Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರು ಪುರಭವನದಲ್ಲಿ ಕೊಂಕಣಿ ಯಕ್ಷಗಾನ

    June 5, 2025

    ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜಯಂತ್ಯುತ್ಸವ

    June 5, 2025

    ಶ್ರೀ ಮಹಾಂತೇಶ ಎಂ. ಗಜೇಂದ್ರಗಡ ಇವರಿಗೆ “ಮೇಘರತ್ನ ಪ್ರಶಸ್ತಿ”

    June 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಏಕಕಾಲದಲ್ಲಿ 650 ಮಂದಿ ಗಾಯಕರ ಒಕ್ಕೊರಲ ಗಾಯನದಲ್ಲಿ ರಂಜಿಸಿದ ಭಕ್ತಿರಸ ಶಿಬಿರ
    Camp

    ಏಕಕಾಲದಲ್ಲಿ 650 ಮಂದಿ ಗಾಯಕರ ಒಕ್ಕೊರಲ ಗಾಯನದಲ್ಲಿ ರಂಜಿಸಿದ ಭಕ್ತಿರಸ ಶಿಬಿರ

    October 5, 2024Updated:October 7, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಾಸರಗೋಡಿನ ಪ್ರಸಿದ್ಧ ಕಲಾಸಂಸ್ಥೆ ರಂಗಚಿನ್ನಾರಿ (ರಿ) ಇದರ ಸಾರಥ್ಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಾಗೂ ಸ್ಥಳೀಯ ಭಕ್ತಿರಸ ಸಮಿತಿಯ ಸಮರ್ಥ ಸಹಕಾರದೊಂದಿಗೆ ಅಂತರ್ರಾಷ್ಟ್ರೀಯ ಖ್ಯಾತಿಯ ಗಾಯಕ ಶಂಕರ ಶಾನುಭೋಗ್ ಕಳಸ ಇವರ ನೇತೃತ್ವದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬಲು ವಿಜೃಂಭಣೆಯಿಂದ ಜರಗಿದ ಭಕ್ತಿ-ಭಾವಗೀತೆಗಳ ಕಲಿಕಾ ಕಾರ್ಯಾಗಾರದ ಸಮಾರೋಪವು ದಿನಾಂಕ 29 ಸೆಪ್ಟೆಂಬರ್ 2024 ರಂದು ವಿಜೃಂಭಣೆಯಿಂದ ಜರಗಿ, ಕಾರ್ಯಾಗಾರ ಅಭೂತಪೂರ್ವ ಯಶಸ್ವಿಯಲ್ಲಿ ಪರಿಸಮಾಪ್ತಿಗೊಂಡಿತು.

    ಸಭೆಯಲ್ಲಿ ಸಮಾರೋಪ ಭಾಷಣಗೈದ ಖ್ಯಾತ ಪತ್ರಕರ್ತ ಹಾಗೂ ಅಂಕಣಕಾರರಾದ ಶ್ರೀ ರವೀಂದ್ರ ಜೋಶಿ ಮೈಸೂರು ಇವರು ರಂಗಚಿನ್ನಾರಿ ಹಾಗೂ ಭಕ್ತಿರಸ ಸಮಿತಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರಲ್ಲದೇ, ಇಂತಹ ಕಾರ್ಯಕ್ರಮಗಳು ದೇಶದ ನಾನಾ ಮೂಲೆಯಲ್ಲಿ ಜರಗಬೇಕು ಎಂಬುದಾಗಿ ಕರೆಯಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಕ್ತಿರಸ ಸಮಿತಿಯ ಕಾರ್ಯಾಧ್ಯಕ್ಷರಾದ ಕಲಾರತ್ನ ಶಂನಾಡಿಗ ಕುಂಬ್ಳೆ ವಹಿಸಿದ್ದರು. ಅತಿಥಿಗಳಾಗಿ ಖ್ಯಾತ ಜಲತರಂಗ ವಾದಕಿ ಶ್ರೀಮತಿ ವಿಜಯಲಕ್ಷ್ಮಿ ಹರಿಪ್ರಕಾಶ್ ಬೆದ್ರಡಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಸಂಕೀರ್ತನಕಾರರೂ, ಭಜನಾಪಟುವೂ ಆದ ಶ್ರೀ ರಂಗನಾಯಕ್ ಕುಂಬ್ಳೆ ಹಾಗೂ ಪ್ರಸಿದ್ಧ ಸಂಗೀತ ಶಿಕ್ಷಕಿ ಶ್ರೀಮತಿ ಸಾವಿತ್ರಿ ಭಟ್ ದೊಡ್ಡಮಾಣಿ ಇವರನ್ನು ಸನ್ಮಾನಿಸಲಾಯಿತು.

    ಭಕ್ತಿರಸ ಕಾರ್ಯಕ್ರಮದ ಸಂಚಾಲಕ ಹಾಗೂ ರಂಗ ಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ ಮಾತನಾಡಿ “ಎರಡು ದಶಕಗಳಿಂದ ಕನ್ನಡ ನಾಡು, ನುಡಿ, ಸಂಸ್ಕೃತಿಗಾಗಿ ದುಡಿಯುತ್ತಿರುವ ರಂಗ ಚಿನ್ನಾರಿ ಸಂಸ್ಥೆಯು ಮಹಿಳೆಯರಿಗಾಗಿ ‘ನಾರಿ ಚಿನ್ನಾರಿ’ ಹಾಗೂ ಸಂಗೀತ ಆಸಕ್ತರಿಗಾಗಿ ‘ಸ್ವರ ಚಿನ್ನಾರಿ’ ಎಂಬ ಎರಡು ಘಟಕಗಳನ್ನು ಸ್ಥಾಪಿಸಿದೆ. ಈ ಹಿಂದೆ ಕಾಸರಗೋಡಿನಲ್ಲಿ 500 ಮಂದಿ ಮಹಿಳೆಯರಿಗೆ  ಸಂಗೀತ ಕಲಿಕಾ ಶಿಬಿರವನ್ನು ಏರ್ಪಡಿಸಿದ್ದಲ್ಲದೆ, ಈ ಬಾರಿ ಸುಮಾರು 650 ಮಂದಿ ಶಿಬಿರಾರ್ಥಿಗಳನ್ನು ಸೇರಿಸಿದ್ದೇವೆ. ಮುಂದಿನ ವರುಷ ಮತ್ತಷ್ಟು ಶಿಬಿರಾರ್ಥಿಗಳನ್ನು ಸೇರಿಸುವ ಇರಾದೆ ಸಂಸ್ಥೆಗೆ ಇದೆ.” ಎಂದರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳ ಪೈಕಿ ಆರಿಸಿದ ವ್ಯಕ್ತಿಗಳಿಗೆ ಶಿಬಿರ ಶಿಕ್ಷಕ ಶಂಕರ ಶಾನುಭೋಗ್ ಅವರು ಸಾಂಕೇತಿಕವಾಗಿ ಪ್ರಮಾಣಪತ್ರವನ್ನು ವಿತರಿಸಿದರು. ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆಗಾಗಿ ಭಕ್ತಿರಸ ಸಮಿತಿ ಎನ್ನುವ ಸ್ಥಳೀಯರ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯ ಸದಸ್ಯರೆಲ್ಲಾ ಸೇರಿ ಶಂಕರ ಶಾನುಭೋಗರನ್ನು ಸನ್ಮಾನಿಸಿದರು.
    ‘ಭಕ್ತಿರಸ’ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸ್ಥಳೀಯ ಸಮಿತಿಯವರಿಗೆ ಗೌರವವನ್ನು ಸಲ್ಲಿಸಿ, ‘ರಂಗ ಚಿನ್ನಾರಿ’ ವತಿಯಿಂದ ಕಾರ್ಯಧ್ಯಕ್ಷರಾದ ಶಂ. ನಾ. ಅಡಿಗ ಹಾಗೂ ಅಧ್ಯಕ್ಷರಾದ ಸುಧಾಕರ ಕಾಮತ್ ಇವರಿಗೆ ಶಾಲು ಹೊಡಿಸಿ ಸನ್ಮಾನಿಸಲಾಯಿತು.
    ಕಾಸರಗೋಡು ಚಿನ್ನಾ ಸ್ವಾಗತಿಸಿ, ಶ್ರೀಮತಿ ಸಂಧ್ಯಾ ಕೇಶವ ಅಡಿಗ ವಂದಿಸಿದರು. ಶ್ರೀನಿವಾಸ ಕಳತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಕಾಸರಗೋಡು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಸುಮಾರು 650 ಮಂದಿ ಶಿಬಿರಾರ್ಥಿಗಳು ಕಲಿಕಾ ಶಿಬಿರದಲ್ಲಿ ಭಾಗವಹಿಸಿದ್ದರು.

    ಶಿಬಿರ ಶಿಕ್ಷಕ ಶಂಕರ ಶಾನುಭೋಗರವರು ಕಲಿಸಿದ, ’ನಾರಾಯಣ ನಿನ್ನ ನಾಮದ ಸ್ಮರಣೆಯ..’, ’ಹೂ ಬೇಕೇ ಪರಿಮಳದಾ..’,ಎಂಬೆರಡು ಭಕ್ತಿ ಗೀತೆಗಳು, ”ಜಿಪುಣ ಅಂದ್ರೆ ಜಿಪುಣ ಈ ಕಾಲ’ ಎಂಬ ಭಾವಗೀತೆ ಹಾಗೂ ಶಿಶುನಾಳ ಶರೀಫರ ’ತರವಲ್ಲ ತಗಿ ನಿನ್ನ ತಂಬೂರಿ’ ಎಂಬ ಜಾನಪದ ಗೀತೆ ಸಹಿತ ನಾಲ್ಕು ಗೀತೆಗಳನ್ನು ಶಿಬಿರಾರ್ಥಿಗಳು ಒಕ್ಕೊರಲಿನಲ್ಲಿ ಸ್ವರ ಲಯ ತಾಳಬದ್ಧವಾಗಿ ಹಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಈ 650 ಮಂದಿ ಶಿಬಿರಾರ್ಥಿಗಳು ಬೆಳಗ್ಗೆ 10-00ರಿಂದ ಸಂಜೆ 5-30ರ ತನಕ ಶಿಬಿರ ಸ್ಥಾನದಲ್ಲಿ ಸಭ್ಯರಾಗಿ ಉಪಸ್ಥಿತರಿದ್ದದ್ದೂ ಇತಿಹಾಸವಾಯಿತು. ಈ ಕಾರ್ಯಕ್ರಮ ಯಶಸ್ಸಿಗೆ ಕಾರಣೀಕರ್ತರಾದ ಎಲ್ಲಾ ಶಿಬಿರಾರ್ಥಿಗಳಿಗೂ ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಹಾಗೂ ಭಕ್ತಿರಸ ಸಮಿತಿಯ ಕಾರ್ಯಾಧ್ಯಕ್ಷ ಕಲಾರತ್ನ ಶಂನಾಡಿಗರು ಅಭಿನಂದನೆ ಸಲ್ಲಿಸಿರುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಪತ್ತುಮುಡಿ ಸೌಧದಲ್ಲಿ ‘ಕಾರಂತ ಹುಟ್ಟುಹಬ್ಬ’ | ಅಕ್ಟೋಬರ್ 10
    Next Article ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುಧನ್ವ ಎಸ್. ಆಚಾರ್ಯ ಇವರ ನೃತ್ಯ ಪ್ರದರ್ಶನ | ಅಕ್ಟೋಬರ್ 7
    roovari

    Comments are closed.

    Related Posts

    ಶ್ರೀ ಮಹಾಂತೇಶ ಎಂ. ಗಜೇಂದ್ರಗಡ ಇವರಿಗೆ “ಮೇಘರತ್ನ ಪ್ರಶಸ್ತಿ”

    June 5, 2025

    ಪುಸ್ತಕ ವಿಮರ್ಶೆ | ‘ಡಾ. ಜಿ.ಎಸ್. ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ’

    June 5, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ‘ಹಲಸಿನ ಅರಿವಿನ ಹರಿವು’ ತಾಳಮದ್ದಲೆ | ಜೂನ್ 07

    June 5, 2025

    ಇಪ್ಪತ್ತನಾಲ್ಕು ಗಂಟೆಗಳ ಕಾಲ ನಿರಂತರ ಹಾಡಿ ವಿಶ್ವದಾಖಲೆ ನಿರ್ಮಿಸಿದ ಯಶವಂತ್ ಎಂ.ಜಿ.

    June 5, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.