Subscribe to Updates

    Get the latest creative news from FooBar about art, design and business.

    What's Hot

    ತೆಕ್ಕಟ್ಟೆಯಲ್ಲಿ ‘ಸ್ತ್ರೀ ಗೃಹಂ ರಕ್ಷತಿ’ ಏಕವ್ಯಕ್ತಿ ರಂಗ ಪ್ರಯೋಗ

    September 18, 2025

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ಭಕ್ತಿ ಸಂಗೀತ ಕಾರ್ಯಕ್ರಮ’ | ಸೆಪ್ಟೆಂಬರ್ 21

    September 18, 2025

    ಮಂಗಳೂರಿನ ಶ್ರೀ ರಾಮಕೃಷ್ಣ ಮಠದಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ | ಸೆಪ್ಟೆಂಬರ್ 21

    September 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿ ಜಿಲ್ಲಾ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ | ಡಿಸೆಂಬರ್ 14
    Competition

    ಉಡುಪಿ ಜಿಲ್ಲಾ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ | ಡಿಸೆಂಬರ್ 14

    December 9, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮಾಹೆ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ. ಕಾಲೇಜು ಇದರ ಆಶ್ರಯದಲ್ಲಿ ಬಾರಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಉಡುಪಿ ಜಿಲ್ಲಾ ಪ್ರಾಥಮಿಕ, ಪ್ರೌಢಶಾಲಾ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 14 ಡಿಸೆಂಬರ್ 2024ರ ಶನಿವಾರದಂದು ಬೆಳಿಗ್ಗೆ ಗಂಟೆ 9-00 ಗಂಟೆಯಿಂದ ಉಡುಪಿಯ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿ ಸಭಾಂಗಣದಲ್ಲಿ ನಡೆಸಲಾಗುವುದು.

    ಆಸಕ್ತರು ಶಾಲಾ ಗುರುತುಚೀಟಿಯೊಂದಿಗೆ ಬೆಳಿಗ್ಗೆ 9-00 ಗಂಟೆಗೆ ಸ್ಪರ್ಧೆಯಲ್ಲಿ ಭಾಗವಹಿಸುವುದು. ಪ್ರವೇಶ ಶುಲ್ಕವಿಲ್ಲ, ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ.
    ಸ್ಪರ್ಧಾ ವಿಷಯ : 1ರಿಂದ 4ನೇ ತರಗತಿ : ಐಚ್ಛಿಕ
    5ರಿಂದ 7ನೇ ತರಗತಿ : ಐಚ್ಛಿಕ
    8ರಿಂದ 10ನೇ ತರಗತಿ : ಮಕ್ಕಳ ದಿನಾಚರಣೆ ಅಥವಾ ಸಂತೆ
    ಪಿ.ಯು.ಸಿ. ವಿದ್ಯಾರ್ಥಿಗಳಿಗೆ : ಕನ್ನಡ ಜ್ಞಾನಪೀಠ ಪುರಸ್ಕೃತರು ಅಥವಾ ಪರಿಸರ ಸಂರಕ್ಷಣೆ
    ಪದವಿ ವಿದ್ಯಾರ್ಥಿಗಳಿಗೆ : ಪ್ಲಾಸ್ಟಿಕ್ ಪೊಲ್ಯೂಷನ್ ಅಥವಾ ಇಂಡಿಯನ್ ಹೆರಿಟೇಜ್

    ಸ್ಪರ್ಧಾಳುಗಳು ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಡುವುದು
    * ಸ್ಪರ್ಧಾ ಸಮಯ – ಬೆಳಿಗ್ಗೆ 9-00ರಿಂದ 11-00
    * ಚಿತ್ರ ಬಿಡಿಸಲು ಹಾಳೆಯನ್ನು ಸಂಘಟಕರೆ ಒದಗಿಸುತ್ತಾರೆ.
    * ಉಳಿದ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು.
    * ಪ್ರತೀ ವಿಭಾಗಗಳಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು.
    * ಬಹುಮಾನ ನಗದು ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ.
    * ಸ್ಪರ್ಧೆಯ ಫಲಿತಾಂಶವನ್ನು ಸ್ಥಳದಲ್ಲಿ ತಿಳಿಸಲಾಗುವುದು ಮತ್ತು ಅಂದೇ ಬಹುಮಾನ ನೀಡಲಾಗುವುದು.
    * ಎಲ್ಲಾ ವಿಭಾಗದಲ್ಲೂ ಕನಿಷ್ಠ 5 ಜನ ವಿದ್ಯಾರ್ಥಿಗಳು ಇದ್ದರೆ ಮಾತ್ರ ಸ್ಪರ್ಧೆ ನಡೆಸಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9448868868

    Share. Facebook Twitter Pinterest LinkedIn Tumblr WhatsApp Email
    Previous Articleಮಡಿಕೇರಿಯಲ್ಲಿ ಕೈಮುಡಿಕೆ ಪುತ್ತರಿ ಕೋಲ್ ಮಂದ್ : ವಿವಿಧ ಸ್ಪರ್ಧೆಗೆ ಆಹ್ವಾನ
    Next Article ಪುಸ್ತಕ ವಿಮರ್ಶೆ | ತಗಳಿ ಶಿವಶಂಕರ ಪಿಳ್ಳೆಯವರ ‘ಚೆಮ್ಮೀನು’
    roovari

    Add Comment Cancel Reply


    Related Posts

    ಕೆ.ಪಿ.ಎಸ್. ವಿದ್ಯಾರ್ಥಿಗಳಿಗೆ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಮೊದಲ ಸ್ಥಾನ

    September 12, 2025

    ಉಡುಪಿ ತುಳು ಕೂಟದ ಹೊಸ ಕಾರ್ಯಕಾರಿ ಸಮಿತಿ ರಚನೆ

    September 12, 2025

    ಗೋಕರ್ಣದಲ್ಲಿ ಚಿತ್ರಕಲೆ ಹಾಗೂ ರಂಗೋಲಿ ಶಿಬಿರ | ಸೆಪ್ಟೆಂಬರ್ 10

    September 9, 2025

    ತುಳು ಭವನದಲ್ಲಿ ವಚನ ಗಾಯನ ಸ್ಪರ್ಧೆ | 16 ಸೆಪ್ಟೆಂಬರ್

    September 4, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.