Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಶತಾಯುಷಿ, ಕನ್ನಡದ ಖ್ಯಾತ ಬರಹಗಾರ ಡಾ. ಎ. ಎನ್. ಮೂರ್ತಿರಾವ್

    June 16, 2025

    ಭರತಾಂಜಲಿಯಿಂದ ಕಣ್ಮನ ತಣಿಸಿದ ರಂಗಪ್ರವೇಶ…ಗುರು ನಮನ..

    June 16, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟಕ ವಿಮರ್ಶೆ | ಪುಟಾಣಿಗಳಿಗಾಗಿ ನಾಟಕ ಲಾ_ಪೋ_ಲಾ
    Drama

    ನಾಟಕ ವಿಮರ್ಶೆ | ಪುಟಾಣಿಗಳಿಗಾಗಿ ನಾಟಕ ಲಾ_ಪೋ_ಲಾ

    November 17, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನಾನು ಇದುವರೆಗೆ ಕಂಡ best ineractive childrens’ activity. ‘ಲಾ ಪೋ ಲಾ’ ಎಂಬ ಮಕ್ಕಳಾಟ,
    ಈ ಆಟ ಸುರುವಾಗೋದೇ ಸುತ್ತಲಿದ್ದ ಮಕ್ಕಳ ಗುಜು ಗುಜು ತಾರಕಕ್ಕೇರಿದ ಮೇಲೆ. ಗೌಜಿ ಯ ಮಧ್ಯದಲ್ಲೇ ಮಕ್ಕಳ ಮಧ್ಯೆ ಇದ್ದ ರಟ್ಟಿನ ಪೆಟ್ಟಿಗೆಯೊಳಗಿಂದ ಧಡಕ್ ಅಂತ ಸದ್ದು. ಪೆಟ್ಟಿಗೆ ಅಲ್ಲಾಡ್ತದೆ. ಗೌಜಿಯೆಲ್ಲ ಬಂದ್! ಏಕ್ ದಂ ಮೌನ. ಸ್ವಲ್ಪ ಸಮಯದ ನಂತರ ಮತ್ತೆ ಸದ್ದು. ಈಗ ಸ್ವಲ್ಪ ಧೈರ್ಯಸ್ಥೆ ಹುಡುಗಿಯೊಬ್ಬಳು ಪೆಟ್ಟಿಗೆಯ ಹತ್ತಿರ ಹೋಗಿ ಇಣುಕ್ತಾಳೆ. ನಿಧಾನಕ್ಕೆ ಕೈಯೊಂದು ಹೊರಬರ್ತದೆ. ಮತ್ತೆ ಕಾಲು…ಮತ್ತೆ ಎರಡೂ ಕೈ, ಎರಡೂ ಕಾಲು. ಮತ್ತೆ ತಲೆ…ಹೀಗೆ ಮಕ್ಕಳ ಕುತೂಹಲ ಉತ್ತುಂಗಕ್ಕೆ ಏರ್ತಿದ್ದಂತೆ ಹೊರಬರ್ತಾನೆ ಕ್ಲೌನ್. ‘ಲಾ ಪೋ ಲಾ’ ಆದರೆ ಅವನಿಗೆ ಪೆಟ್ಟಿಗೆಯಿಂದ ಹೊರ ಬರೋದಕ್ಕಾಗಲ್ವೇ! ಅದಕ್ಕೆ ಮಕ್ಕಳ ಸಹಾಯವೇ ಬೇಕು. ಹೇಗೋ ಹೇಗೋ ಮಾಡಿ ಅವನನ್ನ ಹೊರತಂದ ಮೇಲೆ ನೋಡಿ, ಸುರುವಾಗುತ್ತೆ ಆಟ. ಇಡೀ ಒಂದು ಘಂಟೆಯ ಮಕ್ಕಳಾಟ.

    ಈ ‘ಲಾ ಪೋ ಲಾ ನಮ್ಮೊಳಗಿನದೇ ಮಗು’. ಆಟದ ಉದ್ದಕ್ಕೂ ‘ಲಾ ಪೋ ಲಾ’ ಮಕ್ಕಳ ಜೊತೆಗೇ ಆಡುತ್ತ, ಅವರಿಗೆ ದನಿಯಾಗುತ್ತ ಹೋಗುತ್ತಾನೆ.ನಾವು ಮರೆತ ಜಗತ್ತನ್ನ ನೆನಪಿಸುತ್ತಾನೆ. ಕೆಲ ಮಕ್ಕಳು ಶಾಲೆಗೆ ಹೋಗುವ ಜಗತ್ತು, ಇನ್ನು ಕೆಲ ಮಕ್ಕಳಿಗೆ ಶಾಲೆ ಮರೀಚಿಕೆಯಾಗಿರುವ ಜಗತ್ತು. ದುಡಿವ ಮಕ್ಕಳ ಜಗತ್ತು,ಇನ್ನೂ ಮಕ್ಕಳ ಜಗತ್ತಿಗೆ ಬರದೇ ಇರುವ ಮಕ್ಕಳ ಜಗತ್ತು. ಬಾಲ್ಯವನ್ನೇ ಕಾಣದ ಮಕ್ಕಳ ಜಗತ್ತು….ಹೀಗೆ ಎಲ್ಲ ಬಗೆಯ ಮಕ್ಕಳಿಗೂ ದನಿಯಾಗುತ್ತ ಎಚ್ಚರಿಸುತ್ತ ಸಾಗುತ್ತಾನೆ. ಮಕ್ಕಳನ್ನೇ ಒಳಗೊಳ್ಳುತ್ತ, ಆಡುತ್ತ ಆಡುತ್ತ ಕತೆ ಹೇಳುತ್ತ ಸಾಗುತ್ತಾನೆ. ಇಲ್ಲಿ ಮಾತುಗಳಿಲ್ಲ. ಆಟಗಳಿವೆ, ಕುಣಿತಗಳಿವೆ ಬೆಚ್ಚಿಕೊಳ್ಳಲು ಕತೆಗಳಿವೆ. ಆಟ ಮುಗಿಸಿ ಹೊರಬರುವಾಗ ನಾವು ನಮ್ಮದೇ ಕತೆಗಳನ್ನು ಹೊತ್ತು ಬರುತ್ತೇವೆ.

    • ಕಿರಣ್ ಭಟ್ ಹೊನ್ನಾವರ, ವಿಮರ್ಶಕರು

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸ
    Next Article ಅಮ್ಮುಂಜೆ ಅನುದಾನಿತ ಹಿ.ಪ್ರಾ ಶಾಲೆಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ‘ಸವಿನೆನಪು’
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ನಿರಂಜನರ ‘ಚಿರಸ್ಮರಣೆ’

    June 16, 2025

    ಮಂಗಳೂರಿನ ರಂಗ ಸಂಸ್ಥೆ ಕಲಾಭಿಯಿಂದ ಶೀಘ್ರದಲ್ಲಿ ನಟನ ತರಬೇತಿ

    June 14, 2025

    ವಿಶೇಷ ಲೇಖನ – ಜನಪ್ರಿಯ ರಂಗಭೂಮಿ ನಟ ಯಶವಂತ ಸರದೇಶಪಾಂಡೆ

    June 13, 2025

    ಬಿ.ಸಿ. ರೋಡಿನಲ್ಲಿ ‘ತುಳುವೆರೆನ ತುಳುನಾಡ ಸಂತೆ’ ತುಳು ಸಾಹಿತ್ಯ ಸಾಂಸ್ಕೃತಿಕ ರಂಗ | ಜೂನ್ 20, 21 ಮತ್ತು 22

    June 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.