ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಂಡ್ ಸೊಭಾಣ್ ಸಹಯೋಗದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ಅಂಗವಾಗಿ ದಿನಾಂಕ 20 ಆಗಸ್ಟ್ 2025ರಂದು ಬೆಳಿಗ್ಗೆ ಘಂಟೆ 9.00 ರಿಂದ ಸಂಜೆ 4.00ರವರೆಗೆ ಶಕ್ತಿನಗರದ ಕಲಾಂಗಣ್ ಸಭಾಂಗಣದಲ್ಲಿ ಕೊಂಕಣಿಯ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿದೆ. ಬೆಳಿಗ್ಗೆ ಘಂಟೆ 9.00ಕ್ಕೆ ಉದ್ಘಾಟನಾ ಸಮಾರಂಭದೊಂದಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಂಜೆ ಘಂಟೆ 4.00ಕ್ಕೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಪ್ರೌಢಶಾಲೆ ಮತ್ತು ಕಾಲೇಜು ವಿಭಾಗಗಳಲ್ಲಿ (ಪಿಯುಸಿ ಮತ್ತು ಪದವಿ ಜೊತೆಯಾಗಿ ಹಾಗೂ ಇತರೆ ಕೋರ್ಸುಗಳು ಸೇರಿ) ಈ ಸ್ಪರ್ಧೆಯು ನಡೆಯಲಿದ್ದು, ಪ್ರತಿ ತಂಡಕ್ಕೆ 20 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ನಿರ್ದಿಷ್ಟ ತಂಡಗಳು ಕಾರ್ಯನಿರ್ವಹಣೆ, ಕಿರುನಾಟಕ, ಭಾವಗೀತೆ, ಕಾಮಿಡಿ, ವೊವಿಯೊ, ಗುಮಟ್, ಸಂಗೀತ, ನೃತ್ಯ ಇತ್ಯಾದಿಗಳನ್ನು ಪ್ರದರ್ಶಿಸಬಹುದು. ಕಾರ್ಯನಿರ್ವಾಹಕರು (ಎಂ.ಸಿ.) ಸೇರಿದಂತೆ ತಂಡದಲ್ಲಿ ಕನಿಷ್ಟ 10, ಗರಿಷ್ಟ 15 ಸದಸ್ಯರು ಇರಬೇಕು. ಕಾರ್ಯಕ್ರಮದ ದಿನದಂದು ಬೆಳಿಗ್ಗೆ ಘಂಟೆ 9.00ಕ್ಕೆ ಪ್ರದರ್ಶನದ ಅನುಕ್ರಮವನ್ನು ತಿಳಿಸಲಾಗುವುದು. ಸ್ಪರ್ಧೆಗಳು ಬೆಳಗ್ಗೆ 10.00ಗಂಟೆಗೆ ಪ್ರಾರಂಭವಾಗುತ್ತವೆ. ತಂಡದ ಉತ್ತಮ ಪ್ರದರ್ಶನಕ್ಕೆ ಆಕರ್ಷಕ ನಗದು ಬಹುಮಾನ ಹಾಗೂ ಅತ್ಯುತ್ತಮ ನಿರೂಪಕರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಆಸಕ್ತ ಶಾಲಾ-ಕಾಲೇಜು ಸಂಸ್ಥೆಗಳು ತಮ್ಮ ಸಂಸ್ಥೆ ವತಿಯಿಂದ ಸ್ಪರ್ಧಿಸುವ ಹೆಸರುಗಳನ್ನು16 ಆಗಸ್ಟ್ 2025ರ ಸಂಜೆ ಘಂಟೆ 5.30ರ ಒಳಗೆ ನೋಂದಾಯಿಸಬಹುದು. ಹೆಸರುಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್ ಭಾಗ್, ಮಂಗಳೂರು-575003 ಅಥವಾ ಇ ಮೈಲ್ [email protected]ಮೂಲಕ ನೋಂದಾಯಿಸಬಹುದು.