Subscribe to Updates

    Get the latest creative news from FooBar about art, design and business.

    What's Hot

    ಸಮಾರೋಪಗೊಂಡ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ

    May 17, 2025

    ಉಡುಪಿಯ ಬ್ರಾಹ್ಮಿ ಸಭಾಭವನದಲ್ಲಿ ಜಾನಪದ ನೃತ್ಯ ಸ್ಪರ್ಧೆ ‘ನೃತ್ಯ ಸಂಭ್ರಮ-2025’ | ಮೇ 18

    May 17, 2025

    ಡಾ. ಹಂಪನಾ ‘ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ಗೆ ಆಯ್ಕೆ

    May 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶಿವಮೊಗ್ಗದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ‘ಬೆಳಗಿನೊಳಗು’ ಕಾದಂಬರಿ ಕುರಿತು ಸಂವಾದ
    Literature

    ಶಿವಮೊಗ್ಗದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ‘ಬೆಳಗಿನೊಳಗು’ ಕಾದಂಬರಿ ಕುರಿತು ಸಂವಾದ

    November 11, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶಿವಮೊಗ್ಗ : ಶಿವಮೊಗ್ಗದ ದುರ್ಗಿಗುಡಿ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ‘ಬೆಳಗಿನೊಳಗು’ ಕಾದಂಬರಿ ಕುರಿತು ಎಚ್. ಎಸ್. ಅನುಪಮಾ ಅವರೊಂದಿಗಿನ ಸಂವಾದ ಕಾರ್ಯಕ್ರಮವು ದಿನಾಂಕ 09 ನವೆಂಬರ್ 2024ರ ಶನಿವಾರದಂದು ನಡೆಯಿತು.
    ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಕೇಶವಶರ್ಮ ಮಾತನಾಡಿ ಲೇಖಕಿ ಎಚ್. ಎಸ್. ಅನುಪಮಾ ಅವರ ‘ಬೆಳಗಿನೊಳಗು’ ಎಂಬ ಕಾದಂಬರಿ ಕಾದಂಬರಿಯ ಯುಗದಲ್ಲಿಯೇ ಬಂದ ಮಹಾಕಾವ್ಯ ಎಂದರು. ಮಹಾಕಾವ್ಯಗಳ ಬರವಣಿಗೆ ವಿಶಿಷ್ಟವಾದುದು. ಆದರೆ ಈಗಿನ ಕಾದಂಬರಿ ಯುಗದಲ್ಲಿ ‘ಬೆಳಗಿನೊಳಗು’ ಕೃತಿಯಲ್ಲಿ ಮಹಾಕಾವ್ಯದ ಚಹರೆ ದಟ್ಟವಾಗಿದೆ. ಇದು ಕೇವಲ ಕಾದಂಬರಿ ಅಲ್ಲ, ಸಾಂಸ್ಕೃತಿಕ ಪಠ್ಯ. ಕಾದಂಬರಿಯನ್ನು ಓದುತ್ತಾ ಹೋದಂತೆ ನಮ್ಮನ್ನು 12ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ವಚನ ಸಾಹಿತ್ಯ ಅಥವಾ ವಚನಗಳನ್ನು ಓದುವುದಕ್ಕೆ ಒಂದಷ್ಟು ಪರಿಕರಗಳು ಬೇಕಾಗುತ್ತವೆ. ಅಂತಹ ಓದಿನ ಆರಂಭಕ್ಕೆ ಈ ಕಾದಂಬರಿ ಸಹಾಯಕವಾಗುತ್ತದೆ. ಬಸವಣ್ಣನನ್ನು ಅವತಾರ ಪುರುಷನೆಂಬಂತೆ ಓದುತ್ತೇವೆ. ಆದರೆ ಈ ಕಾದಂಬರಿ ಓದಿದಾಗ ಅಕ್ಕ ಅವತಾರ ಪುರುಷಳೆಂಬಂತೆ ಕಾಣುವುದಿಲ್ಲ. ಬದಲಿಗೆ ನಮ್ಮ ಮನೆಯ ಅಕ್ಕಪಕ್ಕದ ಮಹಿಳೆ ಮಾತನಾಡಿದಂತೆ ಬಾಸವಾಗುತ್ತದೆ. ಅಕ್ಕಮಹಾದೇವಿ ಕೇವಲ ವ್ಯಕ್ತಿಯಾಗಿ ಬರದೆ ಅದರ ಆಚೆಗೆ ವ್ಯಕ್ತಿತ್ವವಾಗಿ ಗೋಚರವಾಗುತ್ತಾ ಹೋಗುತ್ತಾಳೆ. ಕಾದಂಬರಿಯು ಅಕ್ಕನ ಅಥವಾ ಅಕ್ಕನ ವಚನಗಳ ಶ್ರೇಷ್ಠತೆಯ ಬದಲಿಗೆ ಇಡೀ 12ನೇ ಶತಮಾನದ ವಚನ ಚಳವಳಿಯ ಶ್ರೇಷ್ಠತೆ ಮತ್ತು ಮಹತ್ವವನ್ನು ಸಾರುತ್ತದೆ.” ಎಂದರು. ಎಚ್. ಎಸ್. ಅನುಪಮಾ ಓದುಗರೊಂದಿಗೆ ಸಂವಾದ ನಡೆಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಸಾಹಿತಿ ಶುಭಾ ವಿಷ್ಣು ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
    Next Article ರಾಮ ಸಾಂಗತ್ಯ ಕೃತಿ ಪ್ರಸ್ತುತಿ
    roovari

    Add Comment Cancel Reply


    Related Posts

    ಡಾ. ಹಂಪನಾ ‘ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ಗೆ ಆಯ್ಕೆ

    May 17, 2025

    ಡಿ.ಎಸ್. ಕರ್ಕಿ ‘ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ

    May 17, 2025

    ಸಿಂಧನೂರು ಸತ್ಯಾ ಗಾರ್ಡನ್ ನಲ್ಲಿ 11ನೇ ‘ಮೇ ಸಾಹಿತ್ಯ ಮೇಳ’ | ಮೇ 17 ಮತ್ತು 18

    May 16, 2025

    ಕಯ್ಯಾರರ ಜನ್ಮದಿನ ಸಂಭ್ರಮದಲ್ಲಿ ಭಾಗವಹಿಸಲು ಆಸಕ್ತರಿಗೆ ಆಹ್ವಾನ

    May 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.