Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 25

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯ ವಿಮರ್ಶೆ | ಮನಸೂರೆಗೊಂಡ ಸುಮನೋಹರ ರಾಮಾಯಣ ಚಿತ್ರಣ
    Article

    ನೃತ್ಯ ವಿಮರ್ಶೆ | ಮನಸೂರೆಗೊಂಡ ಸುಮನೋಹರ ರಾಮಾಯಣ ಚಿತ್ರಣ

    January 9, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನಮ್ಮ ಭಾರತೀಯ ಪರಂಪರೆಯ ಅಸ್ಮಿತೆಯಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳು ನಮ್ಮ ಸಾಂಸ್ಕೃತಿಕ ಜಗತ್ತಿನ ಒಂದು ಅವಿಭಾಜ್ಯ ಅಂಗವಾಗಿ ಹಾಸುಹೊಕ್ಕಾಗಿದೆ. ಸಂಗೀತ-ನೃತ್ಯ-ನಾಟಕ ಯಾವುದೇ ಕಲಾಪ್ರಕಾರದ ಹೂರಣ ಈ ಮಹಾಕಾವ್ಯಗಳನ್ನು ಬಿಟ್ಟು ಬೇರಿಲ್ಲ. ಎಲ್ಲ ಕಥೆಗಳ ಆಗರ ಅವು. ಎಲ್ಲಕ್ಕೂ ಸ್ಫೂರ್ತಿ-ಪ್ರೇರಣೆ. ಅದರಲ್ಲೂ ನೃತ್ಯಗಳಲ್ಲಿ ಇವು ಬಹು ಬಳಕೆಯಲ್ಲಿದ್ದು ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ. ರಾಮಾಯಣ – ಮಹಾಭಾರತದ ಕಥಾವಸ್ತುಗಳನ್ನು ಕಾಲಾನುಕಾಲದಿಂದ ಯಶಸ್ವಿಯಾಗಿ ನೃತ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಜನಜನಿತ ಕಥೆಯಾಗಿದ್ದು, ಇವು ಅನೇಕ ತಿರುವುಗಳನ್ನು, ಸ್ವಾರಸ್ಯವಾದ ಕಥಾ ಓಟವನ್ನು ಉಳ್ಳದ್ದಾದ್ದರಿಂದ ಇವುಗಳು ಬಹು ಜನಪ್ರಿಯ ಕೂಡ. ಅದರಂತೆ ದಿನಾಂಕ 05 ಜನವರಿ 2025ರಂದು ಜಯನಗರದ ವಿವೇಕ ಸಭಾಂಗಣದಲ್ಲಿ ಸಾಧನ ನೃತ್ಯ ಶಾಲೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಪ್ರದರ್ಶಿತವಾದ ‘ರಾಮಾಯಣ’ ನೃತ್ಯರೂಪಕ ಸೊಗಸಾಗಿ ಮೂಡಿಬಂದು, ನೋಡುಗರನ್ನು ಆಕರ್ಷಿಸಿತು.

    ತೆರೆ ಸರಿದೊಡನೆ ಸರ್ವರ ಪ್ರಥಮ ದೃಷ್ಟಿಯನ್ನು ಆಕರ್ಷಿಸಿದ್ದು ಶ್ರೀರಾಮ-ಲಕ್ಷ್ಮಣ-ಸೀತಾ ಸಮೇತನಾದ ಆಂಜನೇಯ ಮೂರ್ತಿ. ಆಲಂಕೃತ ಪ್ರಭಾವಳಿಯ ಏಕಚ್ಛತ್ರದಡಿ ದಿವ್ಯಮೂರ್ತಿಗಳು ಅನಾವರಣಗೊಂಡ ಹೃನ್ಮನ ತಣಿಸುವ ದೃಶ್ಯ ಆಕರ್ಷಿಸಿತು. ಇಡೀ ರಾಮಾಯಣದ ಕಥೆ, ಘಟನೆಗಳಲ್ಲಿ ಅರಳುತ್ತ, ಸಂಚಾರಿ ಕಥಾನಕಗಳಲ್ಲಿ, ಸುಂದರ ದೃಶ್ಯಗಳಲ್ಲಿ ಸಾಗುತ್ತ ದಶರಥ ಮಹಾರಾಜನ ಪುತ್ರಕಾಮೇಷ್ಟಿ ಯಾಗದಿಂದ ನೃತ್ಯರೂಪಕ ಪ್ರಾರಂಭವಾಯಿತು. ಪಾಯಸಪ್ರಾಪ್ತಿ, ಶ್ರೀರಾಮಾದಿಗಳ ಜನನ, ಯಾಗರಕ್ಷಣೆಗಾಗಿ ವಿಶ್ವಾಮಿತ್ರರು ರಾಮ-ಲಕ್ಷ್ಮಣರನ್ನು ತಮ್ಮೊಡನೆ ಕರೆದೊಯ್ಯುವುದು, ಯಜ್ಞಕ್ಕೆ ಅಡ್ಡಿ ಉಂಟುಮಾಡಿದ ರಕ್ಕಸರ ಸಂಹಾರ, ಅಹಲ್ಯಾ ಶಾಪ ವಿಮೋಚನಾ, ಸೀತಾ ಸ್ವಯಂವರದವರೆಗೂ ಎಲ್ಲ ಸನ್ನಿವೇಶಗಳೂ ನಾಟಕೀಯ ಆಯಾಮದಲ್ಲಿ ಕುತೂಹಲಭರಿತವಾಗಿ ಸಾಗಿದವು. ಸ್ವಯಂವರಕ್ಕೆ ಬಂದ ವಿವಿಧ ರಾಜರು ಶಿವಧನಸ್ಸನ್ನು ಎತ್ತಲು ವಿಫಲರಾದ ದೃಶ್ಯ ಮತ್ತು ಶ್ರೀರಾಮನು ಪಣವನ್ನು ಗೆದ್ದು ಸುಂದರಿ ಸೀತೆಯನ್ನು ವರಿಸಿದ ದೃಶ್ಯಗಳು ಸುಂದರವಾಗಿ ಮೂಡಿಬಂದವು.

    ಸಂಕ್ಷಿಪ್ತ ಗತಿಯಲ್ಲಿ ಚುರುಕಾಗಿ ಸಾಗಿದ ಕಥಾನಕ, ಎಲ್ಲೂ ಯಾಂತ್ರಿಕವೆನಿಸದೆ, ಕೈಕೇಯಿಯ ಬಯಕೆಯಂತೆ ನವ ವಿವಾಹಿತ ರಾಮ, ಲಕ್ಷ್ಮಣ ಮತ್ತು ಸೀತೆಯೊಡನೆ ವನವಾಸಕ್ಕೆ ತೆರಳುವುದು, ಗುಹನ ಸಹಾಯದಿಂದ ಸರಯೂ ನದಿ ದಾಟಿ, ಅರಣ್ಯ ಜೀವನದಲ್ಲಿ ದಿನಗಳನ್ನು ಕಳೆಯುವುದು, ಶೂರ್ಪನಖಾ ಪ್ರಸಂಗ, ಮಾಯಾಜಿಂಕೆಯನ್ನು ಬಯಸಿ, ಸೀತೆ ರಾವಣನಿಂದ ಅಪಹರಿಸಲ್ಪಟ್ಟು ಲಂಕೆ ಸೇರಿ, ಆಂಜನೇಯನ ಭೇಟಿಯಿಂದ ಧೈರ್ಯ ಪಡೆದು, ಕಡೆಗೆ ರಾಮ-ರಾವಣರ ಯುದ್ಧ, ಅಗ್ನಿಪ್ರವೇಶ ಕೊನೆಯಲ್ಲಿ ಶ್ರೀರಾಮ ಪಟ್ಟಾಭಿಷೇಕದ ಸುಖಾಂತ್ಯ ಮಂಗಳಕರ ಸನ್ನಿವೇಶದೊಂದಿಗೆ ಸುಸಂಪನ್ನಗೊಂಡಿತು.

    ಸಾಂಪ್ರದಾಯಿಕ ಕಥೆಗೆ ಎಲ್ಲೂ ಭಂಗ ಬಾರದಂತೆ, ಅದರ ಕೆಲವು ಆಯ್ದ ಭಾಗಗಳನ್ನು ಕೇಂದ್ರೀಕರಿಸಿ ಹೆಣೆದ ಸುಮಾರು ಒಂದು ಘಂಟೆಯ ಕಾಲಾವಧಿಯ ನೃತ್ಯರೂಪಕ ಮನಸೆಳೆಯಿತು. ಸಾಧನಾ ಶಾಲೆಯ ವಿದ್ಯಾರ್ಥಿಗಳು ಸಮಯೋಚಿತ ಹದವಾದ ಅಭಿನಯದಿಂದ ಗಮನ ಸೆಳೆದರು. ಇಡೀ ಕಥೆಯನ್ನು ನಿರೂಪಿಸುವ ಹಿನ್ನಲೆ ಗಾಯನಕ್ಕೆ ಅನುಗುಣವಾಗಿ ಪಾತ್ರಗಳು-ನರ್ತಕರು ಎಲ್ಲೂ ಅರಕೆ ತೋರದಂತೆ ಪರಿಣಾಮಕಾರಿಯಾಗಿ ತಮ್ಮ ರಮ್ಯಾಭಿನಯದಿಂದ ಸಮಗ್ರ ರಾಮಾಯಣದ ಕಥೆಯನ್ನು ಹರಿತವಾಗಿ ಕಟ್ಟಿಕೊಟ್ಟರು. ಪೂರಕ ಧ್ವನಿ ಪರಿಣಾಮಗಳು ಹದವಾಗಿದ್ದವು. ಸೀತೆಯ ಪಾತ್ರವನ್ನು ಸುಮನೋಹರವಾಗಿ ನಿರ್ವಹಿಸಿ, ತಮ್ಮ ಪರಿಕಲ್ಪನೆಯ ಎರಕದಲ್ಲಿ ರೂಪಕವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಸಾಗಿದ ಗುರು ಭಾವನಾ ಅವರ ಕಲಾತ್ಮಕ ನಿರ್ದೇಶನದ ಆಯಾಮ ದೃಗ್ಗೋಚರವಾಗಿತ್ತು.

    ನೃತ್ಯರೂಪಕದ ಆಕರ್ಷಣೆಯಾಗಿದ್ದ ಕಣ್ಸೆಳೆದ ಸುಂದರ ವೇಷಭೂಷಣ, ಪ್ರಸಾದನ, ರಮ್ಯ ಆಂಗಿಕಾಭಿನಯ, ಚಲನೆ- ಮುಖಾಭಿವ್ಯಕ್ತಿಗಳು ಸೂಕ್ತವಾಗಿದ್ದವು. ಹಾಗೇ ಪಾತ್ರಗಳಿಗೆ ನರ್ತಕರ ಸೂಕ್ತ ಆಯ್ಕೆ, ಮಾರ್ಗದರ್ಶನ ಚೆನ್ನಿದ್ದು, ಪ್ರಯೋಗ ಸಫಲವಾಗಿತ್ತು. ಇದಕ್ಕಾಗಿ ಸಾಧನಾ ಡ್ಯಾನ್ಸ್ ಸೆಂಟರಿನ ಎಲ್ಲಾ ಶಿಷ್ಯರಿಗೆ ಮತ್ತು ಇದನ್ನು ಅಪಾರ ಶ್ರದ್ಧೆ- ಬದ್ಧತೆ -ಪರಿಶ್ರಮದಿಂದ ಸೊಗಸಾಗಿ ರಂಗಕ್ಕೆ ತಂದ ಗುರು ಭಾವನಾ ಅವರಿಗೆ ಅಭಿನಂದನೆಗಳು.

    ವಿಮರ್ಶಕರು : ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    article bharatanatyam dance Music
    Share. Facebook Twitter Pinterest LinkedIn Tumblr WhatsApp Email
    Previous Articleಪೆರ್ನಾಜೆಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ತಾಳಮದ್ದಳೆ
    Next Article ಪುಸ್ತಕ ವಿಮರ್ಶೆ | ‘ವಿಕಾಸ’ ಪುಸ್ತಕ ಬಹುಮಾನ ಪಡೆದ ಕೃತಿ ‘ಶತಾಮೃತಧಾರೆ’
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ಮಂಗಳೂರಿನ ಪುರಭವನದಲ್ಲಿ ‘ಸ್ವರ ಸಂಕ್ರಾಂತಿ’ ಹಿಂದೂಸ್ಥಾನಿ ಸಂಗೀತ ಕಛೇರಿ | ಜನವರಿ 14

    January 13, 2026

    ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ’ದ ಸಮಾರೋಪ ಸಮಾರಂಭ

    January 12, 2026

    ನಾಟಕ ವಿಮರ್ಶೆ | ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರ ಸ್ವಾಮಿ’ ನಾಟಕದ ಅದ್ಬುತ ಪ್ರದರ್ಶನ

    January 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.