Subscribe to Updates

    Get the latest creative news from FooBar about art, design and business.

    What's Hot

    ʻಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ-2025ʼ- 2ನೇ ದಿನದ ವಿಚಾರಗೋಷ್ಠಿ

    August 12, 2025

    ಡಾ.ಎಸ್.ರಾಮಲಿಂಗೇಶ್ವರ ಇವರು ಬಿ. ಎಂ. ಶ್ರೀ. ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ

    August 12, 2025

    ಬುಕ್‌ ಬ್ರಹ್ಮ ಕಥಾ ಸ್ಪರ್ಧೆ 2025 – ʻಪೆರೇಡ್ ಪೊಡಿಮೋನುʼ ವಿಜೇತ ಕಥೆ

    August 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಜನಪ್ರಿಯ ನಾಟಕಕಾರ ಪೂಜಾರ್ ಚಂದ್ರಪ್ಪ ನಿಧನ 
    Drama

    ಜನಪ್ರಿಯ ನಾಟಕಕಾರ ಪೂಜಾರ್ ಚಂದ್ರಪ್ಪ ನಿಧನ 

    October 10, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅರಸೀಕೆರೆ: ಅರಸೀಕೆರೆ ಗ್ರಾಮದ ಜನಪ್ರಿಯ ನಾಟಕಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೂಜಾರ್ ಚಂದ್ರಪ್ಪ ದಿನಾಂಕ 08 ಅಕ್ಟೋಬರ್ 2024ರ ಮಂಗಳವಾರದಂದು ನಿಧನರಾದರು. ಅವರಿಗೆ 76 ವರ್ಷ ವ್ಯಯಸ್ಸಾಗಿತ್ತು.

    ಪೂಜಾ‌ರ್ ಚಂದ್ರಪ್ಪ ಕೇವಲ ಎರಡನೇ ತರಗತಿ ಓದಿದ್ದರೂ ರಂಗಭೂಮಿ ಮತ್ತು ಸಂಗೀತದ ಅಪಾರ ಆಸಕ್ತಿ ಹೊಂದಿದ್ದರು. ‘ದಂಡಿನ ದುರ್ಗಮ್ಮ’ (ದುರ್ಗಮಾತಾ ಅವತಾರ) ನಾಟಕದಲ್ಲಿ ಮೊದಲ ಬಾರಿಗೆ ದೇವಿಯ ಪಾತ್ರ ನಿರ್ವಹಿಸಿದ್ದರು. ಇವರ ಈ ಪಾತ್ರ ಜನಪ್ರಿಯತೆ ಗಳಿಸಿ ನಾಟಕವು ರಾಜ್ಯದ ವಿವಿದೆಡೆಗಳಲ್ಲಿ 267 ಪ್ರದರ್ಶನ ಕಂಡಿತ್ತು. ‘ಜಗಜ್ಯೋತಿ ಬಸವೇಶ್ವರ’, ‘ದುರ್ಗದ ದೊರೆ ಅರ್ಥಾತ್ ರಾಜ್ಯದಲ್ಲಿ ಗಂಡುಗಲಿ’ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ನಾಟಕದಲ್ಲಿ ಇವರು ಮುಖ್ಯ ಪಾತ್ರ ನಿರ್ವಹಿಸಿದ್ದರು. ‘ಕೊಂಡು ತಂದ ಗಂಡ’, ‘ಹೆಜ್ಜೆ ತಪ್ಪದ ಹೆಣ್ಣು’, ‘ಗಂಡನ ಮಾನ’, ‘ಪತಿ ಭಕ್ತ’ ಸೇರಿದಂತೆ ಅನೇಕ ನಾಟಕದ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದರು.

    ‘ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ’, ‘ಗ್ರಾಮೀಣ ಸಿರಿ’, ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಗ್ರಾಮೀಣ ರಂಗ ಹಬ್ಬ’, ‘ಶ್ರೀ ಜಯದೇವ ಗೌರವ ಪುರಸ್ಕಾರ’, ‘ಪಂಚಮ ಶ್ರೀ’ ಹಾಗೂ ಅನೇಕ ಪ್ರಶಸ್ತಿ ಸನ್ಮಾನಗಳು ಇವರ ಸಾಧನೆಗೆ ಸಂದ ಗೌರವಗಳು. ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ, ರಾಜಕೀಯವಾಗಿಯೂ ಮನ್ನಣೆ ಗಳಿಸಿದ್ದ ಇವರು ತಾಲ್ಲೂಕು ಪಂಚಾಯಿತಿ ಸದಸ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪೂಜಾರ್ ಚಂದ್ರಪ್ಪ ಕುರಿತ ‘ಬಣ್ಣ ಮತ್ತು ಬದುಕು’ ಎಂಬ ಅಭಿನಂದನ ಗ್ರಂಥವೂ ರಚನೆಯಾಗಿದೆ.

    ಶ್ರೀಯುತರು ಪುತ್ರ, ಪ್ರಾಂಶುಪಾಲ ಪೂಜಾರ್ ದುರುಗೇಶ್, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ಅಗಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಗುರುವನ ಶ್ರೀದುರ್ಗಾಕ್ಷೇತ್ರ ಕಡೆಕಾರಿನಲ್ಲಿ 50ನೇ ವರ್ಷದ ತಾಳಮದ್ದಳೆ ಸೇವೆ
    Next Article ಶ್ರೀ ಸುಬ್ರಹ್ಮಣ್ಯ ನಗರ ಮೈದಾನದ ವೇದಿಕೆಯಲ್ಲಿ ತಾಳಮದ್ದಳೆ ಕೂಟ
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಸೆಪ್ಟೆಂಬರ್ 01ರಿಂದ 19

    August 12, 2025

    ಯುವ ನಾಟಕಕಾರ ನಾರಾಯಣ ಕೊಯಿಲ ನಿಧನ

    August 11, 2025

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ತಮಾಷಾ’ ವಿದ್ಯಾರ್ಥಿ ನಾಟಕೋತ್ಸವ | ಆಗಸ್ಟ್ 14ರಿಂದ 17

    August 11, 2025

    ಹೈದರಾಬಾದಿನ ರವೀಂದ್ರ ಭಾರತಿಯಲ್ಲಿ ‘ತಲ್ಕಿ’ ನಾಟಕದ ಪ್ರದರ್ಶನ | ಆಗಸ್ಟ್ 13

    August 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.