ಮಂಗಳೂರು : ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ, ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ (ಪರಿಗಣಿತ) ವಿಶ್ವ ವಿದ್ಯಾಲಯ, ಅಸ್ತಿತ್ವ (ರಿ.) ಕಲಾಭಿ (ರಿ.) ರೂವಾರಿ ಜಂಟಿಯಾಗಿ ಆಯೋಜಿಸುವ ‘ದಶಾನನ ಸ್ವಪ್ನಸಿದ್ಧಿ’ ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಕೃತಿಯಿಂದ ಆಯ್ದ ರಂಗಪ್ರಯೋಗ ದಿನಾಂಕ 30-06-2025ರಂದು ಎಲ್.ಸಿ.ಆರ್.ಬಿ. ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದಲ್ಲಿ ಪ್ರದರ್ಶನಗೊಳ್ಳಲಿದೆ.
ಮಂಜು ಕೊಡಗು ಇವರು ಈ ರಂಗಪ್ರಯೋಗದ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ರಂಗದ ಮೇಲೆ ಅವಿನಾಶ್ ರೈ, ಶ್ವೇತಾ ಅರೆಹೊಳೆ, ಚೈತ್ರ ಕೋಟ್ಯಾನ್ ಮತ್ತು ಚರಿತ್ ಸುವರ್ಣ ಇವರು ಅಭಿನಯಿಸಲಿದ್ದು, ಅರುಣ್ ಕುಮಾರ್ ಎಂ. ಸಂಗೀತ ವಿನ್ಯಾಸ ಮತ್ತು ಮಂಜುನಾಥ ಹಿರೇಮಠ ಬೆಳಕು ವಿನ್ಯಾಸ ಮಾಡಿರುತ್ತಾರೆ. ಹೆಚ್ಚಿನ ವಿವರಗಳಿಗಾಗಿ 9632794477 ಸಂಖ್ಯೆಯನ್ನು ಸಂಪರ್ಕಿಸಿರಿ.