Subscribe to Updates

    Get the latest creative news from FooBar about art, design and business.

    What's Hot

    ಮೂಡಬಿದೆರೆಯಲ್ಲಿ ಕೊಂಕಣಿ ಸಾಹಿತ್ಯ ಕಾರ್ಯಗಾರ

    July 21, 2025

    ವಿದ್ಯಾರ್ಥಿಗಳಿಗಾಗಿ ‘ಮಿನಿ ಕಥೆ’ ರಚನೆ ಹಾಗೂ ಕವನ ರಚನೆ ಸ್ಪರ್ಧೆ | ಜುಲೈ 24

    July 21, 2025

    ಯಕ್ಷಗಾನ ಗುರು, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಿಗೆ ಗುರುಪೂರ್ಣಿಮೆಯ ಗುರುವಂದನೆ

    July 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಾಟಕ ಪ್ರದರ್ಶನ
    Drama

    ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಾಟಕ ಪ್ರದರ್ಶನ

    July 21, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಆಯೋಜಿಸಿದ್ದ ‘ತಿಂಗಳ ನಾಟಕ ಸಂಭ್ರಮ’ದಲ್ಲಿ ಬೊಳುವಾರು ಮುಹಮ್ಮದ್ ಕುಂಞ ಅವರ ಕೃತಿಯಾಧಾರಿತ ‘ಸ್ವಾತಂತ್ರ್ಯದ ಓಟ’ ಎಂಬ ನಾಟಕ ಪ್ರದರ್ಶನವು ದಿನಾಂಕ 19 ಜುಲೈ 2025ರಂದು ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಡೆಯಿತು.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ “ದೇಶ ಒಂದು ರೀತಿಯ ನೈತಿಕತೆ ಕಳೆದುಕೊಂಡು, ಏಕಮುಖಿ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಸಂದರ್ಭದಲ್ಲಿ ಬಹುಮುಖಿ ಸಂಸ್ಕೃತಿಯನ್ನು ಪ್ರತಿಪಾದಿಸಿದಂತಹ ಗಾಂಧೀಜಿಯವರ ಆದರ್ಶಗಳು ನಮಗೆಲ್ಲರಿಗೂ ಅಗತ್ಯವಾಗಿದೆ. ಇಡೀ ದೇಶದಲ್ಲಿ ಬೆಳೆಯುತ್ತಿರುವ ಏಕಮುಖ ಸಂಸ್ಕೃತಿಯನ್ನು ವಿರೋಧಿಸಬೇಕಾಗಿದೆ. ಸುಳ್ಳೇ ದೇಶವನ್ನು ರಾರಾಜಿಸುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಪ್ರತಿಪಾದಿಸಿದಂತಹ ಗಾಂಧೀಜಿಯ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಎಂದಿಗೂ ಸತ್ಯಕ್ಕೆ ಜಯ ಎನ್ನುವುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಬಹುಶಃ ರಾಜ್ಯದಲ್ಲಿ ಎಲ್ಲರ ಸಾಹಿತ್ಯ ಪ್ರಿಯರಿಗೆ ಬೊಳುವಾರು ಮುಹಮ್ಮದ್ ಕುಂಞಯವರು ಪರಿಚಿತರೇ ಆಗಿದ್ದಾರೆ. ಗಾಂಧೀಜಿ ಎಲ್ಲರಿಗಿಂತಲೂ ಅತ್ಯಂತ ಪ್ರಸ್ತುತವಾಗುತ್ತಿದ್ದಾರೆ. ಹಾಗಾಗಿ ‘ಸ್ವಾತಂತ್ರ್ಯದ ಓಟ’ ನಾಟಕದ ಮೂಲಕ ಗಾಂಧೀಜಿಯ ಕನಸುಗಳು ಏನಿತ್ತು ಎನ್ನುವುದನ್ನು ನಾಟಕದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಗಾಂಧೀಜಿ ಚಿಂತನೆಗಳು ಹೇಗಿತ್ತು ಎನ್ನುವುದನ್ನು ನಾಟಕದ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ” ಎಂದು ತಿಳಿಸಿದರು.

    ಹಿರಿಯ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞ, ಜಗದೀಶ್ ಜಾಲಾ, ಟಿ.ಎಚ್. ಲವಕುಮಾರ್, ಜಿಪಿಒ ಚಂದ್ರು, ಚನ್ನಪ್ಪ ಕಟ್ಟಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಿರಿಗೆರೆಯ ತರಳಬಾಳು ಕಲಾ ಸಂಘದ ಕಲಾವಿದರಿಂದ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನಗೊಂಡಿತು.

    baikady drama roovari
    Share. Facebook Twitter Pinterest LinkedIn Tumblr WhatsApp Email
    Previous Articleಡಾ.ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ ವಿಮರ್ಶಾ ಕೃತಿಗಳ ಆಹ್ವಾನ | ಆಗಸ್ಟ್ 10
    Next Article ಕೋಲಾರದಲ್ಲಿ ಯಶಸ್ವಿಯಾಗಿ ನಡೆದ ‘ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ-2025’
    roovari

    Add Comment Cancel Reply


    Related Posts

    ವಿದ್ಯಾರ್ಥಿಗಳಿಗಾಗಿ ‘ಮಿನಿ ಕಥೆ’ ರಚನೆ ಹಾಗೂ ಕವನ ರಚನೆ ಸ್ಪರ್ಧೆ | ಜುಲೈ 24

    July 21, 2025

    ಯಕ್ಷಗಾನ ಗುರು, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಿಗೆ ಗುರುಪೂರ್ಣಿಮೆಯ ಗುರುವಂದನೆ

    July 21, 2025

    ಏರ್ಯ ಬೀಡಿನಲ್ಲಿ ‘ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ’ | ಜುಲೈ 27

    July 21, 2025

    ಕೋಲಾರದಲ್ಲಿ ಯಶಸ್ವಿಯಾಗಿ ನಡೆದ ‘ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ-2025’

    July 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.