು ದಿನ ಕಾರ್ಯಾಗಾರ ನಡೆದ ರೀತಿಯನ್ನು ಜರ್ನಿ ಥೇಟರಿನ ವಿದ್ದು ಉಚ್ಚಿಲ್ ಸಿಂಹಾವಲೋಕನ ಮಾದರಿಯಲ್ಲಿ ಪ್ರಸ್ತಾವಿಸಿದರು.
    ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಕುಮಾರ್ ನಾರ್ಣಕಜೆ ರಂಗಾಯಣ, ಮಧೂಸೂಧನ್ ನೀನಾಸಂ ಹಾಗೂ ಶಿಬಿರಾರ್ಥಿ ಪೈಕಿ ಮೇಧಾ ವಿ. ಎಂ. ಮತ್ತು ಸದಾಶಿವ ಕಾಸರಗೋಡು ತಮ್ಮ ಅನುಭವ ಹಂಚಿಕೊಂಡರು. ಸುನೀಲ್ ಪಲ್ಲಮಜಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸುಧೀಶ್, ವಿಕಾಸ್ ಕಲಾಕುಲ್ ಹಾಗೂ ಇತರರು ಸಹಕರಿಸಿದರು.
    25-06-2024 ರಿಂದ 27-06-2024ರವರೆಗೆ ನಡೆದ ಈ ಕಾರ್ಯಾಗಾರದ ಉದ್ಘಾಟನೆಯನ್ನು ಕಿಂಗ್ಸ್ ಲೀ ನಜ್ರೆತ್ ಇವರು ನೆರವೇರಿಸಿದ್ದರು. ಈ ಕಾರ್ಯಾಗಾರದಲ್ಲಿ ಬೆಳಕು ವಿನ್ಯಾಸಗಾರರ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಸುಮಾರು 30ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

     

    Share. Facebook Twitter Pinterest LinkedIn Tumblr WhatsApp Email
    Previous Articleನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮ – ಒಂದಷ್ಟು ಅನುಭವಗಳು ಮತ್ತು ಕಲಿಕೆಗಳು
    Next Article ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ-29’ನೇ ಕಾರ್ಯಕ್ರಮ
    roovari

    Add Comment Cancel Reply


    Related Posts

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಸಮಾರೋಪಗೊಂಡ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರ

    May 5, 2025

    ಮೈಸೂರು ಮತ್ತು ಬೆಂಗಳೂರಿನಲ್ಲಿ ‘ಎದೆಗೆ ಬಿದ್ದ ಅಕ್ಷರ’ ನಾಟಕ ಪ್ರದರ್ಶನ | ಮೇ 04

    May 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.