ಕಾಸರಗೋಡು : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ ಮತ್ತು ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಆಶ್ರಯದಲ್ಲಿ ದಿನಾಂಕ 08 ಜೂನ್ 2025ರಂದು ಅಪರಾಹ್ನ 3-00 ಗಂಟೆಗೆ ಕನ್ನಡ ಭವನ ಸಭಾಂಗಣದಲ್ಲಿ ಕಯ್ಯಾರ ಕಿಞಣ್ಣ ರೈ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದಂಪತಿಗಳು ಕಯ್ಯಾರರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ನುಡಿನಮನ ಸಲ್ಲಿಸುವರು. ಮುಖ್ಯ ಅತಿಥಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ನ್ಯಾಯವಾದಿ ಕೆ. ಸತ್ಯನಾರಾಯಣ ತಂತ್ರಿ, ದ.ಕ. ಜಿಲ್ಲಾ ಕನ್ನಡ ಭವನ ಅಧ್ಯಕ್ಷೆ ರೇಖಾ ಸುಧೇಶ್ ರಾವ್, ದ.ಕ. ಜಿಲ್ಲಾ ಕನ್ನಡ ಭವನ ಕಾರ್ಯಾಧ್ಯಕ್ಷ ಉಮೇಶ್ ರಾವ್ ಕುಂಬಳೆ, ಕಾಸರಗೋಡಿನ ಕನ್ನಡ ಭವನದ ಗೌರವಾಧ್ಯಕ್ಷ ಪ್ರದೀಪ್ ಬೇಕಲ್, ವಿಶಾಲಾಕ್ಷ ಪುತ್ರಕಳ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ. ರಮಾನಂದ ಬನಾರಿ, ಡಾ. ಶಿವಾನಂದ ಬೇಕಲ್, ಡಾ. ವಸಂತ್ ಕುಮಾರ್ ಪೆರ್ಲ, ಡಾ. ಸದಾನಂದ ಪೆರ್ಲರಿಗೆ ‘ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ- 2025’ ನೀಡಿ ಗೌರವಿಸಲಾಗುವುದು. ನಂತರ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಕಯ್ಯಾರರ ಕುರಿತ ಕವಿಗೋಷ್ಠಿ ಹಾಗೂ ಗಾಯನ ನಡೆಯಲಿದೆ. ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಮೊಳೆಯಾರ್ ಎಡನೀರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ವಿ.ಬಿ. ಕುಳಮರ್ವ, ಉಪಾಧ್ಯಕ್ಷ ನರಸಿಂಹ ಭಟ್ ಏತಡ್ಕ, ಕಾರ್ಯದರ್ಶಿ ದೇವರಾಜ್ ಆಚಾರ್ಯ ಸೂರಂಬೈಲ್, ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮನೆ ಭಾಗವಹಿಸುವರು.
ಕವಿಗೋಷ್ಠಿಯಲ್ಲಿ ಚಿತ್ರಕಲಾ ಆಚಾರ್ಯ ಸೂರಂಬೈಲ್, ರೇಖಾ ಸುಧೇಶ್ ರಾವ್, ಗಾಯತ್ರಿ ಪಳ್ಳತ್ತಡ್ಕ, ಮೋಹನ್ದಾಸ್ ಆನೆಪಲ್ಲಡ್ಕ (ಆಕರ್ಷಣೆ) ಹಿಮಜ ಚೆನ್ನರಾಯಪಟ್ಟಣ, ಪ್ರಣತಿ ಎನ್. ಪುದುಕೋಳಿ, ಮಾಲತಿ ಬೆಂಗಳೂರು, ಉಷಾ ಟೀಚರ್ ಕೋಟೆಕಣಿ, ಆಶಾ ರಾಧಾಕೃಷ್ಣ ಅಣಂಗೂರು, ಉಷಾ ಕಿರಣ್ ಅಣಂಗೂರು, ರೇಖಾ ರೋಶನ್ ಅಣಂಗೂರು, ಸುಭಾಷಿಣಿ ಚಂದ್ರ ಕನ್ನಟಿಪ್ಪಾರೆ, ಗಿರೀಶ್ ಪಿ.ಎಂ. ಚಿತ್ತಾರಿ, ಉಮಾ ಕಮಲಾಕ್ಷ ಬೀರಂತಬೈಲ್, ನರಸಿಂಹ ಭಟ್ ಏತಡ್ಕ, ಸುಜಿತ್ ಬೇಕೂರು, ಸುಶೀಲ ಕೆ. ಪದ್ಯಾಣ ನೀರ್ಚಾಲು, ಶಶಿಕಲಾ ಟೀಚರ್ ಕುಂಬಳೆ ಮುಂತಾದವರು ಕವನ ವಾಚಿಸುವರು. ಖ್ಯಾತ ಗಾಯಕ ಜಯಾನಂದ ಕುಮಾರ್ ಹೊಸದುರ್ಗ, ಪುನೀತ್ ಗಾನರತ್ನ ಸೀಸನ್ 3ರಲ್ಲಿ ಪ್ರಥಮ ಸ್ಥಾನ ಪಡೆದ ಶ್ರೇಯಾಕೃಷ್ಣ ಮಂಗಳೂರು, ಮುರಳಿಕೃಷ್ಣ ನೀರ್ಚಾಲ್, ಸುಭಾಷಿಣಿ ಚಂದ್ರ ಕನ್ನಟಿಪ್ಪಾರೆ ಇವರಿಂದ ಗಾಯನ ನಡೆಯಲಿದೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿರಾಜ್ ಅಡೂರು ತಿಳಿಸಿದ್ದಾರೆ.