Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಯುವ ಸಂಗೀತೋತ್ಸವ 2025’ | ಮೇ 25

    May 23, 2025

    ‘ಮಲೆಯಾಳದ ಆಧುನಿಕ ಸಣ್ಣ ಕಥೆಗಳು’ ಅನುವಾದಿತ ಕೃತಿ ಲೋಕಾರ್ಪಣೆ

    May 23, 2025

    ಬೆಂಗಳೂರಿನ ರಂಗಶಂಕರದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನ | ಮೇ 31

    May 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟಕ ವಿಮರ್ಶೆ: ‘ಅವಳ‌ ಕಾಗದ’ – ರಘುನಾಥ್ ಕೃಷ್ಣಮಾಚಾರ್
    Drama

    ನಾಟಕ ವಿಮರ್ಶೆ: ‘ಅವಳ‌ ಕಾಗದ’ – ರಘುನಾಥ್ ಕೃಷ್ಣಮಾಚಾರ್

    May 6, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅಹಲ್ಯಾ ಬಲ್ಲಾಳ್ ಪ್ರಸ್ತುತಪಡಿಸಿದ ‘ಅವಳ ಕಾಗದ’
    ಲೇಖಕಿ, ಅಂಕಣಕಾರ್ತಿ ಸುಧಾ ಆಡುಕಳ ಬರೆದ ಈ ರೂಪಕವನ್ನು ಶ್ವೇತಾ ಹಾಸನ ವಿನ್ಯಾಸ ಮಾಡಿದ್ದು, ಬೆಳಕಿನ ವಿನ್ಯಾಸವನ್ನು ಶ್ರೀನಿವಾಸ್ ಜಿ. ಕಪ್ಪಣ್ಣ ಮಾಡಿದ್ದಾರೆ. ಡಾ. ಶ್ರೀಪಾದ ಭಟ್ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ರೂಪಕ.

    ಅನುಕಾಲದಿಂದಲು ಹೆಣ್ಣನ್ನು ದ್ವಿತೀಯ ಪ್ರಜೆಯನ್ನಾಗಿಸಿ, ಅವಳ ಅಸ್ಮಿತೆಯನ್ನು ನಿರಾಕರಿಸುವ, ಭಾರತೀಯ ಮಧ್ಯಮವರ್ಗದ ಕುಟುಂಬದ ಹುನ್ನಾರದ ವಿರುದ್ದ ಸಿಡಿದೆದ್ದ, ಹೆಣ್ಣೊಬ್ಬಳ ರೂಪಕವಾಗಿ ನೂರು ವರ್ಷಗಳ ಹಿಂದೆಯೆ, ತಮ್ಮ ಸೂಕ್ಷ್ಮ ಸಂವೇದನಾ ಶೀಲತೆಯನ್ನು ತಮ್ಮ ಕಥೆಗಳ ಮೂಲಕ ಪ್ರಕಟಿಸಿದವರು ರವೀಂದ್ರನಾಥ ಠಾಕೂರರು. ಅವಳ‌ ಕಾಗದದ ಮೂಲಕ ಅದನ್ನು ರೂಪಕವಾಗಿಸಿದ ಶ್ರೇಯಸ್ಸು ಸುಧಾ ಅಡುಕಳ ಅವರದಾದರೆ, ಅದನ್ನು ನಿರ್ದೇಶಿಸಿದ ಶ್ರೇಯಸ್ಸು ಡಾ.ಶ್ರೀಪಾದ ಭಟ್ಟರಿಗೆ ಸಲ್ಲಬೇಕು. ಅದನ್ನು ಅನನ್ಯವಾಗಿ ತನ್ನ ಭಾವಾಭಿನಯದ ಮೂಲಕ ತೆರೆಯ ಮೇಲೆ ಪ್ರದರ್ಶಿಸಿದವರು ಮುಂಬಯಿನ ನನ್ನ ಕನ್ನಡದ ಶಿಷ್ಯೆ ಅಹಲ್ಯಾ ಬಲ್ಲಾಳ್ ಅನುಪಮ ಕಲಾವಿದೆ.

    “ಗಾಳಿಯಲ್ಲಿ ಹಾರಿಬಂದ ಬೀಜಗಳು, ಕಲ್ಲಿನ ಬಿರುಕುಗಳಲ್ಲಿ ಬಿದ್ದು, ಅವು ಚಿಗುರೊಡೆದಾಗಲೇ ಬಿರುಕು ಇದೆ ಎಂದು ಗೊತ್ತಾಗುವುದು” ಎಂಬ ಮಾತುಗಳು, ಅವಳ ಎದೆಯಲ್ಲಿ ಎದ್ದ ಬಿರುಗಾಳಿಯ ಸೂಚಕವಾಗಿವೆ. ಆಗ ಅವಳು ಎದುರಿಸಿದ ತಲ್ಲಣಗಳು, ಅವಳನ್ನು ಅವರ ಮನೆಯವರು ಎಸಗಿದ ದೌರ್ಜನ್ಯದ ವಿರುದ್ದ “ನಾನು ಕೋರ್ಟಿಗೆ ಹೋಗುತ್ತೇನೆ” ಎಂದು ಘೋಷಿಸಿ ಮನೆ ತೊರೆದು ಹೋಗುವಂತೆ ಮಾಡುತ್ತದೆ. ಈ ಬೆಂಗಾಲಿ ಹೆಣ್ಣು. ಎಚ್ಚೆತ್ತ ಸ್ರ್ರೀಪ್ರಜ್ಞೆಯ ದ್ಯೋತಕವಾಗಿ ಕಾಣಿಸಿಕೊಳ್ಳುತ್ತಳೆ. ಇದು ಡಾಲ್ಸ್ ಹೌಸ್ ನ ನಾಯಕಿ ನೋರಾಳ ನಡೆಯನ್ನು ನೆನಪಿಗೆ ತರುವಷ್ಟು ಪರಿಣಾಮಕಾರಿಯಾಗಿದೆ. ಇದನ್ನು ಆಯೋಜಿಸಿದ ಮುಂಬಯಿ ನಮ್ಮ ಗೆಳತಿ ಈಗ ಇಲ್ಲಿ ನೆಲೆಸಿರುವ ಕಲಾವಿದೆ ಜಯಲಕ್ಷ್ಮೀ ಪಾಟೀಲ್ ರಿಗೆ ಕೂಡ ಅಭಿನಂದನೆ. ಈ ಬೆಂಗಳೂರಿನ ರಂಗಾಸಕ್ತರಿಗೆ ನನ್ನ ಶಿಷ್ಯೆ ಅಹಲ್ಯ ಬಲ್ಲಾಳರನ್ನು ಪರಿಚಯಿಸಿದ ಶ್ರೇಯಸ್ಸು ಅವರದು.

    ಎರಡು ದಶಕಗಳಿಗೂ ಹಿಂದೆ ಮು.ವಿ.ವಿ.ಕನ್ನಡ ಎಂ.ಎ. ತರಗತಿಗಳಲ್ಲಿ ಗಮನವಿಟ್ಟು ನನ್ನ ಪಾಠ ಕೇಳುತ್ತಿದ್ದ ಅಹಲ್ಯಾರ ಚಿತ್ರ ನನ್ನ ಮುಂದೆ ಬರುತ್ತದೆ. ಅವರಲ್ಲಿ ಇಂತಹ ಒಬ್ಬ ಕಲಾವಿದೆ ಇರಬಹುದು ಎಂಬ ಊಹೆಯೇ ನನಗಿರಲಿಲ್ಲ. ಈಗ ಬಹುಮುಖಿ ಪ್ರತಿಭಾವಂತ ಕಲಾವಿದೆಯಾಗಿ ಬೆಳೆದು ನಿಂತಿರುವುದು ವೈಯಕ್ತಿಕವಾಗಿ ನನಗೆ ಹೆಮ್ಮೆಯ ಸಂಗತಿ. ಅವರ ಪ್ರತಿಭೆ ನಿರಂತರವಾಗಿ ಬೆಳಗುತ್ತಿರಲಿ‌ ಎಂದು ಈ ಸಂದರ್ಭದಲ್ಲಿ ಹಾರೈಸುವೆ.

    • ರಘುನಾಥ್ ಕೃಷ್ಣಮಾಚಾರ್

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ಸಾಹಿತಿ ‘ರಾಘವೇಂದ್ರ ಪಾಟೀಲ’ ಜತೆಗೆ ಒಂದು ಸಂಜೆ
    Next Article ಬೆಂಗಳೂರಿನ ರಂಗಶಂಕರದಲ್ಲಿ ‘ನಮ್ಮ ನಿಮ್ಮೊಳಗೊಬ್ಬ’ | ಮೇ 16ಕ್ಕೆ
    roovari

    Add Comment Cancel Reply


    Related Posts

    ಬೆಂಗಳೂರಿನ ರಂಗಶಂಕರದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನ | ಮೇ 31

    May 23, 2025

    ನೃತ್ಯ ವಿಮರ್ಶೆ | ನಯನ ಮನೋಹರ ನೃತ್ತಾಭಿನಯ ಸಂವೃತಳ ರಮ್ಯ ನರ್ತನ

    May 22, 2025

    ಕರ್ನಾಟಕ ನಾಟಕ ಅಕಾಡೆಮಿಯಿಂದ ತಿಂಗಳ ನಾಟಕ ಸಂಭ್ರಮ

    May 21, 2025

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.