Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ – ‘ಹೌಸ್ ಫುಲ್’

    June 6, 2025

    ತೆಕ್ಕಟ್ಟೆಯಲ್ಲಿ ಯಶಸ್ವಿ ಪ್ರದರ್ಶನಕಂಡ “ಸೂರ್ಯ ಚಂದ್ರ” ಮಕ್ಕಳ ನಾಟಕ

    June 6, 2025

    ಬೆಂಗಳೂರಿನ ಬಸವನಗುಡಿಯಲ್ಲಿ ‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ’ | ಜೂನ್ 07

    June 6, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸದಾಶಿವ ಸೊರಟೂರು ಇವರ ಕವನ ಸಂಕಲನಕ್ಕೆ ‘ದಿನಕರ ದೇಸಾಯಿ ಪ್ರಶಸ್ತಿ’
    Awards

    ಸದಾಶಿವ ಸೊರಟೂರು ಇವರ ಕವನ ಸಂಕಲನಕ್ಕೆ ‘ದಿನಕರ ದೇಸಾಯಿ ಪ್ರಶಸ್ತಿ’

    October 22, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅಂಕೋಲಾ : ಡಾ. ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಯು ಹೊನ್ನಾಳಿಯ ಶಿಕ್ಷಕ ಹಾಗೂ ಲೇಖಕ ಸದಾಶಿವ ಸೊರಟೂರು ಇವರ ‘ಗಾಯಗೊಂಡ ಸಾಲುಗಳು’ ಕಾವ್ಯ ಸಂಕಲನಕ್ಕೆ ಲಭಿಸಿದೆ. ಡಾ. ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ 72 ಸಂಕಲನಗಳು ಬಂದಿದ್ದವು. ಬೆಂಗಳೂರಿನ ಎಚ್.ಎಲ್. ಪುಷ್ಪಾ, ಸುಬ್ಬು ಹೊಲಿಯಾರ, ಧಾರವಾಡದ ಬಸು ಬೇವಿನಗಿಡದ ಹಾಗೂ ಡಾ. ಶ್ರೀಧರ ಹೆಗಡೆ ಭದ್ರನ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಪ್ರಶಸ್ತಿಯನ್ನು ದಿನಾಂಕ 10 ನವೆಂಬರ್ 2024ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ದಿನಕರ ದೇಸಾಯಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮೋಹನ ಹಬ್ಬು ತಿಳಿಸಿದ್ದಾರೆ.

    ಸದಾಶಿವ ಸೊರಟೂರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಮಲೇ ಬೆನ್ನೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ (ಕವನ ಸಂಕಲನ), ದೇವರೆ ಅವಳು ಸಿಗದಿರಲಿ (ಪ್ರೇಮಪತ್ರಗಳು), ಆ ಹಾದಿ ( ಒಂದು ರಸ್ತೆಯ ಕಥಾನಕ), ಅರ್ಧ ಬಿಸಿಲು ಅರ್ಧ ಮಳೆ (ಕಥಾ ಸಂಕಲನ), ಕಂಡಕ್ಟರ್ ಕವಿತೆಗಳು (ಕವಿತೆಗಳು), ಗಾಯಗೊಂಡ ಸಾಲುಗಳು (ಕವನ ಸಂಕಲನ), ನಿನ್ನ ಬೆರಳು ತಾಕಿ (ಕವನ ಸಂಕಲನ), ಕೊಲ್ಲುವುದಕ್ಕೆ ಸದ್ದುಗಳಿವೆ (ಕವನ ಸಂಕಲನ) ಮತ್ತು ಧ್ಯಾನಕ್ಕೆ ಕೂತ ನದಿ (ಕಥಾ ಸಂಕಲನ) ಇವು ಇವರ ಪ್ರಕಟವಾಗಿರುವ ಕೃತಿಗಳು.

    2021ನೇ ಸಾಲಿನ ‘ಹರಿಹರಶ್ರೀ ಪ್ರಶಸ್ತಿ’, 2023ನೇ ಸಾಲಿನ ‘ಬಳ್ಳಾರಿ ಎನ್. ಗವಿಸಿದ್ದ ಕಾವ್ಯಪುರಸ್ಕಾರ’, 2023ನೇ ಸಾಲಿನ ‘ಕಾವ್ಯಸಂಜೆ ಕಾವ್ಯ ಪುರಸ್ಕಾರ’, 2023ನೇ ಸಾಲಿನ ‘ಭೂಮಿ ಸಾಹಿತ್ಯ ಪುರಸ್ಕಾರ’, ಕ.ಸಾ.ಪ. ಕೊಡುವ ‘ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿ ಪ್ರಶಸ್ತಿ’, 2024ನೇ ‘ಈ ಹೊತ್ತಿಗೆ ಕಥಾ ಪುರಸ್ಕಾರ’, 2024ನೇ ಸಾಲಿನ ಮಂಗಳೂರಿನ ‘ಹಂಸಕಾವ್ಯ ರಾಷ್ಟ್ರೀಯ ಪುರಸ್ಕಾರ’ ಮತ್ತು 2024ನೇ ‘ವಿಭಾ ಪ್ರಶಸ್ತಿ’ ಇವರ ಸಾಹಿತ್ಯ ಕೃಷಿಗೆ ಸಂದ ಗೌರವ. ‘ಭಂಟಿ’ ಎಂಬ ಕಥೆಯು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿ ರಾಜಾಂಗಣದಲ್ಲಿ 100 ಮಂದಿ ನೃತ್ಯ ಕಲಾವಿದರಿಂದ ಸತತ 14 ಗಂಟೆಗಳ ಶಾಸ್ತ್ರೀಯ ನೃತ್ಯ ಪ್ರದರ್ಶನ
    Next Article “ಭೂಮಿಯಿಂದ ಮೊಳೆತು ಬಂದ ಪಾಟ್ ಕಥೆಗಳು” ಕೃತಿ ಬಿಡುಗಡೆ.
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ – ‘ಹೌಸ್ ಫುಲ್’

    June 6, 2025

    ಕುಷ್ಟಗಿಯಲ್ಲಿ ಮೌನೇಶ ನವಲಹಳ್ಳಿ ಇವರ ‘ನೀಲಿ ಹೊತ್ತಿಗೆ’ ಕಾದಂಬರಿ ಅವಲೋಕನ ಕಾರ್ಯಕ್ರಮ | ಜೂನ್ 08

    June 6, 2025

    ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನೋತ್ಸವ ಹಾಗೂ ‘ವಿಜಯ ವಿಷ್ಣು ಭಟ್ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭ

    June 6, 2025

    ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜಯಂತ್ಯುತ್ಸವ

    June 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.