Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಏರ್ಯಬೀಡಿನಲ್ಲಿ ‘ದೇರಾಜೆ – ಏರ್ಯ ನೆನಪಿನ ಕ್ಷಣಗಳು’ ಕಾರ್ಯಕ್ರಮ
    Felicitation

    ಏರ್ಯಬೀಡಿನಲ್ಲಿ ‘ದೇರಾಜೆ – ಏರ್ಯ ನೆನಪಿನ ಕ್ಷಣಗಳು’ ಕಾರ್ಯಕ್ರಮ

    May 24, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ : ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿ ಆಯೋಜಿಸಿದ್ದ ಹಿರಿಯ ಸಾಹಿತಿ, ವಿದ್ವಾಂಸದ್ವಯರಾದ ದಿ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಹಾಗೂ ದಿ. ದೇರಾಜೆ ಸೀತಾರಾಮಯ್ಯ ಅವರ ಒಡನಾಟದ ಸಂಸ್ಮರಣೆಯ ‘ದೇರಾಜೆ – ಏರ್ಯ ನೆನಪಿನ ಕ್ಷಣಗಳು’ ಕಾರ್ಯಕ್ರಮವು ದಿನಾಂಕ 23-05-2024ರಂದು ಮೊಡಂಕಾಪು ಸಮೀಪ ಏರ್ಯಬೀಡಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಪತ್ನಿ ಏರ್ಯ ಆನಂದಿ ಆಳ್ವ ಅವರನ್ನು ಗೌರವಿಸಲಾಯಿತು.

    ಈ ಸಂದರ್ಭ ಉಭಯ ಸಾಹಿತಿಗಳ ಕುರಿತು ಮಾತನಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, “ಏರ್ಯ ಮತ್ತು ದೇರಾಜೆ ಸೀತಾರಾಮಯ್ಯ ಇಬ್ಬರೂ ಯಕ್ಷಗಾನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಏರ್ಯ ಅವರಿಗೆ ಸಾಹಿತ್ಯ, ಸಂಸ್ಕೃತಿ ಕಲೆಗಳ ಮೇಲಿನ ಪ್ರೀತಿ ಅಗಾಧವಾಗಿತ್ತು. ಅವರು ಸಮಾಜಮುಖಿಯಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿದಿದ್ದು, ಉತ್ಸಾಹ ಗಮನಾರ್ಹ. ಕಲೆಯ ರಸದ ಬಗ್ಗೆ ಇದ್ದಂಥ ಒಲವು ದೇರಾಜೆ ಸೀತಾರಾಮಯ್ಯ ಅವರೆಡೆ ಸೆಳೆದಿತ್ತು. ಮಾತು ಮತ್ತು ಬರಹಗಳ ಮೂಲಕ ಶ್ರೇಷ್ಠವಾದ ಸಾಹಿತ್ಯ ಸೃಷ್ಟಿ ಮಾಡಿರುವುದು ದೇರಾಜೆ ಸಾಧನೆಯಾಗಿತ್ತು. ದೇರಾಜೆಯವರ ಕುರುಕ್ಷೇತ್ರಕ್ಕೊಂದು ಆಯೋಗ ಪುರಾಣಗಳಲ್ಲಿ ಆಧುನಿಕ ನ್ಯಾಯಾಲಯವಾಗಿದ್ದು, ಅದರ ಕುರಿತ ವಿಸ್ತಾರವಾದ ಅಧ್ಯಯನ ಅಗತ್ಯ. ದೇರಾಜೆಯವರಿಗೆ ತಾಳಮದ್ದಳೆ ಕಲೆ ಮುಂದಿನ ತಲೆಮಾರಿಗೆ ದಾಟಿಸಲು ಅಕ್ಷರರೂಪಕ್ಕೆ ತರುವ ಪ್ರಯತ್ನಗಳು ಪುಸ್ತಕಗಳ ಮೂಲಕ ಆಗಿವೆ. ಕಲೆಯ ರಸಾತ್ಮಕತೆ ಬೆಳೆಸಲು ದೇರಾಜೆ, ಸಂಘಟನೆ ಹಾಗೂ ಕಲೆಯಲ್ಲಿನ ಶ್ರೇಷ್ಠ ಅಂಶ ಉಳಿಸುವ ಕಾರ್ಯವನ್ನು ಏರ್ಯ ಮಾಡಿದ್ದರು. ಪರಂಪರೆಯನ್ನು ಮುಂದುವರಿಸುವ ಕಾರ್ಯವನ್ನು ಇಬ್ಬರೂ ಮಾಡಿದ್ದಾರೆ” ಎಂದು ಅಭಿಪ್ರಾಯಪಟ್ಟರು.

    ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ಪ್ರೊ. ತುಕಾರಾಮ ಪೂಜಾರಿ ಮಾತನಾಡಿ “ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರಕ್ಕೆ ಏರ್ಯ ಕೊಡುಗೆ ಅಪಾರ” ಎಂದರು. ಕೆನರಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಶಂಕರ ಶೆಟ್ಟಿ ಗುಂಡಿಲಗುತ್ತು ಮಾತನಾಡಿ, “ಏರ್ಯರ ಅಧ್ಯಯನ ಪ್ರವೃತ್ತಿ ಹಾಗೂ ದೇರಾಜೆಯವರ ಅರ್ಥಗಾರಿಕೆಗೆ ಸಾಟಿ ಇಲ್ಲ” ಎಂದರು.

    ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಮಣಿ ರಾಮಕುಂಜ ದೇರಾಜೆ ಅವರ ಅರ್ಥಗಾರಿಕೆ ಹಾಗೂ ಏರ್ಯರ ಒಡನಾಟದ ಕುರಿತು ತನ್ನ ಅನುಭವ ಹೇಳಿಕೊಂಡರು. ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಅನಂತಪದ್ಮನಾಭ ರಾವ್ ಮಾತನಾಡಿ ಏರ್ಯ ಅವರು ಸಾಹಿತ್ಯಕ್ಕೆ ನೀಡಿದ ಪ್ರೋತ್ಸಾಹ ಸ್ಮರಿಸಿದರು. ಕ.ಸಾ.ಪ.ದ ಬಂಟ್ವಾಳ ಪೂರ್ವಾಧ್ಯಕ್ಷರಾದ ನಿವೃತ್ತ ತಹಸೀಲ್ದಾ‌ರ್ ಕೆ. ಮೋಹನ ರಾವ್, ನಿವೃತ್ತ ಅಧ್ಯಾಪಕ ಜಯಾನಂದ ಪೆರಾಜೆಯವರು ಇಬ್ಬರನ್ನೂ ನೆನಪು ಮಾಡಿಕೊಂಡರು. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಅಳಿಯ ಏರ್ಯಬೀಡು ಬಾಲಕೃಷ್ಣ ಹೆಗ್ಡೆ ಮಾತನಾಡಿ ಆಳ್ವರ ವಿಸ್ತಾರವಾದ ಅಧ್ಯಯನ ಹಾಗೂ ಜೀವನದ ನೆನಪುಗಳನ್ನು ಮೆಲುಕು ಹಾಕಿದರು. ದೇರಾಜೆ ಸೀತಾರಾಮಯ್ಯ ಸಂಸ್ಮರಣಾ ಸಮಿತಿ ಗೌರವಾಧ್ಯಕ್ಷ ಆನೆಕಾರು ಗಣಪಯ್ಯ ಮಾತನಾಡಿ, ಏರ್ಯ ಲಕ್ಷ್ಮೀನಾರಾಯಣ ಆಳ್ವ ಮತ್ತು ದೇರಾಜೆ ಅವರ ಸಂಬಂಧಗಳನ್ನು ಅನನ್ಯತೆಯನ್ನು ಸ್ಮರಿಸಿದರು.

    ದೇರಾಜೆ ಸೀತಾರಾಮಯ್ಯ ಸಂಸ್ಮರಣಾ ಸಮಿತಿ ಅಧ್ಯಕ್ಷ ಪ್ರೊ. ಜಿ.ಕೆ. ಭಟ್ ಸೇರಾಜೆ ಮಾತನಾಡಿ, ದೇರಾಜೆ ಸೀತಾರಾಮಯ್ಯ ಮತ್ತು ಏರ್ಯ ಲಕ್ಷ್ಮೀನಾರಾಯಣ ಆಳ್ವರು ಮಿತ್ತನಡ್ಕದಲ್ಲಿ ನಡೆದ ಮಾಂಬಾಡಿ ಭಾಗವತರ ಅಭಿನಂದನಾ ಕಾರ್ಯಕ್ರಮದಲ್ಲಿ ಜತೆಜತೆಯಾಗಿ ದುಡಿದದ್ದನ್ನು ವಿವರಿಸಿದರು. ಸಮಿತಿ ಸದಸ್ಯರಾದ ಮೂರ್ತಿ ದೇರಾಜೆ, ಭಾರವಿ ದೇರಾಜೆ, ಪ್ರೊ. ಶಂಕರ್, ಪ್ರಮುಖರಾದ ಕೃಷ್ಣಕುಮಾ‌ರ್ ಪೂಂಜ, ಕಜೆ ರಾಮಚಂದ್ರ ಭಟ್, ಮಹಾಬಲೇಶ್ವರ ಹೆಬ್ಬಾರ, ರಾಧೇಶ ತೋಳ್ಪಾಡಿ, ದಾಮೋದರ ರಾಮಕುಂಜ, ಮೋಹನ ಶೆಣೈ ಪಾಣೆಮಂಗಳೂರು, ಲೋಕನಾಥ ಶೆಟ್ಟಿ, ಹರೀಶ್ ಮಾಂಬಾಡಿ, ದಾಮೋದರ ಏರ್ಯ, ವಿಜಯ್ ಉಪಸ್ಥಿತರಿದ್ದರು. ದೇರಾಜೆ ಸಂಸ್ಮರಣಾ ಸಮಿತಿ ಕಾರ್ಯದರ್ಶಿ ಕೆ. ಶ್ರೀಕರ ಭಟ್ ಮರಾಠೆ ಪ್ರಾಸ್ತಾವಿಕ ಮಾತನಾಡಿ, ಮೈಥಿಲಿ ಪ್ರಾರ್ಥಿಸಿದರು. ದೇರಾಜೆ ಸಂಸ್ಮರಣಾ ಸಮಿತಿ ಅಧ್ಯಕ್ಷ ಪ್ರೊ. ಜಿ.ಕೆ. ಭಟ್ ಸೇರಾಜೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಲೇಖಕ ಕೆ.ಎ. ಶೆಟ್ಟಿ ಕುಂಜತ್ತೂರು ಇವರ ‘ಬಾಂಧವ್ಯದ ಬೆಸುಗೆ’ ಕೃತಿ ಲೋಕಾರ್ಪಣೆ
    Next Article ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.