ಸುಳ್ಯ : ಚಂದನ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷರಾದ ಸಂಧ್ಯಾ (ಸಾನು) ಉಬರಡ್ಕ ಇವರ ನೇತೃತ್ವದಲ್ಲಿ ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ‘ದೀಪಾವಳಿ ಕವಿಗೋಷ್ಠಿ-2025’ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ಜರುಗಿತು.
ದೀಪಾವಳಿ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಗೌರವಾಧ್ಯಕ್ಷರಾದ ಎಚ್. ಭೀಮರಾವ್ ವಾಷ್ಕರ್ ಇವರು ವಹಿಸಿದ್ದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಸಾನು ಉಬರಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವ್ಯವಸ್ಥಾಪಕರಾದ ಯಶ್ವಿತ್ ಕಾಳಮ್ಮನೆ ಮತ್ತು ಮಹಿಳಾ ಸಾಹಿತಿ ರತ್ನಾ ಭಟ್ ಕೆ. ತಳಂಚೇರಿಯವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಹಿತಿ ಎಚ್. ಭೀಮರಾವ್ ವಾಷ್ಕರ್ ಇವರು ನೂತನ ಅಧ್ಯಕ್ಷರಾದ ಸಂಧ್ಯಾ ಉಬರಡ್ಕರವರನ್ನು ಸಮ್ಮನಿಸಿದರು. ಸಂದೀಪ್ ಸುಳ್ಯ ಇವರು ಭಾವಗೀತೆಗಳನ್ನು ಹಾಡಿದರು. ಪ್ರಾರ್ಥನಾ ಗೀತೆಯನ್ನು ಅಜ್ಜಾವರ ಪ್ರೌಢಶಾಲೆಯ ವಿದ್ಯಾರ್ಥಿ ಶ್ರವಿತ್ ಹಾಡಿದರು. ಸಾಹಿತಿ ವಿಜಯಕುಮಾರ್ ಕಾಣಿಚ್ಚಾರ್ ಇವರು ಸ್ವಾಗತಿಸಿ, ಯಶುಭ ರೈ ಇವರು ವಂದಿಸಿ, ಅನುರಾಧಾ ಶಿವಪ್ರಕಾಶ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.
‘ದೀಪಾವಳಿ ಕವಿಗೋಷ್ಠಿ’ ಕಾರ್ಯಕ್ರಮದಲ್ಲಿ ವಿಜಯ ಕುಮಾರ್ ಕಾಣಿಚ್ಚಾರ್ ಸುಳ್ಯ, ಎಂ.ಎ. ಮುಸ್ತಫಾ ಬೆಳ್ಳಾರೆ, ಬಾಲಕೃಷ್ಣ ಬಿ. ಕಡಬ, ಅನುರಾಧ ಶಿವಪ್ರಕಾಶ್ ಸುಳ್ಯ, ಶ್ರೀಹರಿ ಭಟ್ ಪೆಲ್ತಾಜೆ ಕಾಸರಗೋಡು, ಕೃಷ್ಣ ಅಚ್ರಪ್ಪಾಡಿ, ಯಶುಭ ರೈ ಪುತ್ತೂರು, ಶ್ರೀಮತಿ ರತ್ನಾ ಕೆ. ಭಟ್ ತಲಂಚೆರಿ, ಸುರೇಶ್ ಜಿ. ಚಾರ್ವಾಕ, ವಿದ್ಯಾಶಂಕರಿ ಕೆ. ಶಿಕ್ಷಕರು ಸರಕಾರಿ ಪ್ರೌಢಶಾಲೆ ಅಜ್ಜಾವರ, ತೇಜಸ್ವಿನಿ ಕೆ. ಸುಳ್ಯ, ಸರಕಾರಿ ಪ್ರೌಢಶಾಲೆ ಅಜ್ಜಾವರ 10ನೇ ತರಗತಿಯ ವಿದ್ಯರ್ಥಿಗಳಾದ ಶ್ರವಿತ್, ಶ್ರೇಯಸ್ ಭಾಗವಹಿಸಿದ್ದರು. ಎಲ್ಲಾ ಕವಿಗಳಿಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
